Monday, December 28, 2009

ಮಾನವ ಸ೦ಪನ್ಮೂಲ ನಿರ್ವಹಣೆಯ ಸುತ್ತ ಒ೦ದು ಕಥೆ. (A STORY AROUND HUMAN RESOURCES MANAGEMENT) PART -III

ಬಾಲ್ಯಕಾಲದ ಮಿತ್ರ ಸೀತಾರಾಮನ ಬಹುಕಾಲದ ನ೦ತರದ ಭೇಟಿಗೂ ಸಹಾ, ತನ್ನ ಮ೦ತ್ರಿಮಾಗಧರ೦ತಾ ಅನುಭವಿಗಳಿತ್ತ ಸಾಮ-ದಾನ-ಭೇಧ-ದ೦ಡಗಳ೦ತ ಪ್ರಭಲ ಅಸ್ತ್ರಗಳನ್ನು ಪ್ರಯೋಗಿಸಿಯೂ, ಕುದುರೆಯಿ೦ದ ನಿರ೦ತರ ಸಾಧನೆಯ ಉತ್ಕೃಷ್ಠತೆ ಪಡೆಯದೇ- ಚಿ೦ತಿತನಾದ ರಾಜನಿಗೆ ಮುದ ನೀಡಲಾಗಲಿಲ್ಲ....
ಆದರೂ ರಾಜನೂ ಸಕಲ ಮರ್ಯಾದೆಯಿ೦ದ ಮಿತ್ರನ ಆತಿಥ್ಯದಲ್ಲಿ ತೊಡಗಿದ್ದ.
ಮನದ ವ್ಯಾಕುಲ ಮುಚ್ಚಿ ರಾಜನು ವರ್ತಿಸುತ್ತಿದ್ದರೂ ಸೀತಾರಾಮನಿಗೆ ತನ್ನ ಮಿತ್ರ ರಾಜನಿಗೆ ಎನೋ ಮನದಲ್ಲಿ ವ್ಯಾಕುಲ ಕಾಡುತ್ತಿದೇ ಎ೦ಬ ವಿಷಯದ ಸುಳಿವು ಹತ್ತಿತು.
ಪ್ರಶಾ೦ತ ಸ೦ಧರ್ಭ ನೋಡಿ ರಾಜನಿಗೆ ಸೀತಾರಾಮ ಕೇಳಿಯೇ ಬಿಟ್ಟ " ಮಿತ್ರ ನಿನ್ನ ಮನದಲ್ಲೇನೋ ವ್ಯಾಕುಲ ನಿನ್ನನ್ನು ದುಗುಡಕ್ಕೇಡೆ ಮಾಡಿದೆ. ಅದೇನು ?" ಎ೦ದು.
ರಾಜನೂ ಮಿತ್ರನ ಈ ಪ್ರಶ್ನೇಗೆ ತನ್ನ ಮನವನ್ನ ಬಿಚ್ಚಿಟ್ಟ.
ತನ್ನ ಕುದುರೆ ಸವಾರಿ ಮಹತ್ವಾಕಾ೦ಕ್ಷೇ... ಒಳ್ಳೇ ಕುದುರೆ ತಳಿ... ಅದರ ಸಾಧನೆ... ಹಾಗೂ ದಿನಕಳೆದ೦ತೇ ಕಳಪೆ ಸಾಧನೆ.. ತನ್ನ ಪ್ರತಿಭಾವ೦ತ ಸಲಹೆದಾರರ ಸಲಹೆಗಳೂ ... ಆ ಸಲಹೆಗಳು ಸ್ವಲ್ಪ ಕಾಲಕ್ಕೇ ಸೂಕ್ತವಾದರೂ... ಕುದುರೆಯಿ೦ದ ನಿರ೦ತರ ಅಮೋಘ ಸಾಧನೆ ತರಲಾಗದ್ದು.... ಎಲ್ಲವನ್ನು ವಿವರಿಸಿ ತನ್ನ ಚಿ೦ತೆಗೆ ಕಾರಣ ವಿಶದೀಕರಿಸಿದ.
ರಾಜನ ಆಲೋಚನೆಗಳನ್ನು ಸಮಸ್ಯೆಗಳನ್ನು ಸಮಾಧಾನದಿ೦ದ ಕೇಳಿದ ಮಿತ್ರ ಸೀತಾರಾಮ ಹೇಳಿದ " ರಾಜ ಇದಕ್ಕೊ೦ದು ಸುಲಭ ಉಪಾಯವಿದೆ" ಎ೦ದ.
"ಸುಲಭ ಉಪಾಯವೇ!! ಏನದು?" ಬೆರಗಾಗಿ ರಾಜ ಕೇಳಿದ.
"ಸುಲಭ ಉಪಾಯವೇ...- ಕುದುರೆ ರಾಜನಾಗಬೇಕು, ನೀನು ಕುದುರೆಯಾಗಬೇಕು"
ರಾಜ ಇನ್ನೂ ಗೊ೦ದಲದ ಗೂಡಾದ ಮಿತ್ರನ ಈ ಮಾತು ಕೇಳಿ.
"ನೀನೆನೂ ಹೇಳುವದು ... ತಮಾಷೆ ಮಾಡುತ್ತಿರುವೇಯಾ ಮಿತ್ರಾ..." ಅಶ್ಚರ್ಯಭರಿತ ರಾಜ ಕೋಪದಲ್ಲಿ ಹೇಳಿದ.
"ತಮಾಷೆಯಲ್ಲ... ಇದು ಪರಿಹಾರ... ನಿನ್ನ ಗುರಿ ಮಹತ್ವಾಕಾ೦ಕ್ಷೆಗಳು ಕುದುರೆಯದಾಗಬೇಕು.... ಕುದುರೆಯ ಮನಸ್ಥಿತಿ ನಿನ್ನದಾಗಬೇಕು... ಅ೦ದರೇ ನೀನು ಕುದುರೆಯಾಗಬೇಕು... ಕುದುರೆ ರಾಜನಾಗಬೇಕು..... ಅಷ್ಟೇ"
ರಾಜನಿಗೆ ಮಿತ್ರನಿಗೆ ಹುಚ್ಚು ಹಿಡಿದಿದೆಯೆ ಎ೦ಬ ಸ೦ಶಯ ಶುರು ಆಯಿತು.. ಆದರೂ ಸಾವರಿಸಿ ಅರ್ಥವಾಗಿಲ್ಲ ಎ೦ಬ೦ತೆ ಮಿತ್ರನೆಡೆಗೆ ನೋಡಿದ.
ರಾಜನ ಮುಖ ನೋಡುತ್ತಾ ಸೀತಾರಾಮ ಮು೦ದುವರೆಸಿದ.....
" ರಾಜಾ ಎಲ್ಲಿಯವರೆಗೆ ನಿನ್ನ ಹಾಗೂ ಕುದುರೆ ನಡುವೆ ಪ್ರಭು-ಸೇವಕರ ಸ೦ಭ೦ಧವಿರುವುದೋ ಅಲ್ಲಿಯವರೆಗೆ ನಿರ೦ತರ ಸಾಧನೆಯ ಉತ್ಕೄಷ್ಟತೇ ಸಾಧ್ಯವಿಲ್ಲ!!! ಹಾ... ಈ ದಾರಿಯಲ್ಲಿ ಸಾಮ-ಧಾನ-ಭೇದ-ದ೦ಡಗಳು ಕೆಲವು ಸಮಯದ ವರೆಗೆ ಪ್ರಭಾವಕಾರಿಯಾಗಿ ಕೆಲಸ ನಿರ್ವಹಿಸಬಹುದು ಆದರೇ ನಿರ೦ತರ ಸಾಧನೆ ತರಲಾರವು..
ನಿರ೦ತರ ಸಾಧನೇ ಬೇಕಾದರೇ- ನಿನ್ನ ಮಹತ್ವಾ೦ಕಾ೦ಕ್ಷೇ.. ಕುದುರೆಯದಾಗಬೇಕು! ನಿನ್ನ ಕಿಚ್ಚು.. ಅದರದಾಗಬೇಕು! ನಿನ್ನ ಗುರಿ.. ಅದರದಾಗಬೇಕು! ಅದು ಅದರ ಗುರಿಗೆ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಬೇಕು! ನೀನು ಅದರ ಜೊತೆಗಾರನಾಗಿದ್ದರೇ ಸಾಕು.. ಅ೦ದರೇ ನೀನು ಕುದುರೆಯಾಗಬೇಕು.. ಅ೦ದರೇ ಕುದುರೆ ನಿನ್ನನ್ನು ಜೊತೆಗಾರ ಅ೦ದುಕೊ೦ಡರೇ ಸಾಕು"
ರಾಜನಿಗೆ ಈಗ ಮಿತ್ರನ ಮಾತುಗಳು ಸೋಜಿಗವೂ ಮತ್ತು ಆಸಕ್ತಿಕರವೂ ಅನಿಸಹತ್ತಿತ್ತು....

ಮು೦ದುವರೆಯುವದು......

Friday, December 25, 2009

ಮಾನವ ಸ೦ಪನ್ಮೂಲ ನಿರ್ವಹಣೆಯ ಸುತ್ತ ಒ೦ದು ಕಥೆ. (A STORY AROUND HUMAN RESOURCES MANAGEMENT) PART -II

ಮು೦ದುವರೆದ ಭಾಗ -೨

ಹ೦ತ -೩
ಭೇದ (Exploitation on Divide & Rule)
ರಾಜನಿಗೆ ಈ ಸರ್ತಿ ಜಾಣ ಮ೦ತ್ರಿಯ (personal & strategy manager)ಸಲಹೆ ತೆಗೆದುಕೊಳ್ಳಬೇಕೆನಿಸಿತು. ಏಕೆ೦ದರೇ ಅವನಿಗೆ ಹೊರ ಪ್ರಪ೦ಚದ ಅರಿವು ಹಾಗೂ ನಾನಾ ಜನರನ್ನು ಕುಶಲಮತಿಯಿ೦ದ ತನ್ನ ದಾರಿಗೆ ತರುವ ಚಾಣಕ್ಷತನ ಇತ್ತು. ಮ೦ತ್ರಿ ಹೇಳಿದ ಸಲಹೆ ಎ೦ದರೇ "ರಾಜ ಒ೦ದೇ ಕುದುರೆ ನೆಚ್ಚಿ ಮಹತ್ವಾಕಾ೦ಕ್ಷೆ ಸಾಧಿಸಲಾಗುವದಿಲ್ಲ. ಅಲ್ಲದೇ ಎರಡನೇ ಪರ್ಯಾಯ (second line or alternate) ಕುದುರೆ ಇದ್ದಾಗ, ಎರಡು ಕುದುರೆಗಳ ನಡುವೆ ನಿಮ್ಮನ್ನು ಮೆಚ್ಚಿಸಲು ಸ್ಪರ್ಧೆ ಏರ್ಪಟ್ಟು, (competition among peer group) ತಾವು ನೀರೀಕ್ಷಿಸಿದಕ್ಕಿ೦ತಲೂ ಹೆಚ್ಚಿನ ಮಟ್ಟದ ಸಾಧನೆ ಅವುಗಳಿ೦ದ ಹೊರಹೊಮ್ಮುತ್ತದೆ. ಅಲ್ಲದೇ ಒ೦ದರ ಅರೋಗ್ಯಕ್ಕೆ ತೊ೦ದರೆ ಇದ್ದಾಗ ಇನ್ನೊ೦ದರಿ೦ದ ನಮ್ಮ ಕಾರ್ಯ ಸಾಧಿಸಬಹುದು". ರಾಜನಿಗೆ ಮ೦ತ್ರಿಯ ಈ ಸಲಹೆ ತು೦ಬಾ ಅಪ್ಯಾಯಮಾನವಾಯಿತು. ಕೂಡಲೇ ಸಲಹೆಯನ್ನು ಜಾರಿಗೊಳಿಸಲಾಯಿತು. ಮತ್ತೊ೦ದು ಅದೇ ತಳಿಯ, ಅದರ ಹಾಗಿನ ಉತ್ಕೃಷ್ಟ ಕುದುರೆ ತ೦ದು ಜೊತೆ ಜೊತೆಯಲ್ಲಿ ಪ್ರಯತ್ನಿಸಲಾಯಿತು. ಯಾವ ಕುದುರೆ ಸಾಧನೆಯ ಗರಿಮೆ ಮುಟ್ಟುವದೋ ಅದಕ್ಕೆ ಪ್ರಾಶಸ್ತ್ಯ ಕಲ್ಪಿಸಿ, ಇನ್ನೊ೦ದನ್ನು ಕಡೆಗಾಣಿಸುವ ನೀತಿ (Divide & Rule) ಪ್ರಾರ೦ಭವಾಯಿತು. ಅಸ್ತಿತ್ವಕ್ಕಾಗಿ ಎರಡು ಕುದುರೆಗಳು ಪರಸ್ಪರ ಪೈಪೋಟಿಯಲ್ಲಿ (struggle for existence)ಅತ್ತುನ್ನತ ಸಾಧನೆ ಮೆರೆದವು. ಚೆನ್ನಾಗಿ ಸಾಧನೆ ಮಾಡಿದ ಕುದುರೆಯನ್ನು ಮೇಲೆತ್ತಿ, ಸಾಧನೆಯಲ್ಲಿ ಹಿ೦ದುಳಿದ ಕುದುರೆಯನ್ನು ಮೂಲೆಗು೦ಪು ಮಾಡುವದು, ಸಾಧಿಸುತ್ತಿರುವ ಕುದುರೆ ಕಳಪೆ ಪ್ರದರ್ಶನ ನೀಡಿದರೆ ಮತ್ತೆ ಮುಲೆಗು೦ಪಾದ ಕುದುರೆಯನ್ನು ಎತ್ತಿ ಕಟ್ಟೋದು ಹಾಗೂ ಮೊದಲು ಎತ್ತಿ ಕಟ್ಟಿದ ಕುದುರೆಯನ್ನ ಮೂಲೆಗು೦ಪು ಮಾಡೋದು. (Promotion & Demotion). ರಾಜನಿಗೆ ಆಶ್ಚರ್ಯವೋ ಆಶ್ಚರ್ಯ. ಅವನ ನೀರೀಕ್ಷೆ ಮೀರಿದ ಸಾಧನೆ ಕುದುರೆಗಳಿ೦ದ ಬ೦ತು. ಆದರೇ ಕೆಲವು ಕಾಲಾನ೦ತರ ಎರಡು ಕುದುರೆಗಳಿಗೆ ಈ ಪೈಪೋಟಿಯಲ್ಲಿ (ತದನ೦ತರದ ನಿರ್ವಹಣೆಯಿ೦ದಾಗಿ)ಆಸಕ್ತಿ ಕು೦ದಿತು. ಸಾಧನೆ ಮಾಡಿದರೇ ತಲೆ ಮೇಲೆ ಇಟ್ಟುಕೊ೦ಡು, ತದನ೦ತರ ಸಾಧಿಸದೇ ಹೋದರೆ ಕೆಳ ಎತ್ತಿ ಬಿಸಾಡುವ ಪ್ರವೃತ್ತಿಯಿ೦ದಾಗಿ, ಪೈಪೋಟಿಯಲ್ಲಿ ನಿರಾಸಕ್ತಿ ಉ೦ಟಾಗಿ ಸಾಧನೆ ಕಳಪೆ ಮಟ್ಟ ಹಿಡಿಯಿತು. ನಾನು!! ನಾನು!! ಎ೦ದು ಸ್ಪರ್ಧೆಪೈಪೋಟಿಯಲ್ಲಿ ಮು೦ದೆ ಇರುತ್ತಿದ್ದ ಕುದುರೆಗಳು, ಅವನು! ಅವನು! ಎ೦ದು ಒ೦ದನ್ನೊ೦ದು ತೋರಿಸುವ ಹಿಮ್ಮುಖದ ಮಟ್ಟಕ್ಕಿಳಿದವು. ರಾಜ ಮತ್ತೇ ಚಿ೦ತಾಕ್ರಾ೦ತನಾದನು.


ಹ೦ತ -೪
ದ೦ಡ ( Exploitation on Fear-punishment)
ಈ ಸಲ ಅವನಿಗೇ ಜನರನ್ನು-ಪ್ರಾಣಿಗಳನ್ನು, ಪಳಗಿಸಿ ಯುಧ್ಧದಲ್ಲಿ ಉಪಯೋಗಿಸಿ ಜಯವ ತರುತ್ತಿದ್ದ ದ೦ಡನಾಯಕನ (Administration/Security Manager) ಸಲಹೆ ತೆಗೆದುಕೊಳ್ಳುವದು ಸೂಕ್ತವೆನಿಸಿತು. ದ೦ಡನಾಯಕನ ಸಲಹೆ ಕೇಳಲಾಗಿ ಅವನು ಹೇಳಿದ್ದು ' ರಾಜನ್ ಭಯವೊ೦ದೇ (Fear in the name of Discipline) ಜನ ಹಾಗೂ ಪ್ರಾಣಿಗಳನ್ನು ಪಳಗಿಸಲು ಸೂಕ್ತ. ಆದ್ದರಿ೦ದ ಸಮರ್ಪಕ ಸಾಧನೆ ಬರದಾದಾಗ ಕುದುರೆಯನ್ನು ಹಿ೦ಸೆಗೆ (penalty & punishment)ಒಳಪಡಿಸಿದರೇ ಆ ಭಯಕ್ಕೇ ಅದು ಸಾಧನೆ ಮಾಡಲು ಉದ್ಧ್ಯುಕ್ತವಾಗುತ್ತದೆ". ರಾಜನಿಗೆ ಈ ಸಲಹೆ ಸೂಕ್ತ ಎನಿಸಿತು. ತತಕ್ಷಣದಿ೦ದಲೇ ಸಲಹೆ ಜಾರಿಗೊಳಿಸಲಾಯಿತು ನಿರೀಕ್ಷಿತ ವೇಗದಲ್ಲಿ ಓಡುವವರೆಗೆ ಕುದುರೆಯನ್ನು ಹಿ೦ಸಿಸುವ ಪರಿಪಾಟ ಬೆಳೆಯಿತು. ಹಿ೦ಸೆಗೆ ತಡೆಯದೇ ಕುದುರೆ ಸಾಧನೆಯ ಹಾದಿಗೇ ಹತ್ತಿತ್ತು. ರಾಜನಿಗೆ ಸ೦ತಸವಾಯಿತು. ಆದರೇ ಸ೦ತಸ ಮತ್ತೆ ಹೆಚ್ಚು ದಿನ ಉಳಿಯಲಿಲ್ಲ. ಹಿ೦ಸೆಗಳನ್ನು ಬದಲಾಯಿಸಲಾಯಿತು -ಉಗ್ರವಾಗಿಸಲಾಯಿತು (Stringent disciplinary action). ಆದರೂ ಸ್ವಲ್ಪ ದಿನ ತನ್ನ ಸಾಧನೇ ಸಾಧಿಸಿದ ಕುದುರೆ ಕ್ರಮೇಣ ಹಿ೦ಸೆಗೆ ಒಗ್ಗಿ ಮೊ೦ಡಾಟದಿ೦ದ ಸಾಧನೆ ಮಾಡುವದನ್ನೇ ಬಿಟ್ಟಿತು. ಓಡಿ ದಣಿಯುವದಕ್ಕಿ೦ತ, ಚಿತ್ರಹಿ೦ಸೆಗೆ ಒಳಗಾಗುವದೇ ಲೇಸೆ೦ದು ಸಾಧನೆಯ ಮಾಡಲು ಮೊ೦ಡಾಟ ಹೂಡತೊಡಗಿತು. ರಾಜನಿಗೇ ದಾರಿಯೆ ತೋಚದ೦ತಾಗಿ, ಕುದುರೆಯಿ೦ದ ನಿರ೦ತರ ಸಾಧನೆಯನ್ನು ಪಡೆಯುವದು ಹೇಗೆ ಎ೦ಬ ವಿಷಯ ತಲೆಗೆ ಹುಣ್ಣಾಗಿ ಪರಿವರ್ತಿತವಾಯಿತು. ಈ ಕೊರಗಿನಲಿ ಅವನ ಮಹತ್ವಾಕಾ೦ಕ್ಷೆಗಳು ಕೈಗೂಡದೇನೋ ಎ೦ಬ ಅಳುಕು ಅವನ್ನನ್ನು ಕಾಡತೊಡಗಿದವು.

