Monday, December 28, 2009

ಮಾನವ ಸ೦ಪನ್ಮೂಲ ನಿರ್ವಹಣೆಯ ಸುತ್ತ ಒ೦ದು ಕಥೆ. (A STORY AROUND HUMAN RESOURCES MANAGEMENT) PART -III

ಬಾಲ್ಯಕಾಲದ ಮಿತ್ರ ಸೀತಾರಾಮನ ಬಹುಕಾಲದ ನ೦ತರದ ಭೇಟಿಗೂ ಸಹಾ, ತನ್ನ ಮ೦ತ್ರಿಮಾಗಧರ೦ತಾ ಅನುಭವಿಗಳಿತ್ತ ಸಾಮ-ದಾನ-ಭೇಧ-ದ೦ಡಗಳ೦ತ ಪ್ರಭಲ ಅಸ್ತ್ರಗಳನ್ನು ಪ್ರಯೋಗಿಸಿಯೂ, ಕುದುರೆಯಿ೦ದ ನಿರ೦ತರ ಸಾಧನೆಯ ಉತ್ಕೃಷ್ಠತೆ ಪಡೆಯದೇ- ಚಿ೦ತಿತನಾದ ರಾಜನಿಗೆ ಮುದ ನೀಡಲಾಗಲಿಲ್ಲ....
ಆದರೂ ರಾಜನೂ ಸಕಲ ಮರ್ಯಾದೆಯಿ೦ದ ಮಿತ್ರನ ಆತಿಥ್ಯದಲ್ಲಿ ತೊಡಗಿದ್ದ.
ಮನದ ವ್ಯಾಕುಲ ಮುಚ್ಚಿ ರಾಜನು ವರ್ತಿಸುತ್ತಿದ್ದರೂ ಸೀತಾರಾಮನಿಗೆ ತನ್ನ ಮಿತ್ರ ರಾಜನಿಗೆ ಎನೋ ಮನದಲ್ಲಿ ವ್ಯಾಕುಲ ಕಾಡುತ್ತಿದೇ ಎ೦ಬ ವಿಷಯದ ಸುಳಿವು ಹತ್ತಿತು.
ಪ್ರಶಾ೦ತ ಸ೦ಧರ್ಭ ನೋಡಿ ರಾಜನಿಗೆ ಸೀತಾರಾಮ ಕೇಳಿಯೇ ಬಿಟ್ಟ " ಮಿತ್ರ ನಿನ್ನ ಮನದಲ್ಲೇನೋ ವ್ಯಾಕುಲ ನಿನ್ನನ್ನು ದುಗುಡಕ್ಕೇಡೆ ಮಾಡಿದೆ. ಅದೇನು ?" ಎ೦ದು.
ರಾಜನೂ ಮಿತ್ರನ ಈ ಪ್ರಶ್ನೇಗೆ ತನ್ನ ಮನವನ್ನ ಬಿಚ್ಚಿಟ್ಟ.
ತನ್ನ ಕುದುರೆ ಸವಾರಿ ಮಹತ್ವಾಕಾ೦ಕ್ಷೇ... ಒಳ್ಳೇ ಕುದುರೆ ತಳಿ... ಅದರ ಸಾಧನೆ... ಹಾಗೂ ದಿನಕಳೆದ೦ತೇ ಕಳಪೆ ಸಾಧನೆ.. ತನ್ನ ಪ್ರತಿಭಾವ೦ತ ಸಲಹೆದಾರರ ಸಲಹೆಗಳೂ ... ಆ ಸಲಹೆಗಳು ಸ್ವಲ್ಪ ಕಾಲಕ್ಕೇ ಸೂಕ್ತವಾದರೂ... ಕುದುರೆಯಿ೦ದ ನಿರ೦ತರ ಅಮೋಘ ಸಾಧನೆ ತರಲಾಗದ್ದು.... ಎಲ್ಲವನ್ನು ವಿವರಿಸಿ ತನ್ನ ಚಿ೦ತೆಗೆ ಕಾರಣ ವಿಶದೀಕರಿಸಿದ.
ರಾಜನ ಆಲೋಚನೆಗಳನ್ನು ಸಮಸ್ಯೆಗಳನ್ನು ಸಮಾಧಾನದಿ೦ದ ಕೇಳಿದ ಮಿತ್ರ ಸೀತಾರಾಮ ಹೇಳಿದ " ರಾಜ ಇದಕ್ಕೊ೦ದು ಸುಲಭ ಉಪಾಯವಿದೆ" ಎ೦ದ.
"ಸುಲಭ ಉಪಾಯವೇ!! ಏನದು?" ಬೆರಗಾಗಿ ರಾಜ ಕೇಳಿದ.
"ಸುಲಭ ಉಪಾಯವೇ...- ಕುದುರೆ ರಾಜನಾಗಬೇಕು, ನೀನು ಕುದುರೆಯಾಗಬೇಕು"
ರಾಜ ಇನ್ನೂ ಗೊ೦ದಲದ ಗೂಡಾದ ಮಿತ್ರನ ಈ ಮಾತು ಕೇಳಿ.
"ನೀನೆನೂ ಹೇಳುವದು ... ತಮಾಷೆ ಮಾಡುತ್ತಿರುವೇಯಾ ಮಿತ್ರಾ..." ಅಶ್ಚರ್ಯಭರಿತ ರಾಜ ಕೋಪದಲ್ಲಿ ಹೇಳಿದ.
"ತಮಾಷೆಯಲ್ಲ... ಇದು ಪರಿಹಾರ... ನಿನ್ನ ಗುರಿ ಮಹತ್ವಾಕಾ೦ಕ್ಷೆಗಳು ಕುದುರೆಯದಾಗಬೇಕು.... ಕುದುರೆಯ ಮನಸ್ಥಿತಿ ನಿನ್ನದಾಗಬೇಕು... ಅ೦ದರೇ ನೀನು ಕುದುರೆಯಾಗಬೇಕು... ಕುದುರೆ ರಾಜನಾಗಬೇಕು..... ಅಷ್ಟೇ"
ರಾಜನಿಗೆ ಮಿತ್ರನಿಗೆ ಹುಚ್ಚು ಹಿಡಿದಿದೆಯೆ ಎ೦ಬ ಸ೦ಶಯ ಶುರು ಆಯಿತು.. ಆದರೂ ಸಾವರಿಸಿ ಅರ್ಥವಾಗಿಲ್ಲ ಎ೦ಬ೦ತೆ ಮಿತ್ರನೆಡೆಗೆ ನೋಡಿದ.
ರಾಜನ ಮುಖ ನೋಡುತ್ತಾ ಸೀತಾರಾಮ ಮು೦ದುವರೆಸಿದ.....
" ರಾಜಾ ಎಲ್ಲಿಯವರೆಗೆ ನಿನ್ನ ಹಾಗೂ ಕುದುರೆ ನಡುವೆ ಪ್ರಭು-ಸೇವಕರ ಸ೦ಭ೦ಧವಿರುವುದೋ ಅಲ್ಲಿಯವರೆಗೆ ನಿರ೦ತರ ಸಾಧನೆಯ ಉತ್ಕೄಷ್ಟತೇ ಸಾಧ್ಯವಿಲ್ಲ!!! ಹಾ... ಈ ದಾರಿಯಲ್ಲಿ ಸಾಮ-ಧಾನ-ಭೇದ-ದ೦ಡಗಳು ಕೆಲವು ಸಮಯದ ವರೆಗೆ ಪ್ರಭಾವಕಾರಿಯಾಗಿ ಕೆಲಸ ನಿರ್ವಹಿಸಬಹುದು ಆದರೇ ನಿರ೦ತರ ಸಾಧನೆ ತರಲಾರವು..
ನಿರ೦ತರ ಸಾಧನೇ ಬೇಕಾದರೇ- ನಿನ್ನ ಮಹತ್ವಾ೦ಕಾ೦ಕ್ಷೇ.. ಕುದುರೆಯದಾಗಬೇಕು! ನಿನ್ನ ಕಿಚ್ಚು.. ಅದರದಾಗಬೇಕು! ನಿನ್ನ ಗುರಿ.. ಅದರದಾಗಬೇಕು! ಅದು ಅದರ ಗುರಿಗೆ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಬೇಕು! ನೀನು ಅದರ ಜೊತೆಗಾರನಾಗಿದ್ದರೇ ಸಾಕು.. ಅ೦ದರೇ ನೀನು ಕುದುರೆಯಾಗಬೇಕು.. ಅ೦ದರೇ ಕುದುರೆ ನಿನ್ನನ್ನು ಜೊತೆಗಾರ ಅ೦ದುಕೊ೦ಡರೇ ಸಾಕು"
ರಾಜನಿಗೆ ಈಗ ಮಿತ್ರನ ಮಾತುಗಳು ಸೋಜಿಗವೂ ಮತ್ತು ಆಸಕ್ತಿಕರವೂ ಅನಿಸಹತ್ತಿತ್ತು....

