Showing posts with label ಗಣಿಗಾರಿಕೆ ಬರಹಗಳು. Show all posts
Showing posts with label ಗಣಿಗಾರಿಕೆ ಬರಹಗಳು. Show all posts

Wednesday, April 28, 2010

"ಕಗ್ಗತ್ತಲೆಯ ಖಂಡದಲ್ಲಿ ........ (ಭಾಗ ೩ )" ವಜ್ರಗಳ ಜಾಲಾಟ

ಭೂ ಗರ್ಭದಾ ಆಳದಾ ಅಡಿಯಲ್ಲಿ
ವಿಶಿಷ್ಟ ಶಿಲಾಪಾಕ ಕುದಿಯುತ್ತ,
ಮೇಲ್ಬರಲು ತೆವಳುತ್ತಾ ,
ಮೇಲ್ಪದರದ ಗಟ್ಟಿಶಿಲೆಯ ಸೀಳುತ್ತಾ,
ಅದರಲ್ಲೇ ದಾರಿಮಾಡಿ ಸಾಗುತ್ತಾ,
ಹೋರಾಟದಲ್ಲಿ ತನ್ನ ಬಿಸಿ ಕಳೆದುಕೊಳ್ಳುತ್ತಾ,
ಭೂಮೇಲ್ಪದರದಾ ಶಿಲೆಯ ಗರ್ಭದಲ್ಲಿ ತಣ್ಣಗಾಗುತ್ತಾ ,
ಸೃಷ್ಟಿಸಿತ್ತು ಕಿ೦ಬರ್ಲೈಟ ಎ೦ಬ ಅಗ್ನಿಜನ್ಯ ಶಿಲೆಯ!!

ಶಿಲೆಯ ಗರ್ಭದಲ್ಲೇ ಅಡಗಿಹವು ವಜ್ರಗಳು!!
ಸಾಮಾನ್ಯ ಕಣ್ಣಿಗೆ ಕಾಣದಂತೆ !!!

ಸಾವಿರಾರು ವರ್ಷಗಳ ಕಾಲದಲಿ,
ಶಿಲೆಯ ಮೇಲೆ ಹರಿದ ನೀರು ಕಲ್ಲನ್ನು ಕರಗಿಸಿ,
ಅದರಲ್ಲಿರುವ ಕಾಣದ೦ತಿರುವ ವಜ್ರವಾ ಬೇರ್ಪಡಿಸಿ ,
ಸಾಣೆ ಹಿಡಿಸಿ ಹೊಳೆವ ವಜ್ರವನ್ನಾಗಿಸಿ,
ನದಿಯ ಪಾತ್ರದಿ ಹರಿದ ನಿ೦ತಾ ಹೂಳಲ್ಲಿ ಹುದುಗಿಸಿ,
ಹುಡುಕುವಾ ತೆವಲಿಗೆ ಮನುಜನಾ ಹತ್ತಿಸಿದೆ !!!!
ಅಪರೂಪದಾ ಶಿಲೆಯು ಸಾಣೆಯಾದ ಮೇಲೆ -
ಅತ್ಯ೦ತ ಹೊಳಪು ,
ಕಾಠಿನ್ಯದ ಪರಾಕಾಷ್ಟೆ,
ಉನ್ನತ ಪಾರದರ್ಶಕತೆ,
ಬೆಳಕಿನೊಡನೆ ಸೇರಿ ವರ್ಣಗಳ ವಿಭಜನೆ,
ಮತ್ತು ನೋಡುಗರಿಗೆ ಕಣ್ಣಿಗೆ ಹಬ್ಬ !
ಇದಕೆ೦ದೆ ಇದು ಎಲ್ಲರ ಅ೦ದಕ್ಕೆ ಮೋಹಕದ ಮಾಯೆ,
ಅದಕೆಂದೇ ಮುಗಿಬಿದ್ದಿಹರು ಮನುಜರು ತೆವಲಿಗೆ !!!
















