Monday, July 26, 2010

ಸಾಧನೆಯ ಹಾದಿಯಲ್ಲಿ..................



(PHOTO -P.T.USHA INDIA'S RUNNING CHAMPION Photo Source : Internet Search)

ಅದೊಂದು ರಾಷ್ಟ್ರೀಯ ಓಟದ ಸ್ಪರ್ಧೆ!!!

ಕಿಕ್ಕಿರಿದ ಕ್ರೀಡಾಂಗಣ!!

ದೇಶದ ವೇಗದ ವ್ಯಕ್ತಿಯ ಆಯ್ಕೆಯ ಹಂತದ ಸ್ಪರ್ಧೆ! ಜನ ತಮ್ಮ ತಮ್ಮ ಮೆಚ್ಚಿನ ಕ್ರೀಡಾಳುಗಳ ಹುರಿದುಂಬಿಸುತ್ತಾ, ಅವರು ಗೆಲ್ಲುವ ಕನಸಿನಲ್ಲಿ, ಸಹವೀಕ್ಷಕರೊಡನೆ ಪೈಪೋಟಿಯಲ್ಲಿ ಪಂದ್ಯಕಟ್ಟುತ್ತಾ, ಸಂಬ್ರಮಿಸುತ್ತಿದ್ದರು.

ಎಲ್ಲ ಸ್ಪರ್ಧಾಳುಗಳು ಓಟದ ತಮ್ಮ ಸುತ್ತಿನಲ್ಲಿ ಓಡಲು ತಯಾರಾಗಿ ನಿಂತಿದ್ದು, ಪಂದ್ಯ ನಿರ್ಣಾಯಕರ ಓಟದ ಆದೇಶಕ್ಕೆ ಕಾಯುತ್ತಿದ್ದರು.

ನಿರ್ಣಾಯಕರ ರೆಡಿ,ಸೆಟ್,ಗೋ-ದೊಂದಿಗೆ ಮೊಳಗಿದ ಬಂದೂಕಿನ ಶಬ್ದಕ್ಕೆ ಓಟಗಾರರು ನಾಗಾಲೋಟದಲ್ಲಿ ಸ್ಪರ್ಧೆ ಪ್ರಾರಂಭಿಸಿದರು.

ಎಲ್ಲರ ಕಣ್ಣುಗಳು ಸುತ್ತಿನ ಕೊನೆಗೆ ಮುಟ್ಟಬೇಕಾದ ಗೆರೆಯ ದಾರದ ಮೇಲೆ....

ಸ್ಪರ್ಧಾಳುಗಳು ಒಬ್ಬರೊಬ್ಬರಿಗೆ ಪೈಪೋಟಿಯಲ್ಲಿ, ಅಂತಿಮ ರೇಖೆಯ ಮುಟ್ಟಲು, ತವಕದಲಿ, ಮೈಯೆಲ್ಲಿನ ಕಸುವನ್ನು ಕ್ರೋಡಿಕರಿಸುತ್ತಾ ಕಾಲುಗಳನ್ನು ಸಾಧ್ಯವಾದಷ್ಟು ನೀಳವಾಗಿ ಚಾಚಿ ಪೂರ್ಣ ವೇಗದಲ್ಲಿ ಓಡುತ್ತಿದ್ದರು....

ಅಂತಿಮ ರೇಖೆಗೆ ಮೊದಲು ಮುಟ್ಟಿದವನು ನಂಬರ ೫ ರ ಸ್ಪರ್ಧಿ, ತದನಂತರ ೮ ಅಂಕೆಯ ಸ್ಪರ್ಧಿ ಅಮೇಲೆ ೧೨ ಅ೦ಕೆಯ ಸ್ಪರ್ಧಿ.
ಈ ಮೂರು ಸ್ಪರ್ಧಾಳುಗಳು -ಪ್ರಥಮ, ದ್ವೀತಿಯ ಮತ್ತು ತೃತೀಯ ವಿಜೇತರಾಗಿ ಆಯ್ಕೆಯಾಗಿದ್ದರು!!

ಪ್ರೇಕ್ಷಕರ ಕರಡತಾನ ನಭವನ್ನ ಸೀಳಿತ್ತು....

ಅಭಿನಂದನೆಗಳ ಸುರಿಮಳೆ ವಿಜೇತರಿಗೆ ಹರಿದಿತ್ತು...