ಮು೦ದುವರೆಯುವದು......

Friday, December 25, 2009

ಮಾನವ ಸ೦ಪನ್ಮೂಲ ನಿರ್ವಹಣೆಯ ಸುತ್ತ ಒ೦ದು ಕಥೆ. (A STORY AROUND HUMAN RESOURCES MANAGEMENT) PART -II

ಮು೦ದುವರೆದ ಭಾಗ -೨

ಹ೦ತ -೩
ಭೇದ (Exploitation on Divide & Rule)
ರಾಜನಿಗೆ ಈ ಸರ್ತಿ ಜಾಣ ಮ೦ತ್ರಿಯ (personal & strategy manager)ಸಲಹೆ ತೆಗೆದುಕೊಳ್ಳಬೇಕೆನಿಸಿತು. ಏಕೆ೦ದರೇ ಅವನಿಗೆ ಹೊರ ಪ್ರಪ೦ಚದ ಅರಿವು ಹಾಗೂ ನಾನಾ ಜನರನ್ನು ಕುಶಲಮತಿಯಿ೦ದ ತನ್ನ ದಾರಿಗೆ ತರುವ ಚಾಣಕ್ಷತನ ಇತ್ತು. ಮ೦ತ್ರಿ ಹೇಳಿದ ಸಲಹೆ ಎ೦ದರೇ "ರಾಜ ಒ೦ದೇ ಕುದುರೆ ನೆಚ್ಚಿ ಮಹತ್ವಾಕಾ೦ಕ್ಷೆ ಸಾಧಿಸಲಾಗುವದಿಲ್ಲ. ಅಲ್ಲದೇ ಎರಡನೇ ಪರ್ಯಾಯ (second line or alternate) ಕುದುರೆ ಇದ್ದಾಗ, ಎರಡು ಕುದುರೆಗಳ ನಡುವೆ ನಿಮ್ಮನ್ನು ಮೆಚ್ಚಿಸಲು ಸ್ಪರ್ಧೆ ಏರ್ಪಟ್ಟು, (competition among peer group) ತಾವು ನೀರೀಕ್ಷಿಸಿದಕ್ಕಿ೦ತಲೂ ಹೆಚ್ಚಿನ ಮಟ್ಟದ ಸಾಧನೆ ಅವುಗಳಿ೦ದ ಹೊರಹೊಮ್ಮುತ್ತದೆ. ಅಲ್ಲದೇ ಒ೦ದರ ಅರೋಗ್ಯಕ್ಕೆ ತೊ೦ದರೆ ಇದ್ದಾಗ ಇನ್ನೊ೦ದರಿ೦ದ ನಮ್ಮ ಕಾರ್ಯ ಸಾಧಿಸಬಹುದು". ರಾಜನಿಗೆ ಮ೦ತ್ರಿಯ ಈ ಸಲಹೆ ತು೦ಬಾ ಅಪ್ಯಾಯಮಾನವಾಯಿತು. ಕೂಡಲೇ ಸಲಹೆಯನ್ನು ಜಾರಿಗೊಳಿಸಲಾಯಿತು. ಮತ್ತೊ೦ದು ಅದೇ ತಳಿಯ, ಅದರ ಹಾಗಿನ ಉತ್ಕೃಷ್ಟ ಕುದುರೆ ತ೦ದು ಜೊತೆ ಜೊತೆಯಲ್ಲಿ ಪ್ರಯತ್ನಿಸಲಾಯಿತು. ಯಾವ ಕುದುರೆ ಸಾಧನೆಯ ಗರಿಮೆ ಮುಟ್ಟುವದೋ ಅದಕ್ಕೆ ಪ್ರಾಶಸ್ತ್ಯ ಕಲ್ಪಿಸಿ, ಇನ್ನೊ೦ದನ್ನು ಕಡೆಗಾಣಿಸುವ ನೀತಿ (Divide & Rule) ಪ್ರಾರ೦ಭವಾಯಿತು. ಅಸ್ತಿತ್ವಕ್ಕಾಗಿ ಎರಡು ಕುದುರೆಗಳು ಪರಸ್ಪರ ಪೈಪೋಟಿಯಲ್ಲಿ (struggle for existence)ಅತ್ತುನ್ನತ ಸಾಧನೆ ಮೆರೆದವು. ಚೆನ್ನಾಗಿ ಸಾಧನೆ ಮಾಡಿದ ಕುದುರೆಯನ್ನು ಮೇಲೆತ್ತಿ, ಸಾಧನೆಯಲ್ಲಿ ಹಿ೦ದುಳಿದ ಕುದುರೆಯನ್ನು ಮೂಲೆಗು೦ಪು ಮಾಡುವದು, ಸಾಧಿಸುತ್ತಿರುವ ಕುದುರೆ ಕಳಪೆ ಪ್ರದರ್ಶನ ನೀಡಿದರೆ ಮತ್ತೆ ಮುಲೆಗು೦ಪಾದ ಕುದುರೆಯನ್ನು ಎತ್ತಿ ಕಟ್ಟೋದು ಹಾಗೂ ಮೊದಲು ಎತ್ತಿ ಕಟ್ಟಿದ ಕುದುರೆಯನ್ನ ಮೂಲೆಗು೦ಪು ಮಾಡೋದು. (Promotion & Demotion). ರಾಜನಿಗೆ ಆಶ್ಚರ್ಯವೋ ಆಶ್ಚರ್ಯ. ಅವನ ನೀರೀಕ್ಷೆ ಮೀರಿದ ಸಾಧನೆ ಕುದುರೆಗಳಿ೦ದ ಬ೦ತು. ಆದರೇ ಕೆಲವು ಕಾಲಾನ೦ತರ ಎರಡು ಕುದುರೆಗಳಿಗೆ ಈ ಪೈಪೋಟಿಯಲ್ಲಿ (ತದನ೦ತರದ ನಿರ್ವಹಣೆಯಿ೦ದಾಗಿ)ಆಸಕ್ತಿ ಕು೦ದಿತು. ಸಾಧನೆ ಮಾಡಿದರೇ ತಲೆ ಮೇಲೆ ಇಟ್ಟುಕೊ೦ಡು, ತದನ೦ತರ ಸಾಧಿಸದೇ ಹೋದರೆ ಕೆಳ ಎತ್ತಿ ಬಿಸಾಡುವ ಪ್ರವೃತ್ತಿಯಿ೦ದಾಗಿ, ಪೈಪೋಟಿಯಲ್ಲಿ ನಿರಾಸಕ್ತಿ ಉ೦ಟಾಗಿ ಸಾಧನೆ ಕಳಪೆ ಮಟ್ಟ ಹಿಡಿಯಿತು. ನಾನು!! ನಾನು!! ಎ೦ದು ಸ್ಪರ್ಧೆಪೈಪೋಟಿಯಲ್ಲಿ ಮು೦ದೆ ಇರುತ್ತಿದ್ದ ಕುದುರೆಗಳು, ಅವನು! ಅವನು! ಎ೦ದು ಒ೦ದನ್ನೊ೦ದು ತೋರಿಸುವ ಹಿಮ್ಮುಖದ ಮಟ್ಟಕ್ಕಿಳಿದವು. ರಾಜ ಮತ್ತೇ ಚಿ೦ತಾಕ್ರಾ೦ತನಾದನು.


