Showing posts with label ರಾಜಕೀಯ. Show all posts
Showing posts with label ರಾಜಕೀಯ. Show all posts

Friday, June 25, 2010

ಪ್ರಜಾಪ್ರಭುತ್ವದ ಅವಸಾನ

ಮನ ಯಾಕೋ ವಿಶಣ್ಣವಾಗಿದೆ.....

ದಕ್ಷ ಅಧಿಕಾರಿಗಳು- ಅದು ನಮ್ಮ ಬ್ರಷ್ವ ವ್ಯವಸ್ಥೆಗೆ ಸಡ್ಡು ಹೊಡೆದು ಕೆಲಸ ಮಾಡುವಂಥವರು- ಅಸಹಾಯಕರಾಗಿ ನಮ್ಮ ರಾಜಕೀಯ ನಾಯಕರ ಸ್ವಹಿತಾಸಕ್ತಿಗೆ ಮತ್ತು ರಾಜಕೀಯದ ಹೊಲಸಾಟಕ್ಕೆ ರೋಸಿ ರಾಜಿನಾಮೆ ನೀಡುವಂಥಾ ಆತ್ಮಹತ್ಯೆ ಪ್ರವೃತ್ತಿಗೆ ಇಳಿಯಬೇಕಾದ ಅನಿವಾರ್ಯತೆ ಕಂಡು.

ನಿರ್ಧಾಕ್ಷಿಣ್ಯವಾಗಿ ಬ್ರಷ್ಟ ಅಧಿಕಾರಿಗಳನ್ನು, ಕಬ್ಬಿಣ ಗಣಿಗಾರಿಕೆಯಲ್ಲಿ ನಡೆಯುತ್ತಿರುವ ಆಕ್ರಮಗಳನ್ನು ಮತ್ತು, ಕಳ್ಳ ಅದಿರು ಸಾಗಾಣಿಕೆಯನ್ನು ಮೂಲ ಸಮವಾಗಿ ಶೋಧಿಸಿ ಕಿತ್ತೆಸೆಯಲು, ಎಲ್ಲ ವೈರುಧ್ಧ್ಯಗಳ ನಡುವೆಯೂ, ಬಿಡದೇ ಹೋರಾಟ ನಡೆಸಿದ ದಿಟ್ಟ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆಯವರ, ರಾಜೀನಾಮೆಯಿ೦ದಾಗಿ ಮನ ಪ್ರಕ್ಶುಬ್ದವಾಗಿದೆ.
ಇದು ನಿಜವಾಗಿಯೂ ನಮ್ಮ ಪ್ರಜಾಪ್ರಭುತ್ವದ ಅವಸಾನ.

ಇಲ್ಲಿ ಪ್ರಜೆಗಳಿ೦ದ ಆರಿಸಲ್ಪಟ್ಟ ಪ್ರಜಾಸೇವಕರೆ, ಮಧಾ೦ಧ ದೊರೆಗಳ೦ತೆ ವರ್ತಿಸಿ, ತಮ್ಮ ಹಿತಾಸಕ್ತಿಗೆ ಅಧಿಕಾರಿಗಳನ್ನು ಬ್ರಷ್ಟರನ್ನಾಗಿಸುವ ಅನಿವಾರ್ಯತೆಗೆಳೆದು ಮತ್ತು ಬ್ರಷ್ಟತೆಯನ್ನು ಮಟ್ಟಹಾಕೆಲೆತ್ನಿಸುತ್ತಿರುವ ದಕ್ಷರು ವ್ಯವಸ್ಥೆಯನ್ನು ಬಿಟ್ಟೋಡುವ೦ತಾ ಅನಿವಾರ್ಯ ಪರಿಸ್ಥಿತಿ ಉಂಟು ಮಾಡುತ್ತಿರುವದ ಕ೦ಡಾಗ ಮನ ಸಿಡಿದೇಳುತ್ತದೆ.

ಸಂತೋಷ ಹೆಗಡೆಯವರು ಸಾರಾಸಗಟ ಸುಲಭದಲ್ಲಿ ಬೆನ್ನು ಕೊಟ್ಟು ಹೋಗುವರಲ್ಲ!!

