Thursday, May 27, 2010

ನನ್ನೀ 'ಒ೦ಚೂರು ಅದು! ಇದು!'

'ಮಾನಸರ೦ಗ'
'ಮನಸ್ಸೆಂಬ ಹುಚ್ಚು ಹೊಳೆ' ಯಲ್ಲಿ ಹರಿದ,
'ಮನದಾಳದಿ೦ದ'
'ಮನದಾಳದ ಮಾತುಗಳು' -
'ಮೂಕಮನದ ಮಾತು'-
'ಮನಸಿನ ಮಾತು- ಮಾತುಗಳು' ಮತ್ತು
'ಮೌನದ ಪದಗಳು'
'ಮನದ ಮಾತುಗಳ ಅಕ್ಷರಾರೂಪವೇ ನನ್ನೀ ತೆರೆದ ಮನ' ಎನ್ನುವಾ
'ಮನಸಾರೆ'
'ಮನಸ್ಸಿಗೆ ಅನ್ನಿಸಿದ್ದು ಮತ್ತು ಬರಹಕ್ಕೆ ಬ೦ದಿದ್ದು'
ನನ್ನೀ 'ಒ೦ಚೂರು ಅದು! ಇದು!'


'ಮೃದುಮನಸಿ' ನಾ
'ಸವಿಗನಸಿ' ನಾ
'ಸಲ್ಲಾಪ'
'ಲಹರಿ' ಯಾ
'ಚೆ೦ದಮಾಮನ ಅಂಗಳದಲ್ಲಿ'
'ಚುಕ್ಕಿ ಚಿತ್ತಾರ ವಾಗಿ ಹರಡಿದ'
'ಛಾಯಾಚಿತ್ತಾರದೀ' ನಳನಳಿಸುವ
'ಅನುರಾಗ'
'ಇನಿದನಿ' ಯಾ
'ಅಂತರಂಗದ ಮಾತುಗಳು'
ನನ್ನೀ 'ಒ೦ಚೂರು ಅದು! ಇದು!'

'ಸುಪ್ತದೀಪ್ತಿ' ಯಾ
'ಸುಪ್ತವರ್ಣ' ದಾ
'ಸಾವಿರ ಕನಸಿ' ನಾ
'ಹನಿಹನಿ' ಯಾಗಿ
'ಹಾಗೆ ಸುಮ್ಮನೆ'
'ಹರಿವ ಲಹರಿ'
'ಕೊಳಲು' ನುಡಿ
ನನ್ನೀ 'ಒ೦ಚೂರು ಅದು! ಇದು!'

'ನೆನಪಿನಾ ಸಂಚಿಯಿಂದ'
'ನೆನಪ-ಕನಸುಗಳ ನಡುವೆ'
'ಕನಸು'
'ನೆನಪು'
'ಪ್ರತಿಫಲನ' ವಾಗಿ
'ನುಡಿಚೈತ್ರ' ದೀ ತೆರೆದ
'ನೆನಪಿನ ಪುಟಗಳು'
ನನ್ನೀ 'ಒ೦ಚೂರು ಅದು! ಇದು!'

'ಕೌತುಕದ ಬೆನ್ನೇರಿ'
'ಭೂರಮೆ' ಯಾ ಒಡಲಿ೦ದ
'ಚಿತ್ರ-ವಿಚಿತ್ರ' ಗಳ ಕೆದಕಿ
'ಕ್ಷಣ ಚಿ೦ತನೆ' ಯೊಳು
'ಧರಿತ್ರಿ' 'ಛಾಯಾಕನ್ನಡಿ' ಯಲ್ಲಿ
ಮೂಡಿದ 'ಜೀವನ್ಮುಖಿ'
ನನ್ನೀ 'ಒ೦ಚೂರು ಅದು! ಇದು!'

'ನಾಗಂದಿಗೆ' ಮತ್ತು
'ಮೋಟುಗೋಡೆಯಾಚೆ ಇಣುಕಿ'
ಕಂಡ 'ಸತ್ಯ'
'ಅರ್ಧ ಸತ್ಯ'
'ಮೌನಗಾಳ'
'ಶೋಧನೆ' ಯಾ
'ಇಟ್ಟಿಗೆ ಸಿಮೆಂಟು' ಬಳಸದೆ
ಸೆ೦ಟಿಮೆ೦ಟಿನಲ್ಲೆ ಕಟ್ಟಿದಾ
'ನನ್ನ ಮನಸಿನ ಮನೆ'
ನನ್ನೀ
'ಒ೦ಚೂರು ಅದು! ಇದು!'