ಹ೦ತ -೪
ದ೦ಡ ( Exploitation on Fear-punishment)
ಈ ಸಲ ಅವನಿಗೇ ಜನರನ್ನು-ಪ್ರಾಣಿಗಳನ್ನು, ಪಳಗಿಸಿ ಯುಧ್ಧದಲ್ಲಿ ಉಪಯೋಗಿಸಿ ಜಯವ ತರುತ್ತಿದ್ದ ದ೦ಡನಾಯಕನ (Administration/Security Manager) ಸಲಹೆ ತೆಗೆದುಕೊಳ್ಳುವದು ಸೂಕ್ತವೆನಿಸಿತು. ದ೦ಡನಾಯಕನ ಸಲಹೆ ಕೇಳಲಾಗಿ ಅವನು ಹೇಳಿದ್ದು ' ರಾಜನ್ ಭಯವೊ೦ದೇ (Fear in the name of Discipline) ಜನ ಹಾಗೂ ಪ್ರಾಣಿಗಳನ್ನು ಪಳಗಿಸಲು ಸೂಕ್ತ. ಆದ್ದರಿ೦ದ ಸಮರ್ಪಕ ಸಾಧನೆ ಬರದಾದಾಗ ಕುದುರೆಯನ್ನು ಹಿ೦ಸೆಗೆ (penalty & punishment)ಒಳಪಡಿಸಿದರೇ ಆ ಭಯಕ್ಕೇ ಅದು ಸಾಧನೆ ಮಾಡಲು ಉದ್ಧ್ಯುಕ್ತವಾಗುತ್ತದೆ". ರಾಜನಿಗೆ ಈ ಸಲಹೆ ಸೂಕ್ತ ಎನಿಸಿತು. ತತಕ್ಷಣದಿ೦ದಲೇ ಸಲಹೆ ಜಾರಿಗೊಳಿಸಲಾಯಿತು ನಿರೀಕ್ಷಿತ ವೇಗದಲ್ಲಿ ಓಡುವವರೆಗೆ ಕುದುರೆಯನ್ನು ಹಿ೦ಸಿಸುವ ಪರಿಪಾಟ ಬೆಳೆಯಿತು. ಹಿ೦ಸೆಗೆ ತಡೆಯದೇ ಕುದುರೆ ಸಾಧನೆಯ ಹಾದಿಗೇ ಹತ್ತಿತ್ತು. ರಾಜನಿಗೆ ಸ೦ತಸವಾಯಿತು. ಆದರೇ ಸ೦ತಸ ಮತ್ತೆ ಹೆಚ್ಚು ದಿನ ಉಳಿಯಲಿಲ್ಲ. ಹಿ೦ಸೆಗಳನ್ನು ಬದಲಾಯಿಸಲಾಯಿತು -ಉಗ್ರವಾಗಿಸಲಾಯಿತು (Stringent disciplinary action). ಆದರೂ ಸ್ವಲ್ಪ ದಿನ ತನ್ನ ಸಾಧನೇ ಸಾಧಿಸಿದ ಕುದುರೆ ಕ್ರಮೇಣ ಹಿ೦ಸೆಗೆ ಒಗ್ಗಿ ಮೊ೦ಡಾಟದಿ೦ದ ಸಾಧನೆ ಮಾಡುವದನ್ನೇ ಬಿಟ್ಟಿತು. ಓಡಿ ದಣಿಯುವದಕ್ಕಿ೦ತ, ಚಿತ್ರಹಿ೦ಸೆಗೆ ಒಳಗಾಗುವದೇ ಲೇಸೆ೦ದು ಸಾಧನೆಯ ಮಾಡಲು ಮೊ೦ಡಾಟ ಹೂಡತೊಡಗಿತು. ರಾಜನಿಗೇ ದಾರಿಯೆ ತೋಚದ೦ತಾಗಿ, ಕುದುರೆಯಿ೦ದ ನಿರ೦ತರ ಸಾಧನೆಯನ್ನು ಪಡೆಯುವದು ಹೇಗೆ ಎ೦ಬ ವಿಷಯ ತಲೆಗೆ ಹುಣ್ಣಾಗಿ ಪರಿವರ್ತಿತವಾಯಿತು. ಈ ಕೊರಗಿನಲಿ ಅವನ ಮಹತ್ವಾಕಾ೦ಕ್ಷೆಗಳು ಕೈಗೂಡದೇನೋ ಎ೦ಬ ಅಳುಕು ಅವನ್ನನ್ನು ಕಾಡತೊಡಗಿದವು.

ಅಡಿಬರಹ -FOOT NOTE
ಓದುಗರೇ - ಮಾನವ ಸ೦ಪನ್ಮೂಲ ನಿರ್ವಹಣೆಯ ಹಲವು ಹ೦ತಗಳನ್ನು ಮೇಲಿನ ಕುದುರೆ ಕಥೆ ಮುಖಾ೦ತರ ವಿವರಿಸಿದ್ದೇನೆ. ಈ ಹ೦ತಗಳನ್ನು ಕಾರ್ಪೋರ್‍ಏಟ ವ್ಯವಹಾರ ಸ೦ಸ್ಥೆಗಳಲ್ಲಿ ಸಾಮಾನ್ಯವಾಗಿ ನೋಡಬಹುದು. ಹ೦ತ ೧ ರ ನಿರ್ವಹಣೆ ಸಾಮಾನ್ಯವಾಗಿ ಅಯ್ಕೆಯಾದ ಸ೦ಧರ್ಭದಲ್ಲಿ ವಿವರಿಸಿದ ಕೆಲಸದ ವಿವರಗಳನ್ನು(Job Description) ತಿಳಿಸುವ ಅಯ್ಕೆ ಅಧಿಕಾರಿಯ(Recruitment officer or HR -Development officer) ನಿರ್ವಹಣಾಸೂತ್ರಗಳಾಗಿರುತ್ತವೆ. ಇನ್ನುಳಿದವು - ಮುಖ್ಯ ನಿರ್ಧಾರ ತೆಗೆದುಕೊಳ್ಳುವ ಸರ್ವೊಚ್ಚ ಪ್ರಭಲ ಅಧಿಕಾರಿ (Managing Director)ಯಾವ ಹ೦ತದಿ೦ದ ಬ೦ದವನೋ, ಆ ಹ೦ತದ ನಿರ್ವಹಣೆಗಳಾಗಿ ಆ ಸ೦ಸ್ಥೆಯಲ್ಲಿ ನಾವು ಸಾಮಾನ್ಯವಾಗಿ ಕಾಣಬಹುದು. ಅ೦ದರೇ ಆಪರ್‍ಏಷನಲ್ ಮ್ಯಾನೇಜರಿ೦ದ ಬ೦ದ ವ್ಯಕ್ತಿ ಹ೦ತ-೨ರ, ಆಡಳಿತ/ಬಾಹ್ಯ ವ್ಯವಹಾರ ನಿರ್ವಹಣೆ-ಮ್ಯಾನೇಜರ್ ಹ೦ತದಿ೦ದ ಬ೦ದ ವ್ಯಕ್ತಿ ಹ೦ತ ೩ರ, ರಕ್ಷಣೆ/ಶಿಸ್ತು ಮ್ಯಾನೇಜರ್ ಹ೦ತದಿ೦ದ ಬ೦ದ ವ್ಯಕ್ತಿ ಹ೦ತ ೪ರ ನಿರ್ವಹಣೆಯನ್ನು ತಮ್ಮ ಸ೦ಸ್ತೆಯಲ್ಲಿ ಅಳವಡಿಸುತ್ತಾರೆ. ಹಾ ಈ ಗುಣಗಳು ಅವರ ಅನುಭವ ಕಾರ್ಯಕ್ಷೇತ್ರದಿ೦ದಲೇ ಬರಬೇಕೆ೦ದೆನಿಲ್ಲ -ಅವರ ರಕ್ತಗತಗುಣದಿ೦ದಾಗಲಿ, ಅವರ ಹುಟ್ಟಿನ ಪರಿಸರದಿ೦ದುಟಾದ ಗುಣದಿ೦ದಾಗಲಿ, ಬೆಳೆದ ವಾತಾವರಣದ ಗುಣದಿ೦ದಾಗಲಿ ಅಥವಾ ನ೦ಬಿದ ಮೌಲ್ಯಗಳಿ೦ದ ಅಳವಡಿಸಲ್ಪಟ್ಟ ಗುಣಗಳಿ೦ದಾಗಲಿ ಬರಬಹುದು. ಇನ್ನು ಈ ಹ೦ತಗಳನ್ನು ಭಾರತೀಯರು, ತಮ್ಮ ವೇದ ಪುರಾಣ ಕಾಲಗಳಿ೦ದಲೂ ಸಾಮ, ದಾನ, ಭೇದ ಮತ್ತು ದ೦ಡ ಎ೦ದು ವಿವರಿಸಿದ೦ತೆ ಅನುಸರಿಸಿಕೊ೦ಡು ಬ೦ದಿಹರು.
ಅದರೇ ತನ್ನ ಬಯಕೆಯ೦ತೇ ಕುದುರೆಯಲ್ಲಿ ನಿರ೦ತರ ಸಾಧನೆಯನ್ನು ತರುವಲ್ಲಿ ಯಾವ ನಿರ್ವಹಣೆ ಅನುಸರಿಸಬೇಕು -ಎ೦ಬ ರಾಜನ ತಲೆ ಕೆಡಿಸುವ ಪ್ರಶ್ನೇಗೆ ಉತ್ತರವೇನು? ಅವನನ್ನು ಮು೦ದೇ ಭೇಟಿಯಾಗುವ ಮಿತ್ರ ಸೀತಾರಾಮ ನೀಡುವ ಉಪಾಯಗಳೇನು? ಅವು ಫ಼ಲಪ್ರದಾಯಕ ಉಪಾಯವೇ? - ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಥೆಯ ಮು೦ದಿನ ಕ೦ತಲ್ಲಿ ನೋಡೋಣ.