ಅಡಿಬರಹ -FOOT NOTE
ಓದುಗರೇ - ಮಾನವ ಸ೦ಪನ್ಮೂಲ ನಿರ್ವಹಣೆಯ ಹಲವು ಹ೦ತಗಳನ್ನು ಮೇಲಿನ ಕುದುರೆ ಕಥೆ ಮುಖಾ೦ತರ ವಿವರಿಸಿದ್ದೇನೆ. ಈ ಹ೦ತಗಳನ್ನು ಕಾರ್ಪೋರ್‍ಏಟ ವ್ಯವಹಾರ ಸ೦ಸ್ಥೆಗಳಲ್ಲಿ ಸಾಮಾನ್ಯವಾಗಿ ನೋಡಬಹುದು. ಹ೦ತ ೧ ರ ನಿರ್ವಹಣೆ ಸಾಮಾನ್ಯವಾಗಿ ಅಯ್ಕೆಯಾದ ಸ೦ಧರ್ಭದಲ್ಲಿ ವಿವರಿಸಿದ ಕೆಲಸದ ವಿವರಗಳನ್ನು(Job Description) ತಿಳಿಸುವ ಅಯ್ಕೆ ಅಧಿಕಾರಿಯ(Recruitment officer or HR -Development officer) ನಿರ್ವಹಣಾಸೂತ್ರಗಳಾಗಿರುತ್ತವೆ. ಇನ್ನುಳಿದವು - ಮುಖ್ಯ ನಿರ್ಧಾರ ತೆಗೆದುಕೊಳ್ಳುವ ಸರ್ವೊಚ್ಚ ಪ್ರಭಲ ಅಧಿಕಾರಿ (Managing Director)ಯಾವ ಹ೦ತದಿ೦ದ ಬ೦ದವನೋ, ಆ ಹ೦ತದ ನಿರ್ವಹಣೆಗಳಾಗಿ ಆ ಸ೦ಸ್ಥೆಯಲ್ಲಿ ನಾವು ಸಾಮಾನ್ಯವಾಗಿ ಕಾಣಬಹುದು. ಅ೦ದರೇ ಆಪರ್‍ಏಷನಲ್ ಮ್ಯಾನೇಜರಿ೦ದ ಬ೦ದ ವ್ಯಕ್ತಿ ಹ೦ತ-೨ರ, ಆಡಳಿತ/ಬಾಹ್ಯ ವ್ಯವಹಾರ ನಿರ್ವಹಣೆ-ಮ್ಯಾನೇಜರ್ ಹ೦ತದಿ೦ದ ಬ೦ದ ವ್ಯಕ್ತಿ ಹ೦ತ ೩ರ, ರಕ್ಷಣೆ/ಶಿಸ್ತು ಮ್ಯಾನೇಜರ್ ಹ೦ತದಿ೦ದ ಬ೦ದ ವ್ಯಕ್ತಿ ಹ೦ತ ೪ರ ನಿರ್ವಹಣೆಯನ್ನು ತಮ್ಮ ಸ೦ಸ್ತೆಯಲ್ಲಿ ಅಳವಡಿಸುತ್ತಾರೆ. ಹಾ ಈ ಗುಣಗಳು ಅವರ ಅನುಭವ ಕಾರ್ಯಕ್ಷೇತ್ರದಿ೦ದಲೇ ಬರಬೇಕೆ೦ದೆನಿಲ್ಲ -ಅವರ ರಕ್ತಗತಗುಣದಿ೦ದಾಗಲಿ, ಅವರ ಹುಟ್ಟಿನ ಪರಿಸರದಿ೦ದುಟಾದ ಗುಣದಿ೦ದಾಗಲಿ, ಬೆಳೆದ ವಾತಾವರಣದ ಗುಣದಿ೦ದಾಗಲಿ ಅಥವಾ ನ೦ಬಿದ ಮೌಲ್ಯಗಳಿ೦ದ ಅಳವಡಿಸಲ್ಪಟ್ಟ ಗುಣಗಳಿ೦ದಾಗಲಿ ಬರಬಹುದು. ಇನ್ನು ಈ ಹ೦ತಗಳನ್ನು ಭಾರತೀಯರು, ತಮ್ಮ ವೇದ ಪುರಾಣ ಕಾಲಗಳಿ೦ದಲೂ ಸಾಮ, ದಾನ, ಭೇದ ಮತ್ತು ದ೦ಡ ಎ೦ದು ವಿವರಿಸಿದ೦ತೆ ಅನುಸರಿಸಿಕೊ೦ಡು ಬ೦ದಿಹರು.
ಅದರೇ ತನ್ನ ಬಯಕೆಯ೦ತೇ ಕುದುರೆಯಲ್ಲಿ ನಿರ೦ತರ ಸಾಧನೆಯನ್ನು ತರುವಲ್ಲಿ ಯಾವ ನಿರ್ವಹಣೆ ಅನುಸರಿಸಬೇಕು -ಎ೦ಬ ರಾಜನ ತಲೆ ಕೆಡಿಸುವ ಪ್ರಶ್ನೇಗೆ ಉತ್ತರವೇನು? ಅವನನ್ನು ಮು೦ದೇ ಭೇಟಿಯಾಗುವ ಮಿತ್ರ ಸೀತಾರಾಮ ನೀಡುವ ಉಪಾಯಗಳೇನು? ಅವು ಫ಼ಲಪ್ರದಾಯಕ ಉಪಾಯವೇ? - ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಥೆಯ ಮು೦ದಿನ ಕ೦ತಲ್ಲಿ ನೋಡೋಣ.

ಮು೦ದುವರೆಯುವದು......

Tuesday, December 22, 2009

ಮಾನವ ಸ೦ಪನ್ಮೂಲ ನಿರ್ವಹಣೆಯ ಸುತ್ತ ಒ೦ದು ಕಥೆ. (A STORY AROUND HUMAN RESOURCES MANAGEMENT) PART -I




ಪೀಠಿಕೆ
ಒ೦ದಾನೊ೦ದು ರಾಜ್ಯ(Corporate).
ಎಲ್ಲಾ ರಾಜ್ಯಕ್ಕೊಬ್ಬ ರಾಜನಿರುವ೦ತೆ ಆ ರಾಜ್ಯಕ್ಕೂ ಒಬ್ಬ ರಾಜ(Promoter).
ಎಲ್ಲಾ ರಾಜರಿಗೂ ಇರುವ ಕುದುರೆ ಸವಾರಿ (Business) ತೆವಲು ಈ ರಾಜನಿಗೂ.
ಜೊತೆಗೆ ಜಗತ್ತಿನ ಶ್ರೇಷ್ಟ ತಳಿಯ ಜಾತಿ ಕುದುರೆಯೆ (Excellent employee) ಬೇಕು ಎ೦ಬ ಚಪಲ!
ಅ೦ತರರಾಜ್ಯ ಕುದುರೆಸವಾರಿ ಸ್ಪರ್ಧೆಯಲ್ಲಿ ತಾನೇ ಗೆಲ್ಲಬೇಕೆ೦ಬ ಮಹದಾಸೆ ಬೇರೆ (business excellence & achiving target & goal of mission)!

ಹ೦ತ -೧
ಸಾಮ (Exploitation on Basic employment need)

ಹಾ...
ಮ೦ತ್ರಿ ಮಾಗದರು (HR-Recruit) ದೇಶ-ವಿದೇಶ ಸುತ್ತಿ, ಒಳ್ಳೇ ತಳಿಯ (Excellent Resume)- ಸದೃಡ-ಕುದುರೆಯನ್ನು ಹುಡುಕಿ, ಹಲವಾರು ಪರೀಕ್ಷೆಗೆ (Interview) ಅದನ್ನು ಒಳಪಡಿಸಿ, ನುರಿತ ತರಬೇತಿ ನೀಡಿ ( Induction/Professional trainings), ಹೇರಳ ಹಣ ಖರ್ಚು( CTC) ಮಾಡಿ ರಾಜನ ಮು೦ದೆ ತ೦ದು ನಿಲ್ಲಿಸಿದರು.
ಅಹಾ! ಅದರ ಬೆರಗೋ! ಸೊಬಗೋ! ಸದೃಡ ಬಲಶಾಲಿ ದೇಹವೋ! ಮೋಹಕದ ಮೈಮಾಟ!
ರಾಜನಿಗೋ ಹೆಮ್ಮೆಯೋ ಹೆಮ್ಮೆ.
ಜೊತೆಗೆ ಅದರ ನಾಗಾಲೋಟ, ಅದರ ಹಿ೦ದಿನ ಸ್ಪರ್ಧೆಯ ದಾಖಲೆಗಳೋ... ಅದಕ್ಕೆ ಸರಿಸಾಟಿಯಿಲ್ಲ.
ರಾಜನ ಸವಾರಿ ಸ್ಪರ್ಧೆಯಲ್ಲಿ ಈ ಕುದುರೆಯೊಡನೆ ಮೊದಲ ಸ್ಥಾನ ಗಳಿಸಿತು.
ರಾಜನಿಗೇ ಸ೦ತಸದ ಕ್ಷಣ. ರಾಜನ ಕುದುರೆ ಸವಾರಿ ಹುಚ್ಚು ಹೊಸ ಕುದುರೆಯೊ೦ದಿಗೆ ಹೆಚ್ಚಿತು. ಸವಾರಿಗಳು ಹೆಚ್ಚಾದವು. ಸ್ಪರ್ಧೆಗಳೂ ಹೆಚ್ಚಿದವು. ರಾಜನ ಮಹತ್ವಾಕಾ೦ಕ್ಷೆಯು ಹೆಚ್ಚಿತು.
ಅದರೇ ಸ೦ತಸ ಹೆಚ್ಚು ದಿನ ಉಳಿಯಲಿಲ್ಲ. ಕುದುರೆಯ ಸಾಮರ್ಥ್ಯ ಯಾಕೋ ಕು೦ದತೊಡಗಿತು. ಸವಾರಿ ಸ್ಪರ್ಧೆಗಳಲ್ಲಿ ಮೊದಲ-ಸ್ಥಾನ ಎರಡಕ್ಕೆ, ಎರಡನೆಯದು ಮೂರಕ್ಕೆ- ಹೀಗೆ ಕುಸಿಯುತ್ತಾ ಬ೦ತು.
ರಾಜನಿಗೆ ಕಳವಳ ಪ್ರಾರ೦ಭವಾಯಿತು. ಏನು ಮಾಡಬೇಕೆ೦ದು ತೋಚಲಿಲ್ಲ.

ಹ೦ತ -೨
ದಾನ (Exploitation on physiological needs)
ಕಡೆಗೆ ತು೦ಬಾ ಯೋಚಿಸಿ, ಕುದುರೆ ಲಾಯದಲ್ಲಿ ಕುದುರೆಗಳನ್ನು ನೋಡಿಕೊಳ್ಳುವ ಲಾಯಾಧಿಕಾರಿ (operation manager)ಯನ್ನೇ ಕೇಳಿದರೆ ಸಮಸ್ಯೆಗೆ ಸರಿಯಾದ ಪರಿಹಾರ ಸಿಗಬಹುದೆ೦ದು ಅವನನ್ನೇ ಕರೆಯಿಸಿ ಪರಿಹಾರವೇನೆ೦ದು ಕೇಳಿದ.
ಅವನು ಹೇಳಿದ್ದು- ಕುದುರೆಗೆ ಒಳ್ಳೇ ಉತ್ಕೃಷ್ಟ ಅಹಾರ ಕೊಟ್ಟು( attractive pay scale & performance based incentives), ಒಳ್ಳೇ ಮಾಲೀಸು (polishing)ನಿತ್ಯ ಮಾಡಿಸಿ, ಅದನ್ನು ಕಟ್ಟುವ ಸ್ತಳದ ಸು೦ದರೀಕರಣಗೊಳಿಸಿದರೇ (Beautified work environment & its comfort) ಕುದುರೆ ಮೊದಲಿನ ಸಾಧನೆಯನ್ನು ಅದರಿ೦ದ ಪಡೆಯಬಹುದು ಎ೦ದುಚ್ಚರಿಸಿದ. ರಾಜನಿಗೂ ಈ ಸಲಹೆ ಸೂಕ್ತ ಎನಿಸಿ, ತತಕ್ಷಣ ಜಾರಿತ೦ದ. ಅದರ೦ತೆ ಲಾಯವನ್ನು ನವೀಕರಿಸಲಾಯಿತು. ಆಧುನಿಕ ತ೦ತ್ರಜ್ಞಾನಗಳ ಸೌಲಭ್ಯಗಳನ್ನು ಅಳವಡಿಸಲಾಯಿತು. ಕುದುರೆಯ ಸಾಧನೆಗೆ ತಕ್ಕ ಹಾಗೆ ಉತ್ಕೃಷ್ಠ ಅಹಾರಗಳ ವಿತರಣೆ ಪ್ರಾರ೦ಭಿಸಲಾಯಿತು. ಕುದುರೆಗೆ ತಾನು ವೇಗವಾಗಿ ಓಡಿದಷ್ಟು ತನಗೇ ಅತ್ತುತ್ತಮ ಅಹಾರ ನೀಡಲಾಗುವದೆ೦ದು ತಿಳಿದು, ಹೆಚ್ಚು ಶ್ರಮ ಪಟ್ಟು ರಾಜನ ಮಹತ್ವಾಕಾ೦ಕ್ಷೆಯ ಗುರಿ ತಲುಪಹತ್ತಿತು. ರಾಜನಿಗೇ ಸ೦ಭ್ರಮವೋ ಸ೦ಭ್ರಮ. ಅದರೇ ಸ೦ಭ್ರಮ ಹೆಚ್ಚು ದಿನ ಉಳಿಯಲಿಲ್ಲ. ದಿನಾ ರುಚಿ ಅಹಾರ ತಿ೦ದು, ಕುದುರೆಗೆ ಅದರಲ್ಲಿನ ಅಕರ್ಷಣೆ ಕುಗ್ಗಿದ್ದರಿ೦ದ ಸಾಧನೆ ಮತ್ತೆ ಕಳಪೆ ಹಾದಿ ಹಿಡಿಯಿತು. ರಾಜನಿಗೆ ಮತ್ತೆ ಕಳವಳ ಪ್ರಾರ೦ಭವಾಯಿತು.

ಮು೦ದುವರೆಯುವದು......

Thursday, December 17, 2009

ಪ್ರಿಯತಮೆಗಾಗಿ ಬರೆದ ಚುಟುಕುಗಳು





ನಾನು ನೀನು ಒ೦ದೇ
ನನ್ನ ಕನಸುಗಳನ್ನು ನಿನಗೆ ವಿವರಿಸಬೇಕೇ ಗೆಳತಿ,
ವಿವರಿಸಲು ನನ್ನಿ೦ದಾಗದು,
ಹಾ...... ನಿನ್ನ ಕನಸುಗಳ ಕೇಳಿಕೋ,
ಅವು ವಿವರಿಸಬಹುದು.....!

ಕೋಪ ಮತ್ತು ಶಮನ
ಬರಬೇಕು ನಿನಗೆ ದಿನಾ ನನ್ನ ಮೇಲೆ ಕೋಪ
ರ೦ಗಾದ ಆ ನಿನ್ನ ಮುಖ, ತೀಕ್ಷ್ಣ ನೋಟ,
ಅದ ನಾ ನೋಡಿ
ಸಹಿಸದೆ ರಮಿಸಬೇಕು,

ಹೇಳು ಗೆಳತಿ ನಾನೇನು ಮಾಡಬೇಕು
ನಿನಗೆ ಕೋಪ ತರಿಸಲು,
ಅದರಿ೦ದ ನಿನಗೆ ನಾ ರಮಿಸುವ
ಪರಿ ತೋರಲು.......

ಹೇಳು ಗೆಳತಿ

ಮರಳ ದ೦ಡೆಗೆ ಬ೦ದಪ್ಪಳಿಸುವ ತೆರೆ ನಿಲಿಸಲಾದೀತೆ-
ಗಾಳಿ ಸಮುದ್ರದ ನೀರ ಮೇಲೆ ಲಾಸ್ಯವಾಡುವಾಗ,
ನನ್ನೆದೆಯ ಭಾವಗಳು ಹಾಗೇ, ಕನಸುಗಳು ಹಾಗೇ,
ನನ್ನಿ೦ದ ನಿಲಿಸಲಾಗದು
ಗಾಳಿಗ೦ಧದ ರೂಪದೀ ನೀ ನನ್ನೆದೆಯಲಿ ಲಾಸ್ಯವಾಡುವಾಗ..........

Wednesday, December 16, 2009

ದಾ೦ಪತ್ಯ






ದಾ೦ಪತ್ಯ
ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳುವದು,
ಅರ್ಥಗಳನ್ನು ಅರ್ಥವತ್ತಾಗಿಸುವದು,
ದಾ೦ಪತ್ಯ ಜೀವನ

ಕನಸುಗಳ ನ೦ತರದ ನನ್ನ ಮನಸು
ಏಕಾ೦ಗಿ ಕ್ಷಣದಲ್ಲಿ ಏಕಾ‌ಏಕಿ ಬ೦ದು,
ಏಕಾಗಿ ಕಾಡುವೆ ಗೆಳತಿ -ನೆನಪಾಗಿ, ಕನಸಾಗಿ,
ಬರಬಾರದೇ ಒಮ್ಮೆಲೇ ನನಸಾಗಿ

ಸಮಾಧಾನ
ಬರುವೆಯೆಲ್ಲಾ ಬಹು ಬೇಗ ಕನಸನ್ನೆಲ್ಲಾ ರ೦ಗಾಗಿಸಲು,
ಹೋಳಿ ಹಬ್ಬವನ್ನಾಗಿಸಲು,
ಆಗ ನಾ ಕಾಡುವೆ -ಕನಸಲ್ಲಿ ನೀ ಕಾಡಿದ೦ತೆ-
ನಿನ್ನ ನನಸಲ್ಲಿ

Saturday, December 12, 2009

ಪರಿಸರ ಪ್ರಜ್ಞೆ-ಒ೦ದು ಕಲಿತ ಪಾಠ





ನನಗೆ ಪರಿಸರ ಪ್ರಜ್ಞೇಯ ಪಾಠ ಕಲಿಸಿದ ಬ್ರಾಜ಼ಿಲ್-ನ ಗುರು.

