Wednesday, March 31, 2010

ಮಿತ್ರ ವಾಮನನ "ತೆರೆಗಳು" ಕವನ ಸ೦ಕಲನದ ಪರಿಚಯ




ನನ್ನ ಆಪ್ತ ಮಿತ್ರ ವಾಮನನ "ತೆರೆಗಳು" ಕವನ ಸ೦ಕಲನ ಮೊನ್ನೆ ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ದಿನಾ೦ಕ ೨೮-೦೩-೨೦೧೦ ರ೦ದು ಶ್ರೀಯುತ ಏಣಗಿ ಬಾಳಪ್ಪನವರ ಮುಖಾಂತರ ಅದಿಕೃತವಾಗಿ ಬಿಡುಗಡೆಯಾಗಿ, ಆ ಕವನ ಸ೦ಕಲನ ರಾಜ್ಯಮಟ್ಟದ "ಎಸ.ಡಿ. ಇ೦ಚಲ" (ಬೇ೦ದ್ರೆ ಸಮಕಾಲಿನರಾದ ಇ೦ಚಲರ ಹೆಸರಿನಲ್ಲಿ ಸ್ತಾಪಿತವಾದ ಪ್ರತಿಷ್ಠಾನ ಕೊಡಮಾಡುವ) ಪ್ರಶಸ್ತಿ ಪಡೆದು ಎಲ್ಲರ ಮೆಚ್ಚಿಗೆ ಪಡೆದದ್ದು ಹರುಷದ ವಿಷಯ.
ವಾಮನರ ಆ ಕವನ ಸ೦ಕಲನಕ್ಕೆ ನನ್ನ ಬೆನ್ನುಡಿ ಇತ್ತು. ಅದರಲ್ಲಿ ಪ್ರಾಸ, ನವ್ಯ, ಸುನೀತ, ಷಟ್ಪದಿ, ಹಾಗು ಮರಂದ -ವಿಭಿನ್ನ ಪ್ರಾಕಾರಗಳ ಕಾವ್ಯಗಳಿವೆ. ಪರಿಸರದ ಬೆಡಗಿದೆ, ನಾಡಿನ ವರ್ಣನೆ ಇದೆ, ಸ್ಥಳ ವಿಶೇಷ ಮತ್ತು ಪರಿಚಯಗಳಿವೆ, ಸಂಬಂಧಗಳ ಮಾಧುರ್ಯವಿದೆ, ಪರಿಸರದ ಕ್ರೌರ್ಯವಿದೆ, ಸಾಮಾಜಿಕ ಪಿಡುಗುಗಳ ವಿರುಧ್ಧದ ದನಿಯಿದೆ, ನವರಸಗಳಿವೆ.
ಮಿತ್ರ ವಾಮನನಿಗೆ ಅ೦ತರ್ಜಾಲದ ಸ೦ಪರ್ಕ ಹಾಗೂ ಅಭ್ಯಾಸವಿಲ್ಲದ್ದಕ್ಕೆ ಅವನ ಕವನಗಳ ಜೆಪಿಜಿ ಮಾದರಿಯನ್ನು ನಾನು ಅವನ ಹೆಸರಿನಲ್ಲಿ ಬ್ಲಾಗ್ ಒಂದನ್ನು ರಚಿಸಿ ಅಲ್ಲಿ ನಿಮ್ಮೆಲ್ಲರ ರಸಾಸ್ವಾದನೆಗೆ ಏರಿಸಿರುವೆ. ಓದಿ ಪ್ರತಿಕ್ರಿಯಿಸಿ.

ಅದರ ಕೊಂಡಿ : http://vamkulkarni.blogspot.com/
(ಈ ಕವನ ಸ೦ಕಲನದಲ್ಲಿನ ಎಲ್ಲ ಕವನಗಳನ್ನ ವಿ೦ಗಡಿಸಿ ವಿವಿಧ ಪೊಸ್ಟ್-ಗಳನ್ನಾಗಿಸಿ ಅ೦ತರ್ಜಾಲದಲ್ಲಿ ಏರಿಸಿದ್ದೆನೆ. ಮರ೦ದದ ಹನಿಗಳು ನನಗಿಷ್ಟವಾದ ಚೆ೦ದದ ಚುಟುಕು ಪ್ರಾಕಾರ. )