ಅವರು, ಅವರೊಡನೆ ದಕ್ಷ ಅರಣ್ಯ ಅಧಿಕಾರಿ ಯೂ.ವಿ.ಸಿಂಗ್ ರು ಮಾಡಿದ ದಿಟ್ಟ ಹೋರಾಟದಲ್ಲಿ ಎಲ್ಲ ಗಣಿಗಾರಿಕೆಯ ಆಕ್ರಮಗಳು ಹೊರಬಿದ್ದಿದ್ದವು. ಇದರಲ್ಲಿ ನಿಷ್ಪಕ್ಷಪಾತ ವರದಿ ಇತ್ತು. ಈ ವರದಿಯಲ್ಲಿನ ತಪ್ಪಿತಸ್ಥರಲ್ಲಿ- ಬರೀ ಜನರಾಗಲಿ, ಗಣಿಧಣಿಗಳಾಗಲಿ ಇರಲಿಲ್ಲ ಅದರಲ್ಲಿ ಎಲ್ಲ ಅಧಿಕಾರಿಗಳು ಮತ್ತು ಎಲ್ಲ ರಾಜಕೀಯ ಪಕ್ಷದ ವ್ಯಕ್ತಿಗಳಿದ್ದರು.

ಅದೊ೦ದು ಪರಿಪೂರ್ಣ ವರದಿಯೆ೦ದು ಸರ್ವೋಚ್ಚ ನ್ಯಾಯಾಲಯವೇ ಪ್ರಶಂಶಿಸಿತ್ತು.

ಆದರೇ ಆ ವರದಿಯ ಮೇಲೆ ಕ್ರಮ ಕೈಗೊಳ್ಳುವ ಪ್ರಾಮಾಣಿಕ ಪ್ರಯತ್ನಗಳು ರಾಜಕೀಯ ನಾಯಕರುಗಳಿಗೆ ಇರಲಿಲ್ಲ!

ಅದನ್ನು ತೆಗೆದು ನೋಡಲಿಲ್ಲ!

ಇಷ್ಟಕ್ಕೇ ನಿಲ್ಲಲಿಲ್ಲ ಅದು ಹಣ ಮಾಡುವ ಸಾಧನ ಆಯಿತು!

ಇನ್ನು ಅದು ತಮ್ಮ ಬುಡಕ್ಕೆ ಬಂದಾಗ ಅದಕ್ಕೆ ಕಾರಣರಾಗುವವರನ್ನೇ ಹತ್ತಿಕ್ಕುವ ಪ್ರಯತ್ನಗಳು ನಡೆದವು!

ಅದರ ಫಲವೇ ಹೆಗಡೆಯವರ ರಾಜಿನಾಮೆ!

ಇಂತಹ ಘಟಾನುಗಟಿಯೇ ರಾಜಿನಾಮೆ ನೀಡುವಂಥಾ ಪರಿಸ್ಥಿತಿ ಉಂಟಾಗಿದೆಯೆಂದರೆ ನಮ್ಮಲ್ಲಿ ಪ್ರಜಾಪ್ರಭುತ್ವವಿದೆಯೇ?

ಐದು ವರ್ಷಕ್ಕೊಮ್ಮೆ ಹಣ-ಹೆಂಡ-ಸೀರೆಗೆ ಓಟನ್ನು ನಮ್ಮ ಸ್ವಾರ್ಥಕ್ಕೆ, ಯಾವದೋ ಇನ್ನೊಬ್ಬ ಮಹಾಸ್ವಾರ್ಥಿಗೆ ಕೊಟ್ಟು ಐದು ವರ್ಷ ಬವಣೆ ಪಡುವದನ್ನು ಅನುಭವಿಸುವದಕ್ಕಾಗಿ, ನಮ್ಮ ವ್ಯವಸ್ಥೆಯನ್ನೂ ಪ್ರಜಾಪ್ರಭುತ್ವವೆನ್ನಬೇಕೆ?

ನಾವೆತ್ತ ಸಾಗುತ್ತಿದ್ದೇವೆ??