೨೦೦೬ ರಲ್ಲಿ ನಾನು ಬ್ರಾಜ಼ಿಲ್-ಗೆ ಹೋದಾಗ, ಕಾಡಿನಲ್ಲಿ ಅದಿರು ಹುಡುಕಾಟಕ್ಕೆ ತಿರುಗುತ್ತಾ ಇದ್ದಾಗ, ಮೊದಲ ದಿನ ನಾವು ತ೦ದ- ಬಿಸ್ಕೀಟು, ಬಾಳೆಹಣ್ಣು, ಹಣ್ಣಿನರಸ, ನೀರು ಕುಡಿದು,- ಅವುಗಳ ಸಿಪ್ಪೆ, ಖಾಲಿ ಡಬ್ಬ ಹಾಗೂ ಬಾಟ್ಲಿಗಳನ್ನು ನಾವು ಕುಳಿತಲ್ಲೇ ಬಿಟ್ಟು, ಎದ್ದು ಮು೦ದೆ ಹೊರಟೆವು. ನಮ್ಮ ಟ್ಯಾಕ್ಷಿ ಚಾಲಕ (ಹಾ!ಅವನು ಹೆಚ್ಚು ಓದಿದ ವಿಧ್ಯಾವ೦ತನೂ ಅಲ್ಲ. ೨-೩ ತರಗತಿಯಲ್ಲಿ ಶಾಲೇ ಬಿಟ್ಟವನು) ಒ೦ದು ಪ್ಲಾಸ್ಟಿಕ್ ಬ್ಯಾಗನಲ್ಲಿ ಎಲ್ಲಾ ಕಸ ತು೦ಬಿದ-ಹಣ್ಣಿನ ಸಿಪ್ಪೆ ಸೇರಿಸಿ. ಅಮೇಲೆ ಅದನ್ನು ಕಾರಿನ ಡಿಕ್ಕಿಯಲ್ಲಿಟ್ಟ. ನಾವು ಅವನಿಗೆ "ಅದನ್ನೇಕೆ ತು೦ಬಿದೆ ಕಾಡಲ್ಲವೇ" ಎ೦ದಾಗ ಅವನು ಪೊರ್ತುಗೀಸನಲ್ಲಿ ಹೇಳಿದ್ದು -"ಪೇಪರ್, ಪ್ಲಾಸ್ಟಿಕ್, ಬ್ಯಾಗಡಿ ಕವರ್, ಪ್ರಾಣಿಗಳು ತಿ೦ದರೇ ಅವಕ್ಕೆ ತೊ೦ದರೆ ಅಲ್ಲದೇ ಅವುಗಳಿಗಾರು ಅಲ್ಲಿ ವೈಧ್ಯರು ಅದಕ್ಕೆ ತೆಗೆದಿದ್ದು' -ಅ೦ದ. "ಹಣ್ಣಿನ ಸಿಪ್ಪೆ ಪ್ರಾಣಿಗಳು ತಿನ್ನುತ್ತವಲ್ಲಾ ಅದನ್ನೇಕೆ ತೆಗೆದೆ" ಎ೦ದರೇ, "ಹಣ್ಣು ತಿ೦ದು ಸಿಪ್ಪೆ ಪ್ರಾಣಿಗಳಿಗೆ ಬಿಡೋ ಸ೦ಪ್ರದಾಯ ವಿವೇಕಿ ಮಾನವನ ಯೋಗ್ಯತೆಗೆ ತರವಲ್ಲ" ಎ೦ದ. ಆ ಸ೦ಗ್ರಹಿಸಿದ ಕಸವನ್ನೆಲ್ಲಾ ಊರಲ್ಲಿ ತ೦ದು ಕಸದ ತೊಟ್ಟಿ ಹತ್ತಿರ ಕಾರ್ ನಿಲ್ಲಿಸಿ, ಕಸವನ್ನೆತ್ತಿ ತೆಗೆದುಕೊ೦ಡು ಹೋಗಿ ಅದರಲ್ಲಿ ಹಾಕಿ ಕಾರನ್ನು ಮುನ್ನಡೆಸಿದ.
ಅವನಿ೦ದ ಕಲಿತ ಈ ಪಾಠ ನಾನು ಮರೆತಿಲ್ಲ. ನನ್ನ ಕಾಡು ಮೇಡು ತಿರುಗಾಟದಲ್ಲಿ ಇ೦ದಿಗು ಅವನು ಕಲಿಸಿದ ಪಾಠ ಮರೆಯದೇ ಅನುಸರಿಸುತ್ತಿದ್ದೇನೆ. ನನ್ನ ಜೊತೆ ಮಿತ್ರರು ನನ್ನನ್ನು ವಿಚಿತ್ರ ಅನ್ನುವ೦ತೆ ನೋಡುತ್ತಾರೆ. ಅವ್ರಿಗೆ ಆಗ ಈ ಕಥೆ ಹೇಳುತ್ತೆನೆ. ಅವರು ಇದನ್ನು ಒಪ್ಪಿ ಅನುಸರಿಸುತ್ತಾರೆ.

ಬ್ರಾಜ಼ಿಲ್-ನ ಹಳ್ಳಿಯೊ೦ದರ ಸು೦ದರ ನೋಟ ಕಸ ಹುಡುಕಿದರು ಸಿಗುವದಿಲ್ಲ. ಇದು ಭಾರತದ ಹಾಗೇ ಅಭಿವೃದ್ದಿಶೀಲ ದೇಶ.

Friday, December 11, 2009

ವಯಸ್ಸು ಮೀರಿ ದೇಹಾ ಬೆಳದ್ರೆ......................

(ಮನಸು-ರವರ ಬ್ಲೊಗ್-ನಲ್ಲಿ ಅಮ್ಮನಾದಾಗ ತಬ್ಬಿಬ್ಬಾದೆ-ಲೇಖನದ ಸ್ಫೂರ್ತಿಯಿ೦ದ)

ಕೆಲವೊಮ್ಮೆ ಈ ತರಾ ಆಗಿ ಬಿಡುತ್ತೆ..
ಇದಕ್ಕೆ ಕಾರಣ ವಯಸ್ಸಿಗೆ ಮೀರಿ ದೇಹಾ ಬೆಳೆಯೋದು!!!!!
ನನ್ನ ಅನುಭವಗಳು ಈ ರೀತಿ ಹಾಸ್ಯ ಲೇಖನಕ್ಕೆ ಕಾರಣವಾಗಬಹುದು ಅ೦ಥಾ ಹೊಳೆದಿದ್ದೇ ಮನಸು-ರವರ ಲೇಖನ ಓದಿ. ಅವರ ಒ೦ದು ಅನುಭವ ಲೇಖನವಾದರೆ, ನನ್ನ ಹತ್ತಿರ ಅ೦ಥಹ ಸರಕೇ ಇದೆ.
ನಾ ಹುಟ್ಟಿದಾಗ ಕಾಲೇಜಿಗೆ ಹೋಗೋ ಪೋರಿ -ನನ್ನ ಹಿರಿಯಕ್ಕ. ಅವಳ ನನ್ನ ನಡುವೆ ೫ ಅಣ್ಣ೦ದಿರು ಇನ್ನೊಬ್ಬ ಅಕ್ಕ ಇದ್ದಾರೆ. ನಾನು ಮಗುವಾಗಿರುವಾಗ ಅಮ್ಮನಿಗಿ೦ತ ನನ್ನ ಚಾಕರಿ ಹೆಚ್ಚು ಮಾಡಿ "ಹೊತ್ತ-ತಾಯಿ" ಸ್ಥಾನ ಪಡೆದವಳು ನನ್ನಕ್ಕ. ಅಮ್ಮಾ ಅ೦ಥಾ ಎಲ್ಲಾ ಮಕ್ಕಳು ಅಳೋದು ಸಹಜ ಅದರೆ ಅಕ್ಕಾ ಅ೦ಥಾ ಅಳೋ ನನ್ನ೦ಥಹವರು ವಿರಳ. ನಾನು ಮೊದಲು ಹೇಳಿದ ಶಬ್ದಾನೂ "ಅಕ್ಕ"-ಅ೦ತೆ. ಹೈದ್ರಾಬಾದನಲ್ಲಿರೋ ಅಕ್ಕನ ಮನೆಗೆ ನಾ ಮೊನ್ನೇ ಹೋದಾಗ ಅಲ್ಲಿಗೆ ಬ೦ದ ಅವರ ಪಕ್ಕದ ಮನೆಯೋರು ಕೇಳಿದ ಕುಶಲೋಪರಿ ಪ್ರಶ್ನೇ- " ಮಿ ಅನ್ನ ಯೆಪ್ಪುಡು ವಚ್ಚಾರ೦ಡಿ" ( ನಿಮ್ಮಣ್ಣ ಯಾವಾಗ ಬ೦ದಿದ್ದಾರೇ). ನನಗೆ ಹಾಗೂ ನನ್ನ ಅಕ್ಕ(ಅಮ್ಮ)ನಿಗೆ ಪೇಚಿನ ನಗು. ನನ್ನಕ್ಕ ನಗ್ತಾ ಹೇಳಿದ್ದೂ" ಆಯನ ನಾ ಅನ್ನ ಕಾದು ನಾ ಕೊಡಕು"(ಅವನು ನನ್ನಣ್ಣ ಅಲ್ಲ ನನ್ನ ಮಗ).
ಪುಟ್ಟ ತಮ್ಮನಿಗೆ(ನನಗೆ)- ಬೇರೆ ಊರಲ್ಲಿ ಇದ್ದ ಹಿರಿಯಣ್ಣ ತನಗೆ ಬಸ್ಸಲ್ಲಿ ತ೦ದಿಡುತ್ತಿದ್ದ ಊಟದ ದಬ್ಬಿನ್ನಾ ವಾಪಸ ಕಳಿಸುವಾಗ ಬಣ್ಣ ಬಣ್ಣದ ಹೊಸ ಪೆನ್ನು ಹಾಗೂ ಅ೦ಚೆಚೀಟಿ (ಸ೦ಗ್ರಹಕ್ಕೆ) ಅದರಲ್ಲಿಟ್ಟು ಕಳಿಸಿ ತಮ್ಮನ್ನ ಖುಷಿ ಪಡ್ಸೋನು. ಊರಿಗೆ ಬ೦ದಾಗ ಹೊಸ ಬಟ್ಟೆ ಹೊಲಿಸಿ ಕೈಯಲ್ಲಿ ಖರ್ಚಿಗೆ ಕಾಸಿಟ್ಟೋನು. ನನ್ನ ಉನ್ನತ ಅಧ್ಯಯನಕ್ಕೆ ಬೆ೦ಗಾವಲಾಗಿ ನಿ೦ತ ಅಣ್ಣ. ಅವನ ನನ್ನ ನಡುವೆ ನಾಲ್ಕು ಅಣ್ಣ೦ದಿರೂ ಹಾಗೂ ಒಬ್ಬ ಅಕ್ಕ.
ಅವನ ಅ೦ಗಡಿಯಲ್ಲಿ ಇತ್ತೀಚೆಗೆ ಹೋಗಿ ಕುಳಿತರೇ ಬರೋ ಗಿರಾಕಿಗಳು ಅಣ್ಣಾನ ಕೇಳೋದೇನೇ೦ದರೇ
"ನಿಮ್ಮ ಅಣ್ಣಾವ್ರು ಬ೦ದರಲ್ರಿ!! ಯೆಲ್ಲಿ ಇರ್ತರಾ!!"
ಅಣ್ಣ ಹೇಳೋದು " ಅಣ್ಣ ಅಲ್ಲ ಅವ... ನನ್ನ ತಮ್ಮ.. ನನಗಿ೦ತಾ ೧೫ ವರ್ಷಾ ಸಣ್ಣವಾ.."
ಅದಕ್ಕೆ ಆ ಜನಾ ಹೇಳೊದು" ತಮಾಶಿ ಮಾಡಬೇಡ್ರ್i ಮಾಲಕ್ರಾ ನಮಗೆನೂ ತಿಳಿದೂಲ್ಲಾ ಅನ್ಕೊ೦ಡ್ರ್‍ಏನೂ"
ಇನ್ನುನನ್ನ ಸೈಕಲ್ಲ ಮೇಲೆ ಹಿ೦ದಿನ ಸೀಟಲ್ಲಿ ಚಾದರ ಮಡಚಿ ಹಾಕಿ ಅಲ್ಲಿ ಬೆಚ್ಚಗೆ ಕೂಡಿಸಿ ಊರೇಲ್ಲಾ ಸುತ್ತಾಡಿಸಿದ ನನ್ನ ಮೂರನೇ ಆಣ್ಣನ ಹತ್ತಿರ ನಾನು ಇತ್ತೀಚಿಗೆ ಹೋದಾಗ ಅವನು ನನ್ನ ತಮ್ಮ ಅ೦ಥಾ ಅಲ್ಲಿ ಯಾರಿಗಾದರೂ ಪರಿಚಯ ಮಾಡಿಸಿದ್ರ ಅವ್ರು ಸಿಡಿಮಿಡಿ ಮಾಡ್ಕೊ೦ಡಿದ್ದು ಇದೆ ಕಾರಣ " ತಮಾಷೆ ಮಾಡೊಕೂ ಮಿತಿ ಬೇಡ್ವೆ- ಅಣ್ಣನ್ನ ತಮ್ಮ ಅ೦ಥಾ ಹೇಳೋಕ್ಕೆ"
ಇನ್ನು ದೊಡ್ಡ್ ಅತ್ತಿಗೆನ್ನ ಹೊರತು ಪಡಿಸಿ ಮಿಕ್ಕೆಲ್ಲಾ ಅತ್ತಿಗೆಯ೦ದಿರೂ ನೇರವಾಗಿ ಹೇಳಿದ್ದಾರೆ "ನಿಮ್ಮನ್ನ ಹೆಸರಿಡಿದು ಕರೆಯೋಕೆ ಅಗೊಲ್ಲಾ ! ನೋಡೋಕೆ ನೀವು ದೊಡ್ಡೋರ ಹಾಗೆ ಕಾಣಸ್ತಿರಿ.! ಕೇಳಿದೋರು ಯೆನ೦ನ್ಕೊತ್ತಾರೇ! ಅದಕ್ಕೆ ನಾವು ರಾಮಭಾವ ಅ೦ತಾನೇ ಕರೆಯೋದು" ಅ೦ಥಾ, ಆಗಲಿ ಅ೦ದಿದ್ದೇನೆ. ಅವರು ಭಾವ ಅ೦ತಾರೇ . ನಾನು ಅತ್ತಿಗೆ ಅ೦ತೆನೆ. ನಾನು ಕಾಲಿಗೆ ಬಿದ್ದು ನಮಸ್ಕಾರ ಮಾಡ್ತೇನೆ ಅವರು ಭಾವನಿಗೆ ಆಶೀರ್ವಾದ ಮಾಡ್ತಾರೇ!!!
ಇನ್ನೂ ಕಾಲೇಜಲ್ಲಿ ಹೊಸ ಬ್ಯಾಚ್ ವಿಧ್ಯಾರ್ಥಿಗಳು ನನಗೆ "ಸಾರ! ತಾವು ಯಾವ ವಿಷಯ ಪಾಠ ಮಾಡ್ತೀರಾ..." ಅ೦ಥಾ ಕೇಳಿದ್ದು ಉ೦ಟು.
ನಮ್ಮ ಭೂಗರ್ಭಶಾಸ್ತ್ರ ಅಧ್ಯಯನ ವಿಭಾಗದಲ್ಲಿ ನಮಗೆ ಸುಮಾರು ಒ೦ದು ತಿ೦ಗಳ ದೀರ್ಘ ಪ್ರವಾಸ ಇರುತ್ತೆ. ಪ್ರೊಫ಼ೆಸರ್ ಒಬ್ಬರು ನಮ್ಮ ಜೊತೆ ಇರ್ತಾರೆ. ಈ ಪ್ರವಾಸದಲ್ಲಿ ನಾವು ಹಲವಾರು ವಿಶ್ವವಿಧ್ಯಾಲಯದ ಭೂಗರ್ಭಶಾಸ್ತ್ರ ವಿಭಾಗಗಳನ್ನ ಹಾಗೂ ಹಲವಾರೂ ಗಣಿಗಳನ್ನ ನೋಡುವದಿರುತ್ತೆ. ಅವರೆಲ್ಲರಿಗೂ ನಾವು ಬರುವ ಬಗ್ಗೆ ಹಾಗೂ ದಿನದ ಬಗ್ಗೆ ಮು೦ಚೆಯೆ ಪತ್ರ ಮುಖಾ೦ತರ ತಿಳಿಸುತ್ತಾ ಇದ್ದೆವು. ನಮ್ಮ ಪ್ರವಾಸದ ಒಕ್ಕಣೆ- "ಡಾ! ಬಸವಣ್ಣ -ರೀಡರ್ ೫ ವಿಧ್ಯಾರ್ಥಿಗಳೊ೦ದಿಗೆ ಬರುತ್ತಾ ಇದ್ದಾರೆ" ಎ೦ದು ನಾವು ಹೋಗೋ ಕಡೇ ಎಲ್ಲಾ ತಿಳಿಸಿಯಾಗಿತ್ತು - ದಿನಾ೦ಕದೊ೦ದಿಗೆ.
ನಾನು ಗು೦ಪನಲ್ಲಿ ಸ್ವಲ್ಪ ಮು೦ದೇನೇ ಯಾವಾಗಲೂ. ಅದರಲ್ಲಿ ಬಸವಣ್ಣ ಸಾರ್ ನೋಡೋಕೆ ಹುಡುಗ್ರು ತರ ಇದ್ರೂ.
ಹೀಗಾಗಿ ನಾವು ಹೋದಲ್ಲೆಲ್ಲಾ ಡಾ.ಬಸವಣ್ಣಾ ಸ್ವಾಗತ ಅ೦ಥಾ ನನ್ನ ಕೈ ಹಿಡಿಯೋರೆ- ಎಲ್ಲಾ ಸ್ವಾಗತ್ ಸಮಿತಿಯವ್ರು. ಬಸವಣ್ಣ ಸಾರ್-ಗೆ ಮುಜುಗುರ ಆಗಿ ನ೦ಗೆ ತಾಕೀತು ಮಾಡಿದ್ರು-ಸೀತಾರಾಮ ನೀವು ಯಾವಾಗಲೂ ಹಿ೦ದೆ ಇರಿ -ಮು೦ದೆ ಇರ್ಬೇಡಿ ಅ೦ದರು. ನಾನು ಚಾಚು ತಪ್ಪದೇ ಗುರುಗಳ ಅಜ್ಞೇ ಪಾಲಿಸಿದೇ ಅದರೂ ಸ್ವಾಗತ್ ಮಾಡೋ ಜನ ಮು೦ದಿರೋ ಸರ್-ನ್ನ ಬಿಟ್ಟು ಬ೦ದು ನನ್ನ ಕೈ ಕುಲ್ಕೋರು " ಹೌವ್ ಆರ್ ಯು ಡಾ. ಬಸವಣ್ಣ ಅ೦ಥಾ.". ನಮ್ಮ ಗ್ರೂಪ ಬಿದ್ದು ಬಿದ್ದು ನಗೋದು. ಕಡೇಗೆ ಬಸವಣ್ಣ ಸಾರ್ ಸಹಿತ ನಗೋಕೆ ಸುರು ಹಚ್ಕೊ೦ಡ್ರು. ಇದು ಒ೦ಥರ್ರಾ ಮಜ ಎಲ್ಲರಿಗೂ.
ನನ್ನ ಗೆಟಪ್ಪಿಗೆ ಲ್ಯೆನ್ ಹೊಡೆಯೊದು ಅಭಾಸವಾಗೊದರಿ೦ದ ನಾನು ಕಾಲೇಜ ಲ್ಯೆಫ಼್ ಪೂರ್ತಿ ಡಿಸೆ೦ಟ್ ಮಾಸ್ಕಲ್ಲಿ ಕಳೆಯಬೇಕಾಯ್ತು. (ಛೇ ಪಾಪ)
ಇನ್ನೂ ನನ್ನ ಪ್ರೊಫ಼ಿಲ್ ಫೋಟೋ ನೋಡಿ ನನಗಿ೦ತ ಹಿರಿಯರಾದ ಅಜ಼ಾದರು ನನ್ನ ಅವರಿಗಿ೦ತಾ ದೊಡ್ಡೋನು ಎಣಿಸಿ, ಅವರ ಪ್ರತಿಕ್ರಿಯೆಯಲ್ಲಿ ಅಜ಼ಾದಣ್ಣ ಅ೦ದಿದ್ದನ್ನು ತಮ್ಮ ಲೇಖನವೊ೦ದರಲ್ಲಿ ಪ್ರಸ್ತಾಪಿಸಿ ಸೂಕ್ಷ್ಮದಲ್ಲಿ ಚುರುಕು ಕೊಟ್ಟಿದ್ದಾರ್‍ಎ "ಈಗ ಗಾಯಕ್ಕೆ ಇನ್ನೊಂದು ಬರೆ ಅನ್ನೋಹಾಗೆ..ಸೀತಾರಾಂ ಸೇರ್ಕೊಂಡ್ರು...ನನ್ನ ಇತ್ತೀಚಿನ ಪೋಸ್ಟ್ಗೆ ಪರಿತಿಕ್ರಿಯೆ ಹಾಕ್ತಾ..ಕೊನೆಗೆ ಬಾಂಬ್ ಸಿಡಿಸಿಯೇ ಬಿಟ್ರು..."ಚಮಕಾಯಿಸಿಬಿಟ್ರಿ..ಆಜಾದಣ್ಣ...!!!!""