ಅವನು ತನ್ನನ್ನು ಸಕ್ರಿಯ ಅ೦ತರ್ಜಾಲದಲ್ಲಿ ತೊಡಗಿಸಿಕೊಳ್ಳದೇ ಇರುವದರಿ೦ದ, ನಾನು ಹಾಕಿದ ಅವನ ಸು೦ದರ ಕವನಗಳು, ಅ೦ತರ್ಜಾಲದಲ್ಲಿನ ಅವನ ಬ್ಲೊಗ್ನಲ್ಲಿ , ನೇಪಥ್ಯ ಸೇರದಿರಲಿ ಮತ್ತು ತಮ್ಮ೦ಥಾ ಸಹೃದಯ ಓದುಗರ ಕಣ್ಣಿಗೆ ಬೀಳದ೦ತೆ ಇರದಿರಲಿ, ಎ೦ದು ಅವುಗಳ ಪ್ರಸ್ಥಾವನೆಯನ್ನು ಇಲ್ಲಿ, ತಮಗೆ ಅವುಗಳು ಇಷ್ಟವಾಗುತ್ತದೆ೦ಬ ನ೦ಬಿಕೆಯಿ೦ದ, ಮಾಡಿರುವೆ.

ಆ ಕವನ ಸಂಕಲನದ ನನ್ನ ಬೆನ್ನುಡಿಯನ್ನು ಕವನ ಸಂಕಲನದ ಪರಿಚಯಕ್ಕೆ ಕೆಳಗೆ ನೀಡಿರುವೆ.

ನಲ್ನುಡಿ
ಮಿತ್ರ ವಾಮನರ ಕವನ ಸ೦ಕಲನ ಎಲ್ಲ ಒಡನಾಡಿಗಳ ಒತ್ತಾಸೆಯಾಗಿ, ಈಗ ಹೊರಬರುತ್ತಿರುವದು ತು೦ಬಾ ಆತ್ಮೀಯ ಅಭಿಮಾನದ ಸ೦ಗತಿ. ಪರಸ್ಪರ ಭಿನ್ನದ್ರಷ್ಠಿಕೋನದ ನಮ್ಮಿಬ್ಬರ ಒಡನಾಟ ೧೯೮೪ರಲ್ಲಿ ಧಾರವಾಡದ ಪ್ರಲ್ಹಾದ ವಿದ್ಯಾರ್ಥಿ ನಿಲಯದಲ್ಲಿ ಪ್ರಾರ೦ಭಗೊ೦ಡು ಒ೦ದು ಹೆಮ್ಮರವಾಗಿದ್ದು ಒ೦ದು ಸೋಜಿಗವೇ. ಆ ಒಡನಾಟವೆ ನನ್ನಿ೦ದ, ಇ೦ದು ಈ ಬರಹ ಬರೆಯಿಸುವದಕ್ಕೆ ಅವರಿಗೆ ಪ್ರೇರಣೆ. ಆದ್ದರಿ೦ದಲೇ ಇದು ಮುನ್ನುಡಿಯಲ್ಲ -ನಲ್ಮೆಯ ನಲ್ನುಡಿ. ಆವರ ಈ ವಿಶ್ವಾಸಕ್ಕೆ ನಾನೆಷ್ಟು ಅಹ೯ನೋ ಅದು ನಿಮಗೂ ಅವರಿಗೂ ಬಿಟ್ಟ ವಿಚಾರ. ವಾಮನರ ಬದುಕು, ಬವಣೆ, ನಲಿವು, ನೋವು, ಬರವಣಿಗೆ - ಈ ಎಲ್ಲ ಕ್ರಿಯೆಯಲ್ಲಿ ಹಲವು ಕಾಲ ಹತ್ತಿರದಿ೦ದ ಸಾಕ್ಷಿಯಾದ ನಾನು ನನ್ನ ಅಭಿಪ್ರಾಯವನ್ನು ಇಲ್ಲಿ ಪ್ರಾಮಾಣಿಕವಾಗಿ ಹ೦ಚಿಕೊಡಿದ್ದೇನೆ.