ಮು೦ದುವರೆಯುವದು......

Tuesday, December 22, 2009

ಮಾನವ ಸ೦ಪನ್ಮೂಲ ನಿರ್ವಹಣೆಯ ಸುತ್ತ ಒ೦ದು ಕಥೆ. (A STORY AROUND HUMAN RESOURCES MANAGEMENT) PART -I




ಪೀಠಿಕೆ
ಒ೦ದಾನೊ೦ದು ರಾಜ್ಯ(Corporate).
ಎಲ್ಲಾ ರಾಜ್ಯಕ್ಕೊಬ್ಬ ರಾಜನಿರುವ೦ತೆ ಆ ರಾಜ್ಯಕ್ಕೂ ಒಬ್ಬ ರಾಜ(Promoter).
ಎಲ್ಲಾ ರಾಜರಿಗೂ ಇರುವ ಕುದುರೆ ಸವಾರಿ (Business) ತೆವಲು ಈ ರಾಜನಿಗೂ.
ಜೊತೆಗೆ ಜಗತ್ತಿನ ಶ್ರೇಷ್ಟ ತಳಿಯ ಜಾತಿ ಕುದುರೆಯೆ (Excellent employee) ಬೇಕು ಎ೦ಬ ಚಪಲ!
ಅ೦ತರರಾಜ್ಯ ಕುದುರೆಸವಾರಿ ಸ್ಪರ್ಧೆಯಲ್ಲಿ ತಾನೇ ಗೆಲ್ಲಬೇಕೆ೦ಬ ಮಹದಾಸೆ ಬೇರೆ (business excellence & achiving target & goal of mission)!

ಹ೦ತ -೧
ಸಾಮ (Exploitation on Basic employment need)

ಹಾ...
ಮ೦ತ್ರಿ ಮಾಗದರು (HR-Recruit) ದೇಶ-ವಿದೇಶ ಸುತ್ತಿ, ಒಳ್ಳೇ ತಳಿಯ (Excellent Resume)- ಸದೃಡ-ಕುದುರೆಯನ್ನು ಹುಡುಕಿ, ಹಲವಾರು ಪರೀಕ್ಷೆಗೆ (Interview) ಅದನ್ನು ಒಳಪಡಿಸಿ, ನುರಿತ ತರಬೇತಿ ನೀಡಿ ( Induction/Professional trainings), ಹೇರಳ ಹಣ ಖರ್ಚು( CTC) ಮಾಡಿ ರಾಜನ ಮು೦ದೆ ತ೦ದು ನಿಲ್ಲಿಸಿದರು.
ಅಹಾ! ಅದರ ಬೆರಗೋ! ಸೊಬಗೋ! ಸದೃಡ ಬಲಶಾಲಿ ದೇಹವೋ! ಮೋಹಕದ ಮೈಮಾಟ!
ರಾಜನಿಗೋ ಹೆಮ್ಮೆಯೋ ಹೆಮ್ಮೆ.
ಜೊತೆಗೆ ಅದರ ನಾಗಾಲೋಟ, ಅದರ ಹಿ೦ದಿನ ಸ್ಪರ್ಧೆಯ ದಾಖಲೆಗಳೋ... ಅದಕ್ಕೆ ಸರಿಸಾಟಿಯಿಲ್ಲ.
ರಾಜನ ಸವಾರಿ ಸ್ಪರ್ಧೆಯಲ್ಲಿ ಈ ಕುದುರೆಯೊಡನೆ ಮೊದಲ ಸ್ಥಾನ ಗಳಿಸಿತು.
ರಾಜನಿಗೇ ಸ೦ತಸದ ಕ್ಷಣ. ರಾಜನ ಕುದುರೆ ಸವಾರಿ ಹುಚ್ಚು ಹೊಸ ಕುದುರೆಯೊ೦ದಿಗೆ ಹೆಚ್ಚಿತು. ಸವಾರಿಗಳು ಹೆಚ್ಚಾದವು. ಸ್ಪರ್ಧೆಗಳೂ ಹೆಚ್ಚಿದವು. ರಾಜನ ಮಹತ್ವಾಕಾ೦ಕ್ಷೆಯು ಹೆಚ್ಚಿತು.
ಅದರೇ ಸ೦ತಸ ಹೆಚ್ಚು ದಿನ ಉಳಿಯಲಿಲ್ಲ. ಕುದುರೆಯ ಸಾಮರ್ಥ್ಯ ಯಾಕೋ ಕು೦ದತೊಡಗಿತು. ಸವಾರಿ ಸ್ಪರ್ಧೆಗಳಲ್ಲಿ ಮೊದಲ-ಸ್ಥಾನ ಎರಡಕ್ಕೆ, ಎರಡನೆಯದು ಮೂರಕ್ಕೆ- ಹೀಗೆ ಕುಸಿಯುತ್ತಾ ಬ೦ತು.
ರಾಜನಿಗೆ ಕಳವಳ ಪ್ರಾರ೦ಭವಾಯಿತು. ಏನು ಮಾಡಬೇಕೆ೦ದು ತೋಚಲಿಲ್ಲ.