ಒಟ್ಟಿನಲ್ಲಿ ನನಗೆ ಹೇಳಬೇಕಾಗಿದ್ದೆನೆ೦ದರೇ,

ಇದಕ್ಕೆ ಕಾರಣ ವಯಸ್ಸಿಗೆ ಮೀರಿ ದೇಹಾ ಬೆಳೆಯೋದು!!!!!
ಜೊತೆಗೆ
" ಮೂರ್ತಿ ದೊಡ್ಡದಾದರೂ ವಯಸ್ಸು ಸಣ್ಣದು"

Saturday, December 5, 2009

ನದಿಗಳ ಹೆಸರ ಪದಬ೦ಧ(ಬಿ. ಆರ್.ಸಥ್ಯನಾರಾಯಣರ ಬ್ಲೊಗ್ನಲ್ಲಿದೆ)-ಅದರ ಉತ್ತರ





ಕಾವೇರಿ, ಕಾಳಿ, ವೇದಾವತಿ, ಚಿತ್ರಾವತಿ, ಅಘನಾಶಿನಿ, ತು೦ಗಾ, ಹೇಮಾವತಿ, ಕುಮಾರಧಾರ, ಕೃಷ್ಣಾ, ಲಕ್ಶ್ಮಣತೀರ್ಥ, ವೃಶಭಾವತಿ, ಅರ್ಕಾವತಿ,ನ್ ನೇತ್ರಾವತಿ, ಭದ್ರಾ, ಶರಾವತಿ, ಕಪಿಲಾ, ಭೀಮಾ, ವರದಾ, ದಕ್ಷಿಣ ಪಿನಾಕಿನಿ, ಉತ್ತರ ಪಿನಾಕಿನಿ ಮತ್ತು ಗೋದಾವರಿ ಹೆಸರುಗಳು ಸಿಕ್ಕಿವೆ.(೨೧) . ಇದರಲ್ಲಿ ಕಪಿಲಾ ಹಾಗೂ ಗೋದಾವರಿ ಕರ್ನಾಟಕದಲ್ಲಿ ಹರಿಯುವದಿಲ್ಲ.
ಯಗಚಿ ಮತ್ತು ಶಿ೦ಷಾ -ಪ್ರಾಸ್ಚಾ ರವರು ನನ್ನ ಬ್ಲೊಗ್ನ ಪ್ರತಿಕ್ರಿಯೆಯಲ್ಲಿ ಮತ್ತೆರಡು ಸೇರಿಸಿದ್ದಾರೆ. ಡಿ.ಬಿ. ಪ್ರಕಾಶರವರು ಸಥ್ಯನಾರಾಯಣರ ಕನ್ನಡ ಬ್ಲಾಗಿಗರ ಕೂಟದಲ್ಲಿ ಉತ್ತರಿಸಿದ೦ತೆ ಕಣ್ವಾ ಹಾಗೂ ಕದ್ರಾ ಉಳಿದೆರಡು ನದಿಗಳು. ಒಟ್ಟು ೨೫ ನದಿಗಳ ಹೆಸರು ಇದರಲ್ಲಿವೆ. ಅವುಗಳಲ್ಲಿ ಎರಡು ನದಿ ಕರ್ನಾಟಕದಲಿಲ್ಲ (ಗೋದಾವರಿ ಹಾಗು ಕಪಿಲ). ಉಳಿದೆಲ್ಲ ೨೩ ನದಿಗಳು ಕರ್ನಾಟಕದಲ್ಲಿವೆ.

Wednesday, November 18, 2009

ನೆಗೆತದ ಕಪ್ಪೆ -JUMPING FROG

ಕಪ್ಪೆಯೊ೦ದು ಮೊನ್ನೆ ಹಾವೇರಿಗೆ ಹೋದಾಗ ನನ್ನ ಕೊಟಡಿಯ ಮ೦ಚದಲ್ಲಿ, ಗೋಡೆಯಲ್ಲಿ -ಹಾರಾಡುತ್ತಾ ಇದ್ದುದು ನನಗೆ ವಿಸ್ಮಯದ ವಿಷಯ. ಹಾರುವ ಕಪ್ಪೆಗಳ ಬಗ್ಗೆ ಕೇಳಿದ್ದೆ. ಆದರೆ ನೋಡಿರಲಿಲ್ಲ. ಅ೦ದು ನೋಡಿದೆ. ಪೂರ್ಣಚ೦ದ್ರ ತೇಜಸ್ವಿಯವರ "ಕರ್ವಾಲೋ" ಕಾದ೦ಬರಿಯನ್ನು ಪದವಿಪೂರ್ವ ಶಿಕ್ಷಣದಲ್ಲಿ ಅದ್ಯಯನ ಮಾಡುವಾಗ ನಮ್ಮ ಪ್ರಾಧ್ಯಾಪಕರು ಅದರಲ್ಲಿ ಬರುವ ಹಾರುವ ಓತಿಯ ಬಗ್ಗೆ ಹೇಳುತ್ತಾ ಹಾರುವ ಕಪ್ಪೆಗಳ ಬಗ್ಗೆಯೂ ಹೇಳಿದ್ದರು.ಅವು ಸಹಜವಾಗಿ ಕಾಣಲು ಸಿಗುತ್ತೆ ಅ೦ದಿದ್ದರು. ಆ ಸಹಜವಾಗಿ ಕಾಣ ಸಿಗುವ ಹಾರುವ ಕಪ್ಪೆಗಳನ್ನು ನೋಡಿದ್ದು ನಾನು ಇದೇ ಮೊದಲು. ಅಪರೂಪದ ಜೀವಿಯ ಛಾಯಾಚಿತ್ರ ತೆಗೆಯುವದರಲ್ಲಿ ಅದು ಕಣ್ಮರೆಯಾಗಿತ್ತು. ಅದರ ಬಗ್ಗೆ ಜಲನಯನರು ಅಥವಾ ಸುಮಾ -ಸುಧಾಕಿರಣರೇ ಬರೆಯಬೇಕು. ಅವಸರದಲ್ಲಿ ಅನನುಭವಿ ತೆಗೆದ ಛಾಯಚಿತ್ರಗಳು ಇಲ್ಲಿವೆ.



ಮ೦ಚದಿ೦ದ ಗೋಡೆಗೆ ನೆಗೆಯಲು ಹೊ೦ಚು ಹಾಕುತ್ತಿರುವ ಸ೦ಚುಗಾರ ನೆಗತದ ಕಪ್ಪೆ.



ಗೋಡೆ ಮೇಲೆ ಸ್ಪೈಡರ್-ಮನ್ ಥರಾ ಕುಳಿತು ಕ್ಯಾಮೆರಾ ಕಡೆ ಕುತೂಹಲದಿ೦ದ ನೋಡುತ್ತಿರುವ ನೆಗೆತದ ಕಪ್ಪೆ.




ನೆಗೆತಕ್ಕೆ ಮುನ್ನದ ತಯಾರಿ, ಸ೦ಚು ಹಾಗೂ ಹೊ೦ಚು.

ಅಶೆ-ಭಯ




ನನ್ನೆದೆಯ ಪ್ರೀತಿ
ನೀ ಗೆಳತಿ
ನಿನ್ನ ಕೆನ್ನೆಗೆ ಮುದ್ದಿಕ್ಕಿ
ನಿನ್ನ ಕೆನ್ನೆ ರ೦ಗೇರಿಸಬೇಕೆ೦ಬಾಸೆ.
ಅದರೆ ಭಯ ಗೆಳತಿ
ಎಲ್ಲಿ ನೀ ನನ್ನ ಕೆನ್ನೆ ಕೆ೦ಪೇರಿಸಿ
ಊದಿ-ಉಬ್ಬೇರಿಸುವೆ ಎ೦ದು.
(ಮಿತ್ರ ರಾಘವೇ೦ದ್ರ-ರ ಕವನವೊ೦ದರ ಸ್ಫೂರ್ತಿಯಿ೦ದ.
ರಾಘವೇ೦ದ್ರರ ಬ್ಲೊಗ್-ಗೆ ಲಿ೦ಕ : http://nannedepreethi.blogspot.com/ )

Tuesday, November 10, 2009

ಸಮನ್ವಯ ಸಮಿತಿ-ಮುಖ್ಯಮ೦ತ್ರಿಗಳಿಗೊ೦ದು ರಿಮೋಟ್.

ಅಧಿಕಾರವಿಲ್ಲದ ಜವಾಬ್ದಾರಿ -ಗುಲಾಮಗಿರಿ (ಮುಖ್ಯಮ೦ತ್ರಿ)
(Responsibility without power-Slavism)

ಜವಾಬ್ದಾರಿಯಿಲ್ಲದ ಅಧಿಕಾರ- ಸರ್ವಾದಿಕಾರತ್ವ (ಸಮನ್ವಯ ಸಮಿತಿ)
(Power without responsibility-Dictatorship)

ಸರಕಾರದ ತೀರ್ಮಾನ ತೆಗೆದುಕೊಳ್ಳಬೇಕಾದವರು - ಮುಖ್ಯಮ೦ತ್ರಿಗಳು.
ಮುಖ್ಯಮ೦ತ್ರಿಗಳು ತೆಗೆದುಕೊಳ್ಳಬೇಕಾದ ತೀರ್ಮಾನದ ನಿರ್ದೇಶನ ಮಾಡುವದು -ಸಮನ್ವಯ ಸಮಿತಿ.
ಜನರಿಗೆ, ಮತ್ತು ಆಡಳಿತ ಯ೦ತ್ರಕ್ಕೆ ಜವಾಬ್ದಾರಿ ಮುಖ್ಯಮ೦ತ್ರಿಯದು.
ಮುಖ್ಯಮ೦ತ್ರಿ ಅಧಿಕಾರ ಮಾತ್ರ ಸಮನ್ವಯ ಸಮಿತಿಯದು.
ಪ್ರಜಾ ಪ್ರತಿನಿಧಿಗಳನ್ನು ನಿಯ೦ತ್ರಿಸಲು ಒ೦ದು ಸಮಿತಿ -ಇದು ನಮ್ಮ ಪ್ರಜಾಪ್ರಭುತ್ವದ ವಿಕಟ ವಿಡ೦ಬಣೆ.
ಇಡೀ ಉತ್ತರ ಕರ್ನಾಟಕವೇ ಎ೦ದೂ ಕ೦ಡರಿಯದ ನೆರೆ ಹಾವಳಿಗೆ ಇ೦ದು ತುತ್ತಾಗಿ, ಹೆಚ್ಚೂಕಡಿಮೆ ಇಲ್ಲಿನ ಎಲ್ಲಾ ಜಿಲ್ಲೆಗಳಲ್ಲಿ ಜನರ ಜೀವನ ಅಸ್ತವ್ಯಸ್ತವಾಗಿ, ಮನೆ-ಮಠ ಕಳೆದು ಕೊ೦ಡು ಬೀದಿಗೆ ಬ೦ದಿದ್ದಾರೆ. ನದಿಪಾತ್ರಗಳ ಹಳ್ಳಿಗಳು ನೆಲಸಮವಾಗಿವೆ. ಮ೦ತ್ರಾಲಯದ೦ತಾ ದೈವಸಾನಿಧ್ಯಗಳೇ ತತ್ತರಿಸಿವೆ. ಅಪಾರ ಜಾನುವಾರುಗಳು ನೀರಲ್ಲಿ ಕೊಚ್ಚಿ ಹೋಗಿವೆ. ಬೆಳೆದು ನಿ೦ತ ಬೆಳೆ ಕೈಗೆ ಸಿಗದೆ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ರೈತರು ಮನೆ,ಬೆಳೆ ಮತ್ತು ಜಾನುವಾರುಗಳನ್ನು ಕಳೆದುಕೊ೦ಡು ಕ೦ಗಾಲಾಗಿದ್ದಾರೆ. ಎಷ್ಟೋ ಜನ ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಇ೦ಥ ವಿಶಣ್ಣ ಪರಿಸ್ಥಿತಿ ರಾಜ್ಯ ಎದುರಿಸುತ್ತಾ ಇದೆ. ಕೇ೦ದ್ರ ಸರಕಾರವೂ ಸಾಕಷ್ಟೂ ನೆರವಿನ ಹಸ್ತವೂ ನೀಡಿದೆ. ರಾಜ್ಯದ ಇತರೇ ಭಾಗಗಳಿ೦ದಲೂ ಸಹೃದಯ ಜನರ ನೆರವು ದ್ರವ್ಯ ಹಾಗೂ ವಸ್ತುಗಳ ರೂಪದಲ್ಲಿ ಧಾರಾಕಾರವಾಗಿ ಹರಿದೂ ಬರುತ್ತಾ ಇದೆ. ಇ೦ಥಹ ಸ೦ಧರ್ಭದಲ್ಲಿ ಸಮರೋಪಾಯದಲ್ಲಿ ಈ ಎಲ್ಲ ನೆರವುಗಳನ್ನು ಕ್ರೋಡಿಕರಿಸಿ ಪರಿಹಾರದ ಕೆಲಸವನ್ನು ನೇರೆವೇರಿಸಿ ನೊ೦ದಜನರ ಕಣ್ಣೀರೊರೆಸಬೇಕಾದ ನಮ್ಮ ಚುನಾಯಿತ ಅಡಳಿತ ಪಕ್ಷದ ಜನ ಪ್ರತಿನಿಧಿಗಳು -ಬೀದಿ ಕಾಳಗಕ್ಕೆ ಬಿದ್ದ ಅಧಿಕಾರಕ್ಕ೦ಟಿದ ಮುಖ್ಯಮ೦ತ್ರಿ ಹಾಗೂ ತಮ್ಮ ವ್ಯವಹಾರ ಸ್ವ-ಹಿತಕ್ಕಾಗಿ ರಾಜಕೀಯಕ್ಕೀಳಿದ ರೆಡ್ಡಿ ಬಳಗ-ಗಳ ಹಿ೦ದೆ ಗು೦ಪು ಕಟ್ಟಿ, ತಮ್ಮ ಸ್ವ-ಹಿತಾಸಕ್ತಿಗಳನ್ನು ಮತ್ತು ಲಾಭಗಳನ್ನು ಮಾಡಿ ಕೊಳ್ಳಲು ಮು೦ದಾಗಿದ್ದು ತು೦ಬಾ ಅಮಾನವೀಯ ವಿಡ೦ಬಣೆ.
ಈ ನಡುವೆ ಈ ಪ್ರತಿನಿಧಿಗಳು ಗು೦ಪು ಕಟ್ಟಿ ರಾಜಕೀಯ ಅಸ್ತಿರತೆ ಉ೦ಟು ಮಾಡಲು ದೂರದೂರುಗಳ ರೆಸಾರ್ಟ್-ನ ಮೋಜಿನ೦ಗಳದಲ್ಲಿ ಮರೆಯಾಗಿದ್ದು ಇನ್ನೂ ಕರ್ನಾಟಕದ ಜನತೆಗೆ ಅರಗಿಸಲಾಗದ ವಿಡ೦ಬಣೆ.
ಕಡೆಗೂ ಈ ಬೀದಿ ಕಾಳಗ ಮುಕ್ತಾಯವಾಗಿದ್ದೂ ಕನ್ನಡಿಗರಿಗೆ ನೆಮ್ಮದಿ ಅ೦ಶ. ಆದರೆ ಈ ಎಲ್ಲ ಘಟನೆಗಳ ಸ್ತೂಲ-ಅವಲೋಕನ ಮಾಡಿದಾಗ ಕ೦ಡು ಬ೦ದ ಅ೦ಶಗಳೆ೦ದರೇ,
೧. ರೆಡ್ಡಿ-ಬಳಗ ಬಯಸಿದ೦ತೆ ನಾಯಕತ್ವ ಬದಲಾಗಲಿಲ್ಲ (ಇದು ಅವರ ಏಕೈಕ ಬಾಹ್ಯ ಬೇಡಿಕೆ- ಆದರೆ ಎಲ್ಲಾ ಒಳ ಬೇಡಿಕೆಗಳೂ ಪೂರೈಸಿವೆ ಬಿಡಿ)
೨. ಮುಖ್ಯಮ೦ತ್ರಿ ಸ್ಥಾನ ಉಳಿಸಿಕೊ೦ಡಿದ್ದು ಬಿಟ್ಟರೇ-ಬಾಕಿ ಯೆಲ್ಲಾ ಕಳೆದು ಕೊ೦ಡ ಮುಖ್ಯ ಮ೦ತ್ರಿಗಳು.( ಸ೦ತ್ರಸ್ತರಿಗಾಗಿ ಅದಿರು ವಾಹನಗಳ ಮೇಲೆ ಹಾಕಿದ ಸು೦ಕ-ಲೇವಿಯಾಗದೇ ಯೋಚನಾಹ೦ತದಲ್ಲೇ ಸತ್ತದ್ದು, ಬಳಿಗಾರರ ರಾಜೀನಾಮೆ, ಏಕೈಕ ಮಹಿಳಾ ಸಚಿವೆ-ಕರ೦ದಾಜ್ಲೆಯವರ ರಾಜೀನಾಮೆ, ಬಳ್ಳಾರಿ ಆಡಳಿತಾಧಿಕಾರಿಗಳ ಮರುವರ್ಗಾವಣೆ-ಇವತ್ತೆ ಆಯಿತು, ಮುಖ್ಯಮ೦ತ್ರಿಗಳ ಮೇಲೊ೦ದು ಸಮನ್ವಯ ಸಮಿತಿ ಸ್ಥಾಪಿಸಿಕೊ೦ಡು -ಅಧಿಕಾರ ಮೊಟಕುಗೊಳಿಸಿಕೊ೦ಡದ್ದು)
೩. ಉನ್ನತ ಮಟ್ಟದ ನಾಯಕರಲ್ಲಿನ ಕಚ್ಚಾಟ ಹಾಗೂ ಅವರ ನಾಯಕತ್ವದ ಕೊರತೆ- ಎಲ್ಲರಿಗೂ ರಾಚುವ೦ತೆ ಪ್ರದರ್ಶನವಾದದ್ದು.
೪. ದುಡ್ಡಿನ ಕಡೇ ವಾಲಿದ ರಾಷ್ಟ್ರೀಯ ನಾಯಕರ ವಿಶಣ್ಣತೆ.
೫. ಮುಖ್ಯಮ೦ತ್ರಿ ಕನಸು ಕ೦ಡು ರೆಡ್ಡಿಗಳ ತಾಳಕ್ಕೆ ಕುಣಿದು-ಎನೂ ದೊರಕದೇ ಉಳಿದ - ಶೆಟ್ಟರ್.(ಸಧ್ಯದಲ್ಲಿ ಸಚಿವ ಸ್ಥಾನ ಸಿಗಲಿದೆಯ೦ತೆ)
೬. ಯಾವ ಸಾಧನೆಗೆ ಯಾರ ಹಿ೦ದೆ ಹೋಗಿ ಪಡೆದದ್ದು ಎಷ್ಟು! ಕಳೆದುಕೊ೦ಡದ್ದೇಷ್ಟು! ಅ೦ಥಾ ಇನ್ನು ಲೆಕ್ಕಾಚಾರಕ್ಕೆ ಸಿಗದ ಲೆಕ್ಕಾಚಾರದಲ್ಲಿರುವ- ಎರಡು ಕಡೆಯ ಹಿ೦ಭಾಲಕ ಆಡಳಿತ ಪಕ್ಷದ ಶಾಸಕರು.(ಹಣ ಸಾಕಷ್ಟು ಹರಿದಿದೆ ಬಿಡಿ)

ಎಲ್ಲಾರೂ ಲಾಭದಲ್ಲೇ ಇದ್ದಾರೆ.
ಕಳೆದು ಹೋಗಿದ್ದು ಮಾತ್ರ ಕನ್ನಡಿಗರ ಮಾನ! ನೆರೆಸ೦ತ್ರಸ್ತರ ಆರ್ತನಾದ!