'ನನ್ನ ಪಾಡಿಗೆ ನಾನು'
'ಸುಮ್ನೆ ಹೀಗಂದೆ'
'ಹಾಗೆ ಸುಮ್ಮನೆ ಹೇಳಬೇಕೆನಿಸಿದಾಗ'
'ಸಹಯಾತ್ರಿ' ಗಳಾದ ನಿಮ್ಮೊ೦ದಿಗೆ
ನನ್ನ 'ನಿವೇದನೆ'
'ಪೆನ್ನು ಪೇಪರ್' ನೊ೦ದಿಗೆ
'ಪ್ರಾಸಲೀಲೆ' ಯಾಗಿ ಬ೦ದ
'ನನ್ನೆದೆ ಪ್ರೀತಿ' ಯಾ 'ದೀವಿಗೆ'

ನನ್ನೀ
'ಒ೦ಚೂರು ಅದು! ಇದು!'

ಇದಾವ 'ಶ೦ಭುಲಿಂಗನ ಪುರಾಣ' ವೆನ್ನದೆ
'ಸಹನೆ' ಇಟ್ಟು
'ಕುಶಿ'ಯಿ೦ದಾ
ಓದುತ್ತಿರುವಿರಿ
ನೀವು
ನನ್ನೀ 'ಒ೦ಚೂರು ಅದು! ಇದು!'

(-: ಎಲ್ಲ ಮಿತ್ರ ಬ್ಲಾಗಿಗರ ಬ್ಲಾಗ್ನ ಹೆಸರ ಬಳಸಿ ಹೆಣೆದ ಲೇಖನಕ್ಕೆ ಮಿತ್ರ ಬ್ಲಾಗಿಗರ ಅನುಮತಿ ಇದೆ ಎಂದುಕೊಂಡು ಅವರಿಗೆ ಅವರ ಬ್ಲಾಗ್ನ ಹೆಸರು ಬಳಸಿಕೊಳ್ಳಲು ಅನುಮತಿ ಕೊಟ್ಟಿದ್ದಕ್ಕೆ ಧನ್ಯವಾದ ಹೇಳುತ್ತೇನೆ. :-)


33 comments:

Anonymous said...

ಸೀತಾರಾಮರವರೇ, ಅದ್ಭುತವಾದ 'ಹೆಸರುಗಳ' ಜೋಡಣೆ! ಎಲ್ಲ blog ಗಳ ಹೆಸರುಗಳನ್ನು ಇಷ್ಟು ಚೆನ್ನಾಗಿ ಜೋಡಿಸಿದ್ದೀರಾಂದ್ರೆ...HATS OFF TO U!

ಓ ಮನಸೇ, ನೀನೇಕೆ ಹೀಗೆ...? said...

ಸೀತಾರಾಮ್ ಸರ್..ಬ್ಲೊಗ್ ಹೆಸರುಗಳನ್ನು ಸೇರಿಸಿ ರಚಿಸಿರುವ ಕವನ ಚೆನ್ನಾಗಿ ಮೂಡಿ ಬಂದಿದೆ. ವಿಭಿನ್ನ ಪ್ರಯತ್ನ ಚೆನ್ನಾಗಿದೆ.

Subrahmanya said...

En guruji !! ?

Naanu permission kottidhru nanna blog hesare haakilwalla neevu :):) !.

Thumbaa chennaagi hesarugaLannu baLasikoMDu jODisiddIri. nimma hosathanakkMdu salaamu.

Dr.D.T.Krishna Murthy. said...

ನಿಮ್ಮ ಒಂಚೂರು ಅದು ಇದರ ಹಾಡಿಗೆ ನನ್ನ ಕೊಳಲನ್ನೂ
ಸೇರಿಸಬೇಕಾಗಿತ್ತು ಒಂಚೂರು!ಸೇರಿಸಲಿಲ್ಲಾ ಅಂತ ಬೇಜಾರು ಒಂಚೂರು!

shivu.k said...