ಇದು
ನದಿಯ ಪಾತ್ರ ,
ಇಕ್ಕೆಲದಲ್ಲಿ ಸಹಸ್ರಮಾನ ಶತಮಾನದ ಹೂಳು ಸ೦ಗ್ರಹ ,
ಯಾರಿಗೋ ಸಿಕ್ಕಿಹುದು ಆಕಸ್ಮಿಕಕ್ಕೆ ಇಲ್ಲಿ ವಜ್ರವೊ೦ದು!!





















ಇದ್ದಿರಬಹುದು ಇನ್ನು ಹತ್ತು ಹಲವಾರು !!! ಯಾರಿಗ್ಗೊತ್ತು?
ಅದಕೆ೦ದೆ ಹಿ೦ದೆ ಬಿದ್ದಿಹೆವು
ಸಲಿಕೆ- ಪುಟ್ಟಿಯ ಹೊತ್ತು !!
ಅಗೆದು ಬಗೆದು ಜಾಲಾಡಲು!!!

ವಜ್ರ ಹುಡುಕಿ ಹೊಟ್ಟೆ ಹೊರೆಯಲು!!!




















ನದಿಯ ಇಕ್ಕೆಲದ ಪಾತ್ರದಾ ಮರಗಳ ಮಾರಣ,
ತೆಗೆದು ಸಾಣಿಸಬೇಕಲ್ಲ ಅದರಡಿಯಲ್ಲಿರುವ
ಸಹಸ್ರಮಾನದಾ ಹೂಳಿನಾ ಮಣ್ಣ
.





















ನೀರ ಹರಿಸಿ, ಹಾಯಿಸಿ, ಗಟ್ಟಿಯಾದ ಹೂಳುಮಣ್ಣ ಸಡಿಲಿಸಿ,
ತೆಗೆದು ಗಾಲಿಸಬೇಕಲ್ಲ ವಜ್ರಕ್ಕಾಗಿ!!




















ಸಡಿಲಿಸಿದ ಮಣ್ಣ, ಆದೆ ನದಿಯ ನೀರಲ್ಲಿ, ಗಾಲಿಸಿ, ಸೋಸುತಿಹೆವು
ಹುಡುಕಬೇಕಲ್ಲ ವಜ್ರ !!!!
ಸಣ್ಣ ಚೆಪ್ಪರವೊ೦ದು, ಬಿಸಿಲ ರಕ್ಷಣೆಗೆ ಎ೦ದು ಕಟ್ಟಿಹೆವು ನಾವು-
ತೆ೦ಗಿನಾ ನಾರು ಮತ್ತು ಬಿದಿರಿನಲ್ಲಿ.





















ಗಾಲಿಸುವ ಜನರು
ಬೇರ್ಪಡುತಲಿಹುದು ಜಿನುಗಾದ ಮಣ್ಣು
ಜರಡಿಯಾ ಅಡಿಯಿ೦ದ ನೀರಲ್ಲಿ ಇಳಿದು !
ಶೇಖರಣೆಯಾಗುತಿಹುದು ಹರಳು ಜರಡಿ ಮೇಲೆ !!




















ಇವರಾರಪ್ಪ ನಮ್ಮ ಬದುಕನ್ನು ಚಿತ್ರಿಸುವ ಪರದೇಶಿಗಳು ????




















ಹರಳುಗಳನ್ನು ಒ೦ದೊ೦ದಾಗಿ ಎತ್ತಿ ಪರೀಕ್ಷಿಸಬೇಕಾಗಿದೆ
ವಜ್ರ ಅಹುದೋ ಅಲ್ಲವೋ ಎಂದು!!





















ಹೆಕ್ಕಿದಾ ಹರಳುಗಳಾ ಹತ್ತಿರದ ನೋಟ
ವಜ್ರಕ್ಕಾಗಿ ನಡೀಬೇಕು ಇನ್ನು ಹುಡುಕಾಟ !!





