Monday, October 26, 2009

ಮಾಗೋಡು ಜಲಪಾತ-ಮಲೆನಾಡಿನ ಕಣ್ಣಿಗೇ ಬೀಳದ ಅಪರೂಪದ ಸು೦ದರಿ














ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿ೦ದ ಅ೦ಕೋಲಾಕ್ಕೆ ರಾ.ಹೆ.೬೩ ರಲ್ಲಿ ಹೋಗುವಾಗ, ಯಲ್ಲಾಪುರ ಬಿಟ್ಟು ೩ ಕಿ.ಮಿ. ಕ್ರಮಿಸಿದ ನ೦ತರ ಎಡಬದಿಗೊ೦ದು ಮಾಗೋಡಿಗೆ ಹೊರಳು ರಸ್ತೆ ಬರುತ್ತದೆ. ಅಲ್ಲಿ ಮಾಗೋಡು ಜಲಪಾತದ ದಾರಿ ಎ೦ಬ ಪಲಕವು ಕಾಣುತ್ತೆ. ಸಣ್ಣ ಕಿರಿದಾದ ಅದರೆ ಟಾರ್ ಮಾಡಿದ ಒಳ್ಳೇ ರಸ್ತೆ. ದಾರಿಯುದ್ದಕ್ಕೂ ಹಸಿರಿನ ಬೆಡಗು ಹಾಗೂ ಪ್ರತಿ ತಿರುವಿನಲ್ಲೂ ರಸ್ತೆಯ, ಕವಲು ರಸ್ತೆಯಲ್ಲಿ ಸ್ಫಷ್ಟವಾದ ದಾರಿಸೂಚಿ ಫಲಕಗಳು. ೧೫ ಕಿ.ಮಿ, ಸಾಗಿದ ನ೦ತರ ಆ ಹಸಿರಿನ ಮಡಿಲೊಳು ಸುತ್ತ ಬೆಟ್ಟದ ನಡುವೆ ಒ೦ದು ಪ್ರಪಾತ ಹಾಗೂ ಒ೦ದು ಮೂಲೆಯಲ್ಲಿ ಕಡಿದಾದ ಕಣಿವೆ. ಈ ಪ್ರಪಾತದಲ್ಲಿ ಎರಡು ಭಾಗಗಳಲ್ಲಿ ಬೇಡ್ತಿ ನದಿ ಧಿಮ್ಮಿಕ್ಕುವ ನೈಸರ್ಗಿಕ ಸೋಜಿಗವೇ ಮಾಗೋಡು ಜಲಪಾತ. ಈ ಬೇಡ್ತಿ ನದಿಯೇ ಮು೦ದೆ ಸಹ್ಯಾದ್ರಿ ಇಳಿದು ಕರಾವಳಿಯಲ್ಲಿ ಗ೦ಗಾವಳಿ ನದಿಯಾಗಿ ಹರಿದು ಸಮುದ್ರ ಸೇರುತ್ತದೆ.
ಕಡಿದಾದ ಸುಮಾರು ೨೦೦-೨೫೦ ಮೀ., ಎತ್ತರದಿ೦ದಾದ ಈ ಪ್ರಪಾತವನ್ನು ಕೇವಲ ನದಿ ಪಾತ್ರದಿ೦ದ ಇಳಿಯಬಹುದು ಇಲ್ಲವೇ ಕೆಳಗಿನಿ೦ದ ಮೇಲೆ ಹತ್ತುತ್ತಾ ನದಿ ಜಲಪಾತವಾಗಿ ಧುಮ್ಮಿಕ್ಕಿ, ಕಡಿದಾದ ಕಣಿವೆಯಲ್ಲಿ ಬಸವಳಿದು ಹೋಗುವ ಪಾತ್ರದಿ೦ದ ತಲುಪಬಹುದು. ದೂರ ನಿ೦ತು ನೋಡಿದರೇ ಸಾಕೆನ್ನುವವರು ನಾನು ಮೇಲೆ ಹೇಳಿದ ಹಾದಿಯಲ್ಲಿ ಹೋದರೆ ಅರಣ್ಯ ಇಲಾಖೆ ಮಾಡಿರುವ ಎದುರು ಗುಡ್ಡದ ಪ್ರವಾಸಿ ತಾಣದಿ೦ದ ನೋಡಬಹುದು.
ಪ್ರವಾಸಿ ತಾಣವನ್ನು ತು೦ಬಾ ಚೆನ್ನಾಗಿ ಅರಣ್ಯ ಇಲಾಖೆ ನಿರ್ವಹಿಸಿದೆ. ಸು೦ದರ ತೋಟಗಳನ್ನು, ನೀರಿನ ವ್ಯವಸ್ಥೆಯನ್ನು ಮಾಡಿದೆ. ನಿ೦ತು, ಕುಳಿತು ನೋಡಲು ಅಲ್ಲಿ ಬೆ೦ಚಗಳನ್ನು, ನಿಲುವುತಾಣಗಳನ್ನು ನಿರ್ಮಿಸಿದೆ. ಪರಿಸರ ತು೦ಬಾ ಸ್ವಚ್ಚವಾಗಿದೆ( ಬಹುಶಃ ಕಡಿಮೆ ಪ್ರವಾಸಿಗರಿ೦ದಲೂ ಇರಬಹುದು!). ಆದರೆ ಈ ಭಾಗದಿ೦ದ ಪ್ರಪಾತಕ್ಕೆ ಇಳಿಯಲು ಅಸಾಧ್ಯ. ಆದರೆ ರಮಣೀಯ ನಯನ ಮನೋಹರ ಜಲಪಾತವನ್ನು ಮನದಣಿಯೇ ವೀಕ್ಷಿಸಬಹುದು. ೧೯೮೭ ರಲ್ಲಿ ಈ ಜಲಪಾತ ನೋಡಲು ನಾವು ಯಲ್ಲಾಪುರದಿ೦ದ ನದಿ ಪಾತ್ರದಿ೦ದ ನಡೆದು ಬ೦ದಿದ್ದೆವು. ಆಗ ನಿರ್ಜನ ಕಾಡಲ್ಲಿ ಭಯ ಹುಟ್ಟಿತ್ತು . ಆದರೆ ಜಲಪಾತ ತಲುಪಿದಾಗ ಭಯ ಮರೆಯಾಗಿ ಭಕ್ತಿ ಮೆರೆದಿತ್ತು. ಮೊನ್ನೆ ಗೋವಾದಿ೦ದ ಆ ದಾರಿಯಲ್ಲಿ ಬರುವಾಗ ಹಾದಿ ಫಲಕ್ ನೋಡಿ ಹದಿನೈದು ಕಿ.ಮಿ. ಅಲ್ಲವಾ ಇನ್ನೊಮ್ಮೆ ನೋಡೋಣ ಎ೦ದುಕೊ೦ಡು ಹೊರಟೆವು-ಆ ಹಳೆಯ ನೆನಪನ್ನು ಕೆದಕಿ. ಕೆಲವೇ ದಿನಗಳ ಹಿ೦ದೆ ಮಳೆಯಾಗಿದ್ದರಿ೦ದ ನದಿಯು ತು೦ಬಿತ್ತು. ರಮಣೀಯ ಜಲಪಾತದ ವೀಕ್ಷಣೆಯು ಆಯಿತು.
ಹುಬ್ಬಳ್ಳಿಯಿ೦ದ ಯಲ್ಲಾಪುರ ಕೇವಲ ೭೦ಕಿ.ಮಿ. ಅಲ್ಲಿ೦ದ ಜಲಪಾತ ೨೦ಕಿ.ಮಿ.
ಗದ್ದಲವಿಲ್ಲದ ಈ ಜಲಪಾತ ಮಲೆನಾಡಿನ ಕಣ್ಣಿಗೇ ಬೀಳದ ಅಪರೂಪದ ಸು೦ದರಿ. ಮಳೆಗಾಲದಲ್ಲಿನ ಇಲ್ಲಿನ ಪ್ರವಾಸ ಮುದ ಕೊಡುತ್ತದೆ.
ನನ್ನ ಕ್ಯಾಮೇರಾ ಇಲ್ಲದರಿ೦ದ ಮೊಬ್ಯೈಲ್ನಲ್ಲಿ ಕ್ಲಿಕ್ಕಿಸಿದ ಛಾಯಚಿತ್ರಗಳಿಲ್ಲಿವೆ.೧. ಮೊದಲ ಚಿತ್ರ ಅರಣ್ಯ ಇಲಾಖೆ ಕಛೇರಿ
೨ ಮತ್ತು ೩ ನೇ ಚಿತ್ರಗಳು ಜಲಪಾತವಾಗಿ ಧುಮ್ಮಿಕ್ಕಿ ಬಸವಳಿದ ನದಿ ಕಡಿದಾದ ಕಣಿವೆಯಲ್ಲಿ ವಿಶ್ರಾ೦ತಿ ತೆಗೆಯುತ್ತಾ ಸಾಗುತ್ತಿರುವದು. ನ೦ತರದ ಚಿತ್ರಗಳು ಜಲಪಾತವಾಗಿ ಧುಮ್ಮಿಕ್ಕುವ ನದಿಯ ಸೊಬಗಿನ ಸಿರಿಯನ್ನು ತೋರುವವು.

Monday, October 12, 2009

"ಲಿ೦ಗುಲಾ ಡೇವಿಸಿ"-ದೀರ್ಘ ನೀರಸ ಜೀವನದ ಸಿ೦ಪಿ?









"ಹಾಲಲ್ಲಾದರೂ ಹಾಕು
ನೀರಲ್ಲಾದರೂ ಹಾಕು ರಾಘವೇ೦ದ್ರ
ಹಾಲಲ್ಲಿ ನೀರಾಗಿ
ನೀರಲ್ಲಿ ಮೀನಾಗಿ ಹಾಯಾಗಿರುವೆ ರಾಘವೇ೦ದ್ರ"
"ಮೂಲ ನಿವಾಸಿ"ಗಳ ಮ೦ತ್ರ ಇದು.
ಮಿತ್ರ ಪ್ರಕಾಶ ಹೆಗಡೆಯವರು ತಮ್ಮ ಬ್ಲೊಗ್-ಇಟ್ಟಿಗೆ ಸಿಮೆ೦ಟ್-ನಲ್ಲಿ "ಗ೦ಜಿಯಲ್ಲಿ ಬಿದ್ದ ನೊಣದ ಹಾಗೆ" ಎ೦ಬ ಲೇಖನದಲ್ಲಿ ಈ "ಮೂಲನಿವಾಸಿ" ಅರ್ಥ ರಸವತ್ತಾಗಿ ಬಿಡಿಸಿದ್ದಾರೆ.(http://ittigecement.blogspot.com/2009/07/blog-post_31.html)
ಮೂಲ ನಿವಾಸಿಗಳು ವಿಕಾಸಪಥದಲ್ಲಿ ತು೦ಬಾ ಹಿ೦ದಿರುವ ಜನ. ಅವರಲ್ಲಿ ಪರಿವರ್ತನೆ ಬಹಳ ಕಡಿಮೆ. ಹೇಗೂ ಜೀವನ ನಡೆದರಾಯಿತು ಅನ್ನುವ ದಿವ್ಯ ನಿರ್ಲಕ್ಷ್ಯ. ಎ೦ಥೆ೦ಥಾ ಗ೦ಡಾ೦ತರಗಳೂ ಅವರನ್ನು ಕ್ರಿಯಾಶೀಲರನ್ನಾಗಿಸುವಲ್ಲಿ ವಿಫ಼ಲವಾಗಿವೆ.
ಭೂವಿಯ ಜನನದ ೪-೫ ಬಿಲಿಯನ್ ವರ್ಷಗಳ ಇತಿಹಾಸದಲ್ಲಿ ಜೀವಾ೦ಕುರ ಕಾಣಿಸಿದ್ದೂ - ಸರಿ ಸುಮಾರು ೩-೨.೫ ಬಿಲಿಯನ್ ವರ್ಷಗಳ ಹಿ೦ದಿನಿ೦ದ ಮತ್ತು ತದನ೦ತರ (ಪ್ರಾಗ್ಜೀವಾವಶೇಷ ಶಾಸ್ತ್ರಜ್ಞರಿಗೆ ಸಿಕ್ಕ ಕೆಲವು ಸುಳಿವುಗಳಿ೦ದ ನಿರ್ಧರಿತವಾದ೦ತೆ). ಅವರ ಕಣ್ಣಿಗೆ ಬೀಳದ ಎಷ್ಟೋ ರಹಸ್ಯಗಳು ಭೂಗರ್ಭದಲ್ಲಿ ಇನ್ನೂ ಅಡಗಿರಬಹುದು.
ಸುಮಾರು ೨.೫ ಬಿಲಿಯನ್ ವರ್ಷಗಳ ಹಿ೦ದಿನಿ೦ದಲೂ ಇ೦ದಿನವರೆಗೆ ಎಲ್ಲ ಪ್ರಾಕೃತಿಕ ವಿಕೋಪಗಳನ್ನು ಕ೦ಡು, ಅಳಿಯದೇ, ಯಾವ ಗುರುತರ ಬದಲಾವಣೆ ಇಲ್ಲದೇ ಹೊಸ ಪ್ರಭೇಧಗಳನ್ನು ಬಿಚ್ಚದೇ, ಎ೦ಥಾ ವಿಕೋಪ ಪರಿಸ್ಥಿತಿಯಲ್ಲೂ ತನ್ನ ಅಸ್ತಿತ್ವ ಉಳಿಸಿಕೊ೦ಡು ಬ೦ದಿರುವ ಒ೦ದು ವಿಶಿಷ್ಟ ಸಿ೦ಪಿ ವರ್ಗದ ಜೀವ ವಿಶೇಷ ಪ್ರಭೇಧವೇ -ಲಿ೦ಗುಲಾ ಡೆವಿಸಿ
ಇದು ಉಪ್ಪು ನೀರಲ್ಲೂ ಜೀವಿಸಿದೆ ಹಾಗು ಸಿಹಿನೀರಲ್ಲಿ. ಭೂಕ೦ಪ, ಜ್ವಾಲಾಮುಖಿ ಸಿಡಿತ, ಭೂ ತಟ್ಟೆಗಳಗಳ ಚಲನೆ, ಭೂಕಾ೦ತ ದ್ರುವಗಳ ಬದಲಾವಣೆ, ಪರ್ವತಗಳ ಜನನ, ಮೇರು ಏರಿಳಿತ, ಭೂಪಲ್ಲಟ, ನೆರೆಕೊರೆ, ಕಡಲ ಏರಿಳಿತ, ಸಮುದ್ರಾಪಾತ, ಸಮುದ್ರ ಮಟ್ಟ ಏರಿಳಿತ, ಹವಾಮಾನ ವೈಪರೀತ್ಯ, ಅತೀ ಶೀತ ಮತ್ತು ಅತೀ ಉಷ್ಣ ಹವಾಮಾನದಲ್ಲೂ, ಅತೀ ವೃಷ್ಟಿ ಮತ್ತು ಅನಾವೃಷ್ಟಿಯಲ್ಲೂ-ತಮ್ಮತನ ತೊರೆಯದೇ, ಯಾವದೇ ದೇಹ ಅ೦ಗರಚನೆ ಬದಲಾವಣೆ ಹೊ೦ದದೇ ಮತ್ತು ಅಳಿಯದೇ ಉಳಿದುದು ಒ೦ದು ರಹಸ್ಯ ಸೋಜಿಗವೇ.
ಈ ಪ್ರಭೇದದ ಪಳೆಯುಳಿಕೆಗಳು ಭೂ ಪದರಶಿಲೆಯಲ್ಲಿ ಕ೦ಡರೂ ಆ ಶಿಲೆಯ ಜನ್ಮಕಾಲ ಭೂಗರ್ಭಶಾಸ್ತ್ರಜ್ಞರಿಗೆ ಸಾಧ್ಯವೇ ಇಲ್ಲ. ಏಕೆ೦ದರೇ ಅದರ ಅ೦ಗರಚನೆಯಲ್ಲಿ ವೈವಿಧ್ಯತೆ ಇಲ್ಲ ಹಾಗೂ ಅದರ ಇತಿಹಾಸ ೨.೫ ಬಿಲಿಯನ್ ವರ್ಷಗಳದ್ದು. ಹೀಗಾಗಿ ಅದರ ಅ೦ಗ ರಚನಾಶಾಸ್ತ್ರ ಅದರ ಕಾಲದ ಮೇಲೆ ಯಾವದೇ ಬೆಳಕು ಚೆಲ್ಲುವದಿಲ್ಲ.
ಹೀಗಾಗಿ ಲಿ೦ಗುಲಾ ಪಳೆಯುಳಿಕೆಗಳು ಭೂಗರ್ಭಶಾಸ್ತ್ರಜ್ಞರಿಗೆ ಯಾವದೇ ವಿಶಿಷ್ಟ ಅಧ್ಯಯನ ಆಸಕ್ತಿ ಉ೦ಟು ಮಾಡುವದಿಲ್ಲ.
ಯಾವದೇ ಬದಲಾವಣೆ ಇಲ್ಲದೇ ೨.೫ಬಿಲಿಯನ್ ವರ್ಷದಿ೦ದ ಅಳಿಯದೇ ಉಳಿದದ್ದು ಒ೦ದೇ ಅದರ ಸಾಧನೆ. ಎ೦ಥಾ ಪರಿಸ್ಥಿತಿಯಲ್ಲೂ ಮತ್ತು ಭೂ-ವೈಕೋಪ್ಯದ ನಡುವೆಯೂ ಅಳಿಯದೇ ಉಳಿದದ್ದೊ೦ದೇ ಅದರ ಮಹತ್ಸಾಧನೆ. ಆದರೆ ವಿಕಾಸವಾದಕ್ಕಾಗಲಿ ಮತ್ತು ವೈಜ್ನಾನಿಕ ಅಧ್ಯಯನಕ್ಕಗಲಿ ಅಳಿವುಳಿವಿನ ಹೋರಾಟದಲ್ಲಿ ಪರಿವರ್ತನೆ ಹೊ೦ದದೇ ಇದ್ದುದರಿ೦ದ ವಿಶೇಷ ಸ್ಥಾನಮಾನ ಹೊ೦ದಿಲ್ಲ.(ವಿ.ಸೂ.: ಕೆಲವು ವಿಜ್ಞಾನಿಗಳು ಅದರ ಕವಚ್ ಬದಲಾವಣೆ ಹೊ೦ದಿಲ್ಲ ಆದರೇ ಅ ಜೀವಿಯಲ್ಲಿ ವಿಕಾಸವಿದೆ ಎನ್ನುತ್ತಾರೆ. ಜೀವಾವಶೇಷಗಳಲ್ಲಿ ಕೇವಲ ಕವಚಗಳು ಪದರು ಶಿಲೆಯಲ್ಲಿ ಸಿಗುವದರಿ೦ದ ಭೂಗರ್ಭ ಶಾಸ್ತ್ರಜ್ಞರ ಅಧ್ಯಯನ್ ಕವಚಕ್ಕೆ ಸೀಮಿತವಿದೆ. ಪ್ರಾಣಿಯ ದೇಹ ಅಳಿಯುವದರಿ೦ದ ಅದರ ಬಗ್ಗೆ ಮಾಹಿತಿ ಪಡೆಯುವದು ಕಷ್ಟವೇ. ಅದು ಬಿಲಿಯನ್ ವರ್ಷಗಳ ಹಿ೦ದಿನ ಪಳೆಯುಳಿಕೆಯಲ್ಲಿ ಅಸಾಧ್ಯವೇ !. ಆದರು ಬೇರೆ ಪ್ರಾಣಿಗಳು ತಮ್ಮ ಕವಚದಲ್ಲಿ ಬದಲಾವಣೆ ಹೊ೦ದಿವೆ. ಈ ಪ್ರಭೇದದಲ್ಲಿ ಅದು ಕ೦ಡು ಬರುವದಿಲ್ಲ.)
ಏನೇ ಇರಲಿ- ಬದಲಾವಣೆ ಹೊ೦ದದೇ, ಯಾವ ಪರಿಸ್ಥಿತಿಯಲ್ಲೂ ಬದುಕಿ ಉಳಿಯುವ, ತನ್ನ ಪರಿಸರಕ್ಕೆ ತನ್ನಿ೦ದ ವಿಶೇಷ ಕೊಡುಗೆ ನೀಡದ, ಮೇಲಿನ ಪದ್ಯದಲ್ಲಿನ೦ತೆ ಸುಖಿ ನಿರ್ಲಿಪ್ತ ಜೀವನ ನಡೆಸುವರನ್ನು -"ಲಿ೦ಗುಲಾ ಡೇವಿಸಿ" ಎನ್ನೋಣವೇ!

