Thursday, January 28, 2010

ಸಕ್ಕರೆ ಮೇಲೊ೦ದರ ಚುಟುಕಿನ ನೆನಪು.




ಸಕ್ಕರೆ ಎ೦ದರೇನು ಮಾವಾ,
ಎ೦ದು ಅಕ್ಕರೆಯಲಿ ಕೇಳಿದಳು,
ಅಕ್ಕನ ಚಿಕ್ಕ ಮಗಳು.
ಹೇಳಿದೆ ಪುಟ್ಟಿ,
ಆ ವಸ್ತು ಬಲು ತುಟ್ಟಿ,
ಅಪರೂಪಕ್ಕೊಮ್ಮೆ
ನೀ ನಕ್ಕರೇ ನಿನ್ನ ಹಾಲುಗೆನ್ನೆಯಲಿ ಗುಳಿ,
ಅದನು ಕಡು ನನಗಾಗುವಾ-" ಸಿಹಿ",
ಉಳ್ಳವರೆಲ್ಲಾ ಕೊ೦ಡು -ಮಿಕ್ಕರೇ
ನನಗೂ ಒ೦ದು ತೊಲ ಸಿಕ್ಕರೆ!
ತ೦ದು ತೋರಿಸುತ್ತೆನೆ -ತಾಳೆ ತಾಯಿ,
ಮಾಡಿ ತಿನ್ನೋಣ ಕೊಬ್ಬರಿ ಮಿಠಾಯಿ!


{ಚಿಕ್ಕವನಿದ್ದಾಗ, ಸುಮಾರು ೧೯೭೭-೭೮ ರ ಸುತ್ತ ಮುತ್ತ, ಒಮ್ಮೇಲೆ ಸಕ್ಕರೆ ಬೆಲೆ ಗಗನಕ್ಕೆ ಹೋದಾಗ, ದೀಪಾವಳಿ ವಿಶೇಷಾ೦ಕವೊ೦ದರಲ್ಲಿ (ಬಹುಶಃ ಸುಧಾ ಇರಬಹುದು), ದಿನಕರ ದೇಸಾಯಿಯವರು (?) ಬರೆದ ಹನಿಗವನವೊ೦ದು, ಈಗ ಮತ್ತೆ ಸಕ್ಕರೆ ಬೆಲೆ ಗಗನಕ್ಕೆ ಹೋಗಿರುವ ಪ್ರಸ್ತುತ ಸ೦ಧರ್ಭದಲ್ಲಿ ನೆನಪಾಯಿತು.
ಸಕ್ಕರೆ ಸಿಹಿಯಾಗಿರುತ್ತದೆ ಎ೦ದು ಹೇಳಲು ಬಳಸಿದ ವಿಧ, ದುಡ್ಡಿದ್ದವರಿಗೆ ಸಿಕ್ಕು ಉಳಿದರೇ ದುಡ್ಡಿಲ್ಲದವರಿ ಸಿಗುತ್ತೆ ಎ೦ಬ ವಿಡ೦ಬಣೆ ತು೦ಬಾ ಅರ್ಥಪೂರ್ಣ.
ನನ್ನ ಸ್ಮೃತಿಪಟಲದಲ್ಲಿ ಉಳಿದ ಈ ಓದಿದ ಚುಟುಕು- ಮೂಲ ಬರಹದಿ೦ದ ವಿರೂಪವಾಗಿದ್ದರೇ ದಯವಿಟ್ಟು ಗಮನಕ್ಕೆ ತನ್ನಿ. ಹಾಗೂ ತಮಗೆ ಪತ್ರಿಕೆ ಮತ್ತು ಲೇಖಕರ ಬಗ್ಗೆ ಖಚಿತ ಮಾಹಿತಿ ಇದ್ದರೆ ನೀಡಿ. }

Thursday, January 21, 2010

ನನ್ನ ಆಶಯಗಳು





-೧-

ಗಾಳಿಗ೦ಧದ ತರದಿ ನೀ ಎನ್ನನಪ್ಪು ಗೆಳತಿ,
ಆ ಬಿಸಿಗೆ ಮರೆತೆಲ್ಲಾ ಎನ್ನೆದೆಯಾ ನೋವು ನೀರಾಗಿ-
ಕರಗಿ ಪ್ರೇಮಾಮೃತವಾಗಲಿ- ಜೀವಕ್ಕೆ ತ೦ಪಾಗಿ,
ಬದುಕಿನಾ ಅಶೆಯಾಗಿ, ಬುತ್ತಿಯಾಗಿ.

-೨-

ಒ೦ದು ಹಿಡಿ ಪ್ರೇಮವು ಈ ಜಗದ ಹಸಿವು
ದೊರೆತವರಿಗೆ ಹಸಿವು ಹೆಚ್ಚಾಗಲಿ.
ನೀಡುವವರ ಕೈ ಅಕ್ಷಯವಾಗಲಿ.
ಇದು ನನ್ನ ಬಯಕೆ.

-೩-
ನಿನ್ನ ಚೆಹರೆಯಾ ನೆನಪು-ಮೆಲುಕು,
ಮರೆಯಿಸಿ ಇಹ, ಮೆರೆಯಿಸಿ ಸಗ್ಗ,
ನನ್ನೆಲ್ಲಾ ಕನಸುಗಳಿಗೆ ರ೦ಗಿನಾ ಹಬ್ಬ.

ಮೇಘ ಸ೦ದೇಶ

ವಿರಹದುರಿಯಲ್ಲಿ ಬೆ೦ದು ಆವಿಯಾಗಿಹ ನನ್ನೆದೆಯಾ
ಭಾವಗಳು ದಟ್ಟೈಸಿ, ಮೋಡವಾಗಿ ನಿನ್ನೆದೆಯೆಡೆಗೆ
ಧಾವಿಸುತಿವೆ -ಅಲ್ಲಿರುವ ತ೦ಪನಡರಿಸಿಕೊ೦ಡು,
ಪುನರ್ಜನ್ಮ ಹೊ೦ದಿ ಮಳೆಯಾಗಿ ಹನಿಸಲು.
ಹಿಡಿದುಕೋ ಗೆಳತಿ... ಮಳೆಗರೆಯಿಸಿಕೋ......

Thursday, January 14, 2010

ಕನ್ನಡದಿಂದ ಇಂಗ್ಲಿಷಗೆ ತರ್ಜುಮೆ

ಕನ್ನಡದಿಂದ ಇಂಗ್ಲಿಷಗೆ ತರ್ಜುಮೆ ಮಾಡಿ,

೧. ಆನೆ ಹೋಗೆ ಹೋಗುತ್ತದೆ.
೨. ಶಿವಾಜಿಯ ಕಾಲದಲ್ಲಿ ಔರಂಗಜೇಬನ ಆಟ ನಡೆಯಲಿಲ್ಲ.
೩.
ನನ್ನ ಸ್ಕೂಟರ್ ಮರದಡಿ ನಿಂತಿದೆ.(
ಜಲನಯನ)
೪.
ಬೊಂಬು ಸುತ್ತಲೂ ಗಟ್ಟಿ ಮಧ್ಯೆ ಟೊಳ್ಳು(ಜಲನಯನ-ಅಜ಼ಾದ)
೫.
ಸುಂದರಕಾಂಡ(ಜಲನಯನ-ಅಜ಼ಾದ)
೬.
Shanta lost her wicket and she is out(ಜಲನಯನ-ಅಜ಼ಾದ)
೭. ಸುಮ್ಮ ಸುಮ್ಮನ್ನೆ (ಗೌತಮ ಹೆಗಡೆ)
೮. ನೀನು ನಿಮ್ಮಪ್ಪನಿಗೆ ಎಷ್ಟನೆಯ ಮಗ.(ಸುಬ್ರಮಣ್ಯ ಭಟ್ಟರು) ಸರಿ ಉತ್ತರ ಇನ್ನೂ ಸಿಕ್ಕಿಲ್ಲ!!!!
೯. ನೀನು ದಾದಾಗಿರಿ ಮಾಡಬೇಡ..ನಾನೊಬ್ಬನೇ ನಿನ್ನನ್ನು ಉಡಾಯಿಸಿಬಿಡುತ್ತೇನೆ. (ಸುಬ್ರಮಣ್ಯ ಭಟ್ಟರು)
೧೦. ಎನೇನು ಆಗಬೇಕೊ ಅದು ಹಾಗೆ ಆಗುತ್ತೆ.....((ಸವಿಗನಸು-ಮಹೇಶ)
೧೧. ಅಡುಗೆಯವನು ಅಡುಗೆ ಮಾಡತ್ತಾನೆ (ಚುಕ್ಕಿ ಚಿತ್ತಾರ)
೧೨.
ಕಿಟಕಿ ತೆರೆ, ಗಾಳಿ ಒಳಗೆ ಬರಲಿ.(ಆನ೦ದ)
೧೩. ಎಲ್ಲರೂ‌ ಹೋಗಿ ಸ್ನಾನ ಮಾಡಿಕೊಂಡು ಬನ್ನಿ.(ಆನ೦ದ)
೧೪. ನಿನ್ನೆ ನನ್ನ ಹೆಂಡತಿ ಜೊತೆ ಸಿನೆಮಾಗೆ ಹೋದಾಗ ನಿನ್ನನ್ನು ನೋಡಿದೆ.(ಆನ೦ದ)
೧೫. ಅವರವರ ಬಿಲ್ ಅವರೇ ಕೊಡಬೇಕು.(ಆನ೦ದ)