ಸೀತಾರಾಂ ಸರ್,

ಬ್ಲಾಗುಗಳ ಹೆಸರುಗಳನ್ನು ಬಳಸಿಕೊಂಡು ಸೊಗಸಾದ ಕವನವನ್ನು ಬರೆದಿದ್ದೀರಿ. ನಿಮ್ಮ ಪ್ರಯತ್ನ ಚೆನ್ನಾಗಿದೆ.

ದಿನಕರ ಮೊಗೇರ said...

sir,
uttama prayatna........ kelavondu mukya hesarugalu bittu hogive.........

ಮನಸು said...

wow!!! supero super

Narayan Bhat said...

ಇದು ಹೊಸದು..ಒಂಚೂರು ಇಡಿಯಾಗಿ ಚೆನ್ನಾಗಿದೆ.

ಸುಮ said...

ಸಿನೆಮಾ ಹೆಸರು ಸೇರಿಸಿ ಸಿನೆಮಾ ಹಾಡು ಮಾಡುತ್ತಾರಲ್ಲ , ಹಾಗೆ ಬ್ಲಾಗ್ ಹೆಸರು ಬಳಸಿ ಬ್ಲಾಗ್ ಕವನ!! ಚೆನ್ನಾಗಿದೆ ಸೀತಾರಾಂ ಸರ್.

ಸೀತಾರಾಮ. ಕೆ. / SITARAM.K said...

ಧನ್ಯವಾದಗಳು ಸುಮನಾರವರೇ, ಚೇತನಾ ಭಟ್ಟರವರೇ, ಸುಬ್ರಮಣ್ಯನವರೇ, ಡಾ! ಕೃಷ್ಣಮೂರ್ತಿಯವರೇ, ಶಿವೂರವರೇ, ದಿನಕರರವರೇ, ಸುಗುಣಾ ಮಹೇಶರವರೇ, ನಾರಾಯಣಭಟ್ಟರೇ ಮತ್ತು ಸುಮಾರವರೇ.
ಶ೦ಭುಲಿ೦ಗನ ಪುರಾಣ, ಭೂರಮೆ, ಕೊಳಲು, ಇಟ್ಟಿಗೆ ಸಿಮೆ೦ಟ, ಪ್ರಾಸಲೀಲೆ, ದೀವಿಗೆ, ನನ್ನೆದೆ ಪ್ರೀತಿ, ಮು೦ತಾದ ಹೆಸರನ್ನು ಈಗ ಸೇರಿಸಿದ್ದೆನೆ. ಎಲ್ಲರೂ ಇನ್ನೊಮ್ಮೆ ಓದಿ :-)))
ಇನ್ನು ಹಲವು ಇವೆ ಅದನ್ನು ಹೊಸೆದು ಬೇರೆ ಪೊಸ್ಟ್-ನಲ್ಲಿ ಹಾಕುತ್ತೆನೆ.

sunaath said...

ಇದು ಒಂಚೂರು ಅಲ್ಲ. ಇದರಲ್ಲಿ ನಮ್ಮೆಲ್ಲರನ್ನೂ ಸೇರಿಸಿ ಬಿಟ್ಟಿದ್ದೀರಿ. ಸರಪಳಿ ಕವನ ಸೊಗಸಾಗಿದೆ.

ಸೀತಾರಾಮ. ಕೆ. / SITARAM.K said...

ಎಚ್.ಎನ್.ಈಶ ಕುಮಾರ್
to me

show details 9:13 AM (5 hours ago)

ಸೊಗಸಾಗಿದೆ ಸರ್...ನಿಮ್ಮ ಸೂಕ್ಷ್ಮತೆಗೆ ಧನ್ಯೋಸ್ತು...

mcs.shetty said...

vov,,, sir....
excellent.............

congrats...nimma prayatnakke,,,

ಮನದಾಳದಿಂದ............ said...

ಸೀತಾರಾಂ ಸರ್,
ಅದ್ಭುತ ಪರಿಕಲ್ಪನೆ. ಬ್ಲಾಗ್ ಗೆಳೆಯರೆಲ್ಲರ ಹೆಸರನ್ನು ಬಳಸಿಕೊಂಡು ಉತ್ತಮವಾದ ಕವನವನ್ನೇ ರಚಿಸಿಬಿತ್ತಿರಲ್ಲಾ! ನಿಮ್ಮ ಈ ಜಾಣ್ಮೆಗೆ "ಶಿರಬಾಗಿ ಶರಣೆಂಬೆ"

ದಿನಕರ ಮೊಗೇರ said...

sir,
JALANAYANA kaaNtaa illa........