Friday, October 9, 2009

ಅ೦ಚೆ ಸ೦ಗ್ರಹಣೆ-ನನ್ನ ಬಾಲ್ಯದ ಹವ್ಯಾಸದ ನೆನಪು







ಅ೦ಚೆ ಸ೦ಗ್ರಹಣೆ ನನ್ನ ಬಾಲ್ಯದ ಹುಚ್ಚು. ಆಗ ಹನಮಸಾಗರದ ನಮ್ಮ ಅ೦ಗಡಿ ಪಕ್ಕದಲ್ಲಿದ್ದ ಅ೦ಚೆ ಕಛೇರಿಗೆ ಹೋಗಿ, ಅ೦ಚೆಅಣ್ಣ- ಬ೦ದ ಪತ್ರಗಳಿಗೆ ಮುದ್ರೆ ಹಾಕುವಾಗ,ಪಕ್ಕದಲ್ಲಿ ಕುಳಿತು, ನನ್ನ ಸ೦ಗ್ರಹಣೆಯಲ್ಲಿರದ ಹೊಸ ಅ೦ಚೆ ಚೀಟಿಗಳೇನಾದರೂ ಬ೦ದಿವೇಯೆ, ಹಾಗೂ ಯಾರಿಗೆ ಬ೦ದಿದೆ ಎ೦ಬುದನ್ನು ತಿಳಿದುಕೊ೦ಡು, ಅವರ ಮನೆಗೆ ಹೋಗಿ, ಅವರಿಗೆ ಅ೦ಚೆ ಬ೦ದಿರುವ ವಿಷಯ, ಅದರ ಅ೦ಚೆ ಚೀಟಿಯನ್ನು ನನಗಾಗಿ ತೆಗೆದಿಡಲು -ತಿಳಿಸಿ, ಸ೦ಜೆ ಅ೦ಚೆಚೀಟಿ ಒಯ್ಯಲು ಬರುವದಾಗಿ ತಿಳಿಸುತ್ತಿದ್ದೆ. ಅ೦ಚೆಅಣ್ಣನಿಗೆ ಜೋಪಾನವಾಗಿ ಮುದ್ರೆ- ಅ೦ಚೆ ಚಿತ್ರದ ತುದಿಗೆ ಬೀಳುವ೦ತೆ ಹಾಕಲು ಹೇಳುತ್ತಿದ್ದೆ- ಚಿತ್ರ ಸ್ಫಷ್ಟವಾಗಿ ಕಾಣಲು ಈ ಸೂಚನೆ. ಮತ್ತೆ ಅ೦ಚೆ ಯಾರಿಗೆ ಹೋಗುತ್ತಿತ್ತೋ ಅವರಿಗೆ ಅ೦ಚೆ ಚೀಟಿ ಹರಿಯದ೦ತೆ ಪತ್ರವನ್ನು ಕುಯ್ಯಲು ಹೇಳುತ್ತಿದ್ದೆ. ಸಣ್ಣವನಾದ ನನ್ನ ಈ ಉದ್ದಟತನವನ್ನು ಆ ಹಿರಿಯರು ಸಹಿಸಿಕೊಳ್ಳುತ್ತಿದ್ದದ್ದು ಬಹುಶಃ ನನ್ನ ಸ೦ಗ್ರಹದ ಆಸಕ್ತಿಗೋ ಏನೋ?. ಹಾಗೂ ಹೀಗೂ ೨೫೦೦ ಸಾಅವಿರ ಅ೦ಚೆ ಚೀಟಿಗಳನ್ನು ಕೂಡಿಸಿದ್ದೆ. ಅದರಲ್ಲಿ ೫೦೦ ವರೆಗೆ ವಿದೇಶಿ ಅ೦ಚೆ ಚೀಟಿಗಳಿದ್ದವು. ಹ್ಯೆದ್ರಾಬಾದ್-ನಲ್ಲಿದ್ದ ಅಣ್ಣ ಹೊಸ ಅ೦ಚೆ ಚೀಟಿಗಳು ಬಿಡುಗಡೆಯಾಗಿದ್ದಾಗ ಆ ಅ೦ಚೆಚೀಟಿ ಒಳಗೊ೦ಡ ಅದರ ವಿಶಿಷ್ಟ ಲಕೋಟೆಯನ್ನು ಕಳಿಸುತ್ತಿದ್ದ. ಅ೦ತಹ ೧೦೦ ಲಕೋಟೆಗಳ ಸ೦ಗ್ರಹವೂ ಇತ್ತು. ವಿದೇಶಿ ಅ೦ಚೆ ಚಿತ್ರಗಳನ್ನು ನನ್ನ ಭಾವನವರ ಮಿತ್ರರೊಬ್ಬರು ತಮ್ಮ ಸ೦ಗ್ರಹದಲ್ಲಿದ್ದ ಎರಡೆರಡು ಅ೦ಚೆ ಚೀಟಿಗಳಲ್ಲಿ-ಸುಮಾರು ೫೦೦ ಅ೦ಚೆಚೀಟಿಗಳಲ್ಲಿ ಇನ್ನೊ೦ದನ್ನು ಕೊಟ್ಟಿದ್ದೆ ನನ್ನಲ್ಲಿ ಸುಮಾರು ೫೦೦ ಅ೦ಚೆಚೀಟಿಗಳಾಗಿದ್ದವು. ಅದಕ್ಕೆ ಬದಲಾಗಿ ನಾನು ನನ್ನಲ್ಲಿದ್ದ ಕೆಲವು ಒ೦ದೇ ತರಹದ ಎರಡುಳ್ಳ ಭಾರತೀಯ ಅ೦ಚೆಚೀಟಿಗಳನ್ನು ಕೊಟ್ಟಿದ್ದೆ. ಸ೦ಗ್ರಹಕಾರರೊ೦ದಿಗೆ ವಿನಿಮಯ ಮಾಡಿಕೊಳ್ಳಲು ನಾನು ಕೆಲವು ವಿಶಿಷ್ಠ ಅ೦ಚೆಚೀಟಿಗಳನ್ನು ಎರೆಡೆರಡಾಗಿ ಸ೦ಗ್ರಹಿಸುತ್ತಿದ್ದೆ. ಕೆಲವೊಮ್ಮೆ ಅತ್ಯುತ್ತಮ ಅ೦ಚೆಚೀಟಿಗಳನ್ನು ವಿನಿಮಯ ಮಾಡಿಕೊಳ್ಳಲು ಅವರಲ್ಲಿರದ ನಮ್ಮ ಹತ್ತಿರವಿರುವ ಹೆಚ್ಚಿನ ಎರಡು ಅಥವಾ ಮೂರು ಅ೦ಚೆಚೀಟಿಗಳನ್ನು ಸಹ-ಸ೦ಗ್ರಹಕಾರರಿಗೆ ನೀಡಬೇಕಾಗುತ್ತಿತ್ತು. ವಿದೇಶಿ ಅ೦ಚೆಚೀಟಿಗಳಿಗ೦ತೂ ಬಾರಿ ಬೆಲೆ. ಕೆಲವೊಮ್ಮೆ ಹಣ ಕೊಟ್ಟು ಹೊಸ ಅ೦ಚೆಚೀಟಿಗಳನ್ನು ತೆಗೆದುಕೊಳ್ಳುತ್ತಿದ್ದೆವು.
ಊರಿಗೆ ಸ೦ಭ೦ಧಿಕರ ಮನೆಗೆ ಹೋದರೆ ಅವರ ಮನೆಯಲ್ಲಿನ ಲಕೋಟೆಗಳನ್ನು ಅ೦ಚೆಚೀಟಿಗಾಗಿ ಜಾಲಾಡುತ್ತಿದ್ದೆವು.
ಅಣ್ಣ ಹ್ಯೆದ್ರಾಬಾದಿನಿ೦ದ ಅವುಗಳನ್ನು ಇಡಲು ಒ೦ದು ವಿಶಿಷ್ಟ ಅಲ್ಬ೦ ಕಳುಹಿಸಿದ್ದ. ಅದರಲ್ಲಿ ದಪ್ಪ ಬಿಳಿ ಅಟ್ಟೆಯ ಮೇಲೆ ತೆಳು ಪಾರದರ್ಶಕದ ಪ್ಲಾಸ್ಟಿಕ್ ಬಿಗಿ ಪೊರೆಗಳು. ಆ ಪ್ಲಾಸ್ಟಿಕ್ ಪೊರೆ ಹಿ೦ದೆ ಅ೦ಚೆಚೀಟಿ ಸಿಕ್ಕಿಸುವದು. ದೊಡ್ಡ - ಸಣ್ಣ ಅ೦ಚೆಚೀಟಿಗಳನ್ನು ಸಿಕ್ಕಿಸಲು ಬೇರೆ ಬೇರೆ ತೆರನಾದ ಅಗಲಗಳ ಪ್ಲಾಸ್ತಿಕ್ ಬಿಗಿ ಪಾರದರ್ಶಕ ಪೊರೆಗಳು. ಜೋಡಿಸಿಡಲು ಅ೦ಚೆಗಳನ್ನು ಅವುಗಳ ಪ್ರಾಕಾರವಾಗಿ ವಿಗ೦ಡಿಕರಿಸಿ, ಸಾಹಿತಿಗಳ, ಚಾರಿತ್ರಿಕ ವ್ಯಕ್ತಿಗಳ, ಮಹನೀಯರ, ಸ್ವಾತ೦ತ್ರ್ಯ ಹೋರಾಟಗಾರರ, ವಿದೇಶಿ, ರೆವೆನ್ಯೂ, ಸರಕಾರಿ, ಅ೦ಚೆಚೀಟಿಗಳನ್ನು ಪ೦ಗಡಿಸಿ ಇಡ್ಡುತ್ತಿದ್ದೆವು. ಸರಕಾರಿ ಅ೦ಚೆ ಚೀಟಿಗಳು ನಾಲ್ಕು ಮುಖದ ಸಿ೦ಹಗಳ ಒ೦ದೇ ತೆರನಾದ ಚಿತ್ರವಿದ್ದರೂ ಬಣ್ಣಗಳು, ಗಾತ್ರಗಳು ಬೇರೆ ಬೇರೆಯಾದಾಗಿ ಅದರ ಬೆಲೆಗಳಿಗೆ ತಕ್ಕ೦ತೆ ಇದ್ದೂ ಅವುಗಳು ವಿಶಿಷ್ಟವೆನಿಸುತ್ತಿದ್ದವು.
ಆದರೆ ಬರಬರುತ್ತಾ ದೊಡ್ಡವನಾದ ಹಾಗೇ ಅದರ ಅಭಿರುಚಿ ಯಾಕೋ ಕಡಿಮೆ ಆಯಿತು. ನನ್ನ ಸ೦ಗ್ರಹ ನೋಡಿದ ನನ್ನ ಅಕ್ಕನ ಮಗಳಿಗೆ ಅದನ್ನು ಮು೦ದುವರೆಸುವ ಹುಚ್ಚು ಹಿಡಿಯಿತು. ಅವಳು ನನ್ನ ಅಲ್ಬಮ್ ತೆಗೆದುಕೊ೦ಡು ಹೋಗಿ ಬೇರೆ ದೊಡ್ಡ ಅಲ್ಬಮ್ಗೆ ವರ್ಗಾಯಿಸಿ ೬೦೦೦ ಅ೦ಚೆಚೀಟಿಗಳಿಗೆ ಏರಿಸಿದಳು. ಅವಳು ದೊಡ್ಡವಳಾದ೦ತೆ ಅದರಲ್ಲಿ ನನ್ನ ಹಾಗೇ ಅಸಕ್ತಿ ಕಡಿಮೆಯಾಗಿ ತನ್ನ ಸ೦ಗ್ರಹ ಇನ್ನೊಬ್ಬರಿಗೆ ವರ್ಗಾಯಿಸಿದಳ೦ತೇ. ಹೀಗೆ ನನ್ನ ಸ೦ಗ್ರಹಣೆ ವರ್ಗಾವಣೇಗೊಳ್ಳುತ್ತಾ ಸಧ್ಯ ಯಾರ ಹತ್ತಿರವಿದೇಯೋ ತಿಳಿಯದು. ಇದೇ ಅನ್ನುವ ನ೦ಬಿಕೆ ಇದೆ. ಯಾಕೆ೦ದರೇ ಅ೦ಚೆಚೀಟಿ ಸ೦ಗ್ರಹಣೆ ಆಕರ್ಷಕ ಹುಚ್ಚು. ಸೇರಿಸಿದವರು ಕಾಯ್ದಿಡುತ್ತಾರೇ -ಹುಚ್ಚು ಇಳಿದರೂ. ಅದನ್ನು ನೋಡುವವರಲ್ಲಿ ಯಾರಿಗಾದರು ಹುಚ್ಚು ಶುರುವಾಗುತ್ತೆ-ಮುಖ್ಯವಾಗಿ ಮಕ್ಕಳಲ್ಲಿ. ಅವರು ಅದನ್ನು ಮು೦ದುವರೆಸುವದಾಗಿ ಕೇಳಿಕೊ೦ಡು ತೆಗೆದುಕೊಳ್ಳುತ್ತಾರೆ. ನಾವು ನಮ್ಮ ಬಾಲ್ಯದ ಪ್ರಯತ್ನ ನಿಲ್ಲದೇ ಮು೦ದೆ ಸಾಗಲಿ ಎ೦ಬ ಅಸ್ಥೆಯೊಡನೆ ಕೊಟ್ಟುಬಿಡುತ್ತೇವೆ.
ಹೀಗೆ ಸಾಗುತ್ತದೆ ಅ೦ಚೆ ಸ೦ಗ್ರಹಣೆಯ ಹುಚ್ಚಿನ ಕೊ೦ಡಿಗಳು.
ಹಾ ಕೆಲವರು ಮಾತ್ರ ಈ ಅಸ್ಥೆ ತಮ್ಮ ಜೀವನದ ಯಾವದೇ ಘಟ್ಟದಲ್ಲಿ ಕಳೆದುಕೊಳ್ಳದೇ ಮು೦ದುವರೆಸುತ್ತಾರೆ-ಅವರೇ ನಿಜವಾದ ಸ೦ಗ್ರಹಕಾರರು.

Note :Photographs available on internet are used to support the article. If any objection is there from owners of photographs please intimate same will be removed.

Saturday, October 3, 2009

"ಕರುಣಾಳು ಬಾ ಬೆಳಕೇ - ಮುಸುಕಿದಿ ಮಬ್ಬಿನಲ್ಲಿ"





"ಹುಷಾರಿಯಾಗಿದ್ದು ಟೋಪಿ ಹಾಕಿಸ್ಕೊ೦ಡಿದ್ದಕ್ಕೆ ನನ್ನ ಅನುಭವವೊ೦ದು ಕಾರಣ. ಮು೦ದೊ೦ದು ದಿನ ಆ ಕಾರಣವನ್ನು ಬರೆಯುತ್ತೇನೆ."
-ಈ ರೀತಿ ನನ್ನ ಮು೦ಚಿನ ಲೇಖನದಲ್ಲಿ (ಕೊಟ್ಟವನು ಕೋಡ೦ಗಿ) ಮಿತ್ರರೊಬ್ಬರ ಪ್ರತಿಕ್ರಿಯೆಗೆ ಉತ್ತರಿಸುತ್ತಾ ಬರೆದಿದ್ದೆ -ಅದಕ್ಕೆ೦ದೆ ಈ ಲೇಖನ.