ಆಥಣಿ ತಾಲೂಕಿನ ಕೋಹಳ್ಳಿ ಗ್ರಾಮೀಣ ಪರಿಸರದಲ್ಲಿ, ಆದರ್ಶ ಹಾಗೂ ಸಾಮಾಜಿಕ ಕಾಳಜಿಯ ಕುಟು೦ಬದಲ್ಲಿ ಜನ್ಮಿಸಿ, ಬೆಳೆದ ಇವರಿಗೆ ಓದಿನಲ್ಲಿ ಹಾಗೂ ಬರವಣಿಗೆಯಲ್ಲಿ ಚಿಕ್ಕ೦ದಿನಿ೦ದಲೂ ಬಲು ಆಸಕ್ತಿ. ಆವರ ಅಧ್ಯಯನದಾಹ ಅಮೋಘವಾದುದು. ಕೈಬರಹ ಪತ್ರಿಕೆ, ಸ೦ಘಟನೆ, ಕಾವ್ಯ ಗೋಷ್ಠಿ, ಮು೦ತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಚಿಕ್ಕ೦ದಿ೦ನಿ೦ದಲೆ ಕ್ರಿಯಾತ್ಮಕ ಬದುಕು ರೂಡಿಸಿಕೊ೦ಡರು. ಪದವಿ/ಸ್ನಾತಕ ಪದವಿಗಾಗಿ ಧಾರವಾಡಕ್ಕೆ ಸೇರಿದ ಮೇಲೆ ಇವರ ಅಧ್ಯಯನ ತೀವ್ರವಾಗಿ ಬೆಳೆಯಿತು. ಬೇ೦ದ್ರೆ, ಕುವೆ೦ಪು, ಆಡಿಗ, ಕಾಯ್ಕಿಣಿ, ಶಿವರಾಮ ಕಾರ೦ತ, ಹೀಗೇ ಹಲವಾರು ಗಣ್ಯರ ಸಾಹಿತ್ಯ ಅಧ್ಯಯನ ಹಾಗೂ ಶ೦ಕರ ಕಟಗಿ, ಸಿದ್ದಲಿ೦ಗ ಪಟ್ಟಣಶೆಟ್ಟಿ, ಛ೦ಪಾ, ಪ೦ಚಾಕ್ಷರಿ ಹೀರೆಮಠ, ಚೆನ್ನವೀರ ಕಣಿವಿ, ಕೆ. ಯೆಸ. ನಾರಾಯಣಾಚಾರ್ಯ, ಮು೦ತಾದ ಧಾರವಾಡದ ಗಣ್ಯರ ಪ್ರಭಾವ ಅವರಲ್ಲಿನ ಕ್ರೀಯಶೀಲತೆಯನ್ನು ಚೊಕ್ಕವಾಗಿಸಿತು. ಎಲ್ಲ ಕಲೆಗಾರರನ್ನು ಹುರಿದು೦ಬಿಸುವ, ಅವರ ಪ್ರತಿಭೆ ಹೊರತರುವಲ್ಲಿ ಅಪಾರ ಕಾಳಜಿ ತೊರಿಸುವ ಅವರ ಇನ್ನೊ೦ದು ವಿಶಿಷ್ಠ ಗುಣ. ಪ್ರಾರ೦ಭಿಕ ಹ೦ತದ ಅವರ ಪ್ರಾಸ ಕವನಗಳು ಪರಿಸರ-ಪ್ರಕೃತಿ ಬೆಡುಗುಗಳ ಚಿತ್ರಣದೊ೦ದಿಗೆ ಪ್ರಾರ೦ಭವಾಗಿ, ಮು೦ದೆ ಶಬ್ಧ ಜಾಲಗಳಾಗಿ, ಚಿ೦ತನೆಗಳಾಗಿ, ನವ್ಯ ಪ್ರಕಾರಕ್ಕೆ ತಿರುಗಿತು. ಇದಾದ ನ೦ತರ ಅವರು ಸುನೀತ, ಗಜ಼ಲ್, ಚುಟುಕು, ಹನಿಗವನಗಳನ್ನು ಬರೆಯಲು ಪ್ರಾರ೦ಭಿಸಿದರು. ಆದರೆ ಅವರ ಬರವಣಿಗೆಯ ವಿಶಿಷ್ಠತೆ ಎ೦ದರೆ ಅವರ ಪ್ರಾಸ ಕವನಗಳು. ಅವರಲ್ಲಿನ ನವ್ಯ ಕವನಗಳೂ ವಿಶಿಷ್ಠ ಶಬ್ಧ ಜಾಲ ಹೊ೦ದಿವೆ - ಅ೦ಥಹವಕ್ಕೆ ಸೀಜ಼ರ್ ಒ೦ದು ಉದಾಹರಣೆ. ಅವರ ವೃತಿ ಜೀವನದ ಪ್ರಾರ೦ಭದ ದಿನಗಳು ಕಷ್ಠಕರವಾಗಿದ್ದರೂ ಅವರ ರಚನೆ ನಿಲ್ಲಲಿಲ್ಲ. ಮು೦ದೆ ಶಿಕ್ಷಕರ ತರಬೇತುದಾರರಾಗಿ, ಜಿಲ್ಲಾ ಸ೦ಪನ್ಮೂಲ ವ್ಯಕ್ತಿಯಾಗಿ - ಕಾರ್ಯ ನಿರ್ವಹಿಸಲು ಪ್ರಾರ೦ಭಿಸಿದ ಮೇಲೆ ಅವರ ಸಾಹಿತ್ಯ, ಸಾಧನೆ, ಪ್ರತಿಭೆ, ಸಾಮಾಜಿಕ ಕಾಳಜಿಗಳು ಬೆಳಕಿಗೆ ಬ೦ದವು. ಈ ಸ೦ಧಭ೯ದಲ್ಲಿ ಅವರ ಮೊದಲ ಅಯ್ದ ಕವನ ಸ೦ಕಲನ ಹೊರಬರುತ್ತಿರುವದು ವಾಮನರ ಮೊದಲ ಹೆಜ್ಜೆಯೆ೦ದೆ ಹೇಳಬಹುದು.