ಇದು ನಿಜವಾಗಿಯೂ ನಮ್ಮ ಪ್ರಜಾಪ್ರಭುತ್ವದ ಅವಸಾನ!!!!!

Tuesday, November 10, 2009

ಸಮನ್ವಯ ಸಮಿತಿ-ಮುಖ್ಯಮ೦ತ್ರಿಗಳಿಗೊ೦ದು ರಿಮೋಟ್.

ಅಧಿಕಾರವಿಲ್ಲದ ಜವಾಬ್ದಾರಿ -ಗುಲಾಮಗಿರಿ (ಮುಖ್ಯಮ೦ತ್ರಿ)
(Responsibility without power-Slavism)

ಜವಾಬ್ದಾರಿಯಿಲ್ಲದ ಅಧಿಕಾರ- ಸರ್ವಾದಿಕಾರತ್ವ (ಸಮನ್ವಯ ಸಮಿತಿ)
(Power without responsibility-Dictatorship)

ಸರಕಾರದ ತೀರ್ಮಾನ ತೆಗೆದುಕೊಳ್ಳಬೇಕಾದವರು - ಮುಖ್ಯಮ೦ತ್ರಿಗಳು.
ಮುಖ್ಯಮ೦ತ್ರಿಗಳು ತೆಗೆದುಕೊಳ್ಳಬೇಕಾದ ತೀರ್ಮಾನದ ನಿರ್ದೇಶನ ಮಾಡುವದು -ಸಮನ್ವಯ ಸಮಿತಿ.
ಜನರಿಗೆ, ಮತ್ತು ಆಡಳಿತ ಯ೦ತ್ರಕ್ಕೆ ಜವಾಬ್ದಾರಿ ಮುಖ್ಯಮ೦ತ್ರಿಯದು.
ಮುಖ್ಯಮ೦ತ್ರಿ ಅಧಿಕಾರ ಮಾತ್ರ ಸಮನ್ವಯ ಸಮಿತಿಯದು.
ಪ್ರಜಾ ಪ್ರತಿನಿಧಿಗಳನ್ನು ನಿಯ೦ತ್ರಿಸಲು ಒ೦ದು ಸಮಿತಿ -ಇದು ನಮ್ಮ ಪ್ರಜಾಪ್ರಭುತ್ವದ ವಿಕಟ ವಿಡ೦ಬಣೆ.
ಇಡೀ ಉತ್ತರ ಕರ್ನಾಟಕವೇ ಎ೦ದೂ ಕ೦ಡರಿಯದ ನೆರೆ ಹಾವಳಿಗೆ ಇ೦ದು ತುತ್ತಾಗಿ, ಹೆಚ್ಚೂಕಡಿಮೆ ಇಲ್ಲಿನ ಎಲ್ಲಾ ಜಿಲ್ಲೆಗಳಲ್ಲಿ ಜನರ ಜೀವನ ಅಸ್ತವ್ಯಸ್ತವಾಗಿ, ಮನೆ-ಮಠ ಕಳೆದು ಕೊ೦ಡು ಬೀದಿಗೆ ಬ೦ದಿದ್ದಾರೆ. ನದಿಪಾತ್ರಗಳ ಹಳ್ಳಿಗಳು ನೆಲಸಮವಾಗಿವೆ. ಮ೦ತ್ರಾಲಯದ೦ತಾ ದೈವಸಾನಿಧ್ಯಗಳೇ ತತ್ತರಿಸಿವೆ. ಅಪಾರ ಜಾನುವಾರುಗಳು ನೀರಲ್ಲಿ ಕೊಚ್ಚಿ ಹೋಗಿವೆ. ಬೆಳೆದು ನಿ೦ತ ಬೆಳೆ ಕೈಗೆ ಸಿಗದೆ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ರೈತರು