ಎಲ್ಲರ ಕಣ್ಣು ಅವರ ಮೇಲೆ...

ವಿಜೇತರು ಸಂಬ್ರಮಿಸುತ್ತಿದ್ದರು...

ಮಾಧ್ಯಮದವರ ವೀಡಿಯೊ ಕ್ಯಾಮೆರಾಗಳು ವಿಜೇತರನ್ನೇ ಸೆರೆಹಿಡಿದಿದ್ದವು!!

ಜನ ಮತ್ತು ಮಾಧ್ಯಮದವರು ಸ್ವಲ್ಪ ಆಚೀಚೆ ಕಣ್ಣು ಹಾಯಿಸಿದಾಗ ಅಲ್ಲಿ ಇನ್ನೂ ಮೂವರು ಸ್ಪರ್ಧಿಗಳು ಸ್ವಲ್ಪ ದೂರದಲ್ಲಿ ಮೈದಾನದಲ್ಲಿ ಬಿದ್ದು ಹೊರಳಾಡುತ್ತಾ ಕಿರಿಚಾಡುತ್ತಾ ಸಂಬ್ರಮಿಸುತ್ತಿದ್ದರು...

ಗೆಲ್ಲದ ಅವರ ಸಂಬ್ರಮವೇಕೆ??? ಎಂದು ಎಲ್ಲರಿಗೂ ಆಶ್ಚರ್ಯ....

ಮಾಧ್ಯಮದವರಿಗೂ ಕುತೂಹಲ ಸೀದಾ ಹೋಗಿ ಅವರಿಗೆ ಕೇಳಿದರು "ಸ್ಪರ್ಧೆಯಲ್ಲಿ ಗೆಲ್ಲದ ನೀವೇಕೆ ಸಂಬ್ರಮಿಸುತ್ತಿರುವಿರಿ?" ಎಂದು.

ಮೊದಲನೇಯವ ಹೇಳಿದ - "ನನ್ನ ಜೀವನದಲ್ಲಿ ನಾನು ರಾಷ್ಟ್ರೀಯ ಓಟದ ಸ್ಫರ್ಧೆಯಲ್ಲಿ ಭಾಗವಹಿಸಬೇಕೆಂಬ ನನ್ನ ಗುರಿ ಇಂದು ನೆರವೇರಿದೆ. ಅದಕ್ಕಾಗಿ ಸಂಬ್ರಮಿಸುತ್ತಿದ್ದೆ"

ಎರಡನೆಯವ ಹೇಳಿದ - "ನಾನು ರಾಷ್ಟ್ರೀಯ ಓಟದಲ್ಲಿ ಓಟದ ಸುತ್ತನ್ನು ಯಾವಾಗಲು ಪುರ್ಣಗೊಳಿಸಲಾಗುತ್ತಿರಲಿಲ್ಲ ಇಂದು ಪುರ್ಣಗೊಳಿಸಿದೆ, ಅದಕ್ಕಾಗಿ ಸಂಬ್ರಮಿಸುತ್ತಿದ್ದೆನೆ"

ಮೂರನೇಯವ ಹೇಳಿದ -ನಾನು ಕಳೆದ ಸರ್ತಿ ಒಂದು ಸುತ್ತು ಹಾಕಲು ತೆಗೆದುಕೊಂಡ ಸಮಯಕ್ಕಿಂತಾ ಕಡಿಮೆ ಸಮಯದಲ್ಲಿ ಸುತ್ತು ಪೂರ್ಣ ಮಾಡಬೇಕೆಂದು ಸಂಕಲ್ಪಿಸಿದ್ದೆ ಅದನ್ನು ಇಂದು ಸಾಧಿಸಿದೆ ಅದಕ್ಕಾಗಿ ಸಂಬ್ರಮಿಸುತ್ತಿದ್ದೇನೆ"

ಈ ಮೂರೂ ಜನರ ಸಾಧನೆಯ ಹಾದಿಯ ಮೆಟ್ಟಿಲನ್ನು ಸುಲಭವಾಗಿ ನಮಗೆ ನೀಡಿದ್ದಾರೆ.

ಏನಾದರು ನಾವು ಸಾಧಿಸಿ ತೋರಬೇಕಿದ್ದಲ್ಲಿ ಮೂರೂ ಹಂತದ ಪರಿಶ್ರಮ ಅವಶ್ಯ!

