Showing posts with label ಚಿತ್ರ ಲೇಖನ. Show all posts
Showing posts with label ಚಿತ್ರ ಲೇಖನ. Show all posts

Wednesday, August 25, 2010

ಬ್ಲಾಗಿಗರ ಮಿಲನಕ್ಕೆ ನಾಂದಿಯಾದ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಈ ಸಮಯಾ ಆನಂದಮಯಾ...
ಬ್ಲೊಗರಗಳೆಲ್ಲರ ಮಿಲನದ ಸುಸಮಯಾ...



ಈ ಸಮಯಾ.. ಮೀನ ವಿಜ್ಞಾನಿ.. ಕುವೈಟ್ ನಲ್ಲಿನ ಕನ್ನಡಿಗ ಅಜಾದನ.. ಕವನ ಸಂಕಲನ....ಜಲನಯನ ....
ದುಂಡಿಮದ ದು೦ಡಿರಾಜರಿಂದ ಅನಾವರಣಗೊಂಡು ಲೋಕಾರ್ಪಣವಾದ ದಿನ....
ಬ್ಲಾಗಿಗ.. ಇದು ಕೇವಲ ಜಲನಯನದ ಅನಾವರಣವಲ್ಲ......
ಈ ಸಮಯ ಛಾಯಾಕನ್ನಡಿ ಬ್ಲಾಗಿಗ ಮಿತ್ರ, ದಿನಪತ್ರಿಕೆ ವಿತರಕ, ಹವ್ಯಾಸಿ ಚಾಯಚಿತ್ರಗಾರ ಕೆ.ಶಿವುನ ....
ಎರಡನೇ ಲಲಿತ ಪ್ರಭಂಧ ಸಂಕಲನ "ಗುಬ್ಬಿ ಎಂಜಲು" ಸುಧೀಂದ್ರ ಹಾಲ್ದೋಡ್ಡೇರಿಯವರಿಂದ....
ಲೋಕಾರ್ಪಣವಾದ ದಿನ....


ಮನದಾಳದ ಪ್ರವೀಣನ.... ಮೃದುಮನಸ್ಸಿನ ಸುಗುಣೆಯ..
ಸುಂದರ ನಿರೂಪಣೆಯ ಕಾರ್ಯಕ್ರಮ....


ಈ ಸಮಯಾ... ಬಾಲೆಯಾ ಪ್ರಾರ್ಥನೆಯಲ್ಲಿ ಪ್ರಾರಂಭವಾದ
ಮಧುರ ಬ್ಲಾಗಿಗರ ಮಿಲನದಾ..ದಿನಾ...

ಈ ಸಮಯಾ ದೀಪ ಬೆಳಗಿ ಕಾರ್ಯಕ್ರಮ ಪ್ರಾರಂಭವಾದ ದಿನಾ....


ಈ ಸಮಯಾ.... ಪ್ರೊಫೆಸ್ಸರ್ ಶೇಷಾಶಾಸ್ತ್ರೀ ಯವರ
ಆತ್ಮೀಯ ಉಪಸ್ಥಿತಿಯಲ್ಲಿ....ಬ್ಲಾಗಿಗರು ನಲಿದ ದಿನ....

ಈ ಸಮಯಾ...ಡುಂಡಿಮರ ಚಟಾಕಿ ಸಿಡಿದು
ನಗೆಹೊನಲು ಹರಿದ ದಿನ ......


ಈ ಸಮಯಾ ... ಸುಧೀಂದ್ರರ ಮನದ ಮಾತ ದಿನ .....



ಈ ಸಮಯಾ... ತೆರೆಮರೆ ಹಿಂದೆ ಗಣಕಯಂತ್ರದ ಸೂತ್ರಧಾರಿ
ಸವಿಗನಸಿನ ಮಹೇಶನ ಕೈಚಳಕದ ದಿನ.....

ಈ ಸಮಯಾ...ತೆರೆಮರೆಯಲ್ಲಿ ಪೆನ್ನು ಪೇಪರನ
ಅನಿಲ -ನಾಗರಾಜರ, ಹಳ್ಳಿಹುಡುಗ- ನವೀನನ, ಛಾಯಾಗ್ರಾಹಕ ಉದಯನ, ಮಲ್ಲಿಕಾರ್ಜುನನ
ಶ್ರಮದ ವೈಭವದ ದಿನ.....
ಹತ್ತು ಹಲವು ಛಾಯಾಚಿತ್ರಕಾರ ಮೋಹಕ ಚಿತ್ರಗಳು ಹುಟ್ಟಿದಾ ದಿನ ...
ರಸಮಯ ಕ್ಷಣ ಹಿಡಿದಾದ ದಿನಾ....



