Monday, October 22, 2012

ಚುಟುಕುಗಳು.....



(ಅಂತರ್ಜಾಲ ಕೃಪೆಯ ಚಿತ್ರ - Thanks to : aylwin0201.blogspot.com)



ನಿನ್ನೆ
ಸರಿ ಮಾಡಲರಿಯೇ ಸರಿದಿದೆ...
ಬರೀ ಮೂಟೆ... ಭಾರ ಬೆನ್ನಲ್ಲಿ..
ಸಾರ ಹೀರಿ... ಕಸುವಾಗಿಸಿ.. ಕಸವೆಸೆದು...
ನಡೆಯಬೇಕಾಗಿದೆ.!!ಸರ ಸರ....


ನಾಳೆ
ಆಗಸದ ಬಯಕೆಗಳು...
ನಿನ್ನೆಯ ಭಯಗಳು....
ಬಯಕೆ ಭಯೆಗಳ ನಡುವೆ ಬೇಡ ಭವಣೆ!!

ಇಂದು
ಕಾಡದಿರಲಿ ನಿನ್ನೆಯ ಎಡವರಿಕೆ..
ಕದಲಿಸದಿರಲಿ ನಾಳೆಯ ಕನವರಿಕೆ...
ಇಂದಿನ ನಡೆಗೆ!!!

ಜಯದ ಕಡೆಗೆ..
ಅಂತರದ ಅಂತ್ಯಕ್ಕೆ!!!

ಜಯ
ನಿನ್ನ..
ನಿನ್ನೆ ಕನಸ...
ಕನಸ ನಾಳೆ...
ಅರಳಿಸಿದೇ
ಇಂದಿನ ದೃಡ ಹೆಜ್ಜೆ!!!!

ಸೋಲು
ಭಾರ ಮೂಟೆ ಬೆನ್ನ ಮೇಲೆ...
ಭ್ರಾಂತು ಬಯಕೆ ಕಣ್ಣ ಮುಂದೆ...
ತಡಬಡಿಸಿದೆ ಹೆಜ್ಜೆ !!!

Monday, September 3, 2012

ಆಡಿಸಿ ನೋಡು...ಬೀಳಿಸಿ ನೋಡು.....ಉರುಳಿ ಹೋಗದು .......


(ಸಿಂಗಾಪುರನ ಯುನಿವೆರ್ಸಲ್ ಸ್ಟುಡಿಯೋದ ಮೋಜಿನ ಸುತ್ತು ತಿರುಗೋ ಚಕ್ರ-BATTLESTAR GALLACTICA)
ಬದುಕ ಬಂಡಿ ಸುತ್ತಿಸಿತ್ತೋ...
ಮೇಲೆ ಕೆಳಗೆ ಆಡಿಸಿತ್ತೋ....
ತಿರುಗು ಮುರುಗೋ ಹೊರಳಿಸಿತ್ತೋ...

ಮೇಲೆ ಹೋಗಿ ನಕ್ಕಿದಿತ್ತೋ...
ಕಳಗೆ ಬಂದು ಅತ್ತಿದಿತ್ತೋ...

ನೇರ ಏರಿ ಕೇಕೆ ಹಾಕಿದಿತ್ತೋ...
ತಲೆಕೆಳಗಾಗಿ ಬೆಚ್ಚಿ ಕಿರುಚಿದಿತ್ತೋ....
 ಮತ್ತೆ ನೇರನಾಗಿ ಮುಕ್ತನೆನಿಸಿದಿತ್ತೋ...
ನೆನಸುವಾಗಲೇ ಮತ್ತೆ ಹೊರಳಿಸಿತ್ತೋ....

ತಂದೆತಾಯ ನೆನಸಿತ್ತೋ...
ಅಮ್ಮ ಎಂದು ಕೂಗಿದಿತ್ತೋ...

ಬದುಕ ಪಯಣ ಸೂತ್ರದಲ್ಲಿ ಎಲ್ಲವನ್ನು
ಕಾಣದಂತೆ ಬಂಧಿಸಿತ್ತೋ...

ಬೀಳದಂತೆ ಎಲ್ಲೋ ನಮ್ಮೆನೆಲ್ಲಾ
ಗಟ್ಟಿಯಾಗಿ ಹಿಡಿದಿತ್ತೋ...