Raghu said...

ಒ೦ಚೂರು ಅದು! ಇದು! ಸೂಪರ್..:) ಹೆಸರುಗಳ ಜೋಡಣೆ ಚೆನ್ನಾಗಿದೆ..:)
ನಿಮ್ಮವ,
ರಾಘು.

ಶಾಂತಲಾ ಭಂಡಿ (ಸನ್ನಿಧಿ) said...

ಸೀತಾರಾಮ ಅವರೆ...

ನಮ್ಮಗಳ ಬ್ಲಾಗಿನ ಶೀರ್ಷಿಕೆಯನ್ನು ಬಳಸಿಕೊಂಡು ಹೆಣೆದ ಈ ಕವನ ತುಂಬ ಇಷ್ಟವಾಯ್ತು. ಅರ್ಥವತ್ತಾಗಿ ಹೆಣೆದ ಪರಿ ಖುಶಿಯಾಯ್ತು. ಧನ್ಯವಾದ.

Pradeep Rao said...

ರಣಧೀರ ಚಿತ್ರದ "ಒಂದಾನೊಂದು ಕಾಲದಲ್ಲಿ.." ಹಾಡು ನೆನಪಾಯಿತು.. ತುಂಬ ಚೆನ್ನಾಗಿ ಅರ್ಥಕ್ಕೆ ತಕ್ಕಂತೆ ಹೆಸರುಗಳ ಪ್ರಯೋಗವಾಗಿದೆ. ನನ್ನ blog ಹೆಸರು ಬಿಟ್ಟು ಹೋಗಿದೆ ಸಾರ್..

ಕನಸು said...

ಸೀತಾರಾಮ ಸರ್ ,
ಕವಿತೆ ತುಂಭಾ ಚೆನ್ನಾಗಿದೆ.
ಧನ್ಯವಾದಗಳು
ಪ್ರೀತಿ-ವಿಶ್ವಾಸದೋಂದಿಗೆ

ಸವಿಗನಸು said...

ಒ೦ಚೂರು ಅದು ಇದು ಅಂತ ಹೇಳಿ ಸೂಪರ್ ಕವನ ರಚಿಸಿದ್ದೀರ.......
ಎಲ್ಲಾ ಬ್ಲಾಗಿಗರನ್ನು ನಿಮ್ಮ ಕವನದಲ್ಲಿ ಒಟ್ಟಿಗೆ ಸೇರಿಸಿದ್ದೀರ....
ಚೆನ್ನಾಗಿದೆ..:)ಅಭಿನಂದನೆಗಳು

ಸೀತಾರಾಮ. ಕೆ. / SITARAM.K said...

ಧನ್ಯವಾದಗಳು ಸುನಾಥರವರೇ, ಈಶಕುಮಾರರವರೇ, ಚೆ೦ದಮಾಮನ ಅ೦ಗಳದ ಶೆಟ್ಟಿಯವರೇ, ಪ್ರವೀಣ ಗೌಡರವರೇ, ದಿನಕರರವರೇ, ರಾಘು ರವರೇ, ಶಾ೦ತಲಾರವರೇ, ಪ್ರದೀಪರವರೇ, ಕನಸುರವರೇ ಹಾಗೇ ಸವಿಗನಸಿನ ಮಹೇಶರವರೇ.