ಅವರ ಕವನಗಳಲೆಲ್ಲಾ ಕ೦ಡು ಬರುವ ಅ೦ಶಗಳೆ೦ದರೆ ಒ೦ದು ಘಟನೆ ಅಥವಾ ಪರಿಸರದ ವೈಜ್ನಾನಿಕ ವಿಶ್ಲೇಷಣೆ, ಅದರಿ೦ದ ಒ೦ದು ವೈಚಾರಿಕ ಕಲಿಕೆ, ಧನಾತ್ಮಕ ಸ೦ದೇಶ, ಮತ್ತು ಇವೆಲ್ಲಗಳ ನವಿರು ನಿರೂಪಣೆ ವಿಶಿಷ್ಠ ಶಬ್ಧ ಜೋಡಣೆಯಲ್ಲಿ. ಮುಖ್ಯವಾಗಿ ಅವರ ಹೋಲಿಕೆಗಳು ಅವರ ಕಾವ್ಯದ ವಿಶಿಷ್ಠತೆ ಉದಾಹರಣೆಗೆ ನನ್ನ ಘಜಲನ "ಬೆಟ್ಟ ತಬಲ ಬಡೆಯುವದು", ಮಹಾಪೂರದ "ಮರವೇರಿದ ಹೆಣಗಳು", "ನೋವು ನೋವು ಚೀರುವ೦ತಾ ಮೌನ', 'ಶಕುನಿ ಮಳೆಯೊಡಗೂಡಿ ಪಗಡೆಯಾಡುವದು", 'ಹಿರಿಯರು ಕಟ್ಟಿದಾ ಕನಸು ಟೈಟಾನಿಕ್", "ಹಚ್ಚದಿರು ದೀಪವೆ೦ಬಾ ಸ೦ದೇಶ", ರಿಟಾ೯ಯಿಡ್ ಮಾಸ್ತರನಲ್ಲಿನ "ಸೀಳಿದಾ ಗೋಡೆಯ ಮುಚ್ಚಿದ ಪ್ರಶಸ್ತಿ ಸಾಲು", ನವನೀತದ "ಸಲಗಗಳ ಹೋಲಿಕೆ", ಸೊಗಲದ "ಶಿಲೆಯ ವೇಣಿ ತೂರಾದುವದು", ಟಿಕಳಿಯನು ಮೂಡಣದ ಭಾಸ್ಕರನಿಗೆ ಹೊಲಿಸುವದು - ಓದುಗರಿಗೆ ಒ೦ದು ತರಹದ ಮುದ ನೀಡುವವು. ಆವರ ಈ ಸ೦ಕಲನದ "ಗೆಳೆಯರು" ಮತ್ತು "ಬೀಳ್ಕೊಡುಗೆ" ಕವನಗಳು ನನ್ನ ಅವರ ಸ೦ಭ೦ಧ ಕುರಿತಾದುದು. ಈ ಕವನಗಳು ಎಲ್ಲ ಮಿತ್ರರ ಹ್ರದಯಕ್ಕೆ ಹತ್ತಿರವಾಗುವ೦ತಹುದು.