Answer:

1. Elephant goese goes.
2. In the leg of Shivaaji Aurangjeb's play was not walking.
3.
My scooter is under standing the tree.(added by JALANAYANA-Azad)
4. Round round strong nothing in centre.(added by
JALANAYANA-Azad)
5. Beautiful stem (added by JALANAYANA-Azad)
6. ಶಾಂತ ತಮ್ಮ ಗೂಟವನ್ನು ಕಳೆದುಕೊಂಡು ಹೊರಗಾದರು.(added by JALANAYANA)
7. Simpsimply (Added by Goutam Hegde)
8. What is your roll number (Subramanya Bhatt) ಸರಿ ಉತ್ತರ ಇನ್ನೂ ಸಿಕ್ಕಿಲ್ಲ!!!!
9. You dont daadaagiri...I single blasting you (Subramanya Bhatt)
10. What will happeno it will happeno happen...(Saviganasu -Mahesh)
11. The cookker cooks food (Chukki-Chittaara)
12.
O the window, let the air force come in.(Anand)
13. G and take all the bath.(Anand)
14. I saw you with my wife yesterday in theater.(Anand)
15. T their bill their their pay. (Anand)

ವಿ.ಸೂ. ಇನ್ನೂ ಅನುವಾದಗಳ ಸಂಗ್ರಹ ತಮ್ಮಲ್ಲಿ ಇದ್ದರೆ ಸೇರಿಸಬಹುದು ಪ್ರತಿಕ್ರಿಯೆಯಲ್ಲಿ.

Tuesday, January 5, 2010

ಮಾನವ ಸ೦ಪನ್ಮೂಲ ನಿರ್ವಹಣೆಯ ಸುತ್ತ ಒ೦ದು ಕಥೆ. (A STORY AROUND HUMAN RESOURCES MANAGEMENT) ಕೊನೆಯ ಕ೦ತು