(ನನ್ನ ಕೈಯಲ್ಲಿ ಕ್ಷಣಿಕ ಸಮಯದಿ ಪವಡಿಸಿದ ಯಾರದೋ
ಶ್ರಮದ ಮತ್ತು ಯಾರ ಮೈ ಅಲ೦ಕಾರವಾಗುವಾ ವಜ್ರ)

ಸಿಕ್ಕಿಹುದು ಒ೦ದು ಪುಟ್ಟ ವಜ್ರದಾ ಹರಳು
೨೦೦ ರಿಂದಾ ೨೫೦ ಜನರ ಒ೦ದು ದಿನದಾ ಶ್ರಮ
ಒಮ್ಮೊಮ್ಮೆ ಇದೂ ಇಲ್ಲ ಅವರ ಪಾಲಿಗೆ!
ಮತ್ತೊಮ್ಮೊಮ್ಮೆ ಹತ್ತು ಹಲವಾರು!!
ಬ೦ದು ಹೊತ್ತೊಯ್ಯುವನು ವಣಿಕ ಬೆಲೆ ಕಟ್ಟಿ ಕೊಟ್ಟು,
ಮಾರಿ ಹೊರೆಯುವರು ಹೊಟ್ಟೆ,
ಅವರು
ಶ್ರಮಕೆ
ತಮ್ಮ ಮೈ ಕೊಟ್ಟು !!

Wednesday, April 21, 2010

"ಕಗ್ಗತ್ತಲೆಯ ಖಂಡದಲ್ಲಿ ........ (ಭಾಗ ೨ )" ಬ೦ಗಾರದ ಹಿ೦ದೆ ಬದುಕು ಅರಸುತ್ತಾ



















ಹಸಿರ ಸೀರೆಯ ಹೊದ್ದ ತಿರೆಯಾ ಒಡಲಲ್ಲಿ ,
ಬಗೆಬಗೆಯ
ಖನಿಜ ನಿಕ್ಷೇಪ .
ಮನುಜನಾ ಆಶೆಗೆ ಬೇಕು ಇವುಗಳೆಲ್ಲಾ !
ಬಗೆದು
ತೆಗೆಯಲು ಇಲ್ಲ ಅವಳಾ ಆಕ್ಷೇಪ !!




















ಉರುಳಿದವು ಮರಗಳು ಧರೆಯೊಡಲಿಗೆ ಒರಗಿ
ಶಸ್ತ್ರಚಿಕಿತ್ಸೆಯ ಮುನ್ನ ಕ್ಷೌರ ಕರ್ಮದ೦ತೆ
ಗಣಿಗಾರಿಕೆಗೆ ತೆರವಾಗಿ !




















ಉರುಳಿ ಒಣಗಿದ ಮರಗಳ ಅ೦ತಿಮದಹನ
ಪ್ರಾರ೦ಭಗೊಳಬೇಕಿದೆ ಗಣಿಗಾರಿಕೆ
ಹೆಕ್ಕಿ ತೆಗೆಯಬೇಕಿದೆ ಖನಿಜ
ಚಲಿಸಬೇಕಿದೆ -ಬಡತನದಿ ನಿಂತ ಬದುಕು.




















೧೦೦ ಅಡಿ ಆಳದ ಸುರ೦ಗ- ತೆಗೆದಾಗಿದೆ,
ನಿಕ್ಷೇಪದ ಎಳೆಯ ಹುಡುಕಿ.
ತರುಣ -ಯುವಕರ ತಂಡ ತೆವಳಿ ತರಬೇಕಿದೆ,
ಬ೦ಗಾರದ ಅದಿರು ಹೆಕ್ಕಿ.



























ಆಳದಲ್ಲಿಹ ಯೆಜಮಾನ ತುಂಬಿ ಕೊಡುತಿಹನು
ಅದಿರು ತು೦ಬಿದ ಮಂಕರಿ
ಎಳೆದು ಗುಡ್ಡೆ ಹೊಯ್ಯುತಿಹೆವು,
ಸ೦ಸ್ಕರಿಸಿ
ಹುಡುಕಬೇಕಿದೆ
ಬದುಕ ಹೊರೆವ ಪರಿ




















ನಾನೇ ಬಾಲೆ!
ನನಗೊಂದು ಕೈಗೂಸು!!
ಬಿಟ್ಟಿರಲಾರೆನು ,
ಹೊತ್ತು ತಂದಿಹೆನು,
ಆಳದಾ ಗಣಿಗೆ, ಹೆಕ್ಕಿ ತೆಗೆಯಲು ಚಿನ್ನ!
ತು೦ಬಿಸಬೇಕಲ್ಲ ಹಸಿದೊಟ್ಟೆಗೆ ಅನ್ನ!!





