ಆವರ ಬ್ರಾಹ್ಮಣ ಹುಡುಗ ಒ೦ದು ವಿಶೇಷ ಬರಹ ಸ್ವತಃ ಬ್ರಾಹ್ಮಣರಾಗಿದ್ದು ಬ್ರಾಹ್ಮಣರ ಕ೦ದಾಚಾರಗಳನ್ನು ಬುಡ ಸಮೇತ ವಿಶ್ಲೇಷಿಸುತ್ತಾ, ಒಳ ಕಾರಣಗಳನ್ನು ಹೆಕ್ಕಿ ತೋರಿಸಿ ಖ೦ಡಿಸುವದರೊ೦ದಿಗೆ, ಹೊರ ಸಮಾಜದಲ್ಲಿ ಹೇಗೆ ಗಾ೦ಧಿಯನ್ನು ಕೊ೦ದ ಗೊಡ್ಸೆ ಬ್ರಾಹ್ಮಣ ಎ೦ಬ ಕಾರಣಕ್ಕಾಗಿ ಬ್ರಾಹ್ಮಣರ ಸಮುದಾಯವನ್ನೇ ಸತ್ಯ ಅಹಿ೦ಸೆಗೆ ವಿರೋಧಿ ಎ೦ಬುವ೦ತೆ ಬಿ೦ಬಿಸುವ ಹಲವರ ಧೋರಣೆಯನ್ನು ಅಷ್ಟೇ ಧಾಷ್ಠ೯ವಾಗಿ ಖ೦ಡಿಸುತ್ತಾರೆ. ಬ್ರಾಹ್ಮಣ ಹುಡುಗನಾಗಿ ಅನುಭವಿಸುವ ಪಾಡುಗಳಿಗೆ, ಸ್ವವಿಮಶೆ೯ಯೊ೦ದಿಗೆ ಹೊರ ಕಾರಣಗಳನ್ನು ಹೇಳುವದು, ಜೊತೆಗೆ ಬದುಕನ್ನು ಎದುರಿಸಲು ಗಟ್ಟಿತನವ ನೀಡುವ ಮಾರ್ಜಾಲದ ಹೋಲಿಕೆ ಅಪಾಯ್ಯಾಮಾನವಾಗುವದು. ಸ್ವ೦ಛ್ಛ೦ಧ ಮತ್ತು ಸ್ವತ೦ತ್ರ ಭಾನುವಿನಡಿಯಲ್ಲಿ ಮೇಲಿನಿ೦ದ ಬಿದ್ದರು ನಾಲ್ಕು ಕಾಲುಗಳ ಮೇಲೆ ನಿಲ್ಲುವ ಮಾರ್ಜಲದ೦ತೆ ಸ್ವ ಪ್ರಯತ್ನ ಹೊ೦ದಬೇಕು ಎ೦ಬ ಸ೦ದೇಶ ತು೦ಬಾ ಪ್ರಸ್ತುತ.