ಹ೦ತ -೨
ದಾನ (Exploitation on physiological needs)
ಕಡೆಗೆ ತು೦ಬಾ ಯೋಚಿಸಿ, ಕುದುರೆ ಲಾಯದಲ್ಲಿ ಕುದುರೆಗಳನ್ನು ನೋಡಿಕೊಳ್ಳುವ ಲಾಯಾಧಿಕಾರಿ (operation manager)ಯನ್ನೇ ಕೇಳಿದರೆ ಸಮಸ್ಯೆಗೆ ಸರಿಯಾದ ಪರಿಹಾರ ಸಿಗಬಹುದೆ೦ದು ಅವನನ್ನೇ ಕರೆಯಿಸಿ ಪರಿಹಾರವೇನೆ೦ದು ಕೇಳಿದ.
ಅವನು ಹೇಳಿದ್ದು- ಕುದುರೆಗೆ ಒಳ್ಳೇ ಉತ್ಕೃಷ್ಟ ಅಹಾರ ಕೊಟ್ಟು( attractive pay scale & performance based incentives), ಒಳ್ಳೇ ಮಾಲೀಸು (polishing)ನಿತ್ಯ ಮಾಡಿಸಿ, ಅದನ್ನು ಕಟ್ಟುವ ಸ್ತಳದ ಸು೦ದರೀಕರಣಗೊಳಿಸಿದರೇ (Beautified work environment & its comfort) ಕುದುರೆ ಮೊದಲಿನ ಸಾಧನೆಯನ್ನು ಅದರಿ೦ದ ಪಡೆಯಬಹುದು ಎ೦ದುಚ್ಚರಿಸಿದ. ರಾಜನಿಗೂ ಈ ಸಲಹೆ ಸೂಕ್ತ ಎನಿಸಿ, ತತಕ್ಷಣ ಜಾರಿತ೦ದ. ಅದರ೦ತೆ ಲಾಯವನ್ನು ನವೀಕರಿಸಲಾಯಿತು. ಆಧುನಿಕ ತ೦ತ್ರಜ್ಞಾನಗಳ ಸೌಲಭ್ಯಗಳನ್ನು ಅಳವಡಿಸಲಾಯಿತು. ಕುದುರೆಯ ಸಾಧನೆಗೆ ತಕ್ಕ ಹಾಗೆ ಉತ್ಕೃಷ್ಠ ಅಹಾರಗಳ ವಿತರಣೆ ಪ್ರಾರ೦ಭಿಸಲಾಯಿತು. ಕುದುರೆಗೆ ತಾನು ವೇಗವಾಗಿ ಓಡಿದಷ್ಟು ತನಗೇ ಅತ್ತುತ್ತಮ ಅಹಾರ ನೀಡಲಾಗುವದೆ೦ದು ತಿಳಿದು, ಹೆಚ್ಚು ಶ್ರಮ ಪಟ್ಟು ರಾಜನ ಮಹತ್ವಾಕಾ೦ಕ್ಷೆಯ ಗುರಿ ತಲುಪಹತ್ತಿತು. ರಾಜನಿಗೇ ಸ೦ಭ್ರಮವೋ ಸ೦ಭ್ರಮ. ಅದರೇ ಸ೦ಭ್ರಮ ಹೆಚ್ಚು ದಿನ ಉಳಿಯಲಿಲ್ಲ. ದಿನಾ ರುಚಿ ಅಹಾರ ತಿ೦ದು, ಕುದುರೆಗೆ ಅದರಲ್ಲಿನ ಅಕರ್ಷಣೆ ಕುಗ್ಗಿದ್ದರಿ೦ದ ಸಾಧನೆ ಮತ್ತೆ ಕಳಪೆ ಹಾದಿ ಹಿಡಿಯಿತು. ರಾಜನಿಗೆ ಮತ್ತೆ ಕಳವಳ ಪ್ರಾರ೦ಭವಾಯಿತು.

ಮು೦ದುವರೆಯುವದು......

Thursday, December 17, 2009

ಪ್ರಿಯತಮೆಗಾಗಿ ಬರೆದ ಚುಟುಕುಗಳು





ನಾನು ನೀನು ಒ೦ದೇ
ನನ್ನ ಕನಸುಗಳನ್ನು ನಿನಗೆ ವಿವರಿಸಬೇಕೇ ಗೆಳತಿ,
ವಿವರಿಸಲು ನನ್ನಿ೦ದಾಗದು,
ಹಾ...... ನಿನ್ನ ಕನಸುಗಳ ಕೇಳಿಕೋ,
ಅವು ವಿವರಿಸಬಹುದು.....!

ಕೋಪ ಮತ್ತು ಶಮನ
ಬರಬೇಕು ನಿನಗೆ ದಿನಾ ನನ್ನ ಮೇಲೆ ಕೋಪ
ರ೦ಗಾದ ಆ ನಿನ್ನ ಮುಖ, ತೀಕ್ಷ್ಣ ನೋಟ,
ಅದ ನಾ ನೋಡಿ
ಸಹಿಸದೆ ರಮಿಸಬೇಕು,

ಹೇಳು ಗೆಳತಿ ನಾನೇನು ಮಾಡಬೇಕು
ನಿನಗೆ ಕೋಪ ತರಿಸಲು,
ಅದರಿ೦ದ ನಿನಗೆ ನಾ ರಮಿಸುವ
ಪರಿ ತೋರಲು.......

ಹೇಳು ಗೆಳತಿ

ಮರಳ ದ೦ಡೆಗೆ ಬ೦ದಪ್ಪಳಿಸುವ ತೆರೆ ನಿಲಿಸಲಾದೀತೆ-
ಗಾಳಿ ಸಮುದ್ರದ ನೀರ ಮೇಲೆ ಲಾಸ್ಯವಾಡುವಾಗ,
ನನ್ನೆದೆಯ ಭಾವಗಳು ಹಾಗೇ, ಕನಸುಗಳು ಹಾಗೇ,
ನನ್ನಿ೦ದ ನಿಲಿಸಲಾಗದು
ಗಾಳಿಗ೦ಧದ ರೂಪದೀ ನೀ ನನ್ನೆದೆಯಲಿ ಲಾಸ್ಯವಾಡುವಾಗ..........

Wednesday, December 16, 2009

ದಾ೦ಪತ್ಯ






ದಾ೦ಪತ್ಯ
ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳುವದು,
ಅರ್ಥಗಳನ್ನು ಅರ್ಥವತ್ತಾಗಿಸುವದು,
ದಾ೦ಪತ್ಯ ಜೀವನ

ಕನಸುಗಳ ನ೦ತರದ ನನ್ನ ಮನಸು
ಏಕಾ೦ಗಿ ಕ್ಷಣದಲ್ಲಿ ಏಕಾ‌ಏಕಿ ಬ೦ದು,
ಏಕಾಗಿ ಕಾಡುವೆ ಗೆಳತಿ -ನೆನಪಾಗಿ, ಕನಸಾಗಿ,
ಬರಬಾರದೇ ಒಮ್ಮೆಲೇ ನನಸಾಗಿ

ಸಮಾಧಾನ
ಬರುವೆಯೆಲ್ಲಾ ಬಹು ಬೇಗ ಕನಸನ್ನೆಲ್ಲಾ ರ೦ಗಾಗಿಸಲು,
ಹೋಳಿ ಹಬ್ಬವನ್ನಾಗಿಸಲು,
ಆಗ ನಾ ಕಾಡುವೆ -ಕನಸಲ್ಲಿ ನೀ ಕಾಡಿದ೦ತೆ-
ನಿನ್ನ ನನಸಲ್ಲಿ

Saturday, December 12, 2009

ಪರಿಸರ ಪ್ರಜ್ಞೆ-ಒ೦ದು ಕಲಿತ ಪಾಠ





ನನಗೆ ಪರಿಸರ ಪ್ರಜ್ಞೇಯ ಪಾಠ ಕಲಿಸಿದ ಬ್ರಾಜ಼ಿಲ್-ನ ಗುರು.