ಬರೀ ಇಷ್ಟೇ ಅಲ್ಲಾ ಮಿತ್ರಾ....ಈ ಸಮಯಾ... ಎಲ್ಲರನೂ ಸೇರಿಸಿದ
ದೊಡ್ದತಲೇ -ಗೊಮ್ಮಟೇಶ-ಧೈತ್ಯಕಾಯ-ದೊಡ್ಡ ಹೃದಯ-ಮಗುವ ಮನಸ
ನಿಷ್ಕಲ್ಮಶ ಪ್ರೇಮದ ಸ್ನೇಹಜೀವಿ-ಇಟ್ಟಿಗೆ ಸಿಮೆಂಟಿನ
-ಕಂತ್ರಾಟುದಾರ-ಚಿತ್ರಗ್ರಾಹಕ-ಕವಿಹೃದಯದ ಸಜ್ಜನನ-
ಎಲ್ಲರಳೋ೦ದಾಗುವ ಪ್ರಕಾಶಣ್ಣನ ತೆರೆಮರೆಯ ಪರಿಶ್ರಮ ಸಾರ್ಥವಾದ ದಿನಾ...

ಈ ಸಮಯಾ... 'ಕೊಳಲಿ'ನ ಸಜ್ಜನ ಸರ್ಜನ್ನ ಕೃಷ್ಣಮೂರ್ತಿಯವರ ಮತ್ತು ಶಿವಕುಮಾರರ ಗಾನಸುಧೆಯಲಿ
ಬ್ಲಾಗಿಗರು ಮಿಂದು ನಲಿದ ದಿನಾ....