ಮಿತ್ರ ಸೀತಾರಾಮ ಮು೦ದುವರೆಸಿದ..
"ರಾಜಾ ನಿನ್ನ ಮಹತ್ವಾಕಾ೦ಕ್ಷೆಗೆ -ಹುಲ್ಲು/ರುಚಿ ಭಕ್ಷ ತಿ೦ದು.. ಅಥವಾ ಹೊಡೆತ ತಿ೦ದು... ಅಥವಾ ಪೈಪೋಟಿ ಮಾಡಿ... ಕೆಲಸ ಮಾಡುವ ಕುದುರೆಗೆ, ಒ೦ದಿಲ್ಲೊ೦ದು ದಿನ ಆದರ ಕೆಲಸದಲ್ಲಿ ಆಸಕ್ತಿ ಕು೦ದುವದು ಸಹಜ. ಅದರೆ ನಿನ್ನಲ್ಲಿನ್ನ ಮಹತ್ವಾಕಾ೦ಕ್ಷೆಯ ಕಿಚ್ಚು ಅದರಲ್ಲಿದ್ದರೇ ಮಾತ್ರ ಸಾಧನೆಯಲ್ಲಿ ನಿರ೦ತರತೆ ಸಾಧ್ಯ. ಇದಕ್ಕಾಗಿ ನೀನು ಕುದುರೆಯಾಗಿ(ಅದರ ಅಪ್ಯಾಯಮಾನ ಮಿತ್ರನಾಗಿ), ನಿನ್ನಲ್ಲಿರುವ ಮಹತ್ವಾಕಾ೦ಕ್ಷೆಯ ಕಿಚ್ಚನ್ನು ಅದರ ಎದೆಯಲ್ಲಿ ಹೊತ್ತಿಸಿ ಅದನ್ನು ಮಹಾರಾಜನನ್ನಾಗಿಸು
(Self Empowerment). ಮು೦ದೆ ನೋಡು -ನಿರ೦ತರತೆಯ ಸಾಧನೆಯನ್ನು"
ಇದನ್ನು ಕೇಳಿ ಇನ್ನಷ್ಟು ಗೋಜಲಿನಲ್ಲಿ ಬಿದ್ದ ಮಹಾರಾಜ ಕೇಳಿದ....
"ಅದು ಹೇಗೆ ಮಾಡುವದು"
ಈ ಪ್ರಶ್ನೆಗೇ ನಸುನಗುತ್ತಾ ಸೀತಾರಾಮ ಮಾತು ಮು೦ದುವರೆಸಿದ..
" ರಾಜ ಕುದುರೆಗೆ ನೀನು ಆಪ್ತನೆನ್ನುವ ವಿಶ್ವಾಸ ಬರಬೇಕು. ಅ೦ದರೇ ನೀನು ಅದರ ಒಡನಾಟ ಹೆಚ್ಚಿಸಿಕೊಳ್ಳಬೇಕು, ನಿನ್ನ ಆಪ್ತ ಕ್ಷಣಗಳನ್ನ ಅದರೊಟ್ಟಿಗೆ ಹ೦ಚಿಕೊಳ್ಳಬೇಕು"
"ಅ೦ದರೇ ಬೆಳಿಗ್ಗೆ ನೀನು ಹವಾಸೇವನೆಗೆ ಹೋಗುವಾಗ ಕುದುರೆಯನ್ನು ನಿನ್ನ ಜೊತೆ ತೆಗೆದುಕೊ೦ಡು ಹೋಗು ಅದರೇ ನೆನಪಿಟ್ಟುಕೋ ಅದರ ಮೇಲೆ ಕುಳಿತುಕೊಳ್ಳಬೇಡ-ಜೊತೆಜೊತೆಯಲ್ಲಿ ನಡೆ ಸಾಧ್ಯವಾದರೇ ಸಣ್ಣ ಚೇಷ್ಟೇಗಳನ್ನು ಮಾಡು, ಮೈದಡವು, ಅದಕ್ಕಿ೦ತ ವೇಗ ನಡೆ, ಹುಸಿ ಸ್ಫರ್ಧೆ ಮಾಡು, ಕುದುರೆಯ ವೇಗಕ್ಕೆ ನಿನಗೆ ನಡೆಯಲಾಗದುದ್ದಕ್ಕೆ ಅರಿವು೦ಟು ಮಾಡು, ಅದನ್ನು ಖುಷಿಯಿ೦ದ ಅಭಿನ೦ದಿಸು, ಸೋತದ್ದಕ್ಕೆ ಹುಸಿ ವ್ಯಸನ ತೋರಿಸು, ನಿನ್ನ ಕೈಯಿ೦ದ ಅದಕ್ಕೆ ಉಣಬಡಿಸು, ನಿನ್ನ ಊಟವನ್ನು ಅಪರೂಪಕ್ಕಾದರೂ ಲಾಯದಲ್ಲಿ ಅದರೊಡನೆ ಮಾಡು, ನಿನ್ನ ತಟ್ಟೆಯಲ್ಲಿನ ತಿನಿಸು ಅದಕ್ಕೂ ನೀಡು, ನಿನ್ನ ಮಹತ್ವಾಕಾ೦ಕ್ಷೇಗೆ- ಕುದುರೆ ಹೇಗೆ ಪೂರಕ ಅನ್ನುವದ ವಿವರಿಸು, ಅದರೊ೦ದಿಗೆ ಮೆಲುವಾಗಿ ಮಾತನಾಡು, ಅದರ ಒಡನಾಟ ಬೆಳೆಸಿಕೊ ಇಷ್ಟು ಮಾಡು ಸಾಕು"
"ಕುದುರೆ ಒಮ್ಮೆ ನಿನ್ನ್ನನ್ನು ತನ್ನ ಆಪ್ತನೆನಿಸಿಕೊ೦ಡರೇ ಸಾಕು ನಿನ್ನ ಗುರಿಗಾಗಿ ಅದು ತನ್ನ ಪ್ರಾಣ ಕೊಡುವ ಹ೦ತಕ್ಕೆ ಮುಟ್ಟುತ್ತದೆ. ದೂರ ಹೋಗಬೇಕಾದ ನಿನ್ನ ದಿರಿಸು ಧರಿಸಿ ಅದರ ಮು೦ದೆ ಬ೦ದರೇ ಅದು ಹತ್ತು ಎ೦ಬ೦ತೇ ನಿನ್ನ ಮು೦ದೇ ಬಾಗುವದು" "ಸವಾರಿ ಪೈಪೋಟಿಯ ಧಿರಿಸು ಧರಿಸಿ ಅದರ ಮು೦ದೆ ನಿ೦ತರೇ ಸಾಕು, ತನ್ನ ಪ್ರತಿಶತ ಶಕ್ತಿಯನ್ನು ಸ್ಫರ್ಧೇಗೆ ಅಳವಡಿಸುತ್ತದೆ" "ಗೆದ್ದಾಗ ಅದರೊಡಣೆಯೆ ಸ೦ಭ್ರಮಿಸು, ಸೋತಾಗ ಅದರೊಡನಿದ್ದು ಅದನ್ನು ಸಮಧಾನಿಸಿ (ನಿನ್ನ ದು:ಖ ಮರೆತು) ಎಲ್ಲಿ ತಮ್ಮಿ೦ದ(ತಪ್ಪಿಯೂ ನಿನ್ನಿ೦ದ ಅನಬೇಡ) ತಪ್ಪುಗಳಾದವು , ತಾವೂ ಮು೦ದೇ ಮಾಡಬೇಕಾದುದೇನೂ ಎ೦ಬುದನ್ನು ನಿನಗೆ ಕ೦ಡ೦ತೆ ವಿವರಿಸು"
"ಗೆಲುವಿನ ಶ್ರೇಯಸ್ಸು ಕುದುರೆಗಿರಲಿ"
"ಸೋಲಿನಲ್ಲಿ ಎನೂ ಆಗಿಲ್ಲವೆ೦ಬ೦ತೆ ಅದರಲ್ಲಿನ್ನ ಸ್ಫೂರ್ತಿಯನ್ನು ಹುರಿದು೦ಬಿಸು"
( Give credit of winning to the team & keep consequences of failure with you i.e. Team Leader)
ಸೋಲಿನಿ೦ದ ಕಲಿಯಬೇಕಾದ ಪಾಠಗಳೇನು? ಎಡವಿದ್ದೇಲ್ಲಿ? ಮು೦ದೇ ಎಡವದ೦ತಿರಲೂ ಮಾಡಬೇಕಾದುದೇನು ಎ೦ಬ ಕಾರ್ಯತ೦ತ್ರ ರಚಿಸು, ಅದನ್ನು ಜಾರಿಗೊಳಿಸು" (learn from failures)
" ಇ೦ತಹ ಸಾಧನೆಯ ಹಾದಿಯಲ್ಲಿ ನಿನಗೆ ಸೋಲಾದರೂ ಅದು ವೀರೋಚಿತವಾಗಿರುತ್ತೆ ಅದರಿ೦ದ ನಿನ್ನ ಮು೦ದಿನ ಸಾಧನೆಯ ಹಾದಿ ಇನ್ನಷ್ಟು ದೃಡತೆಯಾದಾಗುತ್ತದೆ ಮತ್ತು ಸದೃಡವಾಗಿರುತ್ತೆ" (Enjoy the moments of efforts with joy irrespective of failure or victory)
'ಅದರೆ ನಿ-ನ್ನ ಅದರೊಡನೆಯ ಆಪ್ತತೆಯ ಭಾವ ಎ೦ದೂ ಆರದಿರಲಿ, ನಾಟಕೀಯವಿಲ್ಲದಿರಲಿ, ಮನಪೂಃರ್ವಕವಾಗಿರಲಿ ಹಾಗೂ ಸದಾ ವಿನೂತನವಾಗಿರಲಿ" (Maintain the team confidence, trust, co-operation & mutual communication)
ಪರಸ್ಪರರಲ್ಲಿನ ನ೦ಬಿಕೆ, ವಿಶ್ವಾಸ, ಸಹಾಯ ಮತ್ತು ತ೦ಡಸ್ಪೂರ್ತಿ ಕಾರ್ಯಾಚರಣೆ ಹಾಗೂ ಗೆಲುವು ಮತ್ತು ಸೋಲನ್ನು ಸಮನಾಗಿ ಸ್ವೀಕರಿಸುವಿಕೆ -ಸಾಧನೆ ಹಾದಿಯಲ್ಲಿನ ನಿರ೦ತರ ಮ೦ತ್ರಗಳಾದಾಗ, ಸಾಧನೆ ಯಾವತ್ತು ತೃಪ್ತಿ ನೀಡುತ್ತದೆ. ಈ ತೃಪ್ತಿಗೆ ಗೆಲುವೇ ಆಗಬೇಕೆ೦ದಿಲ್ಲ- ಸೋಲು ಸಹಾ ಆಗಬಹುದು.
"ಕರ್ಮಣ್ಣೇ ವಾಧಿಕಾರಸ್ತೇ ಮಾ: ಫ಼ಲೇಷು ಕದಚನಾ:"
"ನಿನ್ನ ಕರ್ತವ್ಯವನ್ನು ನೀ ನಿಷ್ಠೇ ಹಾಗೂ ಶ್ರದ್ದೆಯಿ೦ದ ಮಾಡು
ಫ಼ಲಾಫ಼ಲಗಳು ಕಾಲನ ನಿರ್ಣಯವನ್ನ ಅವಲ೦ಬಿಸಿವೆ"

ರಾಜನಿಗೆ ಮಿತ್ರನ ಈ ಮಾತು ಕೇಳಿ ಏನೋ ಅನಿರ್ವಚನೀಯ ಅನುಭವ..........

ಪರಿಸಮಾಪ್ತಿ
ರಾಜನು ಇದನ್ನು ಅಳವಡಿಸಿದನಾ?
ಸಾಧನೆಯ ಹಾದಿಯಲ್ಲಿನ ನಿರ೦ತರತೆ ಸಿಕ್ಕಿತಾ ? ಎ೦ಬ ಪ್ರಶ್ನೇಗೆ ಕಥೆಯಲ್ಲಿ ಉತ್ತರವಿಲ್ಲ.
ಅದರೇ ಇತಿಹಾಸದಲ್ಲಿದೆ.
  • ರಾಮ -ಹನುಮ೦ತ, ಸುಗ್ರೀವ, ವಿಭೀಷಣ.
  • ಕೃಷ್ಣ-ಪಾ೦ಡವರು
  • ದುರ್ಯೋಧನ-ಕರ್ಣ
  • ಶಿವಾಜಿ-ಕನ್ಹೊಜಿ
  • ನಾನಾಸಾಹೇಬ-ತಾತ್ಯಾಟೋಪಿ
ಎಲ್ಲಾ ಪುರಾಣ ಏಕೆ?
೧೮೦೦-೧೮೨೮ ರಲ್ಲಿ ರಾಬರ್ಟ್. ಓವೆನ್ (Robert Owen-called as father of personal management), ಈ ತತ್ವವನ್ನು ತನ್ನ ಸ೦ಸ್ಥೆಯಲ್ಲಿ ಅಳವಡಿಸಿ ಅತೀಹೆಚ್ಚಿನ ಯಶಸ್ವಿ ಹೊ೦ದಿದ ಔಧ್ಯೋಗಿಕ ಕ್ರಾ೦ತಿಯನ್ನೆ ಮಾಡಿದ ಕಾಲ. ಇದನ್ನು ತ೦ದೆ-ಮಕ್ಕಳ ನೋಟದ ಮಾನವ ನಿರ್ವಹಣೆಯ (Paternalistic Era) ಗುರುತಿಸಲಾಗುತ್ತದೆ.
ಜೆಮಷೆಟಜಿ ಟಾಟಾ ಸಹಾ ಅದ್ಭುತ ಭಾರತೀಯ ಉದಾಹರಣೆ !!

ಆದರೇ ಹೆಚ್ಚಿನ ದುಡ್ಡಿರುವ ಜನಕ್ಕೆ ಯಾಕೋ ಈ ಮಾರ್ಗ ರುಚಿಸುವದಿಲ್ಲ!!!!!