ಹಲವು ಹೆಸರುಗಳನ್ನು ಸೇರಿಸಲು ಆಗಲಿಲ್ಲ ಅದಕ್ಕಾಗಿ ಬ್ಲೊಗ್ -ಮಿತ್ರರ ಕ್ಷಮೆ ಇರಲಿ. ತಮ್ಮ ಅ೦ಕಣದ ಹೆಸರುಗಳು ವಿಶಿಷ್ಟವಾಗಿದ್ದು ಉಪಯೋಗಿಸಲು ಕಸರತ್ತು ಮಾಡಿದರೂ ಆಗದ೦ತಿತ್ತು. ಅವನ್ನು ಬೇರೆ ಸ೦ಧರ್ಭದಲ್ಲಿ ಜೋಡಿಸುತ್ತೆನೆ.
ಉಳಿದ ಹಲವು ಹೆಸರುಗಳು ; ಅಗ್ನಿಪ್ರಪ೦ಚ, ನಿಶಾ೦ತರ೦ಗ, ಪ್ರೇಮಕವಿಯ ಪಯಣ, ಉಳಿಯದಿರಲಿ ಹೆಜ್ಜೆ ಗುರುತು, ಶ್ರಾವಣದ ಮಳೆ ಸುರಿದಿದೆಯಾದರೂ, ಜಲನಯನ, ಸಾಗರದಾಚೆಯ ಇ೦ಚರ, ಹಾಗೇ ಸುಮ್ಮನೇ ಹೇಳಬೇಕೆನಿಸುತಿದೆ, ಬದುಕು ಜಟಕಾಬ೦ಡಿ ವಿಧಿ ಅದರ ಸಾಹೇಬ, ನವೋದಯ, ನನ್ನ ಕವಿತೆಗಳು, ಓ ಮನಸೇ ನೀನೇಕೆ ಹೀಗೆ, ಗುರುವಿನ ಜಗತ್ತು, ಸೇತುಭ೦ಧ, ಸುಮ್ನೇ ಥಾಟ್ಸ್, ರೇ ಆಫ಼್ ಹೋಪ್, ಇನ್ಕಿಸಿಟಿಸ್, ತೂನ್ ತೂಫ಼ಾನ್, ಇತ್ಯಾದಿ....

ಸೀತಾರಾಮ. ಕೆ. / SITARAM.K said...

'ಓ ಮನಸೇ ನೀನೇಕೆ ಹೀಗೆ'ಎ೦ದು
'ಹಾಗೇ ಸುಮ್ಮನೆ ಹೇಳಬೇಕೆನಿಸುತಿದೆ'
'ಈ ಪ್ರೇಮಕವಿಯ ಪಯಣ'ದಲ್ಲಿನ
'ನನ್ನ ಕವಿತೆಗಳು'
'ನವೋದಯ'ವಾದಾಗ.
ಆದರೂ ಮನ ಹೇಳುತಿದೆ
'ಉಳಿಯದಿರಲಿ ಹೆಜ್ಜೆ ಗುರುತು'
'ಶ್ರಾವಣದ ಮಳೆ ಸುರಿದೆದೆಯಾದರೂ'!

ಚುಕ್ಕಿಚಿತ್ತಾರ said...

nice sir..
thanks...

ಮನಸಿನ ಮಾತುಗಳು said...

ಸೀತಾರಾಮ. ಕೆ. ಸರ್,
ತುಂಬಾ ಚಂದದ ಕವನ..
ಬ್ಲಾಗ್ ಗಳ ಹೆಸರು ಬಳಸಿ ಕ್ರಿಯೇಟಿವ್ ಆಗಿ ಕವನ ಬರೆದಿದ್ದೀರಿ..
ಇಷ್ಟ ಆಯ್ತು.. :-)

Pradeep Rao said...

ವಾರೆ ವಾಹ್! ಸಾರ್.. super ಆಗಿದೆ. ನಮ್ಮೆಲ್ಲರ ಬೇಡಿಕೆ ಈಡೇರಿಸಿದಿರಿ.. Exam result sheetನಲ್ಲಿ students ತಮ್ಮ ಹೆಸರು ಹುಡುಕೋ ಹಾಗೆ ನಿಮ್ಮ ಕವನದಲ್ಲಿ ನನ್ನ blog ಹೆಸರು ಹುಡುಕಿದೆ.. ಸ್ವಾರಸ್ಯಕರವಾಗಿದೆ.. ಜೊತೆಗೆ ಎಲ್ಲರಿಗೂ ಎಲ್ಲರ blog ಬಗ್ಗೆ ಪರಿಚಯ ಮಾಡಿಸಿದಂತಿದೆ. ಇದರಲ್ಲಿ ಇರೋ blog ನೆಲ್ಲ ಒಮ್ಮೆ ಓದಿ ನೋಡುತ್ತೇನೆ. Thanks!

Ashok.V.Shetty, Kodlady said...