ಜೊತೆಗೆ ಎಲ್ಲಾ ಬ್ಲಾಗಿಗರು -ಸಕಲಕಲಾಸಂಪನ್ನ ದಿನಕ್ಕೊಂದರ 'ನಮ್ಮೊಡೆನೆಯ ವಿಆರ್ ಬಿ'ಯವರು , ಸದಾ ಮೌನ ಹಸನ್ಮುಖಿ 'ಜೀವನ್ಮುಖಿ'ಯ ಪರಾಂಜಪೆಯವರು, ಗುರುಪ್ರಪಂಚದ ಗುರುರವರು, 'ನಮ್ಮೊಳಗೊಬ್ಬ ಬಾಲು'ರವರು , 'ನಾಭಿ'ಯ ನಾರಾಯಣ ಭಟ್ಟರು, 'ನೀವೇದನೆ'ಯ ಉಮಾಭಟ್ಟರು, 'ಸುಮ್ನೆ ಹೀಗಂದೆ'ಯ ಸುಮನಾ ವೆಂಕಟರು, 'ಓ ಮನಸೇ ನೀನೇಕೆ ಹೀಗೆ'ಯ ಚೇತನಾ ಭಟ್ಟ ದಂಪತಿಯರು, 'ಹನಿಹನಿ'ಯ ದೀಲೀಪ ಹೆಗಡೆಯವರು, 'ನಿಶಾಂತರಂಗ'ದ ನಿಶಾ ದಂಪತಿಯರು, ’ಅಂತರಂಗದ ಮಾತುಗಳ' ಶ್ಯಾಮಲಾರವರು, 'ಅನುರಾಗ'ದ ಮತ್ತು ಗಾದೆಗಳ ರಾಣಿ ಶಶಿ ಜೋಯಿಷರು, 'ಓ ಮನಸೇ ನೀನೇಕೆ ಹೀಗೆ'ಯ ಚೆತನಾರವರು, 'ಚಿತ್ತಾರ'ದ ಪ್ರಗತಿ ಹೆಗಡೆ ದಂಪತಿಗಳು, ’ದೇಸಾಯಿಯವರ ಅಂಬೋಣ'ದ ದೇಸಾಯಿಯವರು, 'ನೆನಪಿನ ಪುಟಗಳ' ಶಿವಪ್ರಕಾಶರು,”ಮೂಕಮನದ ಮಾತಿ’ನ ದಿನಕರ ಮೊಗೇರ ದಂಪತಿಗಳು, ಶಿವಶಂಕರ ವಿಷ್ಣು ಯೆಳವತ್ತಿಯವರು, 'ಶ್ರಾವಣದ ಮಳೆ ಸುರಿಸಿದೆಯಾದರು'ವಿನ ಗೌತಮ ಹೆಗಡೆ ಭಾವಿ ದಂಪತಿಗಳು, ಎಸ್.ಎಸ್.ಕೆ ಕಾವ್ಯನಾಮಧೇಯದ ಶೋಭಾರವರು, 'ಕ್ಷಣ ಚಿಂತನೆ'ಯ ಚಂದ್ರು ರವರು, ನಂಜುಂಡರು, ಮನಸಿನ ಮಾತುಗಳ ದಿವ್ಯಾ, 'ಅನುಭವ ಮಂಟಪ'ದ ಫಾಲಚಂದ್ರರು, 'ನಾನಿಸಾಹ'ದ ಲಕ್ಷ್ಮಣ ಬಿರಾದಾರರು, ಹಿರಿಯ ಬ್ಲಾಗಿಗ ಹೆಬ್ಬಾರರು, 'ನನ್ನದೊ೦ದ್ಮಾತಿ' ಸತ್ಯನಾರಾಯಣರು, 'ಹೇಳಬೇಕೆನಿಸುತಿದೆ'ಯ ಜಯಲಕ್ಷ್ಮಿಯವರು,'ಖುಷಿ- ನಮ್ಮ ಮನೆಯ ದೀಪ’ ದ ಅಶೋಕ ಕೊಡ್ಲಾಡಿಯವರು, ’ಮೌನದ ಪದಗಳ’ ರಾಘುರವರು, ಹಲವಾರು ಬ್ಲಾಗಿಗ ಬಂಧುಗಳು (ಹೆಸರು ನೆನಪಿಡದುದ್ದಕ್ಕೆ ಉಳಿದವರು ಕ್ಷಮಿಸಬೇಕು) ಸೇರಿ ನಕ್ಕು ನಲಿದ ಕ್ಷಣಗಳು ಮರೆಯಲಾರದ ಅನುಭವ.
ಈ ನಡುವೆ ನನಗೆ ನಾರಾಯಣ ಭಟ್ಟ ದಂಪತಿಗಳ ಮತ್ತು ವಿಆರ್.ಭಟ್ಟ ದಂಪತಿಗಳ ಆದರಾತಿತ್ಯದ ಸವಿಯುಣ್ಣುವ ಅವಕಾಶ ದೊರಕಿತು. ದಣಿವಿನ ಅಸ್ವಸ್ಥತೆಯಲ್ಲೂ ಉಮಾ ಭಟ್ಟರ ಆದರಾತಿತ್ಯ ಮರೆಯಲಾಗದ್ದು. ಮನೆಯ ತುಂಬಾ ನೆ೦ಟರಿದ್ದರೂ ನಮ್ಮನ್ನು ಸ್ವಾಗತಿಸಿ, ಆದರಿಸಿ, ಆತಿಥ್ಯ ನೀಡಿ, ಜೊತೆಗೆ ತಮ್ಮ ಸುಮಧುರ ಕಂಠಸಿರಿಯಿಂದ ಮನತಣಿಸಿದ ವಿ.ಆರ್.ಭಟ್ಟ ರ ಶ್ರೀಮತಿಯವರು ಬಹುಮುಖ ಪ್ರತಿಭೆಯವರು.
ಈ ದಂಪತಿ ಜೋಡಿಗಳಿಗೆ ನನ್ನ ಮನಪೂರ್ವಕ ನಮನಗಳು. ಉಮಾಭಟ್ಟ ರ ಕವನ ಸಂಕಲನವೊಂದು (ಸಧ್ಯ ಕೈಪಿಡಿಯಲ್ಲಿದ್ದು ಪ್ರಾದೇಶಿಕವಾಗಿ ಬಹುಮಾನ ಪಡೆದು ಮೆಚ್ಚುಗೆ ಗಳಿಸಿರುವ) ಪ್ರಕಟನೇಯ ಹಾದಿಯಲ್ಲಿದೆ.
ಒಟ್ಟಿನಲ್ಲಿ ಇದು ಮರೆಯದ ಮಧುರ ನೆನಪಿನ ಸಮಾನ ಮನಸ್ಕ ಬ್ಲಾಗಿಗರ ಮಿಲನ. ಇದಕ್ಕೆ ನಾಂದಿಯಾಗಿದ್ದು ಶಿವು-ರವರ ಮತ್ತು ಆಜಾದರ ಪುಸ್ತಕ ಪ್ರಕಟಣೆ. ಈ ಕಾರಣಕ್ಕಾಗಿ ಅವರಿಬ್ಬರನ್ನು ಅಭಿನಂದಿಸುತ್ತಾ, ತುಂತುರು ಪ್ರಕಾಶನವನ್ನ ನೆನೆದು, ಮತ್ತೆಲ್ಲಾ ಸಮಾರಂಭದ ಬೆನ್ನೆಲುಬಾದ ಪ್ರಕಾಶಣ್ಣ ಹಾಗೂ ಅವರ ಅಳಿಯಂದಿರ ತಂಡ (ಮದುವೆಗೆ ಹೆಣ್ಣು ಹುಡುಕುವ ಜವಾಬ್ದಾರಿ ಮಾವನಿಗೆ ಕೊಟ್ಟು) ಮತ್ತು ಮಹೇಶ ದಂಪತಿಗಳನ್ನು ವಂದಿಸುತ್ತಾ ಬರಹವನ್ನ ಮುಕ್ತಾಯಿಸುವೆ. ಎಲ್ಲಾ ಛಾಯಾಚಿತ್ರಕಾರರು ಅದ್ಭುತವಾಗಿ ಚಿತ್ರ ಸೆರೆ ಹಿಡಿದಿದ್ದಾರೆ.