ಕೆಲಸದಾ ನಡುವೆ ಒ೦ದಿಷ್ಟು ವಿರಾಮ
ಚಹದೊಂದಿಗೆ ಮಂಥನ !
ತಾಯಂದಿರಿಂದ ಹಸಿದ ಕ೦ದಮ್ಮಗಳಿಗೆ
ಎದೆಹಾಲ ಸಿಂಚನ !




















ಬೇಗ ಬೇಗ ಅಗೆದು ತುಂಬಿಕೊಡಿ
ಹೊರುವವರಿಗಿಲ್ಲ ಕೆಲಸ!!





















ಪುಟ್ಟ ಕ೦ದರು ನಾವು ಪುಟ್ಟ ಮಂಕರಿಯಲ್ಲಿ
ಹೊತ್ತು ಸಾಗಿಸುವೆವು ಅದಿರು
ಸ೦ಸ್ಕರಿಸುವರು ಅದನ್ನು ವೃದ್ಧ ಅಜ್ಜ -ಅಜ್ಜಿಯರು!!





















ಕಲ್ಲಿನಲ್ಲಿದೆ ಕಣ್ಣಿಗೆ ಕಾಣುವ ಬಂಗಾರ
ಇ೦ತಹ ಹಲವು ಸಿಕ್ಕಲ್ಲಿ ಅದು ನಮಗುಪಕಾರ





















ಪುಟ್ಟ ಪೋರರು ಹೊತ್ತು ತ೦ದಿಹರು ಅದಿರು
ನೀರಲ್ಲಿ ಅದನ್ನು ಗಾಲಿಸಿ ಬೇರ್ಪಡಿಸುತಿಹೆವು ಚಿನ್ನ



















ಅದಿರನ್ನು ಗಾಲಿಸಿ ಬಂಗಾರ ಬೇರ್ಪಡಿಸುವ ತೊಟ್ಟಿ
ವಯೋವೃದ್ಧರಿಗೊಂದು ಹಗುರ ಚಾಣಾಕ್ಷ ವೃತ್ತಿ .
























ನಮ್ಮ ಬದುಕನ್ನು ಸೆರೆಹಿಡಿಯುವ ಇವರು ಯಾಕಿಲ್ಲಿ?
ನೋಟದಿ ಕೊಲ್ಲುತಿಹ ಪ್ರಶ್ನೆಗಳು ಇದಕೆ ಉತ್ತರವೆಲ್ಲಿ?



















ಇಡೀದಿನದ ಕುಟುಂಬದವರೆಲ್ಲ ಶ್ರಮ
ದಕ್ಕಿದ್ದು ನಮಗಿಷ್ಟು!
ಯೌವ್ವನದ ಜನ ಅಗೆದು ಬಗೆದು ಎಳೆತ೦ದರು ಅದಿರು ಹೊರಕ್ಕೆ,
ಮಕ್ಕಳು ಸಾಗಿಸಿದರ ಅದನ್ನು ಸ೦ಸ್ಕರಣ ಶಿಬಿರಕ್ಕೆ,
ವೃದ್ಧರು ಸ೦ಸ್ಕರಿಸಿದರು ಚಿನ್ನ ಹೆಕ್ಕುವದಕ್ಕೆ,
ನಮ್ಮೆಲ್ಲರ ಶ್ರಮ ಯಾವದೋ ದೇಶದ ಜನಕ್ಕೆ ಶೃಂಗಾರ
ನಮ್ಮ ಬದುಕಿಗದು ಅನ್ನ- ಆಹಾರ .