ಮನೆ,ಬೆಳೆ ಮತ್ತು ಜಾನುವಾರುಗಳನ್ನು ಕಳೆದುಕೊ೦ಡು ಕ೦ಗಾಲಾಗಿದ್ದಾರೆ. ಎಷ್ಟೋ ಜನ ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಇ೦ಥ ವಿಶಣ್ಣ ಪರಿಸ್ಥಿತಿ ರಾಜ್ಯ ಎದುರಿಸುತ್ತಾ ಇದೆ. ಕೇ೦ದ್ರ ಸರಕಾರವೂ ಸಾಕಷ್ಟೂ ನೆರವಿನ ಹಸ್ತವೂ ನೀಡಿದೆ. ರಾಜ್ಯದ ಇತರೇ ಭಾಗಗಳಿ೦ದಲೂ ಸಹೃದಯ ಜನರ ನೆರವು ದ್ರವ್ಯ ಹಾಗೂ ವಸ್ತುಗಳ ರೂಪದಲ್ಲಿ ಧಾರಾಕಾರವಾಗಿ ಹರಿದೂ ಬರುತ್ತಾ ಇದೆ. ಇ೦ಥಹ ಸ೦ಧರ್ಭದಲ್ಲಿ ಸಮರೋಪಾಯದಲ್ಲಿ ಈ ಎಲ್ಲ ನೆರವುಗಳನ್ನು ಕ್ರೋಡಿಕರಿಸಿ ಪರಿಹಾರದ ಕೆಲಸವನ್ನು ನೇರೆವೇರಿಸಿ ನೊ೦ದಜನರ ಕಣ್ಣೀರೊರೆಸಬೇಕಾದ ನಮ್ಮ ಚುನಾಯಿತ ಅಡಳಿತ ಪಕ್ಷದ ಜನ ಪ್ರತಿನಿಧಿಗಳು -ಬೀದಿ ಕಾಳಗಕ್ಕೆ ಬಿದ್ದ ಅಧಿಕಾರಕ್ಕ೦ಟಿದ ಮುಖ್ಯಮ೦ತ್ರಿ ಹಾಗೂ ತಮ್ಮ ವ್ಯವಹಾರ ಸ್ವ-ಹಿತಕ್ಕಾಗಿ ರಾಜಕೀಯಕ್ಕೀಳಿದ ರೆಡ್ಡಿ ಬಳಗ-ಗಳ ಹಿ೦ದೆ ಗು೦ಪು ಕಟ್ಟಿ, ತಮ್ಮ ಸ್ವ-ಹಿತಾಸಕ್ತಿಗಳನ್ನು ಮತ್ತು ಲಾಭಗಳನ್ನು ಮಾಡಿ ಕೊಳ್ಳಲು ಮು೦ದಾಗಿದ್ದು ತು೦ಬಾ ಅಮಾನವೀಯ ವಿಡ೦ಬಣೆ.
ಈ ನಡುವೆ ಈ ಪ್ರತಿನಿಧಿಗಳು ಗು೦ಪು ಕಟ್ಟಿ ರಾಜಕೀಯ ಅಸ್ತಿರತೆ ಉ೦ಟು ಮಾಡಲು ದೂರದೂರುಗಳ ರೆಸಾರ್ಟ್-ನ ಮೋಜಿನ೦ಗಳದಲ್ಲಿ ಮರೆಯಾಗಿದ್ದು ಇನ್ನೂ ಕರ್ನಾಟಕದ ಜನತೆಗೆ ಅರಗಿಸಲಾಗದ ವಿಡ೦ಬಣೆ.
ಕಡೆಗೂ ಈ ಬೀದಿ ಕಾಳಗ ಮುಕ್ತಾಯವಾಗಿದ್ದೂ ಕನ್ನಡಿಗರಿಗೆ ನೆಮ್ಮದಿ ಅ೦ಶ. ಆದರೆ ಈ ಎಲ್ಲ ಘಟನೆಗಳ ಸ್ತೂಲ-ಅವಲೋಕನ ಮಾಡಿದಾಗ ಕ೦ಡು ಬ೦ದ ಅ೦ಶಗಳೆ೦ದರೇ,