ಹೆಚ್ಚಿನ ಚಿತ್ರಗಳು ನನ್ನ ಕ್ಯಾಮೆರಾದಲ್ಲಿ ಕಂಡಂತೆ ನೋಡಲು ಕ್ಲಿಕ್ಕಿಸಿ:
http://picasaweb.google.co.in/116434280314025211668/Blog?authkey=Gv1sRgCPfxoput2ubJ0wE#


Wednesday, April 28, 2010

"ಕಗ್ಗತ್ತಲೆಯ ಖಂಡದಲ್ಲಿ ........ (ಭಾಗ ೩ )" ವಜ್ರಗಳ ಜಾಲಾಟ

ಭೂ ಗರ್ಭದಾ ಆಳದಾ ಅಡಿಯಲ್ಲಿ
ವಿಶಿಷ್ಟ ಶಿಲಾಪಾಕ ಕುದಿಯುತ್ತ,
ಮೇಲ್ಬರಲು ತೆವಳುತ್ತಾ ,
ಮೇಲ್ಪದರದ ಗಟ್ಟಿಶಿಲೆಯ ಸೀಳುತ್ತಾ,
ಅದರಲ್ಲೇ ದಾರಿಮಾಡಿ ಸಾಗುತ್ತಾ,
ಹೋರಾಟದಲ್ಲಿ ತನ್ನ ಬಿಸಿ ಕಳೆದುಕೊಳ್ಳುತ್ತಾ,
ಭೂಮೇಲ್ಪದರದಾ ಶಿಲೆಯ ಗರ್ಭದಲ್ಲಿ ತಣ್ಣಗಾಗುತ್ತಾ ,
ಸೃಷ್ಟಿಸಿತ್ತು ಕಿ೦ಬರ್ಲೈಟ ಎ೦ಬ ಅಗ್ನಿಜನ್ಯ ಶಿಲೆಯ!!

ಶಿಲೆಯ ಗರ್ಭದಲ್ಲೇ ಅಡಗಿಹವು ವಜ್ರಗಳು!!
ಸಾಮಾನ್ಯ ಕಣ್ಣಿಗೆ ಕಾಣದಂತೆ !!!

ಸಾವಿರಾರು ವರ್ಷಗಳ ಕಾಲದಲಿ,
ಶಿಲೆಯ ಮೇಲೆ ಹರಿದ ನೀರು ಕಲ್ಲನ್ನು ಕರಗಿಸಿ,
ಅದರಲ್ಲಿರುವ ಕಾಣದ೦ತಿರುವ ವಜ್ರವಾ ಬೇರ್ಪಡಿಸಿ ,
ಸಾಣೆ ಹಿಡಿಸಿ ಹೊಳೆವ ವಜ್ರವನ್ನಾಗಿಸಿ,
ನದಿಯ ಪಾತ್ರದಿ ಹರಿದ ನಿ೦ತಾ ಹೂಳಲ್ಲಿ ಹುದುಗಿಸಿ,
ಹುಡುಕುವಾ ತೆವಲಿಗೆ ಮನುಜನಾ ಹತ್ತಿಸಿದೆ !!!!
ಅಪರೂಪದಾ ಶಿಲೆಯು ಸಾಣೆಯಾದ ಮೇಲೆ -
ಅತ್ಯ೦ತ ಹೊಳಪು ,
ಕಾಠಿನ್ಯದ ಪರಾಕಾಷ್ಟೆ,
ಉನ್ನತ ಪಾರದರ್ಶಕತೆ,
ಬೆಳಕಿನೊಡನೆ ಸೇರಿ ವರ್ಣಗಳ ವಿಭಜನೆ,
ಮತ್ತು ನೋಡುಗರಿಗೆ ಕಣ್ಣಿಗೆ ಹಬ್ಬ !
ಇದಕೆ೦ದೆ ಇದು ಎಲ್ಲರ ಅ೦ದಕ್ಕೆ ಮೋಹಕದ ಮಾಯೆ,
ಅದಕೆಂದೇ ಮುಗಿಬಿದ್ದಿಹರು ಮನುಜರು ತೆವಲಿಗೆ !!!
