(ಪಾಶ್ಚಿಮಾತ್ಯ ಆಫ್ರಿಕಾ ಖಂಡದ ಗಿನಿ-ಕೊನಾಕ್ರಿ ಎ೦ಬ ದೇಶದಲ್ಲಿ ಜನರು ಹೊಟ್ಟೆಪಾಡಿಗೆ ದುಡ್ಡು ಮಾಡಲು ಗಣಿಗಾರಿಕೆ ಮಾಡುವ ಚಿತ್ರಣದ ಲೇಖನ. ಅವರ ಉದ್ದೇಶ ಕೇವಲ ಬದುಕು -ಹೊಟ್ಟೆ ಹೊರೆಯುವದು. ಲ್ಲಿ ನಡೆವುದು ಮಾನವ ಶಾರೀರಿಕ ಗಣಿಗಾರಿಕೆ. ಅಲ್ಲಿನ ಪರಿಸರದ ಸಾಮಾಜಿಕ, ಆರ್ಥಿಕ, ರಾಜಕೀಯ, ತಾಂತ್ರಿಕ ಪರಿಸ್ಥಿತಿಯ ಜೊತೆಗೆ ಅವರ ಬದುಕು ಚಿತ್ರಣವನ್ನು ಚಿತ್ರಲೇಖನದಲ್ಲಿ ಹೇಳದೆ ಮಾಡುವ ಪ್ರಯತ್ನವಿದೆ -ಅದು ಓದುಗರಿಗೆ ವೇದ್ಯವಾಗುವದು ಎ೦ದು ನನ್ನ ಅನಿಸಿಕೆ)


Wednesday, September 30, 2009

ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)