ನೀವು ಪ್ರಯೋಗಿಸಿ ನೋಡಿ-ಕನಿಷ್ಟ ಪಕ್ಷ ನಿಮ್ಮ ಕೆಳ ಕೆಲಸ ಮಾಡುವವರೊಡನೆ ಅಥವಾ ತ೦ಡದೊಡನೆ. .
ಪರಿಣಾಮ ನೀವು ಕ೦ಡೇ ಕಾಣುತ್ತೀರಿ.
ಏಕೆ೦ದರೇ ಇದನ್ನು ಪ್ರಯೋಗಿಸಿ ಅತೀ ಹೆಚ್ಚು ಲಾಭ ಪಡೆದಿರುವ ಒ೦ದು ಅಪರೂಪ ತ೦ಡದ ನಾಯಕ ಸೀತಾರಾಮ ನಾನೇ!!!

Monday, January 4, 2010

ಹೊಸ ವರ್ಷಕ್ಕೊ೦ದು ಹೊಸ ಸ೦ಕಲ್ಪ






ಹಿಕಗಳಿಗಾಗಿ ದುಡ್ಡಿನ ಹಿ೦ದೆ ಬೆನ್ನು ಹತ್ತಿ,

ಯಾ೦ತ್ರಿಕ ಬದುಕನ್ನು ನಮ್ಮದಾಗಿಸಿ,

ಬೇಕೆ೦ದುದನೆಲ್ಲಾ ಪಡೆದದರ ಮೇಲೆ ನಿ೦ತು,

ಏನೋ ಹಿ೦ದೆ ಬಿಟ್ಟು ಬ೦ದುದರ ನೆನಪಾಗಿ,

ಹಿ೦ತಿರುಗಿ ನೋಡಿದಾಗ,

-ಒಲವಿನ ಹೂವು,

-ನ೦ಬಿಕೆಯ ಬೇರು,

-ಬಾಲ್ಯದ ಆಟ-ಪಾಠ-ಹುಡುಗಾಟ,

-ನಿಷ್ಕಲ್ಮಶ ಪ್ರೇಮ,

-ಒಲವಿನ ಮಿತ್ರರ ಒಡನಾಟ,

-ಅಣ್ಣ-ತಮ್ಮ_ಅಕ್ಕ-ತ೦ಗಿ,

-ಅಪ್ಪ-ಅಮ್ಮ,

-ಭಾವನೆಗಳ ಮೇಳ,

-ಮಾನವತೆಯ ಒಡನಾಟ,

-ಜೀವಗಳ ಸಮ್ಮೋಹನ, ಇತ್ಯಾದಿ.... ಇತ್ಯಾದಿ....

ಅಯ್ಯೊ ಬಿಟ್ಟು ಬ೦ದುದು ಏಷ್ಟೋ...???

ಪಡೆದುದು ಇಷ್ಟೇ!!!! ಎನಿಸಿತ್ತು ,

ಸದಾ ಒಡನಾಟದಲ್ಲಿರುವ

ಗೆಳತಿಯೊಡನೆಯೂ ಇರುವ

ನನ್ನಲ್ಲಿ "ನನ್ನನ್ನೇ" ಕಳೆದುಕೊ೦ಡಿಹೆ........


ಹುಚ್ಚನ೦ತೆ ಬೆ೦ಬತ್ತಿ ಪಡೆದ-

ಎಲ್ಲ ಐಹಿಕಗಳ ಕಿತ್ತೆಸೆದು,

ಕಳೆದುಕೊ೦ಡಿಹ ನನ್ನೊಳಗಿನ- "ನನ್ನನ್ನು"

ಮೊದಲು ಹಿಡಿತ೦ದು, ಪ್ರತಿಷ್ಠಾಪಿಸಬೇಕು...

ಇದು ಹೊಸ ವರ್ಷದ ಸ೦ಕಲ್ಪ....

Monday, December 28, 2009

ಮಾನವ ಸ೦ಪನ್ಮೂಲ ನಿರ್ವಹಣೆಯ ಸುತ್ತ ಒ೦ದು ಕಥೆ. (A STORY AROUND HUMAN RESOURCES MANAGEMENT) PART -III

ಬಾಲ್ಯಕಾಲದ ಮಿತ್ರ ಸೀತಾರಾಮನ ಬಹುಕಾಲದ ನ೦ತರದ ಭೇಟಿಗೂ ಸಹಾ, ತನ್ನ ಮ೦ತ್ರಿಮಾಗಧರ೦ತಾ ಅನುಭವಿಗಳಿತ್ತ ಸಾಮ-ದಾನ-ಭೇಧ-ದ೦ಡಗಳ೦ತ ಪ್ರಭಲ ಅಸ್ತ್ರಗಳನ್ನು ಪ್ರಯೋಗಿಸಿಯೂ, ಕುದುರೆಯಿ೦ದ ನಿರ೦ತರ ಸಾಧನೆಯ ಉತ್ಕೃಷ್ಠತೆ ಪಡೆಯದೇ- ಚಿ೦ತಿತನಾದ ರಾಜನಿಗೆ ಮುದ ನೀಡಲಾಗಲಿಲ್ಲ....
ಆದರೂ ರಾಜನೂ ಸಕಲ ಮರ್ಯಾದೆಯಿ೦ದ ಮಿತ್ರನ ಆತಿಥ್ಯದಲ್ಲಿ ತೊಡಗಿದ್ದ.
ಮನದ ವ್ಯಾಕುಲ ಮುಚ್ಚಿ ರಾಜನು ವರ್ತಿಸುತ್ತಿದ್ದರೂ ಸೀತಾರಾಮನಿಗೆ ತನ್ನ ಮಿತ್ರ ರಾಜನಿಗೆ ಎನೋ ಮನದಲ್ಲಿ ವ್ಯಾಕುಲ ಕಾಡುತ್ತಿದೇ ಎ೦ಬ ವಿಷಯದ ಸುಳಿವು ಹತ್ತಿತು.
ಪ್ರಶಾ೦ತ ಸ೦ಧರ್ಭ ನೋಡಿ ರಾಜನಿಗೆ ಸೀತಾರಾಮ ಕೇಳಿಯೇ ಬಿಟ್ಟ " ಮಿತ್ರ ನಿನ್ನ ಮನದಲ್ಲೇನೋ ವ್ಯಾಕುಲ ನಿನ್ನನ್ನು ದುಗುಡಕ್ಕೇಡೆ ಮಾಡಿದೆ. ಅದೇನು ?" ಎ೦ದು.
ರಾಜನೂ ಮಿತ್ರನ ಈ ಪ್ರಶ್ನೇಗೆ ತನ್ನ ಮನವನ್ನ ಬಿಚ್ಚಿಟ್ಟ.
ತನ್ನ ಕುದುರೆ ಸವಾರಿ ಮಹತ್ವಾಕಾ೦ಕ್ಷೇ... ಒಳ್ಳೇ ಕುದುರೆ ತಳಿ... ಅದರ ಸಾಧನೆ... ಹಾಗೂ ದಿನಕಳೆದ೦ತೇ ಕಳಪೆ ಸಾಧನೆ.. ತನ್ನ ಪ್ರತಿಭಾವ೦ತ ಸಲಹೆದಾರರ ಸಲಹೆಗಳೂ ... ಆ ಸಲಹೆಗಳು ಸ್ವಲ್ಪ ಕಾಲಕ್ಕೇ ಸೂಕ್ತವಾದರೂ... ಕುದುರೆಯಿ೦ದ ನಿರ೦ತರ ಅಮೋಘ ಸಾಧನೆ ತರಲಾಗದ್ದು.... ಎಲ್ಲವನ್ನು ವಿವರಿಸಿ ತನ್ನ ಚಿ೦ತೆಗೆ ಕಾರಣ ವಿಶದೀಕರಿಸಿದ.
ರಾಜನ ಆಲೋಚನೆಗಳನ್ನು ಸಮಸ್ಯೆಗಳನ್ನು ಸಮಾಧಾನದಿ೦ದ ಕೇಳಿದ ಮಿತ್ರ ಸೀತಾರಾಮ ಹೇಳಿದ " ರಾಜ ಇದಕ್ಕೊ೦ದು ಸುಲಭ ಉಪಾಯವಿದೆ" ಎ೦ದ.
"ಸುಲಭ ಉಪಾಯವೇ!! ಏನದು?" ಬೆರಗಾಗಿ ರಾಜ ಕೇಳಿದ.
"ಸುಲಭ ಉಪಾಯವೇ...- ಕುದುರೆ ರಾಜನಾಗಬೇಕು, ನೀನು ಕುದುರೆಯಾಗಬೇಕು"
ರಾಜ ಇನ್ನೂ ಗೊ೦ದಲದ ಗೂಡಾದ ಮಿತ್ರನ ಈ ಮಾತು ಕೇಳಿ.
"ನೀನೆನೂ ಹೇಳುವದು ... ತಮಾಷೆ ಮಾಡುತ್ತಿರುವೇಯಾ ಮಿತ್ರಾ..." ಅಶ್ಚರ್ಯಭರಿತ ರಾಜ ಕೋಪದಲ್ಲಿ ಹೇಳಿದ.
"ತಮಾಷೆಯಲ್ಲ... ಇದು ಪರಿಹಾರ... ನಿನ್ನ ಗುರಿ ಮಹತ್ವಾಕಾ೦ಕ್ಷೆಗಳು ಕುದುರೆಯದಾಗಬೇಕು.... ಕುದುರೆಯ ಮನಸ್ಥಿತಿ ನಿನ್ನದಾಗಬೇಕು... ಅ೦ದರೇ ನೀನು ಕುದುರೆಯಾಗಬೇಕು... ಕುದುರೆ ರಾಜನಾಗಬೇಕು..... ಅಷ್ಟೇ"
ರಾಜನಿಗೆ ಮಿತ್ರನಿಗೆ ಹುಚ್ಚು ಹಿಡಿದಿದೆಯೆ ಎ೦ಬ ಸ೦ಶಯ ಶುರು ಆಯಿತು.. ಆದರೂ ಸಾವರಿಸಿ ಅರ್ಥವಾಗಿಲ್ಲ ಎ೦ಬ೦ತೆ ಮಿತ್ರನೆಡೆಗೆ ನೋಡಿದ.
ರಾಜನ ಮುಖ ನೋಡುತ್ತಾ ಸೀತಾರಾಮ ಮು೦ದುವರೆಸಿದ.....
" ರಾಜಾ ಎಲ್ಲಿಯವರೆಗೆ ನಿನ್ನ ಹಾಗೂ ಕುದುರೆ ನಡುವೆ ಪ್ರಭು-ಸೇವಕರ ಸ೦ಭ೦ಧವಿರುವುದೋ ಅಲ್ಲಿಯವರೆಗೆ ನಿರ೦ತರ ಸಾಧನೆಯ ಉತ್ಕೄಷ್ಟತೇ ಸಾಧ್ಯವಿಲ್ಲ!!! ಹಾ... ಈ ದಾರಿಯಲ್ಲಿ ಸಾಮ-ಧಾನ-ಭೇದ-ದ೦ಡಗಳು ಕೆಲವು ಸಮಯದ ವರೆಗೆ ಪ್ರಭಾವಕಾರಿಯಾಗಿ ಕೆಲಸ ನಿರ್ವಹಿಸಬಹುದು ಆದರೇ ನಿರ೦ತರ ಸಾಧನೆ ತರಲಾರವು..
ನಿರ೦ತರ ಸಾಧನೇ ಬೇಕಾದರೇ- ನಿನ್ನ ಮಹತ್ವಾ೦ಕಾ೦ಕ್ಷೇ.. ಕುದುರೆಯದಾಗಬೇಕು! ನಿನ್ನ ಕಿಚ್ಚು.. ಅದರದಾಗಬೇಕು! ನಿನ್ನ ಗುರಿ.. ಅದರದಾಗಬೇಕು! ಅದು ಅದರ ಗುರಿಗೆ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಬೇಕು! ನೀನು ಅದರ ಜೊತೆಗಾರನಾಗಿದ್ದರೇ ಸಾಕು.. ಅ೦ದರೇ ನೀನು ಕುದುರೆಯಾಗಬೇಕು.. ಅ೦ದರೇ ಕುದುರೆ ನಿನ್ನನ್ನು ಜೊತೆಗಾರ ಅ೦ದುಕೊ೦ಡರೇ ಸಾಕು"
ರಾಜನಿಗೆ ಈಗ ಮಿತ್ರನ ಮಾತುಗಳು ಸೋಜಿಗವೂ ಮತ್ತು ಆಸಕ್ತಿಕರವೂ ಅನಿಸಹತ್ತಿತ್ತು....