ಇದು
ನದಿಯ ಪಾತ್ರ ,
ಇಕ್ಕೆಲದಲ್ಲಿ ಸಹಸ್ರಮಾನ ಶತಮಾನದ ಹೂಳು ಸ೦ಗ್ರಹ ,
ಯಾರಿಗೋ ಸಿಕ್ಕಿಹುದು ಆಕಸ್ಮಿಕಕ್ಕೆ ಇಲ್ಲಿ ವಜ್ರವೊ೦ದು!!





















ಇದ್ದಿರಬಹುದು ಇನ್ನು ಹತ್ತು ಹಲವಾರು !!! ಯಾರಿಗ್ಗೊತ್ತು?
ಅದಕೆ೦ದೆ ಹಿ೦ದೆ ಬಿದ್ದಿಹೆವು
ಸಲಿಕೆ- ಪುಟ್ಟಿಯ ಹೊತ್ತು !!
ಅಗೆದು ಬಗೆದು ಜಾಲಾಡಲು!!!

ವಜ್ರ ಹುಡುಕಿ ಹೊಟ್ಟೆ ಹೊರೆಯಲು!!!




















ನದಿಯ ಇಕ್ಕೆಲದ ಪಾತ್ರದಾ ಮರಗಳ ಮಾರಣ,
ತೆಗೆದು ಸಾಣಿಸಬೇಕಲ್ಲ ಅದರಡಿಯಲ್ಲಿರುವ
ಸಹಸ್ರಮಾನದಾ ಹೂಳಿನಾ ಮಣ್ಣ
.





















ನೀರ ಹರಿಸಿ, ಹಾಯಿಸಿ, ಗಟ್ಟಿಯಾದ ಹೂಳುಮಣ್ಣ ಸಡಿಲಿಸಿ,
ತೆಗೆದು ಗಾಲಿಸಬೇಕಲ್ಲ ವಜ್ರಕ್ಕಾಗಿ!!




















ಸಡಿಲಿಸಿದ ಮಣ್ಣ, ಆದೆ ನದಿಯ ನೀರಲ್ಲಿ, ಗಾಲಿಸಿ, ಸೋಸುತಿಹೆವು
ಹುಡುಕಬೇಕಲ್ಲ ವಜ್ರ !!!!
ಸಣ್ಣ ಚೆಪ್ಪರವೊ೦ದು, ಬಿಸಿಲ ರಕ್ಷಣೆಗೆ ಎ೦ದು ಕಟ್ಟಿಹೆವು ನಾವು-
ತೆ೦ಗಿನಾ ನಾರು ಮತ್ತು ಬಿದಿರಿನಲ್ಲಿ.





















ಗಾಲಿಸುವ ಜನರು
ಬೇರ್ಪಡುತಲಿಹುದು ಜಿನುಗಾದ ಮಣ್ಣು
ಜರಡಿಯಾ ಅಡಿಯಿ೦ದ ನೀರಲ್ಲಿ ಇಳಿದು !
ಶೇಖರಣೆಯಾಗುತಿಹುದು ಹರಳು ಜರಡಿ ಮೇಲೆ !!




















ಇವರಾರಪ್ಪ ನಮ್ಮ ಬದುಕನ್ನು ಚಿತ್ರಿಸುವ ಪರದೇಶಿಗಳು ????




















ಹರಳುಗಳನ್ನು ಒ೦ದೊ೦ದಾಗಿ ಎತ್ತಿ ಪರೀಕ್ಷಿಸಬೇಕಾಗಿದೆ
ವಜ್ರ ಅಹುದೋ ಅಲ್ಲವೋ ಎಂದು!!





















ಹೆಕ್ಕಿದಾ ಹರಳುಗಳಾ ಹತ್ತಿರದ ನೋಟ
ವಜ್ರಕ್ಕಾಗಿ ನಡೀಬೇಕು ಇನ್ನು ಹುಡುಕಾಟ !!





















(ನನ್ನ ಕೈಯಲ್ಲಿ ಕ್ಷಣಿಕ ಸಮಯದಿ ಪವಡಿಸಿದ ಯಾರದೋ
ಶ್ರಮದ ಮತ್ತು ಯಾರ ಮೈ ಅಲ೦ಕಾರವಾಗುವಾ ವಜ್ರ)

ಸಿಕ್ಕಿಹುದು ಒ೦ದು ಪುಟ್ಟ ವಜ್ರದಾ ಹರಳು
೨೦೦ ರಿಂದಾ ೨೫೦ ಜನರ ಒ೦ದು ದಿನದಾ ಶ್ರಮ
ಒಮ್ಮೊಮ್ಮೆ ಇದೂ ಇಲ್ಲ ಅವರ ಪಾಲಿಗೆ!
ಮತ್ತೊಮ್ಮೊಮ್ಮೆ ಹತ್ತು ಹಲವಾರು!!
ಬ೦ದು ಹೊತ್ತೊಯ್ಯುವನು ವಣಿಕ ಬೆಲೆ ಕಟ್ಟಿ ಕೊಟ್ಟು,
ಮಾರಿ ಹೊರೆಯುವರು ಹೊಟ್ಟೆ,
ಅವರು
ಶ್ರಮಕೆ
ತಮ್ಮ ಮೈ ಕೊಟ್ಟು !!