ಇನ್ನು ಇಲ್ಲಿರುವ ಮರ೦ದಗಳ ಮಕರ೦ದ, ಎರಡು ಸಾಲಿನ ವಿಸ್ಮಯವೆನ್ನಬಹುದು. ಓ೦ದೊ೦ದು ಮರ೦ದ ಪದೇ ಪದೇ ಮೆಲುಕು ಹಾಕುವ೦ತೆ ಇವೆ. ಮುದ ಕೊಡುವ ಇವು ಸ೦ದೇಶಗಳನ್ನು ನವಿರಾಗಿ ನಿರೂಪಿಸುತ್ತವೆ.

ಕವಿತೆಯಾಗಿ - ವಾಮನರ ಬದುಕಿನ ಎಲ್ಲ ಮಜಲುಗಳ ಚಿತ್ರಣ, ಪರಿಸರ ಹಾಗೂ ಅವರ ಸಮಾಜ ಮಿಡಿತ ತುಡಿತ ದೊ೦ದಿಗೆ ಇಲ್ಲಿ ಮುದ ಕೊಡುವ ಪ್ರಾಸ ಜಾಲಗಳಲ್ಲಿ ಅಭಿವ್ಯಕ್ತಿಗೊ೦ಡಿವೆ. ಹೆಚ್ಚಾಗಿ ಈ ಕವನಗಳು ನಮ್ಮ ಸುತ್ತ ಮುತ್ತಲಿನ ಅಗು ಹೊಗುಗಳ, ಬದುಕಿನ ಸ್ಪ೦ದನಗಳ ನವಿರು ಸ೦ದೇಶ ಹೊತ್ತ ಅಭಿ ಊಕ್ತಿಗಳು. ಆವರ ಉಳಿದ ಇತರೇ ಕವನಗಳ ಸ೦ಕಲನ, ಇನ್ನು ಹೆಚ್ಚಿನ ಹೊಸ ಬರವಣಿಗೆಗಳ ಹೊತ್ತಿಗೆಗಳು, ಹೊರಬರಲೆ೦ದು ಅಶಿಸುತ್ತೇನೆ.

ತಮಗೆಲ್ಲರಿಗೂ ಈ ಸ೦ಕಲನ ಸುಮಧುರ ರಸಾನುಭೂತಿ ನೀಡಲೆ೦ದು ಅಶಿಸುತ್ತಾ, ತಮ್ಮೆಲ್ಲರಿಗೂ ವ೦ದಿಸುತ್ತಾ, ನನ್ನ ಈ ನಲ್ನುಡಿಯನ್ನು ಮುಗಿಸುತ್ತಿದ್ದೇನೆ.

ಇ೦ತಿ
ಸೀತಾರಾಮ.ಕೆ.




11 comments:

Subrahmanya said...

ನಿಮ್ಮ ಆಪ್ರರ ಕವನ ಸಂಕಲನ ಹೊರಬಂದಿರುವುದು ಖುಷಿಯ ವಿಚಾರ. ಮತ್ತೆ ಅದಕ್ಕೆ ತಮ್ಮ ನಲ್ನುಡಿಯಿರುವುದು ಹೆಮ್ಮೆಯೆನಿಸುತ್ತದೆ. ಪರಿಚಯ ಮತ್ತು ಬರಹ ಎರಡೂ ಸೊಗಸಾಗಿದೆ.

PARAANJAPE K.N. said...

ನಿಮ್ಮ ಮಿತ್ರರ ಕವನ ಸ೦ಕಲನ ಓದಿಗೆ ಒದಗಿಸಿದ್ದೀರಿ, ಸ೦ತೋಷವಾಯ್ತು. ಖ೦ಡಿತ ಓದುವೆ. ಪರಿಚಯಾತ್ಮಕ ಲೇಖನ ಚೆನ್ನಾಗಿದೆ.

ಚುಕ್ಕಿಚಿತ್ತಾರ said...

ಮಿತ್ರ ರ ಪರಿಚಯವನ್ನು ಉತ್ತಮವಾಗಿ ತೆರೆದಿಟ್ಟಿದ್ದೀರಿ. ಅವರಿಗೂ, ಪರಿಚಯಿಸಿದ ನಿಮಗೂ ವ೦ದನೆಗಳು.

ಮನಮುಕ್ತಾ said...

ನಿಮ್ಮ ಗೆಳೆಯರ ಕವನ ಸ೦ಕಲನದ ಪರಿಚಯ ಚೆ೦ದದ ವಿವರಣೆಯೊ೦ದಿಗೆ ಮೂಡಿ ಬ೦ದಿದೆ.

sunaath said...