ಅದರ ಜಾಡಿನಲ್ಲಿ
ಸುತ್ತಿ ಸುತ್ತಿ ತಿರುಗಿಸಿತ್ತೋ....

ಸೂತ್ರದಲ್ಲಿ  ತಿರೋಗೋ ಪಟದಂತೆ
ತಿರುಗುತ್ತಲ್ಲಿತ್ತೋ...

ಮುಗಿದ ಪಯಣ ಬೆರಗು ಭಯ
ವಿಸ್ಮಯದಲ್ಲಿತ್ತೋ....

ಕಾಣದಂತೆ ಧನ್ಯತೆಯ ಭಾವ ಹೊಮ್ಮಿತ್ತೋ....

Friday, February 10, 2012

ಅರಿಯಲಿಲ್ಲ ಅಂತರಾಳ !!!!!


ಅಲ್ಲಿ..... ಇಲ್ಲಿ..... ಅದು.... ಇದು...
ಮನದ ಕೊಸರು...ಹಾರಿ.... ಹೀರಿ...
ಮುದದ ಕೀರೀಟ... ಮೆರೆದ ಮನ....
ಮುರಿದ ಕಿರೀಟ .... ಮುದುರಿ ಮನ....
ಕೆದರಿ ಕೋಪ..... ಅರಿಯಲ್ಲಿ ತಾಪ...
ಅರಿಯ ಅರುಹು....ಸಮರ್ಥನೆಗೆ ಕೂಗು....

ಕೂಗಿನಲ್ಲಿ ಮರೆತ ಜ್ಞಾನ ....
ಅಂತರ್ಯದಲ್ಲಿ ಕದನ ಸದನ.....
ಹಿಂದೆ ಹೊಗಳು ಭಟ್ಟರು.....
ಮುಂದೆ ತೆಗಳೋ ಭಟರು......
ಹುಮ್ಮಸ್ಸಿನ ಹಾರಾಟ....
ಮಾತಿನಲ್ಲೇ ಸೆಣಸಾಟ...
ಕಳೆದ ಶಬ್ದ..... ಬಿಟ್ಟ ಬಾಣ...
ಅರಿಯ ಶವ... ನನ್ನ ಭಾವ....
ಕೊಲೆಗಾರನ ಹಣೆಪಟ್ಟ....

ಮರೆತ ಜ್ಞಾನ.....
ಮೆರೆದ ಅಜ್ಞಾನ...
ಕದನದಲ್ಲಿ ಸತ್ತ ನನ್ನ ಆಂತರ್ಯದ ಜನ...
ಹಿಂದೆ ತಿರುಗೆ ಎಲ್ಲ ಶೂನ್ಯ....

ಹೊಗಳಿಕೆಯ ಹೆಗಲಲ್ಲಿ ಶವದ ಮೆರವಣಿಗೆ...
ತೆಗಳಿಕೆಗೆ ಕೋಪದಲ್ಲಿನ ಧಾವಂತ....
ಭಾಷೆ-ಮಾನವತೆಯಲ್ಲಿ ಮನವೇ ಅಸ್ತ೦ಗತ ....
ಪರ-ವಿರೋಧದ ಹೋರಾಟದಲ್ಲಿ...
ಕಳೆದು ಹೋದ ನಮ್ಮ ಭಾಷೆ -ಭವಣೆ....
ಕೊನೆಯಲ್ಲಿ ಅವನಿಗೂ... ನನಗೂ...
ಇಲ್ಲದ ಭೇದ...
ಹಾಗಾದ ಮೇಲೆ ಅರ್ಥ ಕಳೆದುಕೊಂಡ ಕದನ...
ಮುರಿದು ಹೋದ ಮನಗಳ ಮಸಣ...

ಅಂತರ್ಯದಲ್ಲಿ ಸಾದಿಸೆ ಭುದ್ಧ....
ಜನನ-ಮರಣಕ್ಕೆ ದಿವ್ಯ ಮೌನ....

ಶುನಕದ ಬೊಗಳಿಕೆ...
ದಿವ್ಯ ನಿರ್ಲಕ್ಷದಲ್ಲಿ ಕುಂಜರದ ನಡೆ...
ನಡೆ.. ದ್ಯಾನದೆಡೆಗೆ..
ನಿರ್ಲೀಪ್ತತೆಯಲ್ಲಿ...
ಚಿರನೂತನ ನಿರಂತರ ಚೇತನದ ಕಡೆಗೆ...