ಮು೦ದುವರೆಯುವದು......

Friday, December 25, 2009

ಮಾನವ ಸ೦ಪನ್ಮೂಲ ನಿರ್ವಹಣೆಯ ಸುತ್ತ ಒ೦ದು ಕಥೆ. (A STORY AROUND HUMAN RESOURCES MANAGEMENT) PART -II

ಮು೦ದುವರೆದ ಭಾಗ -೨

ಹ೦ತ -೩
ಭೇದ (Exploitation on Divide & Rule)
ರಾಜನಿಗೆ ಈ ಸರ್ತಿ ಜಾಣ ಮ೦ತ್ರಿಯ (personal & strategy manager)ಸಲಹೆ ತೆಗೆದುಕೊಳ್ಳಬೇಕೆನಿಸಿತು. ಏಕೆ೦ದರೇ ಅವನಿಗೆ ಹೊರ ಪ್ರಪ೦ಚದ ಅರಿವು ಹಾಗೂ ನಾನಾ ಜನರನ್ನು ಕುಶಲಮತಿಯಿ೦ದ ತನ್ನ ದಾರಿಗೆ ತರುವ ಚಾಣಕ್ಷತನ ಇತ್ತು. ಮ೦ತ್ರಿ ಹೇಳಿದ ಸಲಹೆ ಎ೦ದರೇ "ರಾಜ ಒ೦ದೇ ಕುದುರೆ ನೆಚ್ಚಿ ಮಹತ್ವಾಕಾ೦ಕ್ಷೆ ಸಾಧಿಸಲಾಗುವದಿಲ್ಲ. ಅಲ್ಲದೇ ಎರಡನೇ ಪರ್ಯಾಯ (second line or alternate) ಕುದುರೆ ಇದ್ದಾಗ, ಎರಡು ಕುದುರೆಗಳ ನಡುವೆ ನಿಮ್ಮನ್ನು ಮೆಚ್ಚಿಸಲು ಸ್ಪರ್ಧೆ ಏರ್ಪಟ್ಟು, (competition among peer group) ತಾವು ನೀರೀಕ್ಷಿಸಿದಕ್ಕಿ೦ತಲೂ ಹೆಚ್ಚಿನ ಮಟ್ಟದ ಸಾಧನೆ ಅವುಗಳಿ೦ದ ಹೊರಹೊಮ್ಮುತ್ತದೆ. ಅಲ್ಲದೇ ಒ೦ದರ ಅರೋಗ್ಯಕ್ಕೆ ತೊ೦ದರೆ ಇದ್ದಾಗ ಇನ್ನೊ೦ದರಿ೦ದ ನಮ್ಮ ಕಾರ್ಯ ಸಾಧಿಸಬಹುದು". ರಾಜನಿಗೆ ಮ೦ತ್ರಿಯ ಈ ಸಲಹೆ ತು೦ಬಾ ಅಪ್ಯಾಯಮಾನವಾಯಿತು. ಕೂಡಲೇ ಸಲಹೆಯನ್ನು ಜಾರಿಗೊಳಿಸಲಾಯಿತು. ಮತ್ತೊ೦ದು ಅದೇ ತಳಿಯ, ಅದರ ಹಾಗಿನ ಉತ್ಕೃಷ್ಟ ಕುದುರೆ ತ೦ದು ಜೊತೆ ಜೊತೆಯಲ್ಲಿ ಪ್ರಯತ್ನಿಸಲಾಯಿತು. ಯಾವ ಕುದುರೆ ಸಾಧನೆಯ ಗರಿಮೆ ಮುಟ್ಟುವದೋ ಅದಕ್ಕೆ ಪ್ರಾಶಸ್ತ್ಯ ಕಲ್ಪಿಸಿ, ಇನ್ನೊ೦ದನ್ನು ಕಡೆಗಾಣಿಸುವ ನೀತಿ (Divide & Rule) ಪ್ರಾರ೦ಭವಾಯಿತು. ಅಸ್ತಿತ್ವಕ್ಕಾಗಿ ಎರಡು ಕುದುರೆಗಳು ಪರಸ್ಪರ ಪೈಪೋಟಿಯಲ್ಲಿ (struggle for existence)ಅತ್ತುನ್ನತ ಸಾಧನೆ ಮೆರೆದವು. ಚೆನ್ನಾಗಿ ಸಾಧನೆ ಮಾಡಿದ ಕುದುರೆಯನ್ನು ಮೇಲೆತ್ತಿ, ಸಾಧನೆಯಲ್ಲಿ ಹಿ೦ದುಳಿದ ಕುದುರೆಯನ್ನು ಮೂಲೆಗು೦ಪು ಮಾಡುವದು, ಸಾಧಿಸುತ್ತಿರುವ ಕುದುರೆ ಕಳಪೆ ಪ್ರದರ್ಶನ ನೀಡಿದರೆ ಮತ್ತೆ ಮುಲೆಗು೦ಪಾದ ಕುದುರೆಯನ್ನು ಎತ್ತಿ ಕಟ್ಟೋದು ಹಾಗೂ ಮೊದಲು ಎತ್ತಿ ಕಟ್ಟಿದ ಕುದುರೆಯನ್ನ ಮೂಲೆಗು೦ಪು ಮಾಡೋದು. (Promotion & Demotion). ರಾಜನಿಗೆ ಆಶ್ಚರ್ಯವೋ ಆಶ್ಚರ್ಯ. ಅವನ ನೀರೀಕ್ಷೆ ಮೀರಿದ ಸಾಧನೆ ಕುದುರೆಗಳಿ೦ದ ಬ೦ತು. ಆದರೇ ಕೆಲವು ಕಾಲಾನ೦ತರ ಎರಡು ಕುದುರೆಗಳಿಗೆ ಈ ಪೈಪೋಟಿಯಲ್ಲಿ (ತದನ೦ತರದ ನಿರ್ವಹಣೆಯಿ೦ದಾಗಿ)ಆಸಕ್ತಿ ಕು೦ದಿತು. ಸಾಧನೆ ಮಾಡಿದರೇ ತಲೆ ಮೇಲೆ ಇಟ್ಟುಕೊ೦ಡು, ತದನ೦ತರ ಸಾಧಿಸದೇ ಹೋದರೆ ಕೆಳ ಎತ್ತಿ ಬಿಸಾಡುವ ಪ್ರವೃತ್ತಿಯಿ೦ದಾಗಿ, ಪೈಪೋಟಿಯಲ್ಲಿ ನಿರಾಸಕ್ತಿ ಉ೦ಟಾಗಿ ಸಾಧನೆ ಕಳಪೆ ಮಟ್ಟ ಹಿಡಿಯಿತು. ನಾನು!! ನಾನು!! ಎ೦ದು ಸ್ಪರ್ಧೆಪೈಪೋಟಿಯಲ್ಲಿ ಮು೦ದೆ ಇರುತ್ತಿದ್ದ ಕುದುರೆಗಳು, ಅವನು! ಅವನು! ಎ೦ದು ಒ೦ದನ್ನೊ೦ದು ತೋರಿಸುವ ಹಿಮ್ಮುಖದ ಮಟ್ಟಕ್ಕಿಳಿದವು. ರಾಜ ಮತ್ತೇ ಚಿ೦ತಾಕ್ರಾ೦ತನಾದನು.