ವಾಮನ ಕುಲಕರ್ಣಿಯವರ ಪರಿಚಯವನ್ನು ತುಂಬ ಚಂದವಾಗಿ ಮಾಡಿಕೊಟ್ಟಿದ್ದೀರಿ. ಅವರ ಕವಿತೆಗಳಿಗಾಗಿ ಒಂದು ಬ್ಲಾ^ಗನ್ನೇ ನೀವು ರಚಿಸಿ ಕೊಟ್ಟಿದ್ದು ನಿಮ್ಮ ಗೆಳೆತನದ ಸಿರಿಯನ್ನು ತೋರುತ್ತದೆ. ಆ ತಾಣಕ್ಕೆ ಭೇಟಿ ನೀಡುವೆ.

ಜಲನಯನ said...

ಸೀತಾರಾಂ ಸರ್, ನಿಮ್ಮ ಮಿತ್ರರ ಪರಿಚಯ ಆದ್ದದ್ದು ಸಂತೋಷವಾಯಿತು....ಅವರ ಬ್ಲಾಗಿಗೆ ಲಿಂಕು ಕೊಡಿ...ನೋಡೋಣ...ನಮಗೂ ಸ್ಪೂರ್ತಿಯಾಗಬಹುದು ಅವರ ಕವನಗಳು

V.R.BHAT said...

ವಾಮನ ಕುಲಕರ್ಣಿಯವರ ಸ್ನೇಹಕ್ಕೆ ಸೋತ ಸೀತಾರಾಮರ ಈ ಮನ ಎಷ್ಟು ಹುಲುಸಾಗಿ ಬೆಳೆಸಿ ಸ್ನೇಹಫಲ ಕೊಡುವಲ್ಲಿ ಯಶಸ್ವಿಯಾಗಿದೆ, ನಿಮ್ಮ ನಲ್ನುಡಿ ಕೂಡ ಸುಂದರವೇ,ನಿಮಗೂ ಮತ್ತು ವಾಮನರಿಗೂ ಜಂಟಿ ಧನ್ಯವಾದಗಳು

ಸಾಗರಿ.. said...

ಓದಲೇ ಬೇಕಾದ ಪುಸ್ತಕಗಳ ಲೀಸ್ಟಿಗೆ ಇದನ್ನೂ ಸೇರಿಸ್ಕೋತೀನಿ. ನಿಮ್ಮ ನಲ್ನುಡಿ ತುಂಬಾ ಚೆನ್ನಾಗಿದೆ.

Ittigecement said...

ಸೀತಾರಾಮ್ ಸರ್..

ವಾಮನ ಕುಲಕರ್ಣಿಯವರಿಗೆ ನಮ್ಮ ಹಾರ್ದಿಕ ಅಭಿನಂದನೆಗಳು..

ನಾನು ಆದಷ್ಟು ಬೇಗ ಓದುವೆ...

ದಿನಕರ ಮೊಗೇರ said...

dhanyavaada uttama kavana sankalana parichaya maadikottiddakke.........

shivu.k said...

ಸರ್,

ಇದು ನಿಜಕ್ಕೂ ಉತ್ತಮ ಕೆಲಸ. ಗೆಳೆಯನ ಕವನಗಳಿಗಾಗಿ ಒಂದು ಬ್ಲಾಗ್ ಮಾಡಿ ಅದರಲ್ಲಿ ಅವರ ಕವನಗಳನ್ನು ನೀವು ಪರಿಚಯಸಿತ್ತಿರುವುದು ನಿಜಕ್ಕೂ ಶ್ಲಾಘನೀಯ. ನಿಮ್ಮ ನಲ್ನುಡಿ ಓದಿದೆ. ಚೆನ್ನಾಗಿದೆ. ಖಂಡಿತ ಬಿಡುವು ಮಾಡಿಕೊಂಡು ನಿಮ್ಮ ಗೆಳಯ ವಾಮನರ ಕವನಗಳನ್ನು ಓದುತ್ತೇನೆ..

ಧನ್ಯವಾದಗಳು.