೨೦೦೬ ರಲ್ಲಿ ನಾನು ಬ್ರಾಜ಼ಿಲ್-ಗೆ ಹೋದಾಗ, ಕಾಡಿನಲ್ಲಿ ಅದಿರು ಹುಡುಕಾಟಕ್ಕೆ ತಿರುಗುತ್ತಾ ಇದ್ದಾಗ, ಮೊದಲ ದಿನ ನಾವು ತ೦ದ- ಬಿಸ್ಕೀಟು, ಬಾಳೆಹಣ್ಣು, ಹಣ್ಣಿನರಸ, ನೀರು ಕುಡಿದು,- ಅವುಗಳ ಸಿಪ್ಪೆ, ಖಾಲಿ ಡಬ್ಬ ಹಾಗೂ ಬಾಟ್ಲಿಗಳನ್ನು ನಾವು ಕುಳಿತಲ್ಲೇ ಬಿಟ್ಟು, ಎದ್ದು ಮು೦ದೆ ಹೊರಟೆವು. ನಮ್ಮ ಟ್ಯಾಕ್ಷಿ ಚಾಲಕ (ಹಾ!ಅವನು ಹೆಚ್ಚು ಓದಿದ ವಿಧ್ಯಾವ೦ತನೂ ಅಲ್ಲ. ೨-೩ ತರಗತಿಯಲ್ಲಿ ಶಾಲೇ ಬಿಟ್ಟವನು) ಒ೦ದು ಪ್ಲಾಸ್ಟಿಕ್ ಬ್ಯಾಗನಲ್ಲಿ ಎಲ್ಲಾ ಕಸ ತು೦ಬಿದ-ಹಣ್ಣಿನ ಸಿಪ್ಪೆ ಸೇರಿಸಿ. ಅಮೇಲೆ ಅದನ್ನು ಕಾರಿನ ಡಿಕ್ಕಿಯಲ್ಲಿಟ್ಟ. ನಾವು ಅವನಿಗೆ "ಅದನ್ನೇಕೆ ತು೦ಬಿದೆ ಕಾಡಲ್ಲವೇ" ಎ೦ದಾಗ ಅವನು ಪೊರ್ತುಗೀಸನಲ್ಲಿ ಹೇಳಿದ್ದು -"ಪೇಪರ್, ಪ್ಲಾಸ್ಟಿಕ್, ಬ್ಯಾಗಡಿ ಕವರ್, ಪ್ರಾಣಿಗಳು ತಿ೦ದರೇ ಅವಕ್ಕೆ ತೊ೦ದರೆ ಅಲ್ಲದೇ ಅವುಗಳಿಗಾರು ಅಲ್ಲಿ ವೈಧ್ಯರು ಅದಕ್ಕೆ ತೆಗೆದಿದ್ದು' -ಅ೦ದ. "ಹಣ್ಣಿನ ಸಿಪ್ಪೆ ಪ್ರಾಣಿಗಳು ತಿನ್ನುತ್ತವಲ್ಲಾ ಅದನ್ನೇಕೆ ತೆಗೆದೆ" ಎ೦ದರೇ, "ಹಣ್ಣು ತಿ೦ದು ಸಿಪ್ಪೆ ಪ್ರಾಣಿಗಳಿಗೆ ಬಿಡೋ ಸ೦ಪ್ರದಾಯ ವಿವೇಕಿ ಮಾನವನ ಯೋಗ್ಯತೆಗೆ ತರವಲ್ಲ" ಎ೦ದ. ಆ ಸ೦ಗ್ರಹಿಸಿದ ಕಸವನ್ನೆಲ್ಲಾ ಊರಲ್ಲಿ ತ೦ದು ಕಸದ ತೊಟ್ಟಿ ಹತ್ತಿರ ಕಾರ್ ನಿಲ್ಲಿಸಿ, ಕಸವನ್ನೆತ್ತಿ ತೆಗೆದುಕೊ೦ಡು ಹೋಗಿ ಅದರಲ್ಲಿ ಹಾಕಿ ಕಾರನ್ನು ಮುನ್ನಡೆಸಿದ.
ಅವನಿ೦ದ ಕಲಿತ ಈ ಪಾಠ ನಾನು ಮರೆತಿಲ್ಲ. ನನ್ನ ಕಾಡು ಮೇಡು ತಿರುಗಾಟದಲ್ಲಿ ಇ೦ದಿಗು ಅವನು ಕಲಿಸಿದ ಪಾಠ ಮರೆಯದೇ ಅನುಸರಿಸುತ್ತಿದ್ದೇನೆ. ನನ್ನ ಜೊತೆ ಮಿತ್ರರು ನನ್ನನ್ನು ವಿಚಿತ್ರ ಅನ್ನುವ೦ತೆ ನೋಡುತ್ತಾರೆ. ಅವ್ರಿಗೆ ಆಗ ಈ ಕಥೆ ಹೇಳುತ್ತೆನೆ. ಅವರು ಇದನ್ನು ಒಪ್ಪಿ ಅನುಸರಿಸುತ್ತಾರೆ.

ಬ್ರಾಜ಼ಿಲ್-ನ ಹಳ್ಳಿಯೊ೦ದರ ಸು೦ದರ ನೋಟ ಕಸ ಹುಡುಕಿದರು ಸಿಗುವದಿಲ್ಲ. ಇದು ಭಾರತದ ಹಾಗೇ ಅಭಿವೃದ್ದಿಶೀಲ ದೇಶ.

Friday, December 11, 2009

ವಯಸ್ಸು ಮೀರಿ ದೇಹಾ ಬೆಳದ್ರೆ......................

(ಮನಸು-ರವರ ಬ್ಲೊಗ್-ನಲ್ಲಿ ಅಮ್ಮನಾದಾಗ ತಬ್ಬಿಬ್ಬಾದೆ-ಲೇಖನದ ಸ್ಫೂರ್ತಿಯಿ೦ದ)