ಮೊದಲಿಗೆ ನಮ್ಮನ್ನು ಸಾಧನೆಯ ಹಾದಿಯಲ್ಲಿ ತೊಡಗಿಸಿಕೊಳ್ಳಬೇಕು! (To get participation)

ಎರಡನೆಯದಾಗಿ ನಾವು ಸಾಧನೆಯ ಸಾಮಾನ್ಯ ಗುರಿ ತಲುಪಬೇಕು. (To meet the standards required)

ಮೂರನೆಯದಾಗಿ ನಿರ೦ತರ ಅಭಿವೃದ್ಧಿ ಮತ್ತು ಪ್ರಗತಿಯನ್ನು ಸಾಧನೆಯಲ್ಲಿ ಸಾಧಿಸಬೇಕು!(Continual improvement by self competition -upgrading the achievement standards continually)

ಯಾವಾಗ ನಾವು, ನಮ್ಮೊಂದಿಗಿನ ಪೈಪೋಟಿಯಲ್ಲಿ, ನಮ್ಮ ಹಿಂದಿನ ದಾಖಲೆಗಳನ್ನ ಮುರಿಯುತ್ತಾ, ಪ್ರತಿ ಹಂತದಲ್ಲೂ ಮುಂದುವರೆದಾಗ, ಒಂದು ದಿನ ನಾವು ಪೈಪೋಟಿಯಲ್ಲಿ ಎಲ್ಲರನ್ನು ಮೀರಿ ಮುಂಚೂಣಿಯಲ್ಲಿರುತ್ತೇವೆ ಮತ್ತು ಆಗ ನಾವು ಇತರರೊಂದಿಗೆ ಸ್ಪರ್ಧೆಯಲ್ಲಿ ವಿಜೇತರಾಗುತ್ತೇವೆ.

ಸಾಧಕರು ಹೊಸದನ್ನು ಮಾಡುವದಿಲ್ಲ ಆದರೆ ಹೊಸವಿಧಾನದಲ್ಲಿ ಅಥವಾ ಹೊಸ ಅಳತೆಗೋಲಿನಲ್ಲಿ ಸಾಧನೆ ನಿರ್ಮಿಸುತ್ತಾರೆ.

ಆದರೆ ಸಾಧನೆಯ ಎಲ್ಲ ಹಂತದಲ್ಲೂ ಸಂಬ್ರಮಿಸಬೇಕು. ಸಾಧನೆಯ ಹೆಜ್ಜೆ ಹೆಜ್ಜೆಯು ವಿಶಿಷ್ಟವಾಗಿರಬೇಕು ಮತ್ತು ನಮ್ಮ ಹಳೆಯ ಅಳತೆಯನ್ನು ಮೀರಬೇಕು ಅಂದರೆ ನಿರಂತರ ಪ್ರಗತಿಯಿರಬೇಕು.
ಪ್ರತಿ ಹಂತದಲ್ಲು ನಮ್ಮ ಸಾಧನೆಯನ್ನು ಅನುಭವಿಸಿ ಸಂಬ್ರಮಿಸಬೇಕು ಮತ್ತು ಮುಂದಿನ ಪ್ರಯತ್ನದಲ್ಲಿ ಹೊಸದನ್ನು ಅಥವಾ ಹೊಸ ಮಟ್ಟದಲ್ಲಿ ಮಾಡಲು ಪಣ ತೊಡಬೇಕು!


"WINNERS DON'T DO DIFFERENT THINGS BUT DO THINGS DIFFERENTLY" -SHIVA KHER

(THE PERCEIVED KNOWLEDGE FROM LMI'S -EFFECTIVE PERSONAL PRODUCTIVITY COURSE)

Friday, July 9, 2010

ತರಾವರಿ



ಇಲ್ಲಿ ಕಂಪು
ಸುಮಧರ ಸೊಂಪು
ಗೆಳತಿಗೆನ್ನೆಗಂಪು

ತರವಾರಿ ತರಾತುರಿ
ಎಲ್ಲಿಯದೋ ಈ ಸವಾರಿ
ಹಾದಿಬೀದಿ ಸರಾಸರ ಹರಿ
ಎನೀದೆಯೋ ಮನದ ಪರಿ

ಬಾಳೆ ಸಿಪ್ಪೆ
ಹಾಳು ಕೊಂಪೆ
ಸಿಕ್ಕಿನಲ್ಲಿ ಸಿ೦ಪೆ
ತೆಗೆದೆಸೆ- ತಂಪೆ!