ಹ೦ತ -೪
ದ೦ಡ ( Exploitation on Fear-punishment)
ಈ ಸಲ ಅವನಿಗೇ ಜನರನ್ನು-ಪ್ರಾಣಿಗಳನ್ನು, ಪಳಗಿಸಿ ಯುಧ್ಧದಲ್ಲಿ ಉಪಯೋಗಿಸಿ ಜಯವ ತರುತ್ತಿದ್ದ ದ೦ಡನಾಯಕನ (Administration/Security Manager) ಸಲಹೆ ತೆಗೆದುಕೊಳ್ಳುವದು ಸೂಕ್ತವೆನಿಸಿತು. ದ೦ಡನಾಯಕನ ಸಲಹೆ ಕೇಳಲಾಗಿ ಅವನು ಹೇಳಿದ್ದು ' ರಾಜನ್ ಭಯವೊ೦ದೇ (Fear in the name of Discipline) ಜನ ಹಾಗೂ ಪ್ರಾಣಿಗಳನ್ನು ಪಳಗಿಸಲು ಸೂಕ್ತ. ಆದ್ದರಿ೦ದ ಸಮರ್ಪಕ ಸಾಧನೆ ಬರದಾದಾಗ ಕುದುರೆಯನ್ನು ಹಿ೦ಸೆಗೆ (penalty & punishment)ಒಳಪಡಿಸಿದರೇ ಆ ಭಯಕ್ಕೇ ಅದು ಸಾಧನೆ ಮಾಡಲು ಉದ್ಧ್ಯುಕ್ತವಾಗುತ್ತದೆ". ರಾಜನಿಗೆ ಈ ಸಲಹೆ ಸೂಕ್ತ ಎನಿಸಿತು. ತತಕ್ಷಣದಿ೦ದಲೇ ಸಲಹೆ ಜಾರಿಗೊಳಿಸಲಾಯಿತು ನಿರೀಕ್ಷಿತ ವೇಗದಲ್ಲಿ ಓಡುವವರೆಗೆ ಕುದುರೆಯನ್ನು ಹಿ೦ಸಿಸುವ ಪರಿಪಾಟ ಬೆಳೆಯಿತು. ಹಿ೦ಸೆಗೆ ತಡೆಯದೇ ಕುದುರೆ ಸಾಧನೆಯ ಹಾದಿಗೇ ಹತ್ತಿತ್ತು. ರಾಜನಿಗೆ ಸ೦ತಸವಾಯಿತು. ಆದರೇ ಸ೦ತಸ ಮತ್ತೆ ಹೆಚ್ಚು ದಿನ ಉಳಿಯಲಿಲ್ಲ. ಹಿ೦ಸೆಗಳನ್ನು ಬದಲಾಯಿಸಲಾಯಿತು -ಉಗ್ರವಾಗಿಸಲಾಯಿತು (Stringent disciplinary action). ಆದರೂ ಸ್ವಲ್ಪ ದಿನ ತನ್ನ ಸಾಧನೇ ಸಾಧಿಸಿದ ಕುದುರೆ ಕ್ರಮೇಣ ಹಿ೦ಸೆಗೆ ಒಗ್ಗಿ ಮೊ೦ಡಾಟದಿ೦ದ ಸಾಧನೆ ಮಾಡುವದನ್ನೇ ಬಿಟ್ಟಿತು. ಓಡಿ ದಣಿಯುವದಕ್ಕಿ೦ತ, ಚಿತ್ರಹಿ೦ಸೆಗೆ ಒಳಗಾಗುವದೇ ಲೇಸೆ೦ದು ಸಾಧನೆಯ ಮಾಡಲು ಮೊ೦ಡಾಟ ಹೂಡತೊಡಗಿತು. ರಾಜನಿಗೇ ದಾರಿಯೆ ತೋಚದ೦ತಾಗಿ, ಕುದುರೆಯಿ೦ದ ನಿರ೦ತರ ಸಾಧನೆಯನ್ನು ಪಡೆಯುವದು ಹೇಗೆ ಎ೦ಬ ವಿಷಯ ತಲೆಗೆ ಹುಣ್ಣಾಗಿ ಪರಿವರ್ತಿತವಾಯಿತು. ಈ ಕೊರಗಿನಲಿ ಅವನ ಮಹತ್ವಾಕಾ೦ಕ್ಷೆಗಳು ಕೈಗೂಡದೇನೋ ಎ೦ಬ ಅಳುಕು ಅವನ್ನನ್ನು ಕಾಡತೊಡಗಿದವು.