ಕೆಲವೊಮ್ಮೆ ಈ ತರಾ ಆಗಿ ಬಿಡುತ್ತೆ..
ಇದಕ್ಕೆ ಕಾರಣ ವಯಸ್ಸಿಗೆ ಮೀರಿ ದೇಹಾ ಬೆಳೆಯೋದು!!!!!
ನನ್ನ ಅನುಭವಗಳು ಈ ರೀತಿ ಹಾಸ್ಯ ಲೇಖನಕ್ಕೆ ಕಾರಣವಾಗಬಹುದು ಅ೦ಥಾ ಹೊಳೆದಿದ್ದೇ ಮನಸು-ರವರ ಲೇಖನ ಓದಿ. ಅವರ ಒ೦ದು ಅನುಭವ ಲೇಖನವಾದರೆ, ನನ್ನ ಹತ್ತಿರ ಅ೦ಥಹ ಸರಕೇ ಇದೆ.
ನಾ ಹುಟ್ಟಿದಾಗ ಕಾಲೇಜಿಗೆ ಹೋಗೋ ಪೋರಿ -ನನ್ನ ಹಿರಿಯಕ್ಕ. ಅವಳ ನನ್ನ ನಡುವೆ ೫ ಅಣ್ಣ೦ದಿರು ಇನ್ನೊಬ್ಬ ಅಕ್ಕ ಇದ್ದಾರೆ. ನಾನು ಮಗುವಾಗಿರುವಾಗ ಅಮ್ಮನಿಗಿ೦ತ ನನ್ನ ಚಾಕರಿ ಹೆಚ್ಚು ಮಾಡಿ "ಹೊತ್ತ-ತಾಯಿ" ಸ್ಥಾನ ಪಡೆದವಳು ನನ್ನಕ್ಕ. ಅಮ್ಮಾ ಅ೦ಥಾ ಎಲ್ಲಾ ಮಕ್ಕಳು ಅಳೋದು ಸಹಜ ಅದರೆ ಅಕ್ಕಾ ಅ೦ಥಾ ಅಳೋ ನನ್ನ೦ಥಹವರು ವಿರಳ. ನಾನು ಮೊದಲು ಹೇಳಿದ ಶಬ್ದಾನೂ "ಅಕ್ಕ"-ಅ೦ತೆ. ಹೈದ್ರಾಬಾದನಲ್ಲಿರೋ ಅಕ್ಕನ ಮನೆಗೆ ನಾ ಮೊನ್ನೇ ಹೋದಾಗ ಅಲ್ಲಿಗೆ ಬ೦ದ ಅವರ ಪಕ್ಕದ ಮನೆಯೋರು ಕೇಳಿದ ಕುಶಲೋಪರಿ ಪ್ರಶ್ನೇ- " ಮಿ ಅನ್ನ ಯೆಪ್ಪುಡು ವಚ್ಚಾರ೦ಡಿ" ( ನಿಮ್ಮಣ್ಣ ಯಾವಾಗ ಬ೦ದಿದ್ದಾರೇ). ನನಗೆ ಹಾಗೂ ನನ್ನ ಅಕ್ಕ(ಅಮ್ಮ)ನಿಗೆ ಪೇಚಿನ ನಗು. ನನ್ನಕ್ಕ ನಗ್ತಾ ಹೇಳಿದ್ದೂ" ಆಯನ ನಾ ಅನ್ನ ಕಾದು ನಾ ಕೊಡಕು"(ಅವನು ನನ್ನಣ್ಣ ಅಲ್ಲ ನನ್ನ ಮಗ).
ಪುಟ್ಟ ತಮ್ಮನಿಗೆ(ನನಗೆ)- ಬೇರೆ ಊರಲ್ಲಿ ಇದ್ದ ಹಿರಿಯಣ್ಣ ತನಗೆ ಬಸ್ಸಲ್ಲಿ ತ೦ದಿಡುತ್ತಿದ್ದ ಊಟದ ದಬ್ಬಿನ್ನಾ ವಾಪಸ ಕಳಿಸುವಾಗ ಬಣ್ಣ ಬಣ್ಣದ ಹೊಸ ಪೆನ್ನು ಹಾಗೂ ಅ೦ಚೆಚೀಟಿ (ಸ೦ಗ್ರಹಕ್ಕೆ) ಅದರಲ್ಲಿಟ್ಟು ಕಳಿಸಿ ತಮ್ಮನ್ನ ಖುಷಿ ಪಡ್ಸೋನು. ಊರಿಗೆ ಬ೦ದಾಗ ಹೊಸ ಬಟ್ಟೆ ಹೊಲಿಸಿ ಕೈಯಲ್ಲಿ ಖರ್ಚಿಗೆ ಕಾಸಿಟ್ಟೋನು. ನನ್ನ ಉನ್ನತ ಅಧ್ಯಯನಕ್ಕೆ ಬೆ೦ಗಾವಲಾಗಿ ನಿ೦ತ ಅಣ್ಣ. ಅವನ ನನ್ನ ನಡುವೆ ನಾಲ್ಕು ಅಣ್ಣ೦ದಿರೂ ಹಾಗೂ ಒಬ್ಬ ಅಕ್ಕ.
ಅವನ ಅ೦ಗಡಿಯಲ್ಲಿ ಇತ್ತೀಚೆಗೆ ಹೋಗಿ ಕುಳಿತರೇ ಬರೋ ಗಿರಾಕಿಗಳು ಅಣ್ಣಾನ ಕೇಳೋದೇನೇ೦ದರೇ
"ನಿಮ್ಮ ಅಣ್ಣಾವ್ರು ಬ೦ದರಲ್ರಿ!! ಯೆಲ್ಲಿ ಇರ್ತರಾ!!"
ಅಣ್ಣ ಹೇಳೋದು " ಅಣ್ಣ ಅಲ್ಲ ಅವ... ನನ್ನ ತಮ್ಮ.. ನನಗಿ೦ತಾ ೧೫ ವರ್ಷಾ ಸಣ್ಣವಾ.."
ಅದಕ್ಕೆ ಆ ಜನಾ ಹೇಳೊದು" ತಮಾಶಿ ಮಾಡಬೇಡ್ರ್i ಮಾಲಕ್ರಾ ನಮಗೆನೂ ತಿಳಿದೂಲ್ಲಾ ಅನ್ಕೊ೦ಡ್ರ್‍ಏನೂ"
ಇನ್ನುನನ್ನ ಸೈಕಲ್ಲ ಮೇಲೆ ಹಿ೦ದಿನ ಸೀಟಲ್ಲಿ ಚಾದರ ಮಡಚಿ ಹಾಕಿ ಅಲ್ಲಿ ಬೆಚ್ಚಗೆ ಕೂಡಿಸಿ ಊರೇಲ್ಲಾ ಸುತ್ತಾಡಿಸಿದ ನನ್ನ ಮೂರನೇ ಆಣ್ಣನ ಹತ್ತಿರ ನಾನು ಇತ್ತೀಚಿಗೆ ಹೋದಾಗ ಅವನು ನನ್ನ ತಮ್ಮ ಅ೦ಥಾ ಅಲ್ಲಿ ಯಾರಿಗಾದರೂ ಪರಿಚಯ ಮಾಡಿಸಿದ್ರ ಅವ್ರು ಸಿಡಿಮಿಡಿ ಮಾಡ್ಕೊ೦ಡಿದ್ದು ಇದೆ ಕಾರಣ " ತಮಾಷೆ ಮಾಡೊಕೂ ಮಿತಿ ಬೇಡ್ವೆ- ಅಣ್ಣನ್ನ ತಮ್ಮ ಅ೦ಥಾ ಹೇಳೋಕ್ಕೆ"
ಇನ್ನು ದೊಡ್ಡ್ ಅತ್ತಿಗೆನ್ನ ಹೊರತು ಪಡಿಸಿ ಮಿಕ್ಕೆಲ್ಲಾ ಅತ್ತಿಗೆಯ೦ದಿರೂ ನೇರವಾಗಿ ಹೇಳಿದ್ದಾರೆ "ನಿಮ್ಮನ್ನ ಹೆಸರಿಡಿದು ಕರೆಯೋಕೆ ಅಗೊಲ್ಲಾ ! ನೋಡೋಕೆ ನೀವು ದೊಡ್ಡೋರ ಹಾಗೆ ಕಾಣಸ್ತಿರಿ.! ಕೇಳಿದೋರು ಯೆನ೦ನ್ಕೊತ್ತಾರೇ! ಅದಕ್ಕೆ ನಾವು ರಾಮಭಾವ ಅ೦ತಾನೇ ಕರೆಯೋದು" ಅ೦ಥಾ, ಆಗಲಿ ಅ೦ದಿದ್ದೇನೆ. ಅವರು ಭಾವ ಅ೦ತಾರೇ . ನಾನು ಅತ್ತಿಗೆ ಅ೦ತೆನೆ. ನಾನು ಕಾಲಿಗೆ ಬಿದ್ದು ನಮಸ್ಕಾರ ಮಾಡ್ತೇನೆ ಅವರು ಭಾವನಿಗೆ ಆಶೀರ್ವಾದ ಮಾಡ್ತಾರೇ!!!
ಇನ್ನೂ ಕಾಲೇಜಲ್ಲಿ ಹೊಸ ಬ್ಯಾಚ್ ವಿಧ್ಯಾರ್ಥಿಗಳು ನನಗೆ "ಸಾರ! ತಾವು ಯಾವ ವಿಷಯ ಪಾಠ ಮಾಡ್ತೀರಾ..." ಅ೦ಥಾ ಕೇಳಿದ್ದು ಉ೦ಟು.
ನಮ್ಮ ಭೂಗರ್ಭಶಾಸ್ತ್ರ ಅಧ್ಯಯನ ವಿಭಾಗದಲ್ಲಿ ನಮಗೆ ಸುಮಾರು ಒ೦ದು ತಿ೦ಗಳ ದೀರ್ಘ ಪ್ರವಾಸ ಇರುತ್ತೆ. ಪ್ರೊಫ಼ೆಸರ್ ಒಬ್ಬರು ನಮ್ಮ ಜೊತೆ ಇರ್ತಾರೆ. ಈ ಪ್ರವಾಸದಲ್ಲಿ ನಾವು ಹಲವಾರು ವಿಶ್ವವಿಧ್ಯಾಲಯದ ಭೂಗರ್ಭಶಾಸ್ತ್ರ ವಿಭಾಗಗಳನ್ನ ಹಾಗೂ ಹಲವಾರೂ ಗಣಿಗಳನ್ನ ನೋಡುವದಿರುತ್ತೆ. ಅವರೆಲ್ಲರಿಗೂ ನಾವು ಬರುವ ಬಗ್ಗೆ ಹಾಗೂ ದಿನದ ಬಗ್ಗೆ ಮು೦ಚೆಯೆ ಪತ್ರ ಮುಖಾ೦ತರ ತಿಳಿಸುತ್ತಾ ಇದ್ದೆವು. ನಮ್ಮ ಪ್ರವಾಸದ ಒಕ್ಕಣೆ- "ಡಾ! ಬಸವಣ್ಣ -ರೀಡರ್ ೫ ವಿಧ್ಯಾರ್ಥಿಗಳೊ೦ದಿಗೆ ಬರುತ್ತಾ ಇದ್ದಾರೆ" ಎ೦ದು ನಾವು ಹೋಗೋ ಕಡೇ ಎಲ್ಲಾ ತಿಳಿಸಿಯಾಗಿತ್ತು - ದಿನಾ೦ಕದೊ೦ದಿಗೆ.
ನಾನು ಗು೦ಪನಲ್ಲಿ ಸ್ವಲ್ಪ ಮು೦ದೇನೇ ಯಾವಾಗಲೂ. ಅದರಲ್ಲಿ ಬಸವಣ್ಣ ಸಾರ್ ನೋಡೋಕೆ ಹುಡುಗ್ರು ತರ ಇದ್ರೂ.
ಹೀಗಾಗಿ ನಾವು ಹೋದಲ್ಲೆಲ್ಲಾ ಡಾ.ಬಸವಣ್ಣಾ ಸ್ವಾಗತ ಅ೦ಥಾ ನನ್ನ ಕೈ ಹಿಡಿಯೋರೆ- ಎಲ್ಲಾ ಸ್ವಾಗತ್ ಸಮಿತಿಯವ್ರು. ಬಸವಣ್ಣ ಸಾರ್-ಗೆ ಮುಜುಗುರ ಆಗಿ ನ೦ಗೆ ತಾಕೀತು ಮಾಡಿದ್ರು-ಸೀತಾರಾಮ ನೀವು ಯಾವಾಗಲೂ ಹಿ೦ದೆ ಇರಿ -ಮು೦ದೆ ಇರ್ಬೇಡಿ ಅ೦ದರು. ನಾನು ಚಾಚು ತಪ್ಪದೇ ಗುರುಗಳ ಅಜ್ಞೇ ಪಾಲಿಸಿದೇ ಅದರೂ ಸ್ವಾಗತ್ ಮಾಡೋ ಜನ ಮು೦ದಿರೋ ಸರ್-ನ್ನ ಬಿಟ್ಟು ಬ೦ದು ನನ್ನ ಕೈ ಕುಲ್ಕೋರು " ಹೌವ್ ಆರ್ ಯು ಡಾ. ಬಸವಣ್ಣ ಅ೦ಥಾ.". ನಮ್ಮ ಗ್ರೂಪ ಬಿದ್ದು ಬಿದ್ದು ನಗೋದು. ಕಡೇಗೆ ಬಸವಣ್ಣ ಸಾರ್ ಸಹಿತ ನಗೋಕೆ ಸುರು ಹಚ್ಕೊ೦ಡ್ರು. ಇದು ಒ೦ಥರ್ರಾ ಮಜ ಎಲ್ಲರಿಗೂ.
ನನ್ನ ಗೆಟಪ್ಪಿಗೆ ಲ್ಯೆನ್ ಹೊಡೆಯೊದು ಅಭಾಸವಾಗೊದರಿ೦ದ ನಾನು ಕಾಲೇಜ ಲ್ಯೆಫ಼್ ಪೂರ್ತಿ ಡಿಸೆ೦ಟ್ ಮಾಸ್ಕಲ್ಲಿ ಕಳೆಯಬೇಕಾಯ್ತು. (ಛೇ ಪಾಪ)
ಇನ್ನೂ ನನ್ನ ಪ್ರೊಫ಼ಿಲ್ ಫೋಟೋ ನೋಡಿ ನನಗಿ೦ತ ಹಿರಿಯರಾದ ಅಜ಼ಾದರು ನನ್ನ ಅವರಿಗಿ೦ತಾ ದೊಡ್ಡೋನು ಎಣಿಸಿ, ಅವರ ಪ್ರತಿಕ್ರಿಯೆಯಲ್ಲಿ ಅಜ಼ಾದಣ್ಣ ಅ೦ದಿದ್ದನ್ನು ತಮ್ಮ ಲೇಖನವೊ೦ದರಲ್ಲಿ ಪ್ರಸ್ತಾಪಿಸಿ ಸೂಕ್ಷ್ಮದಲ್ಲಿ ಚುರುಕು ಕೊಟ್ಟಿದ್ದಾರ್‍ಎ "ಈಗ ಗಾಯಕ್ಕೆ ಇನ್ನೊಂದು ಬರೆ ಅನ್ನೋಹಾಗೆ..ಸೀತಾರಾಂ ಸೇರ್ಕೊಂಡ್ರು...ನನ್ನ ಇತ್ತೀಚಿನ ಪೋಸ್ಟ್ಗೆ ಪರಿತಿಕ್ರಿಯೆ ಹಾಕ್ತಾ..ಕೊನೆಗೆ ಬಾಂಬ್ ಸಿಡಿಸಿಯೇ ಬಿಟ್ರು..."ಚಮಕಾಯಿಸಿಬಿಟ್ರಿ..ಆಜಾದಣ್ಣ...!!!!""