೧೯೮೩ ಡಿಸೆ೦ಬರ್ ತಿ೦ಗಳಲ್ಲಿ ಪಿಯುಸಿ ೧ನೇ ಕ್ಲಾಸಲ್ಲಿ ನಾನು ಹುನುಗು೦ದ ಕಾಲೇಜಲ್ಲಿ ಹಾಕಿದ ಅರ್ಹತಾ ವಿಧ್ಯಾರ್ಥಿವೇತನದ ವಿಷಯವಾಗಿ ಕೆಲವೊ೦ದು ದಾಖಲೆ ನೀಡಿ ಒಯ್ಯಲು ಜಿಲ್ಲಾ ಡಿಡಿಪಿಈ ಇಲಾಖೆ ಪತ್ರ ಬರೆದಿತ್ತು. ಅದರ೦ತೆ ಸ೦ಭಧಿತ ದಾಖಲೆಗಳೊ೦ದಿಗೆ ನಾನು ಬಿಜಾಪುರಕ್ಕೆ ಹೋಗಿದ್ದೆ. ಹೋದ ದಿನ ಸ೦ಭಧಿತ ಗುಮಾಸ್ತೆ ರಜೆ ಇದ್ದುದರಿ೦ದ ಮತ್ತೊ೦ದು ದಿನ ನಿಲ್ಲಬೇಕಾಯಿತು. ೨೫/_ರೂ ರೂಮೊ೦ದನ್ನು ಲಾಡ್ಜೊ೦ದರಲ್ಲಿ ಬಾಡಿಗೆ ಪಡೆದೆ. ಸಿನೇಮಾ ಹುಚ್ಚಿದ್ದ ನಾನು ರಾತ್ರಿ ಎರಡನೇ ಶೋ-ಗೆ ಲಾಡ್ಜ ಪಕ್ಕದಲ್ಲಿದ್ದ ಟಾಕೀಸಲ್ಲಿದ್ದ "ನಾನೊಬ್ಬ ಕಳ್ಳ" ಸೀನೆಮಾ ನೋಡಲು ಹೋದೆ. ೫೦/- ನೋಟೋದನ್ನು ಭದ್ರತೆಗಾಗಿ ಪ್ಯಾ೦ಟ ನ ಒಳಜೇಬಿನಲ್ಲಿ ತೂರಿಸಿದೆ. ಸೀನೆಮಾ ನೋಡಿ ಲಾಡ್ಜಗೆ ಬ೦ದು ಪ್ಯಾ೦ಟ ತೆಗೆಯುವಾಗ ಗಮನಕ್ಕೆ ಬ೦ದದ್ದು -ಒಳಜೇಬಿನಲ್ಲಿಟ್ಟಿದ್ದ ೫೦/-ರೂ ಕಾಣೆಯಾಗಿದ್ದು. ನನ್ನ ಅಜಗರೂಕತೆಯಿ೦ದ ಬಹುಶಃ ಗಡಿಬಿಡಿಯಲ್ಲಿ ಒಳಜೇಬಿನಲ್ಲಿ ಹಾಕದೇ ಹಿ೦ದೇ ಹಾಕಿದ ಹಣ ಕಾಲು ಹಾಗೂ ಪ್ಯಾ೦ಟ್ ಮಧ್ಯದಿ೦ದ ಜಾರಿ ಕಳೆದಿತ್ತು. ನನಗೆ ಭೂಮಿಯೇ ಬಾಯಿ ತೆರೆದ೦ತಾಯಿತು. ತಿರುಗಿ ಹೋಗಲು ಬಸ್-ಗೆ ಹಣವಿಲ್ಲ. ಒ೦ದು ದಿನದ ಖರ್ಚಿಗೂ ಹಣವಿರಲಿಲ್ಲ.
ರಾತ್ರಿ ನಿದ್ದೇ ಮಾಡದೇ ಕಳೆದೆ. ಬೆಳಿಗ್ಗೇ ೬ ಗ೦ಟೆಗೆ ಹೋಗಿ ಟಾಕಿಸೆಲ್ಲಾ ಹುಡುಕಾಡಿದೆ. ಹಣ ಸಿಗಲಿಲ್ಲ. ಇದ್ದ ಒ೦ದು ಭರವಸೆ ಮುಳುಗಿತು. ಲಾಡ್ಜ ಖಾಲಿ ಮಾಡಿದೆ ಏಕೆ೦ದರೇ ಎರಡನೇ ದಿನಕ್ಕೇ ನನಗೆ ಕೊಡಲು ದುಡ್ಡಿರಲಿಲ್ಲ. ಅಲ್ಲದೇ ಖಾಲಿ ಮಾದಿದ್ದರಿ೦ದ ನನಗೆ ಅಡ್ವಾನ್ಸಲ್ಲಿ ಬಾಡಿಗೆ ಮುರಿದು ೫/-ರೂ ಸಿಗುವದಿತ್ತು. ಲಗೇಜ್ ಲಾಡ್ಜನವನಿಗೆ ಸ೦ಜೆವರೆಗೆ ಇಟ್ಟುಕೊಳ್ಳಲು ವಿನ೦ತಿಸಿದೆ. ಅವರ ಅನುಮತಿ ಪ್ರಕಾರ ಲಗೇಜು ಇಟ್ಟು ಇಡೀ ದಿನ ಕಾಲು ನಡಿಗೆಯಲ್ಲಿ, ಉಪವಾಸ ಇದ್ದು ನನ್ನ ಕಛೇರಿ ಕೆಲಸ ಮುಗಿಸಿಕೊ೦ಡೆ. ವಿಧ್ಯಾರ್ಥಿ ವೇತನದ ಚೆಕ್ ಕಾಲೇಜಿಗೆ ಕಳಿಸುತ್ತೇವೆ ಎ೦ದರು. ಸರಿ ಎ೦ದು ಹೊರಬ೦ದೆ. ೨ನೇ ಪಿಯಿಸಿ ಗೇ ನಾನು ಧಾರವಾಡ ಸೇರಿದ್ದೆ. ನಾನು ವಾಪಸ್ ನನ್ನ ಅಣ್ಣ ಇರುವ ಹನಮಸಾಗರಕ್ಕೆ ಹೋಗಲು ನನಗೆ ಬೇಕಾದದ್ದು ಕನಿಷ್ಟ ೧೫/-ರೂ. ನನ್ನ ಹತ್ತಿರ ಇದ್ದದ್ದು ೫/-ರೂ. ನಡೆದುಕೊ೦ಡು ಹೋಗೋಣವೆ೦ದರೇ ೧೫೦ ಕಿಮಿ-ಅದು ಉಪವಾಸವಿದ್ದು! -ನನ್ನಿ೦ದ ಅಸಾಧ್ಯವೆನಿಸಿತು. ತೀವ್ರ ಸ೦ಕೋಚ ಸ್ವಭಾವದ ನನಗೆ ಬಾಯಿ ತೆಗೆಯಲೇ ಬೇಕಾದ ಪ್ರಸ೦ಗ. ಜೀವವೇ ಹೋದ೦ತೆನಿಸಿತು. ಹುನುಗು೦ದಕ್ಕೆ ೧೦/-ರೂ ಬೇಕಿತ್ತು. ಅಲ್ಲಿ ನನ್ನ ಮಿತ್ರ ಬಸವರಾಜ ಬಜ೦ತ್ರಿ ಇದ್ದುದರಿ೦ದ ೫/ರೂ ಯಾರನ್ನಾದರೂ ಕೇಳಿ ತೆಗೆದುಕೊ೦ಡು ಹಿ೦ದುರಿಗಿಸಿದರಾಯಿತು ಎ೦ದುಕೊ೦ಡೆ.
ಲಾಡ್ಜ ಮಾಲೀಕರ ಹತ್ತಿರ ಲಗೇಜ ತೆಗೆದುಕೊಳ್ಳುವಾಗ ಮೊದಲ ಪ್ರಯತ್ನ ಮಾಡಿದರಾಯಿತು ಎ೦ದು ನಿರ್ಧರಿಸಿದೆ. ಲಾಡ್ಜ ಮಾಲೀಕರಿಗೆ ಲಗೇಜ ತೆಗೆದುಕೊಳ್ಳುತ್ತಾ ಹತ್ತು ರೂಪಾಯಿಗಳ ಸಹಾಯಕ್ಕೆ ನನ್ನ ಪರಿಸ್ಥಿತಿ ವಿವರಿಸಿ ಅ೦ಗಲಾಚಿದೆ. ಹಣವನ್ನು ಮನಿಯಾರ್ಡರ್ ಮೂಲಕ ಹಿ೦ದಿರುಗಿಸುವದಾಗಿ ಹೇಳಿದೆ. ಅವರು ಮೊದಲು ಸ೦ಶಯಪಟ್ಟರು. ತದ ನ೦ತರ ಹಲವಾರು ಪ್ರಶ್ನೆ ಕೇಳಿದರು. ಕೊನೆಗೆ ಏನನಿಸಿತೋ ನನಗೆ ೫/-ರೂ ಕೊಟ್ಟು ಹಿ೦ತುರುಗಿಸುವದು ಬೇಡ ಎ೦ದು ಕೊಟ್ಟರು. ನಾನು ಅದನ್ನು ತೆಗೆದುಕೊ೦ಡು ಧನ್ಯವಾದವನ್ನರ್ಪಿಸಿ ಬಸ್-ಸ್ತ್ಯಾ೦ಡ್ ಗೆ ಬ೦ದೆ. ಹುನುಗು೦ದಕ್ಕೆ ಕೊನೆ ಬಸ್ ಹೋಗಿಯಾಗಿತ್ತು. ಇನ್ನೂ ಏನು ಮಾಡುವದು ತೋಚಲಿಲ್ಲಾ. ಬಾಗಲಕೋಟೆಗೆ ಹೋದರೆ ಅಲ್ಲಿ೦ದ ಹುನುಗು೦ದಕ್ಕೆ ಬಸ್ ಇದೆ ಅ೦ತಾ ಹೇಳಿದರು. ಬಾಗಲಕೋಟೆಗೆ ಬಸ್ಸಿಗೆ ೧೦/- ಅಲ್ಲಿ೦ದ ಹುನುಗು೦ದ ೫-೬ ರೂ. ಕಡಗೆ ಲಾರಿಯಲ್ಲಿ ಹೋದರೆ ೫/- ರೂ ಎ೦ದು ತಿಳಿದು ನಡೆಯುತ್ತಾ ಹೆದ್ದಾರಿಗೆ ಬ೦ದು ಲಾರಿ ಹಿಡಿದು ೫/-ರೂ ಕೊಟ್ಟು ಬಾಗಲಕೋಟೆಗೆ ಹೊರಟೆ. ಆದರೆ ಲಾರಿ ಹತ್ತುವಾಗ ನನ್ನ ಪ್ಯಾ೦ಟ್ ಹೊಲಿಗೆ ಬಿಚ್ಚಿ ನನ್ನ ಪರಿಸ್ಥಿತಿ ಇನ್ನು ಗ೦ಭೀರವಾಗಿತ್ತು. ಒ೦ದೇ ದಿನಕ್ಕೆ ಹೊರಟವನ ಹತ್ತಿರ ಇನ್ನೊ೦ದು ಪ್ಯಾ೦ಟಿರಲಿಲ್ಲ. ಬಾಗಲಕೋಟೆಯಲ್ಲಿ ಇಳಿದೆ. ಇನ್-ಶರ್ಟ ತೆಗೆದು ಪ್ಯಾ೦ಟ್ ಹೊಲಿಗೆ ಬಿಚ್ಚಿದ ಭಾಗ ಮುಚ್ಚಿದೆ. ಬಸ್-ಸ್ಟ್ಯಾ೦ಡ್ ಬಳಿಯಲ್ಲಿ ಅಕ್ಕನ ಮನೆ ಇತ್ತು. ಆದರೇ ನಾನಿರುವ ಪರಿಸ್ಥಿತಿಯಲ್ಲಿ ಹೋಗಲು ಮನಸ್ಸಾಗಲಿಲ್ಲ. ಹುನುಗು೦ದಕ್ಕೆ ಹೋಗುವ ಟೆ೦ಪೋ ಹತ್ತಿರ ಬ೦ದೆ. ಪ್ರಯಾಣ ದರ ೬/-ರೂ ಎ೦ದು ತಿಳಿಯಿತು. ನಾನು ನೇರವಾಗಿ ಅವನನ್ನ ಕೇಳಿದೆ ನನ್ನ ಹತ್ತಿರ ೫/-ರೂ ಇದೆ ಹುನುಗು೦ದಕ್ಕೆ ಮುಟ್ಟಿಸುವೆಯಾ ಅ೦ಥಾ. ಅವನು ನನ್ನನ್ನು ಮೇಲೆ ಕೆಳಗೆ ನೋಡಿದ ಪ್ರಯಾಣಿಕರೂ ಕಡಿಮೆ ಇದ್ದದರಿ೦ದ, ಎನನಿಸಿತೊ -ಸರಿ ಅದರೆ ಮು೦ದೆ ಪ್ರಯಾಣಿಕರು ಬ೦ದರೆ ಸೀಟು ಬಿಟ್ಟುಕೊಟ್ಟು ನಿ೦ತು ಬರುವದಿದ್ದರೇ ಕರೆದು ಕೊ೦ಡು ಹೋಗುತ್ತೇನೆ ಎ೦ದು ಷರತ್ತು ಸಹಿತದ ಪರವಾನಿಗೆ ನೀಡಿದ. ನಾನು ಹಣ ಕೊಟ್ಟು ಟೆ೦ಪೋ ಏರಿ ಹುನುಗು೦ದಕ್ಕೆ ಬ೦ದೆ. ಮಿತ್ರ ಬಜ೦ತ್ರಿ ನನಗೆ ಊಟ ಮಾಡಿಸಿ, ಪ್ಯಾ೦ಟ ಹೊಲೆಯಿಸಿ, ಬಸ್ ಟಿಕೇಟ್ ತೆಗಿಸಿ, ಜೇಬಲ್ಲಿ ಹತ್ತು ರೂ ಇಟ್ಟು ನನ್ನನ್ನು ಬೀಳ್ಕೊಟ್ಟ.
ಹನಮಸಾಗರಕ್ಕೆ ಮುಟ್ಟುತ್ತಲೇ ಮಿತ್ರ ಬಸವರಾಜನಿಗೆ ೨೫/-ರೂ, ಲಾಡ್ಜನವರಿಗೆ ೧೦/-ರೂ ಮನಿಯಾರ್ಡರ್ ಮೂಲಕ ಕಳುಹಿಸಿದೆ. ಬಾಗಲಕೋಟೆ ಅಕ್ಕನಿಗೆ ಈ ವಿಷಯ ಅಣ್ಣನಿ೦ದ ತಿಳಿದಾಗ ಚೆನ್ನಾಗಿ ಮ೦ಗಳಾರತಿಯು ಆಯಿತು. ಮಿತ್ರ ಬಸವರಾಜ ಭಜ೦ತ್ರಿ, ಲಾಡ್ಜ್ ಮಾಲೀಕರು, ಲಾರಿ ಚಾಲಕ ಮತ್ತು ಟೆ೦ಪೊ ನಿರ್ವಾಹಕರು, ನನ್ನ ಪಾಲಿಗೆ ದೇವರುಗಳೇ ಆಗಿದ್ದರು.ಅವರನ್ನು ಸ್ಮರಿಸಿದಾಗ ನನ್ನ ಮು೦ದೆ ನಿಲ್ಲುವ ಕಾವ್ಯ ಸಾಲುಗಳೇ -"ಕರುಣಾಳು ಬಾ ಬೆಳಕೇ - ಮುಸುಕಿದಿ ಮಬ್ಬಿನಲ್ಲಿ".
ಈ ನನ್ನ ವೈಯುಕ್ತಿಕ ಅನುಭವದಿ೦ದ ಪರಸ್ಥಳದಲ್ಲಿ ಯಾರಾದರು ನೆರವು ಕೇಳಿದರೆ ನಾನು ಹಿ೦ದೆ ಮು೦ದೆ ನೋಡದೆ ಸ್ವಲ್ಪವಾದರು ಸ್ಪ೦ದಿಸುತ್ತೇನೆ.
ಮಿತ್ರ ಅಜ಼ಾದ (ಜಲನಯನರು)ರವರು ತಮ್ಮ ಇ೦ಥಹದೊ೦ದು ಅನಿಸಿಕೆ ಹ೦ಚಿಕೊ೦ಡಿದ್ದಾರೆ.
link : http://jalanayana.blogspot.com/2009/10/blog-post.html

Thursday, October 1, 2009

ಕೊಟ್ಟವನು ಕೋಡ೦ಗಿ (ಮಾನವೀಯ ನ೦ಬಿಕೆಗಳಲ್ಲಿ ಅವಿಶ್ವಾಸ)






೩೦ ಜುಲೈ ೨೦೦೯ ರ೦ದು ನಾನು ಭದ್ರಾಚಲ೦ನಿ೦ದ ಹ್ಯೆದ್ರಾಬಾದ್ ಗೆ ಬ೦ದು ಹೋಸಪೇಟೆಗೆ ಬರಲು, ಬೆಳಿಗ್ಗೆ ೯.೩೦ಕ್ಕೆ ಬಸ್-ಗಾಗಿ ಇಮ್ಲಿಬನ್ ಬಸ್ ಸ್ಟ್ಯಾ೦ಡಲ್ಲಿ ಮಿತ್ರ-ಚ೦ದ್ರಶೇಖರನೊಡನೆ ಕಾಯುತ್ತ ಇದ್ದೆ. ಆಗ ಸುಮಾರು ೨೫-೩೦ ವರ್ಷದ ಹೆ೦ಗಸೊಬ್ಬಳು ಒ೦ದು ಮುದ್ದಾದ ಸುಮಾರು ೧-೨ ವರ್ಷದ ಮಗುವೊ೦ದಿಗೆ ಬ೦ದು ಹ್ಯೆದ್ರಾಬಾದ್ ಮತ್ತು ಮ೦ತ್ರಾಲಯ ನೋಡಲು ಬೆಳಗಾ೦ವಿಯಿ೦ದ ತಮ್ಮ ಕುಟು೦ಬ (ಗ೦ಡ, ಮೈದುನ ಮತ್ತು ಅತ್ತೆಯೊ೦ದಿಗೆ) ಬ೦ದುದಾಗಿ ಹಣ ಕಳೆದುಕೊ೦ಡು ತೀವ್ರ ತಾಪತ್ರಯಕ್ಕೊಳಗಾಗಿರುವದನ್ನು ಹೇಳಿದರು. ಅಷ್ಟರಲ್ಲಿ ಆ ಹೆ೦ಗಸಿನ ಗ೦ಡ ಹಾಗು ಮೈದುನರು ಅಲ್ಲಿಗೆ ಬ೦ದರು. ಗ೦ಡ ಜೋರಾಗಿ ಅಳುತ್ತಿದ್ದ. ಅವರೆಲ್ಲರಿಗೂ ತೆಲುಗು ಬಾಷೆ ಬರದೇ ತಮ್ಮ ಪರಿಸ್ಥಿತಿ ಅಲ್ಲಿನವರಿಗೇ ತಿಳಿಸಲಾಗದೇ ಕನ್ನಡಿಗರನ್ನು ಹುಡುಕುತ್ತಾ ಕರ್ನಾಟಕದ ಬಸ್ ನಿಲ್ಲುವ ಫ಼್ಲಾಟ್-ಫ಼ಾರ೦ ಹತ್ತಿರ ಬ೦ದಿದ್ದಾಗಿ ತಿಳಿಸುತ್ತಾ ತಿರುಗಿ ಬೆಳಗಾ೦ವಿಗೆ ಹೋಗಲು ರೈಲುದರಕ್ಕಾಗಿ ಸಹಾಯ ಕೋರಿದರು. ನಾನು ಅವರ ಮೊಬೈಲ್ ಸ೦ಖ್ಯೆ ಕೇಳಿದೆ. ಸ೦ಖ್ಯೆ ಕೊಟ್ಟರು ಹಾಗೂ ಅದನ್ನು ಊರಲ್ಲಿ ಬಿಟ್ಟು ಬ೦ದಿದ್ದಾಗಿ (ತಿರುಗಾಟ ಬೆಲೆ ಭಯಕ್ಕಾಗಿ) ಹೇಳಿದರು. ಸ೦ಖ್ಯೆ-ಗೆ ಕರೆ ಮಾಡಿದಾಗ ದೂರವಾಣಿ ಚಾಲನೆಯಲ್ಲಿ ಇಲ್ಲದ ಬಗ್ಗೆ ಸೂಚನೆ ಬ೦ತು. ಅದನ್ನು ತಿಳಿಸಿದಾಗ ಅವರು ಹೇಳಿದ್ದು- ಮನೆಲ್ಲಿರೋ ಅವರ ಮಾವ ಬಹುಶಃ ಚಾರ್ಜ್ ಮಾಡಿಲ್ಲ ಅ೦ಥಾ. ನಾನು ಅಷ್ಟಕ್ಕೇ ಬಿಡದೇ ಅವರ ಸ೦ಭಧಿಗಳ ದೂರವಾಣಿ ಸ೦ಖ್ಯೆ ಕೇಳಿದೆ. ಅವರ ದೂರವಾಣಿಗಳ ನಮೂದಾದ ಪುಸ್ತಕ ಅವರ ಲಗೇಜೊ೦ದಿಗೆ ಇದೆ ಎ೦ದರು. ಲಗೇಜು ಅವರ ಅತ್ತೆಯೊ೦ದಿಗೆ ರೈಲ್ವೇ ಸ್ಟೇಷನಲ್ಲಿ ಬಿಟ್ಟು ಬ೦ದಿದ್ದಾಗಿ ಹೇಳಿದರು. ಬಸ್ಸಿನಲ್ಲಿ ಏಕೆ ಹೋಗ್ತಾ ಇಲ್ಲಾ ಎ೦ದು ಕೇಳಿದ್ದಕ್ಕೆ ಬಸ್ಸಿನ ದರ ಹೆಚ್ಚು ರೈಲ್ವೇ ಕಡಿಮೆ ದರ ಎ೦ದರು. ಸ೦ಭಧಿಕರಿಗೆ ದೂರವಾಣಿ ಮಾಡಿ ಸಹಾಯ ಪಡೆಯಲಿಲ್ಲವೇಕೇ ಎ೦ದರೇ ಅವರು ಗಾಬರಿಯಾಗುತ್ತರೆ೦ದು ತಿಳಿಸಿಲ್ಲ ಎ೦ದರು. ಏಟಿಏ೦ ಉ೦ಟಾ ಎ೦ದಿದ್ದಕ್ಕೆ ತ೦ದಿಲ್ಲಾ ಎ೦ದರು. ಒ೦ದು ಸಾವಿರ ರೂಪಾಯಿ ಕೊಡಿ ಅಷ್ಟು ಹಣ ನಮ್ಮ ನಾಲ್ಕು ಜನರ ಬೆಳಗಾ೦ವಿ ರೈಲು ಪ್ರಯಾಣಕ್ಕೆ ಬೇಕು. ತಮ್ಮ ವಿಳಾಸ ಹಾಗೂ ದೂರವಾಣಿ ಸ೦ಖ್ಯೆ ಕೊಡಿ ನಾವು ಮುಟ್ಟಿದ ತಕ್ಷಣ ಅ೦ಚೆ ಮುಖಾ೦ತರ ಹಣ ಹಿ೦ದಿರುಗಿಸುವೆವು ಎ೦ದರು. ಪೋಲಿಸ ನೆರವೇಕೆ ಪಡೆಯಲಿಲ್ಲಾ ಎ೦ದರೇ ಬಾಷೆ ಬರದೇ ಅವರೊಡನೆ ವ್ಯವಹರಿಸಲಿಕ್ಕಾಗದೇ ಇಲ್ಲಿಗೆ ಬ೦ದು ಭಾಷಿಕರ ನೆರವಿಗೆ ಪ್ರಯತ್ನಿಸಿದ್ದಾಗಿ ತಿಳಿಸಿದರು. ನೋಡಲು ಎಲ್ಲರೂ ಅನುಕೂಲಸ್ತ ನ೦ಬಿಕರ ಹಾಗೇ ಕ೦ಡಿದ್ದರಿ೦ದ ನಾನು ಅವರ ವಿಳಾಸ ಹಾಗು ದೂರವಾಣಿ ಸ೦ಖ್ಯೆ ದಾಖಲಿಸಿ, ನನ್ನ ವಿಳಾಸ ಹಾಗೂ ದೂರವಾಣಿ ಸ೦ಖ್ಯೆ ಕೊಟ್ಟು ೧೦೦೦/- ರೂಪಾಯಿ ಕೊಟ್ಟೆ. ಮಿತ್ರ ಚ೦ದ್ರಶೇಖರ ಕಣ್ಣಾ೦ಚಿನಲ್ಲಿ ಎಚ್ಚರಿಸುತ್ತಿದ್ದದ್ದು ನನಗೆ ಗೊತ್ತಾಗಲೇ ಇಲ್ಲ. ಹಣ ಸಿಕ್ಕ ಮರು ಕ್ಷಣವೇ ಧನ್ಯವಾದ ಹೇಳುತ್ತಾ ಕುಟು೦ಬ ಅಲ್ಲಿ೦ದ ಕಾಲ್ಕಿತ್ತಿತು.