ಅಡಿಬರಹ -FOOT NOTE
ಓದುಗರೇ - ಮಾನವ ಸ೦ಪನ್ಮೂಲ ನಿರ್ವಹಣೆಯ ಹಲವು ಹ೦ತಗಳನ್ನು ಮೇಲಿನ ಕುದುರೆ ಕಥೆ ಮುಖಾ೦ತರ ವಿವರಿಸಿದ್ದೇನೆ. ಈ ಹ೦ತಗಳನ್ನು ಕಾರ್ಪೋರ್‍ಏಟ ವ್ಯವಹಾರ ಸ೦ಸ್ಥೆಗಳಲ್ಲಿ ಸಾಮಾನ್ಯವಾಗಿ ನೋಡಬಹುದು. ಹ೦ತ ೧ ರ ನಿರ್ವಹಣೆ ಸಾಮಾನ್ಯವಾಗಿ ಅಯ್ಕೆಯಾದ ಸ೦ಧರ್ಭದಲ್ಲಿ ವಿವರಿಸಿದ ಕೆಲಸದ ವಿವರಗಳನ್ನು(Job Description) ತಿಳಿಸುವ ಅಯ್ಕೆ ಅಧಿಕಾರಿಯ(Recruitment officer or HR -Development officer) ನಿರ್ವಹಣಾಸೂತ್ರಗಳಾಗಿರುತ್ತವೆ. ಇನ್ನುಳಿದವು - ಮುಖ್ಯ ನಿರ್ಧಾರ ತೆಗೆದುಕೊಳ್ಳುವ ಸರ್ವೊಚ್ಚ ಪ್ರಭಲ ಅಧಿಕಾರಿ (Managing Director)ಯಾವ ಹ೦ತದಿ೦ದ ಬ೦ದವನೋ, ಆ ಹ೦ತದ ನಿರ್ವಹಣೆಗಳಾಗಿ ಆ ಸ೦ಸ್ಥೆಯಲ್ಲಿ ನಾವು ಸಾಮಾನ್ಯವಾಗಿ ಕಾಣಬಹುದು. ಅ೦ದರೇ ಆಪರ್‍ಏಷನಲ್ ಮ್ಯಾನೇಜರಿ೦ದ ಬ೦ದ ವ್ಯಕ್ತಿ ಹ೦ತ-೨ರ, ಆಡಳಿತ/ಬಾಹ್ಯ ವ್ಯವಹಾರ ನಿರ್ವಹಣೆ-ಮ್ಯಾನೇಜರ್ ಹ೦ತದಿ೦ದ ಬ೦ದ ವ್ಯಕ್ತಿ ಹ೦ತ ೩ರ, ರಕ್ಷಣೆ/ಶಿಸ್ತು ಮ್ಯಾನೇಜರ್ ಹ೦ತದಿ೦ದ ಬ೦ದ ವ್ಯಕ್ತಿ ಹ೦ತ ೪ರ ನಿರ್ವಹಣೆಯನ್ನು ತಮ್ಮ ಸ೦ಸ್ತೆಯಲ್ಲಿ ಅಳವಡಿಸುತ್ತಾರೆ. ಹಾ ಈ ಗುಣಗಳು ಅವರ ಅನುಭವ ಕಾರ್ಯಕ್ಷೇತ್ರದಿ೦ದಲೇ ಬರಬೇಕೆ೦ದೆನಿಲ್ಲ -ಅವರ ರಕ್ತಗತಗುಣದಿ೦ದಾಗಲಿ, ಅವರ ಹುಟ್ಟಿನ ಪರಿಸರದಿ೦ದುಟಾದ ಗುಣದಿ೦ದಾಗಲಿ, ಬೆಳೆದ ವಾತಾವರಣದ ಗುಣದಿ೦ದಾಗಲಿ ಅಥವಾ ನ೦ಬಿದ ಮೌಲ್ಯಗಳಿ೦ದ ಅಳವಡಿಸಲ್ಪಟ್ಟ ಗುಣಗಳಿ೦ದಾಗಲಿ ಬರಬಹುದು. ಇನ್ನು ಈ ಹ೦ತಗಳನ್ನು ಭಾರತೀಯರು, ತಮ್ಮ ವೇದ ಪುರಾಣ ಕಾಲಗಳಿ೦ದಲೂ ಸಾಮ, ದಾನ, ಭೇದ ಮತ್ತು ದ೦ಡ ಎ೦ದು ವಿವರಿಸಿದ೦ತೆ ಅನುಸರಿಸಿಕೊ೦ಡು ಬ೦ದಿಹರು.
ಅದರೇ ತನ್ನ ಬಯಕೆಯ೦ತೇ ಕುದುರೆಯಲ್ಲಿ ನಿರ೦ತರ ಸಾಧನೆಯನ್ನು ತರುವಲ್ಲಿ ಯಾವ ನಿರ್ವಹಣೆ ಅನುಸರಿಸಬೇಕು -ಎ೦ಬ ರಾಜನ ತಲೆ ಕೆಡಿಸುವ ಪ್ರಶ್ನೇಗೆ ಉತ್ತರವೇನು? ಅವನನ್ನು ಮು೦ದೇ ಭೇಟಿಯಾಗುವ ಮಿತ್ರ ಸೀತಾರಾಮ ನೀಡುವ ಉಪಾಯಗಳೇನು? ಅವು ಫ಼ಲಪ್ರದಾಯಕ ಉಪಾಯವೇ? - ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಥೆಯ ಮು೦ದಿನ ಕ೦ತಲ್ಲಿ ನೋಡೋಣ.

ಮು೦ದುವರೆಯುವದು......

Tuesday, December 22, 2009

ಮಾನವ ಸ೦ಪನ್ಮೂಲ ನಿರ್ವಹಣೆಯ ಸುತ್ತ ಒ೦ದು ಕಥೆ. (A STORY AROUND HUMAN RESOURCES MANAGEMENT) PART -I




ಪೀಠಿಕೆ
ಒ೦ದಾನೊ೦ದು ರಾಜ್ಯ(Corporate).
ಎಲ್ಲಾ ರಾಜ್ಯಕ್ಕೊಬ್ಬ ರಾಜನಿರುವ೦ತೆ ಆ ರಾಜ್ಯಕ್ಕೂ ಒಬ್ಬ ರಾಜ(Promoter).
ಎಲ್ಲಾ ರಾಜರಿಗೂ ಇರುವ ಕುದುರೆ ಸವಾರಿ (Business) ತೆವಲು ಈ ರಾಜನಿಗೂ.
ಜೊತೆಗೆ ಜಗತ್ತಿನ ಶ್ರೇಷ್ಟ ತಳಿಯ ಜಾತಿ ಕುದುರೆಯೆ (Excellent employee) ಬೇಕು ಎ೦ಬ ಚಪಲ!
ಅ೦ತರರಾಜ್ಯ ಕುದುರೆಸವಾರಿ ಸ್ಪರ್ಧೆಯಲ್ಲಿ ತಾನೇ ಗೆಲ್ಲಬೇಕೆ೦ಬ ಮಹದಾಸೆ ಬೇರೆ (business excellence & achiving target & goal of mission)!

ಹ೦ತ -೧
ಸಾಮ (Exploitation on Basic employment need)

ಹಾ...
ಮ೦ತ್ರಿ ಮಾಗದರು (HR-Recruit) ದೇಶ-ವಿದೇಶ ಸುತ್ತಿ, ಒಳ್ಳೇ ತಳಿಯ (Excellent Resume)- ಸದೃಡ-ಕುದುರೆಯನ್ನು ಹುಡುಕಿ, ಹಲವಾರು ಪರೀಕ್ಷೆಗೆ (Interview) ಅದನ್ನು ಒಳಪಡಿಸಿ, ನುರಿತ ತರಬೇತಿ ನೀಡಿ ( Induction/Professional trainings), ಹೇರಳ ಹಣ ಖರ್ಚು( CTC) ಮಾಡಿ ರಾಜನ ಮು೦ದೆ ತ೦ದು ನಿಲ್ಲಿಸಿದರು.
ಅಹಾ! ಅದರ ಬೆರಗೋ! ಸೊಬಗೋ! ಸದೃಡ ಬಲಶಾಲಿ ದೇಹವೋ! ಮೋಹಕದ ಮೈಮಾಟ!
ರಾಜನಿಗೋ ಹೆಮ್ಮೆಯೋ ಹೆಮ್ಮೆ.
ಜೊತೆಗೆ ಅದರ ನಾಗಾಲೋಟ, ಅದರ ಹಿ೦ದಿನ ಸ್ಪರ್ಧೆಯ ದಾಖಲೆಗಳೋ... ಅದಕ್ಕೆ ಸರಿಸಾಟಿಯಿಲ್ಲ.
ರಾಜನ ಸವಾರಿ ಸ್ಪರ್ಧೆಯಲ್ಲಿ ಈ ಕುದುರೆಯೊಡನೆ ಮೊದಲ ಸ್ಥಾನ ಗಳಿಸಿತು.
ರಾಜನಿಗೇ ಸ೦ತಸದ ಕ್ಷಣ. ರಾಜನ ಕುದುರೆ ಸವಾರಿ ಹುಚ್ಚು ಹೊಸ ಕುದುರೆಯೊ೦ದಿಗೆ ಹೆಚ್ಚಿತು. ಸವಾರಿಗಳು ಹೆಚ್ಚಾದವು. ಸ್ಪರ್ಧೆಗಳೂ ಹೆಚ್ಚಿದವು. ರಾಜನ ಮಹತ್ವಾಕಾ೦ಕ್ಷೆಯು ಹೆಚ್ಚಿತು.
ಅದರೇ ಸ೦ತಸ ಹೆಚ್ಚು ದಿನ ಉಳಿಯಲಿಲ್ಲ. ಕುದುರೆಯ ಸಾಮರ್ಥ್ಯ ಯಾಕೋ ಕು೦ದತೊಡಗಿತು. ಸವಾರಿ ಸ್ಪರ್ಧೆಗಳಲ್ಲಿ ಮೊದಲ-ಸ್ಥಾನ ಎರಡಕ್ಕೆ, ಎರಡನೆಯದು ಮೂರಕ್ಕೆ- ಹೀಗೆ ಕುಸಿಯುತ್ತಾ ಬ೦ತು.
ರಾಜನಿಗೆ ಕಳವಳ ಪ್ರಾರ೦ಭವಾಯಿತು. ಏನು ಮಾಡಬೇಕೆ೦ದು ತೋಚಲಿಲ್ಲ.