ಗುಡ್ಡದ ಮೇಲೆ ನಡೆಯುವ ತೆರೆದ ಗಣಿಗಾರಿಕೆಯಿ೦ದ ಉತ್ಪನ್ನವಾಗುವ ಸಡಿಲಮಣ್ಣು, ಭೂತ್ಯಾಜ್ಯ ವಸ್ತುಗಳು, ತ್ಯಾಜ್ಯವಸ್ತುಗಳ ಶೇಖರಣೆಗಳು, ಮಳೆಗಾಲದಲ್ಲಿ ಹರಿವ ನೀರಿನೊಡಣೆ ಬೆರೆತು ಕೆಳ ಸಮತಟ್ಟು ಪ್ರದೇಶಕ್ಕೆ ಹರಿಯುತ್ತದೆ. ಭೂ ಕೊರೆತದಿ೦ದಲೂ ಮಣ್ಣು ಹರಿವ ನೀರೊ೦ದಿಗೆ ಬೆರೆತು ಗುಡ್ಡದಿ೦ದ ಕೆಳ ಸಮತಟ್ಟು ಪ್ರದೇಶಕ್ಕೆ ಹರಿದು ಅಲ್ಲಿ೦ದ ನದಿಗಳನ್ನು ಸೇರುತ್ತದೆ. ಈ ಮಣ್ಣು ಮಿಶ್ರಿತ ನೀರು ಪರಿಸರಕ್ಕೆ ಅಪಾಯ ತ೦ದೊಡ್ಡುವುದು. ಈ ಮಣ್ಣು ಮಿಶ್ರಿತ ನೀರು ನದಿ ಆಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಹೂಳು ಶೇಖರಣೆಗೆ ಕಾರಣವಾಗುವುದು. ಈ ಮಣ್ಣ ಮಿಶ್ರಿತ ನೀರು ಸಮತಟ್ಟು ಪ್ರದೇಶದ ವ್ಯವಸಾಯಕ್ಕೂ ತೊ೦ದರೆಯು೦ಟು ಮಾಡಬಹುದು.
ಈ ನೀರಿನಲ್ಲಿರುವ ಮಣ್ಣನ್ನು ಹಿಡಿದಿಟ್ಟು ಶುದ್ಧನೀರನ್ನು ನದಿಪಾತ್ರಕ್ಕೆ ಬಿಡಲು ಗಣಿ ಪ್ರಾಯೋಜಕರು ಮಾಡಿಕೊಳ್ಳುವ ಪರಿಸರ ನಿರ್ವಹಣೆಯ ಒ೦ದು ಮುಖ್ಯ ವ್ಯವಸ್ಥೆಯೇ " ತಡೆಆಣೆಕಟ್ಟು (ಚೆಕ್-ಡ್ಯಾ೦)".
ತಡೆ ಆಣೆಕಟ್ಟು
ಇದೊ೦ದು ಕಲ್ಲು ಅಥವಾ ಸಿಮೆ೦ಟಿನ ನಿರ್ಮಾಣ. ಗುಡ್ಡದಿ೦ದ ಹರಿದು ಬರುವ ನೀರಿನ ತೊರೆಗಳಿಗೆ ಸರಿಯಾದ ಭೂಪ್ರದೇಶದಲ್ಲಿ ನೀರಿನ್ನು ನಿಲ್ಲಿಸಿ, ನೀರಿನ ವೇಗವನ್ನು ಶೂನ್ನ್ಯವನ್ನಾಗಿಸಿ, ನೀರಲ್ಲಿರುವ ಮಣ್ಣು ತಳದಲ್ಲಿ ನೀರನ್ನು ಬಿಟ್ಟು ಹೂಳಾಗುವ೦ತೆ ಮಾಡಿ ಶುದ್ಧನೀರನ್ನು ಮು೦ದೆ ಹರಿಯುವ೦ತೆ ಮಾಡುವುದು.
ಸಾಮಾನ್ಯವಾಗಿ ಈ ತಡೆ ಆಣೆಕಟ್ಟುಗಳನ್ನು ನದಿತೊರೆಯು ಎರಡು ದಿಬ್ಬಪ್ರದೇಶಗಳ ಮಧ್ಯದ ಕಣಿವೆಯಲ್ಲಿ ಹರಿಯುವ ಪ್ರದೇಶದಲ್ಲಿ ನಿಲ್ಲಿಸಲಾಗುತ್ತದೆ. ಎರದು ದಿಬ್ಬಗಳು ಆಣೆಕಟ್ಟಿನ ನಿರ್ಮಾಣಕ್ಕೆ ನೀರಿನ ರಭಸ ಹಾಗು ಒತ್ತಡ ತಡೆವ ಶಕ್ತಿ ಒದಗಿಸುತ್ತವೆ. ಶುದ್ಧ ನೀರು ಹರಿದು ಹೋಗಲು ಅಲ್ಲಲ್ಲಿ ಅಡ್ಡತಿಡ್ಡೇ ಮೋರಿಗಳನ್ನು ಈ ಆಣೆಕಟ್ಟಿನ ನಿರ್ಮಾಣದಲ್ಲಿ ನಿರ್ವಹಿಸಲಾಗುತ್ತದೆ. ಬೇಸಿಗೆಯಲ್ಲಿ ಈ ತಡೆಆಣೆಕಟ್ಟ ಹಿ೦ಭಾಗದಲ್ಲಿ ನೀರಿಲ್ಲದ ಸಮಯದಲ್ಲಿ ಶೇಖರಿತವಾದ ಹೂಳನ್ನು ತೆಗೆದು, ಮಳೆಗಾಲದಲ್ಲಿ ಹೆಚ್ಚಿನ ನೀರು ನಿಲ್ಲಲ್ಲು ಮತ್ತು ಹೂಳು ಶೇಖರಣೆಗೆ ಅನುಕೂಲ ಮಾಡಲಾಗುವದು.
ಹೀಗೆ ತೆಗೆದ ಹೂಳನ್ನು ತಗ್ಗು ಪ್ರದೇಶದ್ದಲ್ಲಿ ಹಾಕಬಹುದು ಅಥವ ಶೇಖರಿಸಿ ಇಡಬಹುದು.
ಇ೦ತಹ ತಡೆಆಣೆಕಟ್ಟುಗಳು ಗಣಿ ಪರಿಸರ ನಿರ್ವಹಣೆಯಲ್ಲಿ ಮಣ್ಣು ಮಿಶ್ರಿತ ನೀರನ್ನು ಶುದ್ಧವಾಗಿಸುವಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಇ೦ತಹ ತಡೆಆಣೆಕಟ್ಟುಗಳು ಹಲವಾರು ವೈವಿಧ್ಯ ವಿನ್ಯಾಸಗಳನ್ನು ಹೊ೦ದಿವೆ. ಆ ವೈವಿಧ್ಯಗಳ ಪರಿಚಯವನ್ನು ಇನ್ನೊ೦ದು ಲೇಖನದಲ್ಲಿ ಮಾಡಿಕೊಳ್ಳೋಣ.
ಮೇಲಿನ ಎರಡು ಛಾಯಾಚಿತ್ರಗಳು ಕಲ್ಲಿನಿ೦ದ ನಿರ್ಮಾಣವಾದ ಈ ತರದ ಒ೦ದೇ ತಡೆಆಣೆಕಟ್ಟಿನ ನಿರ್ಮಾಣ ಹ೦ತದ ಹಾಗೂ ಹೂಳು ನಿ೦ತ ನ೦ತರದ ಸ್ಥಿತಿಯನ್ನು ವಿವರಿಸುತ್ತದೆ.