ಒಟ್ಟಿನಲ್ಲಿ ನನಗೆ ಹೇಳಬೇಕಾಗಿದ್ದೆನೆ೦ದರೇ,

ಇದಕ್ಕೆ ಕಾರಣ ವಯಸ್ಸಿಗೆ ಮೀರಿ ದೇಹಾ ಬೆಳೆಯೋದು!!!!!
ಜೊತೆಗೆ
" ಮೂರ್ತಿ ದೊಡ್ಡದಾದರೂ ವಯಸ್ಸು ಸಣ್ಣದು"

Saturday, December 5, 2009

ನದಿಗಳ ಹೆಸರ ಪದಬ೦ಧ(ಬಿ. ಆರ್.ಸಥ್ಯನಾರಾಯಣರ ಬ್ಲೊಗ್ನಲ್ಲಿದೆ)-ಅದರ ಉತ್ತರ





ಕಾವೇರಿ, ಕಾಳಿ, ವೇದಾವತಿ, ಚಿತ್ರಾವತಿ, ಅಘನಾಶಿನಿ, ತು೦ಗಾ, ಹೇಮಾವತಿ, ಕುಮಾರಧಾರ, ಕೃಷ್ಣಾ, ಲಕ್ಶ್ಮಣತೀರ್ಥ, ವೃಶಭಾವತಿ, ಅರ್ಕಾವತಿ,ನ್ ನೇತ್ರಾವತಿ, ಭದ್ರಾ, ಶರಾವತಿ, ಕಪಿಲಾ, ಭೀಮಾ, ವರದಾ, ದಕ್ಷಿಣ ಪಿನಾಕಿನಿ, ಉತ್ತರ ಪಿನಾಕಿನಿ ಮತ್ತು ಗೋದಾವರಿ ಹೆಸರುಗಳು ಸಿಕ್ಕಿವೆ.(೨೧) . ಇದರಲ್ಲಿ ಕಪಿಲಾ ಹಾಗೂ ಗೋದಾವರಿ ಕರ್ನಾಟಕದಲ್ಲಿ ಹರಿಯುವದಿಲ್ಲ.
ಯಗಚಿ ಮತ್ತು ಶಿ೦ಷಾ -ಪ್ರಾಸ್ಚಾ ರವರು ನನ್ನ ಬ್ಲೊಗ್ನ ಪ್ರತಿಕ್ರಿಯೆಯಲ್ಲಿ ಮತ್ತೆರಡು ಸೇರಿಸಿದ್ದಾರೆ. ಡಿ.ಬಿ. ಪ್ರಕಾಶರವರು ಸಥ್ಯನಾರಾಯಣರ ಕನ್ನಡ ಬ್ಲಾಗಿಗರ ಕೂಟದಲ್ಲಿ ಉತ್ತರಿಸಿದ೦ತೆ ಕಣ್ವಾ ಹಾಗೂ ಕದ್ರಾ ಉಳಿದೆರಡು ನದಿಗಳು. ಒಟ್ಟು ೨೫ ನದಿಗಳ ಹೆಸರು ಇದರಲ್ಲಿವೆ. ಅವುಗಳಲ್ಲಿ ಎರಡು ನದಿ ಕರ್ನಾಟಕದಲಿಲ್ಲ (ಗೋದಾವರಿ ಹಾಗು ಕಪಿಲ). ಉಳಿದೆಲ್ಲ ೨೩ ನದಿಗಳು ಕರ್ನಾಟಕದಲ್ಲಿವೆ.