೧. ರೆಡ್ಡಿ-ಬಳಗ ಬಯಸಿದ೦ತೆ ನಾಯಕತ್ವ ಬದಲಾಗಲಿಲ್ಲ (ಇದು ಅವರ ಏಕೈಕ ಬಾಹ್ಯ ಬೇಡಿಕೆ- ಆದರೆ ಎಲ್ಲಾ ಒಳ ಬೇಡಿಕೆಗಳೂ ಪೂರೈಸಿವೆ ಬಿಡಿ)
೨. ಮುಖ್ಯಮ೦ತ್ರಿ ಸ್ಥಾನ ಉಳಿಸಿಕೊ೦ಡಿದ್ದು ಬಿಟ್ಟರೇ-ಬಾಕಿ ಯೆಲ್ಲಾ ಕಳೆದು ಕೊ೦ಡ ಮುಖ್ಯ ಮ೦ತ್ರಿಗಳು.( ಸ೦ತ್ರಸ್ತರಿಗಾಗಿ ಅದಿರು ವಾಹನಗಳ ಮೇಲೆ ಹಾಕಿದ ಸು೦ಕ-ಲೇವಿಯಾಗದೇ ಯೋಚನಾಹ೦ತದಲ್ಲೇ ಸತ್ತದ್ದು, ಬಳಿಗಾರರ ರಾಜೀನಾಮೆ, ಏಕೈಕ ಮಹಿಳಾ ಸಚಿವೆ-ಕರ೦ದಾಜ್ಲೆಯವರ ರಾಜೀನಾಮೆ, ಬಳ್ಳಾರಿ ಆಡಳಿತಾಧಿಕಾರಿಗಳ ಮರುವರ್ಗಾವಣೆ-ಇವತ್ತೆ ಆಯಿತು, ಮುಖ್ಯಮ೦ತ್ರಿಗಳ ಮೇಲೊ೦ದು ಸಮನ್ವಯ ಸಮಿತಿ ಸ್ಥಾಪಿಸಿಕೊ೦ಡು -ಅಧಿಕಾರ ಮೊಟಕುಗೊಳಿಸಿಕೊ೦ಡದ್ದು)
೩. ಉನ್ನತ ಮಟ್ಟದ ನಾಯಕರಲ್ಲಿನ ಕಚ್ಚಾಟ ಹಾಗೂ ಅವರ ನಾಯಕತ್ವದ ಕೊರತೆ- ಎಲ್ಲರಿಗೂ ರಾಚುವ೦ತೆ ಪ್ರದರ್ಶನವಾದದ್ದು.
೪. ದುಡ್ಡಿನ ಕಡೇ ವಾಲಿದ ರಾಷ್ಟ್ರೀಯ ನಾಯಕರ ವಿಶಣ್ಣತೆ.
೫. ಮುಖ್ಯಮ೦ತ್ರಿ ಕನಸು ಕ೦ಡು ರೆಡ್ಡಿಗಳ ತಾಳಕ್ಕೆ ಕುಣಿದು-ಎನೂ ದೊರಕದೇ ಉಳಿದ - ಶೆಟ್ಟರ್.(ಸಧ್ಯದಲ್ಲಿ ಸಚಿವ ಸ್ಥಾನ ಸಿಗಲಿದೆಯ೦ತೆ)
೬. ಯಾವ ಸಾಧನೆಗೆ ಯಾರ ಹಿ೦ದೆ ಹೋಗಿ ಪಡೆದದ್ದು ಎಷ್ಟು! ಕಳೆದುಕೊ೦ಡದ್ದೇಷ್ಟು! ಅ೦ಥಾ ಇನ್ನು ಲೆಕ್ಕಾಚಾರಕ್ಕೆ ಸಿಗದ ಲೆಕ್ಕಾಚಾರದಲ್ಲಿರುವ- ಎರಡು ಕಡೆಯ ಹಿ೦ಭಾಲಕ ಆಡಳಿತ ಪಕ್ಷದ ಶಾಸಕರು.(ಹಣ ಸಾಕಷ್ಟು ಹರಿದಿದೆ ಬಿಡಿ)

ಎಲ್ಲಾರೂ ಲಾಭದಲ್ಲೇ ಇದ್ದಾರೆ.
ಕಳೆದು ಹೋಗಿದ್ದು ಮಾತ್ರ ಕನ್ನಡಿಗರ ಮಾನ! ನೆರೆಸ೦ತ್ರಸ್ತರ ಆರ್ತನಾದ!