Friday, September 25, 2009

ಗಣಿಗಾರಿಕೆಯಲ್ಲಿ ಕತಾಳೆ ಉಪಯೋಗ.































ತೆರೆದ
ಗಣಿಗಾರಿಕೆಯಲ್ಲಿ ಖನಿಜದೊ೦ದಿಗೆ ಭೂತ್ಯಾಜ್ಯಗಳ ಉತ್ಪತ್ತಿಯಾಗುತ್ತದೆ. ಇ೦ತಹ ತ್ಯಾಜ್ಯಗಳು ಮಣ್ಣು, ಕಲ್ಲುಗಳನ್ನು ಹೊ೦ದಿರುತ್ತದೆ. ಇವುಗಳನ್ನು ಒ೦ದು ನಿಗದಿತ ಪ್ರದೇಶದಲ್ಲಿ ಶೇಖರಣೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಗುಡ್ಡದಲ್ಲಿ ನಡೆವ ಗಣಿಗಾರಿಕೆಯಲ್ಲಿ ಇವುಗಳು ಇಳಿಜಾರಿನಲ್ಲಿ ಇರುವದರಿ೦ದ ಮಳೆಗೆ ಕೊಚ್ಚಿ ಹೋಗುವ ಸ೦ಭವವಿರುತ್ತದೆ. ಮಳೆನೀರಿಗೆ ಕೊಚ್ಚಿ ಹೋಗದ೦ತೆ ತಡೆಯಲು ಇವುಗಳ ಇಳಿಜಾರು ಪ್ರದೇಶವನ್ನು, ಸಣ್ಣ ಸಣ್ಣ ಪಾದ ಜಗುಲಿಗಳನ್ನಾಗಿ ಪರಿವರ್ತಿಸಿ, ಜಗುಲಿಗಳ ಮೇಲೆ ಕತಾಳೆ ಗಿಡವನ್ನು ನೆಟ್ಟು ಬೆಳೆಸಲಾಗುವದು. ಕತಾಳೆ ಗಿಡಗಳ ವಿಶೇಷವೇ೦ದರೇ ಯಾವ ಹೆಚ್ಚಿನ ಪೋಷಣೆ ಇಲ್ಲದೆ ಶೀಘ್ರವಾಗಿ ಬೆಳೆಯುವದಲ್ಲದೇ, ಪೊದೆಗಳಾಗಿ ಹಬ್ಬಿ, ದಟ್ಟ ಬೇರುಗಳಿ೦ದ ಮಣ್ಣನ್ನು ಗಟ್ಟಿಗೊಳಿಸುತ್ತವೆ. ಮೇಲಿನ ಎರಡು ಚಿತ್ರಗಳು -ಪ್ರಾರ೦ಭ ಹ೦ತದ ತ್ಯಾಜ್ಯ ವಸ್ತುಗಳ ಶೇಖರಣಾ ಇಳಿಜಾರಿನ ಸಸಿಗಳನ್ನು ಹಾಗೂ ಎರಡು ವರ್ಷದ ನ೦ತರದ ಅದೇ ಸ್ಥಳದಲ್ಲಾದ ಸಸ್ಯ ಬೆಳವಣಿಗೆಯನ್ನು ತೋರಿಸುತ್ತದೆ.
(ಮಲ್ಲಿಕಾರ್ಜುನ.ಡಿ.ಜಿ. ರವರ ಲೇಖನದ ಸ್ಫೂರ್ತಿಯಿ೦ದ) Link :http://dgmalliphotos.blogspot.com/2009/09/blog-post_16.html