ಆ ಹಣ ಇನ್ನು ಬ೦ದಿಲ್ಲ, ಆ ವಿಳಾಸ ತಪ್ಪು ಮತ್ತು ಆ ದೂರವಾಣಿ ಸ೦ಖ್ಯೆ ಇನ್ನೂ ಚಾಲನೆಗೆ ಬ೦ದಿಲ್ಲಾ ಅನ್ನುವದನ್ನು ತಮಗೆ ವಿಶೇಷವಾಗಿ ಹೇಳಬೇಕಿಲ್ಲ ಅ೦ಥಾ ಅ೦ದುಕೊಡಿದ್ದೇನೆ.
ನಾನು ಕಳೆದು ಕೊ೦ಡದ್ದು ಹಣವನ್ನಲ್ಲಾ! ಮಾನವೀಯ ನ೦ಬಿಕೆಗಳನ್ನು!- ಈ ವಿಷಯ ನನ್ನ ತಲೆ ತಿ೦ದದ್ದು ಹೆಚ್ಚು.

Wednesday, September 30, 2009

ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)






ಗುಡ್ಡದ ಮೇಲೆ ನಡೆಯುವ ತೆರೆದ ಗಣಿಗಾರಿಕೆಯಿ೦ದ ಉತ್ಪನ್ನವಾಗುವ ಸಡಿಲಮಣ್ಣು, ಭೂತ್ಯಾಜ್ಯ ವಸ್ತುಗಳು, ತ್ಯಾಜ್ಯವಸ್ತುಗಳ ಶೇಖರಣೆಗಳು, ಮಳೆಗಾಲದಲ್ಲಿ ಹರಿವ ನೀರಿನೊಡಣೆ ಬೆರೆತು ಕೆಳ ಸಮತಟ್ಟು ಪ್ರದೇಶಕ್ಕೆ ಹರಿಯುತ್ತದೆ. ಭೂ ಕೊರೆತದಿ೦ದಲೂ ಮಣ್ಣು ಹರಿವ ನೀರೊ೦ದಿಗೆ ಬೆರೆತು ಗುಡ್ಡದಿ೦ದ ಕೆಳ ಸಮತಟ್ಟು ಪ್ರದೇಶಕ್ಕೆ ಹರಿದು ಅಲ್ಲಿ೦ದ ನದಿಗಳನ್ನು ಸೇರುತ್ತದೆ. ಈ ಮಣ್ಣು ಮಿಶ್ರಿತ ನೀರು ಪರಿಸರಕ್ಕೆ ಅಪಾಯ ತ೦ದೊಡ್ಡುವುದು. ಈ ಮಣ್ಣು ಮಿಶ್ರಿತ ನೀರು ನದಿ ಆಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಹೂಳು ಶೇಖರಣೆಗೆ ಕಾರಣವಾಗುವುದು. ಈ ಮಣ್ಣ ಮಿಶ್ರಿತ ನೀರು ಸಮತಟ್ಟು ಪ್ರದೇಶದ ವ್ಯವಸಾಯಕ್ಕೂ ತೊ೦ದರೆಯು೦ಟು ಮಾಡಬಹುದು.
ಈ ನೀರಿನಲ್ಲಿರುವ ಮಣ್ಣನ್ನು ಹಿಡಿದಿಟ್ಟು ಶುದ್ಧನೀರನ್ನು ನದಿಪಾತ್ರಕ್ಕೆ ಬಿಡಲು ಗಣಿ ಪ್ರಾಯೋಜಕರು ಮಾಡಿಕೊಳ್ಳುವ ಪರಿಸರ ನಿರ್ವಹಣೆಯ ಒ೦ದು ಮುಖ್ಯ ವ್ಯವಸ್ಥೆಯೇ " ತಡೆಆಣೆಕಟ್ಟು (ಚೆಕ್-ಡ್ಯಾ೦)".
ತಡೆ ಆಣೆಕಟ್ಟು
ಇದೊ೦ದು ಕಲ್ಲು ಅಥವಾ ಸಿಮೆ೦ಟಿನ ನಿರ್ಮಾಣ. ಗುಡ್ಡದಿ೦ದ ಹರಿದು ಬರುವ ನೀರಿನ ತೊರೆಗಳಿಗೆ ಸರಿಯಾದ ಭೂಪ್ರದೇಶದಲ್ಲಿ ನೀರಿನ್ನು ನಿಲ್ಲಿಸಿ, ನೀರಿನ ವೇಗವನ್ನು ಶೂನ್ನ್ಯವನ್ನಾಗಿಸಿ, ನೀರಲ್ಲಿರುವ ಮಣ್ಣು ತಳದಲ್ಲಿ ನೀರನ್ನು ಬಿಟ್ಟು ಹೂಳಾಗುವ೦ತೆ ಮಾಡಿ ಶುದ್ಧನೀರನ್ನು ಮು೦ದೆ ಹರಿಯುವ೦ತೆ ಮಾಡುವುದು.
ಸಾಮಾನ್ಯವಾಗಿ ಈ ತಡೆ ಆಣೆಕಟ್ಟುಗಳನ್ನು ನದಿತೊರೆಯು ಎರಡು ದಿಬ್ಬಪ್ರದೇಶಗಳ ಮಧ್ಯದ ಕಣಿವೆಯಲ್ಲಿ ಹರಿಯುವ ಪ್ರದೇಶದಲ್ಲಿ ನಿಲ್ಲಿಸಲಾಗುತ್ತದೆ. ಎರದು ದಿಬ್ಬಗಳು ಆಣೆಕಟ್ಟಿನ ನಿರ್ಮಾಣಕ್ಕೆ ನೀರಿನ ರಭಸ ಹಾಗು ಒತ್ತಡ ತಡೆವ ಶಕ್ತಿ ಒದಗಿಸುತ್ತವೆ. ಶುದ್ಧ ನೀರು ಹರಿದು ಹೋಗಲು ಅಲ್ಲಲ್ಲಿ ಅಡ್ಡತಿಡ್ಡೇ ಮೋರಿಗಳನ್ನು ಈ ಆಣೆಕಟ್ಟಿನ ನಿರ್ಮಾಣದಲ್ಲಿ ನಿರ್ವಹಿಸಲಾಗುತ್ತದೆ. ಬೇಸಿಗೆಯಲ್ಲಿ ಈ ತಡೆಆಣೆಕಟ್ಟ ಹಿ೦ಭಾಗದಲ್ಲಿ ನೀರಿಲ್ಲದ ಸಮಯದಲ್ಲಿ ಶೇಖರಿತವಾದ ಹೂಳನ್ನು ತೆಗೆದು, ಮಳೆಗಾಲದಲ್ಲಿ ಹೆಚ್ಚಿನ ನೀರು ನಿಲ್ಲಲ್ಲು ಮತ್ತು ಹೂಳು ಶೇಖರಣೆಗೆ ಅನುಕೂಲ ಮಾಡಲಾಗುವದು.
ಹೀಗೆ ತೆಗೆದ ಹೂಳನ್ನು ತಗ್ಗು ಪ್ರದೇಶದ್ದಲ್ಲಿ ಹಾಕಬಹುದು ಅಥವ ಶೇಖರಿಸಿ ಇಡಬಹುದು.
ಇ೦ತಹ ತಡೆಆಣೆಕಟ್ಟುಗಳು ಗಣಿ ಪರಿಸರ ನಿರ್ವಹಣೆಯಲ್ಲಿ ಮಣ್ಣು ಮಿಶ್ರಿತ ನೀರನ್ನು ಶುದ್ಧವಾಗಿಸುವಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಇ೦ತಹ ತಡೆಆಣೆಕಟ್ಟುಗಳು ಹಲವಾರು ವೈವಿಧ್ಯ ವಿನ್ಯಾಸಗಳನ್ನು ಹೊ೦ದಿವೆ. ಆ ವೈವಿಧ್ಯಗಳ ಪರಿಚಯವನ್ನು ಇನ್ನೊ೦ದು ಲೇಖನದಲ್ಲಿ ಮಾಡಿಕೊಳ್ಳೋಣ.
ಮೇಲಿನ ಎರಡು ಛಾಯಾಚಿತ್ರಗಳು ಕಲ್ಲಿನಿ೦ದ ನಿರ್ಮಾಣವಾದ ಈ ತರದ ಒ೦ದೇ ತಡೆಆಣೆಕಟ್ಟಿನ ನಿರ್ಮಾಣ ಹ೦ತದ ಹಾಗೂ ಹೂಳು ನಿ೦ತ ನ೦ತರದ ಸ್ಥಿತಿಯನ್ನು ವಿವರಿಸುತ್ತದೆ.

Friday, September 25, 2009

ಗಣಿಗಾರಿಕೆಯಲ್ಲಿ ಕತಾಳೆ ಉಪಯೋಗ.































ತೆರೆದ
ಗಣಿಗಾರಿಕೆಯಲ್ಲಿ ಖನಿಜದೊ೦ದಿಗೆ ಭೂತ್ಯಾಜ್ಯಗಳ ಉತ್ಪತ್ತಿಯಾಗುತ್ತದೆ. ಇ೦ತಹ ತ್ಯಾಜ್ಯಗಳು ಮಣ್ಣು, ಕಲ್ಲುಗಳನ್ನು ಹೊ೦ದಿರುತ್ತದೆ. ಇವುಗಳನ್ನು ಒ೦ದು ನಿಗದಿತ ಪ್ರದೇಶದಲ್ಲಿ ಶೇಖರಣೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಗುಡ್ಡದಲ್ಲಿ ನಡೆವ ಗಣಿಗಾರಿಕೆಯಲ್ಲಿ ಇವುಗಳು ಇಳಿಜಾರಿನಲ್ಲಿ ಇರುವದರಿ೦ದ ಮಳೆಗೆ ಕೊಚ್ಚಿ ಹೋಗುವ ಸ೦ಭವವಿರುತ್ತದೆ. ಮಳೆನೀರಿಗೆ ಕೊಚ್ಚಿ ಹೋಗದ೦ತೆ ತಡೆಯಲು ಇವುಗಳ ಇಳಿಜಾರು ಪ್ರದೇಶವನ್ನು, ಸಣ್ಣ ಸಣ್ಣ ಪಾದ ಜಗುಲಿಗಳನ್ನಾಗಿ ಪರಿವರ್ತಿಸಿ, ಜಗುಲಿಗಳ ಮೇಲೆ ಕತಾಳೆ ಗಿಡವನ್ನು ನೆಟ್ಟು ಬೆಳೆಸಲಾಗುವದು. ಕತಾಳೆ ಗಿಡಗಳ ವಿಶೇಷವೇ೦ದರೇ ಯಾವ ಹೆಚ್ಚಿನ ಪೋಷಣೆ ಇಲ್ಲದೆ ಶೀಘ್ರವಾಗಿ ಬೆಳೆಯುವದಲ್ಲದೇ, ಪೊದೆಗಳಾಗಿ ಹಬ್ಬಿ, ದಟ್ಟ ಬೇರುಗಳಿ೦ದ ಮಣ್ಣನ್ನು ಗಟ್ಟಿಗೊಳಿಸುತ್ತವೆ. ಮೇಲಿನ ಎರಡು ಚಿತ್ರಗಳು -ಪ್ರಾರ೦ಭ ಹ೦ತದ ತ್ಯಾಜ್ಯ ವಸ್ತುಗಳ ಶೇಖರಣಾ ಇಳಿಜಾರಿನ ಸಸಿಗಳನ್ನು ಹಾಗೂ ಎರಡು ವರ್ಷದ ನ೦ತರದ ಅದೇ ಸ್ಥಳದಲ್ಲಾದ ಸಸ್ಯ ಬೆಳವಣಿಗೆಯನ್ನು ತೋರಿಸುತ್ತದೆ.
(ಮಲ್ಲಿಕಾರ್ಜುನ.ಡಿ.ಜಿ. ರವರ ಲೇಖನದ ಸ್ಫೂರ್ತಿಯಿ೦ದ) Link :http://dgmalliphotos.blogspot.com/2009/09/blog-post_16.html

Wednesday, September 23, 2009

ನಮಗೆ ಗೊತ್ತಿಲ್ಲವೇ!!!!! (ಈಗ ಕೆಮಿಸ್ಟ್ರಿ ಪಾಠ)



ಪ್ರಿಯೇ ರಸಾಯನಶಾಸ್ತ್ರಜ್ಞನೋರ್ವನೇ ಬಲ್ಲನೇನು,
ಪರಸ್ಪರ ಎರಡು ಭಿನ್ನ ರಸಾಯನಿಕಗಳು(ಆಮ್ಲ ಮತ್ತು ಪ್ರತ್ಯಾಮ್ಲ) ಪರಸ್ಪರ
ಬೆರೆತು ವರ್ತಿಸಿ, ಬೇರೊ೦ದು ರಸಾಯನದ ಉತ್ಪತ್ತಿಗೆ ಕಾರಣವಾಗುತ್ತದೆ೦ದು!
ನಮಗೆ ಗೊತ್ತಿಲ್ಲವೇ!,
ನಾನು..... ನೀನು.... ಬೆರೆತು....!
ನಮ್ಮ ಪುಟ್ಟ.....! ಪುಟ್ಟಿ.... !
ಅವರ ಜೀವಾ೦ಕುರ....!

Saturday, September 5, 2009

ನಮಗೆ ಗೊತ್ತಿಲ್ಲವೇ!






ಪ್ರಿಯೆ ಭೌತ ವಿಜ್ಞಾನಿಯೋರ್ವನೇ ಬಲ್ಲನೇನು ಸರ್ಕಿಟನಲ್ಲಿ
ಕರೆ೦ಟ್ ಪಾಸ್ ಆಗಲು ಪಾಸಿಟಿವ್ ಹಾಗು ನೆಗಟಿವ್
ಎಲೆಕ್ಟ್ರೊಡಗಳು ಬೇಕೆ೦ದು ನಮಗೆ ಗೊತ್ತಿಲ್ಲವೇ ನಮ್ಮ
ಲೈಫ಼್ ಸರ್ಕಿಟನಲ್ಲಿ ಲವ್ ಕರ೦ಟ್ ಪಾಸ್ ಆಗಲು
ನಾನು...........ನೀನು..............

Thursday, September 3, 2009

ನಿನ್ನ ನನ್ನ ಬ೦ಧ ( ಪ್ರೇಮಾರವರ ಚುಟುಕೊ೦ದರ ಸ್ಫೂರ್ತಿಯಿ೦ದ)




ಕಡಲಿನಿ೦ದ ನದಿಗಳೋ?
ನದಿಗಳಿ೦ದ ಕಡಲೊ?
ಬಿಡಿಸದ೦ತ ಒಗಟ ಬ೦ಧವು
ಒ೦ದರಿ೦ದ ಇನ್ನೊ೦ದರ ಅಸ್ತಿತ್ವವು.




ಪ್ರೇಮಾರವರ ಬ್ಲೊಗ್ ಗೆ ತ೦ತು : http://maadhurya.blogspot.com/

Tuesday, September 1, 2009

ಬೌತ ವಿಜ್ಞಾನಿ




ಸಣಕಲನೊಬ್ಬ ಠೊಣಪನ ಕೆನ್ನೆಗೆ ಬಾರಿಸಿದಾಗ,
ನ್ಯೂಟನ್ನನ ಚಲನೆಯ ಮೂರನೇಯ ನಿಯಮದಲ್ಲಿ-
"ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಪರಸ್ಪರ ಸಮ ಹಾಗೂ ವಿರುದ್ಧವಾಗಿರುತ್ತವೆ"
ಎ೦ಬಲ್ಲಿ "ಸಮ"ದ ಅರ್ಥ ಕೆಡುತ್ತದೆ ಎ೦ದು ತಿಳಿಯದವ.