Wednesday, April 21, 2010

"ಕಗ್ಗತ್ತಲೆಯ ಖಂಡದಲ್ಲಿ ........ (ಭಾಗ ೨ )" ಬ೦ಗಾರದ ಹಿ೦ದೆ ಬದುಕು ಅರಸುತ್ತಾ



















ಹಸಿರ ಸೀರೆಯ ಹೊದ್ದ ತಿರೆಯಾ ಒಡಲಲ್ಲಿ ,
ಬಗೆಬಗೆಯ
ಖನಿಜ ನಿಕ್ಷೇಪ .
ಮನುಜನಾ ಆಶೆಗೆ ಬೇಕು ಇವುಗಳೆಲ್ಲಾ !
ಬಗೆದು
ತೆಗೆಯಲು ಇಲ್ಲ ಅವಳಾ ಆಕ್ಷೇಪ !!




















ಉರುಳಿದವು ಮರಗಳು ಧರೆಯೊಡಲಿಗೆ ಒರಗಿ
ಶಸ್ತ್ರಚಿಕಿತ್ಸೆಯ ಮುನ್ನ ಕ್ಷೌರ ಕರ್ಮದ೦ತೆ
ಗಣಿಗಾರಿಕೆಗೆ ತೆರವಾಗಿ !




















ಉರುಳಿ ಒಣಗಿದ ಮರಗಳ ಅ೦ತಿಮದಹನ
ಪ್ರಾರ೦ಭಗೊಳಬೇಕಿದೆ ಗಣಿಗಾರಿಕೆ
ಹೆಕ್ಕಿ ತೆಗೆಯಬೇಕಿದೆ ಖನಿಜ
ಚಲಿಸಬೇಕಿದೆ -ಬಡತನದಿ ನಿಂತ ಬದುಕು.




















೧೦೦ ಅಡಿ ಆಳದ ಸುರ೦ಗ- ತೆಗೆದಾಗಿದೆ,
ನಿಕ್ಷೇಪದ ಎಳೆಯ ಹುಡುಕಿ.
ತರುಣ -ಯುವಕರ ತಂಡ ತೆವಳಿ ತರಬೇಕಿದೆ,
ಬ೦ಗಾರದ ಅದಿರು ಹೆಕ್ಕಿ.



























ಆಳದಲ್ಲಿಹ ಯೆಜಮಾನ ತುಂಬಿ ಕೊಡುತಿಹನು
ಅದಿರು ತು೦ಬಿದ ಮಂಕರಿ
ಎಳೆದು ಗುಡ್ಡೆ ಹೊಯ್ಯುತಿಹೆವು,
ಸ೦ಸ್ಕರಿಸಿ
ಹುಡುಕಬೇಕಿದೆ
ಬದುಕ ಹೊರೆವ ಪರಿ




















ನಾನೇ ಬಾಲೆ!
ನನಗೊಂದು ಕೈಗೂಸು!!
ಬಿಟ್ಟಿರಲಾರೆನು ,
ಹೊತ್ತು ತಂದಿಹೆನು,
ಆಳದಾ ಗಣಿಗೆ, ಹೆಕ್ಕಿ ತೆಗೆಯಲು ಚಿನ್ನ!
ತು೦ಬಿಸಬೇಕಲ್ಲ ಹಸಿದೊಟ್ಟೆಗೆ ಅನ್ನ!!





















ಕೆಲಸದಾ ನಡುವೆ ಒ೦ದಿಷ್ಟು ವಿರಾಮ
ಚಹದೊಂದಿಗೆ ಮಂಥನ !
ತಾಯಂದಿರಿಂದ ಹಸಿದ ಕ೦ದಮ್ಮಗಳಿಗೆ
ಎದೆಹಾಲ ಸಿಂಚನ !




















ಬೇಗ ಬೇಗ ಅಗೆದು ತುಂಬಿಕೊಡಿ
ಹೊರುವವರಿಗಿಲ್ಲ ಕೆಲಸ!!





















ಪುಟ್ಟ ಕ೦ದರು ನಾವು ಪುಟ್ಟ ಮಂಕರಿಯಲ್ಲಿ
ಹೊತ್ತು ಸಾಗಿಸುವೆವು ಅದಿರು
ಸ೦ಸ್ಕರಿಸುವರು ಅದನ್ನು ವೃದ್ಧ ಅಜ್ಜ -ಅಜ್ಜಿಯರು!!





