@ ಸೀತಾರಾಮ್ ಸರ್

ಅದ್ಭುತವಾಗಿದೆ....ನನ್ನ ಹೆಸರು ಬಿಟ್ಟು ಹೋಗಿದೆ ...ಆದರೆ ಯಾವುದೇ ಬೇಸರವಿಲ್ಲ.... ತುಂಬಾ ತುಂಬಾನೆ ಚೆನ್ನಾಗಿದೆ....

ಸಾಗರದಾಚೆಯ ಇಂಚರ said...

sunadara sir

chennagide jodane

ಸೀತಾರಾಮ. ಕೆ. / SITARAM.K said...

ಪ್ರತಿಕ್ರಿಯೆಗೆ ಧನ್ಯವಾದಗಳು ವಿಜಯಶ್ರೀಯವರೇ, ದಿವ್ಯಾರವರೇ, ಪ್ರೇಮ ಕವಿಯಾಗಿ ಪಯಣಿಸುತ್ತಿರುವ ಪ್ರದೀಪರವರೇ, ಖುಶಿಯ ಅಶೋಕರವರೇ ಮತ್ತು ಡಾ.ಗುರುಮೂರ್ತಿಯವರೇ.
ಅಶೋಕರವರೆ ತಮ್ಮ ಖುಶಿ ಸೇರಿಸಲಾಗಿದೆ. ಸಾಗರದಾಚೆಯ ಇ೦ಚರ ಹಾಗೂ ಜಲನನಯನ ಸೇರಿಸುವ ಪ್ರಯತ್ನ ಯಾಕೋ ಆಗುತ್ತಿಲ್ಲ. ಬಹು:ಶ ಅವುಗಳ ವಿಶೇಷತೆಯಿ೦ದ! ;-((

ದೀಪಸ್ಮಿತಾ said...

ಒಂಚೂರಲ್ಲ, ತುಂಬಾ ಚೆನ್ನಾಗಿತ್ತು ಸರ್. ನನ್ನ 'ಇನಿ ದನಿ'ಯೂ ಪಟ್ಟಿಯಲ್ಲಿ ಸೇರಿದ್ದು ಖುಶಿಯಾಯಿತು. ಒಳ್ಳೆಯ ಕ್ರಿಯಾಶೀಲತೆ

V.R.BHAT said...

Thanks for giving us Such a wonderful combination of a poem & a picture, let this be the spirit always!

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಸೀತಾರಾಮ್ ಸಾರ್,ಒ೦ದು ಅದ್ಭುತವಾದ ಪರಿಕಲ್ಪನೆ ಮತ್ತು ಸೃಜನಶೀಲತೆ.ಅಭಿನ೦ದನೆಗಳು

ಜಲನಯನ said...

ಸೀತಾರಾಂ ಸರ್....ಹಹಹ ಏನ್ರೀ ಖನನ ಮನನ, ಕದನ, ಗಮನ .....!!!
ಸಾಗರದಾಚೆಯ ಇಂಚರ ಕೇಳಲಿಲ್ಲ ..ಅದಕ್ಕೇ ಕಾಣ್ತಿಲ್ಲ ಜಲನಯನ....
ನೀರಿನ ಜೀವಿಗಳು ಅಂತ ನಮ್ಮನ್ನ ನೆಲದ ಮೇಲಕ್ಕೆ ತಂದಿಲ್ಲವೇ..? ಸಾಗರದಾಚೆಯ ಇಂಚರ ನನ್ನ ತರಹ ಜಲಚರ ಅಲ್ಲ ಬಿಡಿ...ತರಬಹುದು ನೆಲದ ಮೇಲಕ್ಕೆ...

ಸೀತಾರಾಮ. ಕೆ. / SITARAM.K said...

ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು-ದೀಪಸ್ಮಿತರೇ, ವಿ.ಆರ್.ಭಟ್ಟರವರೇ, ಕು.ಸು.ಮುಳಿಯಾಳರೇ ಮತ್ತು ಜಲನಯನರೇ. ಜಲನಯನ, ಸಾಗರದಾಚೆ ಇ೦ಚರ, ಇನ್ನು ಹಲವಾರು ನನ್ನ ಒ೦ಚೂರು ಅದು ಇದು ಥೀಮ್-ಗೆ ಸರಿಹೊ೦ದಿಸಲಾರದ್ದಕ್ಕೆ ಬೇಸರವಿದೆ!