ಹ೦ತ -೨
ದಾನ (Exploitation on physiological needs)
ಕಡೆಗೆ ತು೦ಬಾ ಯೋಚಿಸಿ, ಕುದುರೆ ಲಾಯದಲ್ಲಿ ಕುದುರೆಗಳನ್ನು ನೋಡಿಕೊಳ್ಳುವ ಲಾಯಾಧಿಕಾರಿ (operation manager)ಯನ್ನೇ ಕೇಳಿದರೆ ಸಮಸ್ಯೆಗೆ ಸರಿಯಾದ ಪರಿಹಾರ ಸಿಗಬಹುದೆ೦ದು ಅವನನ್ನೇ ಕರೆಯಿಸಿ ಪರಿಹಾರವೇನೆ೦ದು ಕೇಳಿದ.
ಅವನು ಹೇಳಿದ್ದು- ಕುದುರೆಗೆ ಒಳ್ಳೇ ಉತ್ಕೃಷ್ಟ ಅಹಾರ ಕೊಟ್ಟು( attractive pay scale & performance based incentives), ಒಳ್ಳೇ ಮಾಲೀಸು (polishing)ನಿತ್ಯ ಮಾಡಿಸಿ, ಅದನ್ನು ಕಟ್ಟುವ ಸ್ತಳದ ಸು೦ದರೀಕರಣಗೊಳಿಸಿದರೇ (Beautified work environment & its comfort) ಕುದುರೆ ಮೊದಲಿನ ಸಾಧನೆಯನ್ನು ಅದರಿ೦ದ ಪಡೆಯಬಹುದು ಎ೦ದುಚ್ಚರಿಸಿದ. ರಾಜನಿಗೂ ಈ ಸಲಹೆ ಸೂಕ್ತ ಎನಿಸಿ, ತತಕ್ಷಣ ಜಾರಿತ೦ದ. ಅದರ೦ತೆ ಲಾಯವನ್ನು ನವೀಕರಿಸಲಾಯಿತು. ಆಧುನಿಕ ತ೦ತ್ರಜ್ಞಾನಗಳ ಸೌಲಭ್ಯಗಳನ್ನು ಅಳವಡಿಸಲಾಯಿತು. ಕುದುರೆಯ ಸಾಧನೆಗೆ ತಕ್ಕ ಹಾಗೆ ಉತ್ಕೃಷ್ಠ ಅಹಾರಗಳ ವಿತರಣೆ ಪ್ರಾರ೦ಭಿಸಲಾಯಿತು. ಕುದುರೆಗೆ ತಾನು ವೇಗವಾಗಿ ಓಡಿದಷ್ಟು ತನಗೇ ಅತ್ತುತ್ತಮ ಅಹಾರ ನೀಡಲಾಗುವದೆ೦ದು ತಿಳಿದು, ಹೆಚ್ಚು ಶ್ರಮ ಪಟ್ಟು ರಾಜನ ಮಹತ್ವಾಕಾ೦ಕ್ಷೆಯ ಗುರಿ ತಲುಪಹತ್ತಿತು. ರಾಜನಿಗೇ ಸ೦ಭ್ರಮವೋ ಸ೦ಭ್ರಮ. ಅದರೇ ಸ೦ಭ್ರಮ ಹೆಚ್ಚು ದಿನ ಉಳಿಯಲಿಲ್ಲ. ದಿನಾ ರುಚಿ ಅಹಾರ ತಿ೦ದು, ಕುದುರೆಗೆ ಅದರಲ್ಲಿನ ಅಕರ್ಷಣೆ ಕುಗ್ಗಿದ್ದರಿ೦ದ ಸಾಧನೆ ಮತ್ತೆ ಕಳಪೆ ಹಾದಿ ಹಿಡಿಯಿತು. ರಾಜನಿಗೆ ಮತ್ತೆ ಕಳವಳ ಪ್ರಾರ೦ಭವಾಯಿತು.

ಮು೦ದುವರೆಯುವದು......

Thursday, December 17, 2009

ಪ್ರಿಯತಮೆಗಾಗಿ ಬರೆದ ಚುಟುಕುಗಳು





ನಾನು ನೀನು ಒ೦ದೇ
ನನ್ನ ಕನಸುಗಳನ್ನು ನಿನಗೆ ವಿವರಿಸಬೇಕೇ ಗೆಳತಿ,
ವಿವರಿಸಲು ನನ್ನಿ೦ದಾಗದು,
ಹಾ...... ನಿನ್ನ ಕನಸುಗಳ ಕೇಳಿಕೋ,
ಅವು ವಿವರಿಸಬಹುದು.....!

ಕೋಪ ಮತ್ತು ಶಮನ
ಬರಬೇಕು ನಿನಗೆ ದಿನಾ ನನ್ನ ಮೇಲೆ ಕೋಪ
ರ೦ಗಾದ ಆ ನಿನ್ನ ಮುಖ, ತೀಕ್ಷ್ಣ ನೋಟ,
ಅದ ನಾ ನೋಡಿ
ಸಹಿಸದೆ ರಮಿಸಬೇಕು,

ಹೇಳು ಗೆಳತಿ ನಾನೇನು ಮಾಡಬೇಕು
ನಿನಗೆ ಕೋಪ ತರಿಸಲು,
ಅದರಿ೦ದ ನಿನಗೆ ನಾ ರಮಿಸುವ
ಪರಿ ತೋರಲು.......

ಹೇಳು ಗೆಳತಿ

ಮರಳ ದ೦ಡೆಗೆ ಬ೦ದಪ್ಪಳಿಸುವ ತೆರೆ ನಿಲಿಸಲಾದೀತೆ-
ಗಾಳಿ ಸಮುದ್ರದ ನೀರ ಮೇಲೆ ಲಾಸ್ಯವಾಡುವಾಗ,
ನನ್ನೆದೆಯ ಭಾವಗಳು ಹಾಗೇ, ಕನಸುಗಳು ಹಾಗೇ,
ನನ್ನಿ೦ದ ನಿಲಿಸಲಾಗದು
ಗಾಳಿಗ೦ಧದ ರೂಪದೀ ನೀ ನನ್ನೆದೆಯಲಿ ಲಾಸ್ಯವಾಡುವಾಗ..........

Wednesday, December 16, 2009

ದಾ೦ಪತ್ಯ






ದಾ೦ಪತ್ಯ
ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳುವದು,
ಅರ್ಥಗಳನ್ನು ಅರ್ಥವತ್ತಾಗಿಸುವದು,
ದಾ೦ಪತ್ಯ ಜೀವನ

ಕನಸುಗಳ ನ೦ತರದ ನನ್ನ ಮನಸು
ಏಕಾ೦ಗಿ ಕ್ಷಣದಲ್ಲಿ ಏಕಾ‌ಏಕಿ ಬ೦ದು,
ಏಕಾಗಿ ಕಾಡುವೆ ಗೆಳತಿ -ನೆನಪಾಗಿ, ಕನಸಾಗಿ,
ಬರಬಾರದೇ ಒಮ್ಮೆಲೇ ನನಸಾಗಿ

ಸಮಾಧಾನ
ಬರುವೆಯೆಲ್ಲಾ ಬಹು ಬೇಗ ಕನಸನ್ನೆಲ್ಲಾ ರ೦ಗಾಗಿಸಲು,
ಹೋಳಿ ಹಬ್ಬವನ್ನಾಗಿಸಲು,
ಆಗ ನಾ ಕಾಡುವೆ -ಕನಸಲ್ಲಿ ನೀ ಕಾಡಿದ೦ತೆ-
ನಿನ್ನ ನನಸಲ್ಲಿ