ಕಲ್ಲಿನಲ್ಲಿದೆ ಕಣ್ಣಿಗೆ ಕಾಣುವ ಬಂಗಾರ
ಇ೦ತಹ ಹಲವು ಸಿಕ್ಕಲ್ಲಿ ಅದು ನಮಗುಪಕಾರ





















ಪುಟ್ಟ ಪೋರರು ಹೊತ್ತು ತ೦ದಿಹರು ಅದಿರು
ನೀರಲ್ಲಿ ಅದನ್ನು ಗಾಲಿಸಿ ಬೇರ್ಪಡಿಸುತಿಹೆವು ಚಿನ್ನ



















ಅದಿರನ್ನು ಗಾಲಿಸಿ ಬಂಗಾರ ಬೇರ್ಪಡಿಸುವ ತೊಟ್ಟಿ
ವಯೋವೃದ್ಧರಿಗೊಂದು ಹಗುರ ಚಾಣಾಕ್ಷ ವೃತ್ತಿ .
























ನಮ್ಮ ಬದುಕನ್ನು ಸೆರೆಹಿಡಿಯುವ ಇವರು ಯಾಕಿಲ್ಲಿ?
ನೋಟದಿ ಕೊಲ್ಲುತಿಹ ಪ್ರಶ್ನೆಗಳು ಇದಕೆ ಉತ್ತರವೆಲ್ಲಿ?



















ಇಡೀದಿನದ ಕುಟುಂಬದವರೆಲ್ಲ ಶ್ರಮ
ದಕ್ಕಿದ್ದು ನಮಗಿಷ್ಟು!
ಯೌವ್ವನದ ಜನ ಅಗೆದು ಬಗೆದು ಎಳೆತ೦ದರು ಅದಿರು ಹೊರಕ್ಕೆ,
ಮಕ್ಕಳು ಸಾಗಿಸಿದರ ಅದನ್ನು ಸ೦ಸ್ಕರಣ ಶಿಬಿರಕ್ಕೆ,
ವೃದ್ಧರು ಸ೦ಸ್ಕರಿಸಿದರು ಚಿನ್ನ ಹೆಕ್ಕುವದಕ್ಕೆ,
ನಮ್ಮೆಲ್ಲರ ಶ್ರಮ ಯಾವದೋ ದೇಶದ ಜನಕ್ಕೆ ಶೃಂಗಾರ
ನಮ್ಮ ಬದುಕಿಗದು ಅನ್ನ- ಆಹಾರ .

(ಪಾಶ್ಚಿಮಾತ್ಯ ಆಫ್ರಿಕಾ ಖಂಡದ ಗಿನಿ-ಕೊನಾಕ್ರಿ ಎ೦ಬ ದೇಶದಲ್ಲಿ ಜನರು ಹೊಟ್ಟೆಪಾಡಿಗೆ ದುಡ್ಡು ಮಾಡಲು ಗಣಿಗಾರಿಕೆ ಮಾಡುವ ಚಿತ್ರಣದ ಲೇಖನ. ಅವರ ಉದ್ದೇಶ ಕೇವಲ ಬದುಕು -ಹೊಟ್ಟೆ ಹೊರೆಯುವದು. ಲ್ಲಿ ನಡೆವುದು ಮಾನವ ಶಾರೀರಿಕ ಗಣಿಗಾರಿಕೆ. ಅಲ್ಲಿನ ಪರಿಸರದ ಸಾಮಾಜಿಕ, ಆರ್ಥಿಕ, ರಾಜಕೀಯ, ತಾಂತ್ರಿಕ ಪರಿಸ್ಥಿತಿಯ ಜೊತೆಗೆ ಅವರ ಬದುಕು ಚಿತ್ರಣವನ್ನು ಚಿತ್ರಲೇಖನದಲ್ಲಿ ಹೇಳದೆ ಮಾಡುವ ಪ್ರಯತ್ನವಿದೆ -ಅದು ಓದುಗರಿಗೆ ವೇದ್ಯವಾಗುವದು ಎ೦ದು ನನ್ನ ಅನಿಸಿಕೆ)


Saturday, April 10, 2010

ಕಗ್ಗತ್ತಲೆಯ ಖಂಡದಲ್ಲಿ ........ (ಭಾಗ ೧ ) ಚೆದುರಿದ ಬದುಕು



















ಚೆದುರಿದ ಬದುಕು ಸುತ್ತಮುತ್ತೆಲ್ಲ ಚೆಲ್ಲಿ
ಎಳೆಯರ
ಕಂಗಳಲ್ಲಿ ಕನಸುಗಳಿಗೆ ಮುಗಿವೆಲ್ಲಿ ?




















ಬಹು-ಪತ್ನಿ , ಬಹು ಸಂತಾನ -ಜೀವನದ ಕೊಸರಿಲ್ಲಿ
ಯಾರೆನ್ನುವರು ನಮಗಿಹುದು ಬಡತನವಿಲ್ಲಿ ?





















ಬತ್ತುತ್ತಾ
ಇವೆ ಜೀವದಾಸರೆ
ಹೊತ್ತು
ತರುತಿಹಳು ಎಳೆ ಬಾಲೆ ಜೀವಧಾರೆ


























ಸಾರ್ವಜನಿಕ ಸ೦ಪರ್ಕದಾ ಸುಖವಿಲ್ಲ !
ಬಡತನದಲ್ಲೂ ಗುಂಪಿನಲ್ಲಿ ಬಾಡಿಗೆಯಾ ಕಾರು
ಕುರಿಹಿಂಡಿನಾ
ತರದಿ ತುಂಬಿ
ಎಳೆಯುತಿಹಲಿದು
ಬಾಳ ತೇರು!






















ಪರದೇಶದಲ್ಲಿ ಪರದೇಶಿಗಳು ಇವರಿಲ್ಲಿ.
ಆದರು
ಸುಖಿಗಳು - ಇರಲು
ತಲೆಯ
ಮೇಲೆ ಸೂರಾಗಿ ಭಾನು,
ಅವರನೆತ್ತಿ ಹೊತ್ತ ವಸುಂಧರೆಯ ಮಡಿಲು.






















ಇಡೀ ದನವ ನೇತಾಡಿಸಿ, ಕಡಿಸಿ, ಒಡಲ ತುಂಬಿಸುವ ಸಂತೆ
ಮಿಕ್ಕಿದ
ತುಂಡುಗಳ, ಹಿಟ್ಟಚ್ಚಿ, ಎಣ್ಣೆಯಲಿ ಕರಿದು ಮಾರುವ ವರತೆ!






















ಮೂರುಕಲ್ಲಿನ ಮಧ್ಯ, ಪುಡಿ ಕಟ್ಟಿಗೆಯ ಬೆಂಕಿ,
ಹೊತ್ತಿ ಉರಿಸುತಲಿಹದು, ಪಾತ್ರೆಯಲ್ಲಿನ ನೀರು
ಪುಟ್ಟ
ಕಂದನ ಕಣ್ಣು ನೆಟ್ಟ ನೋಟದಲ್ಲಿ
ನೀರಿಕ್ಷಿಸುತಿಹುದು
"ಗಂಜಿಯಾಗುವದು ಎಂದು?"





















ಮಾ೦ಸಕ್ಕಿ೦ತಲೂ ತುಟ್ಟಿ ತರಕಾರಿ ಇಲ್ಲಿ
ಕೊಳ್ಳುಗರು
ಇಹರೆಲ್ಲಿ?



















ನಾಲ್ಕು ಹೆಂಡರ ಮುದ್ದಿನ ಮಾವ ನೀಲಿ ನಿಲುವಂಗಿ ತಾತ!!
ಪ್ರೀತಿ
ಎಲ್ಲರೆಡೆ ಸಮಾನುಪಾತ !!!
ಗ್ರಾಮಕ್ಕೆ
ಮುಖ್ಯಸ್ಥ !!!!





















ಬಡತನಕೆ ದಿಕ್ಕೆಟ್ಟು ಕಾಡಿನಲ್ಲಿ
ಕಟ್ಟಿಕೊಂಡಿಹನು ಗುಡಿಸಲೊಂದನ್ನು.
ಕರೆಯುವರು ನಾಡಿನ ಜನ ಇವಗೆ ರಾಬಿನ್ನುಹುಡ್ದು
.
ಅವನ ಅನುಪಸ್ಥಿತಿಯಲ್ಲಿ ನಾನು ಕೊಡುತಿಹೆನು ಪೋಸು !!!!









































ಗುಂಪು ಕಾರಿಗೂ ನಮಗಿಹದು ಕಷ್ಟ !
ಕತ್ತೆಬಂಡಿಯು ಪುರೈಸುತಲಿಹದು ನಮ್ಮ ಸಾಗಾಟ !!





















ಮಕ್ಕಳಾಟದ ಮೋಜು, ಆಟ , ತುಂಟಾಟ
ಬಾಲ್ಯ ನಗುತಲಿಹದು!!






















ಬೆಲ್ಲ -ಅವಲಕ್ಕಿ ಗಂಜಿ ಮೆಲ್ಲುತಿಹನು ಪೋರ
ತುಂಬಿಸುತಿಹನು ಹಸಿದ ಉದರ !!!




















ಸಿಹಿಗಂಜಿಯ ಸಹಬಾಳ್ವೆಯ ಊಟ
ಕಣ್ಣಿಗೆ
ಮುಂಜಾನೆಯ ರಮ್ಯನೋಟ