Saturday, August 14, 2010

ಎಸ್.ಎಲ್.ಭೈರಪ್ಪನವರ "ಕವಲು" -ನಾ ಕಂಡಂತೆ






ಕಾದಂಬರಿ : ಕವಲು
ಲೇಖಕರು : ಸಂತೆಶಿವರ.ಲಿಂಗಣ್ಣಯ್ಯ.ಭೈರಪ್ಪ
ಪುಟಗಳು : ೩೦೦
ಬೆಲೆ : ರೂಪಾಯಿ-೨೫೦
ಪ್ರಕಾಶನ : ಸಾಹಿತ್ಯ ಭಂಡಾರ ಪ್ರಕಾಶನ, ಜಂಗಮ ಮೆಸ್ತ್ರೀಗಲ್ಲಿ, ಬಳೆಪೇಟೆ,ಬೆಂಗಳೂರು.

ಸಾಹಿತಿ ಪರಿಚಯ : ಸಂತೇಶಿವರದಲ್ಲಿ (ಚನ್ನರಾಯಪಟ್ಟಣ ತಾಲುಕು ಹಾಸನ ಜಿಲ್ಲೆಯಲ್ಲಿ) ಹುಟ್ಟಿದ ಭೈರಪ್ಪನವರು ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡು, ಓದಿಗಾಗಿ ಹತ್ತು ಹಲವಾರು ಕೆಲಸಗಳನ್ನೂ ಮಾಡಿ, ತದನಂತರ ಕೆಲವು ಕಾಲ ಅಲೆಮಾರಿ ಜೀವನ ನಡೆಸಿ (ಮು೦ಬಯಿಯಲ್ಲಿ), ಆಮೇಲೆ ಮೈಸೂರಿಗೆ ಹಿಂದುರಿಗಿ ಓದು ಮುಂದುವರೆಸಿದರು. ಗೊರೂರು ರಾಮಸ್ವಾಮಿ ಅಯ್ಯಂಗಾರರ ಕಥೆಗಳಿಂದ ಪ್ರಭಾವಿತರಾದ ಅವರು ಬಾಲ್ಯದಲ್ಲೇ ಸಾಹಿತ್ಯದ ಗೀಳು ಹಿಡಿಸಿಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲಿ(೧೩) ಅವರು ಸ್ವಾತ೦ತ್ರ್ಯಹೋರಾಟದಲ್ಲೂ ಧುಮಿಕಿದ್ದರು. ಮೈಸೂರು ವಿಶ್ವ ವಿಧ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಸ್ನಾತಕ ಪದವಿಯನ್ನ ಪಡೆದ ಭೈರಪ್ಪನವರು , ಸತ್ಯ ಹಾಗೂ ಸೌ೦ದರ್ಯದ ಬಗ್ಗೆ ಸ೦ಶೋಧನಾ ಗ್ರಂಥ ಬರೆದು ಬರೋಡಾ ವಿಶ್ವವಿಧ್ಯಾಲಯದಿಂದ ಪಿ.ಹೆಚ್.ಡಿ. ಪದವಿಯನ್ನೂ ಸಂಪಾದಿಸಿದ್ದಾರೆ. ಅವರು ಗುಲಬರ್ಗಾ ವಿಶ್ವವಿಧ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ.

ಸುಮಾರು ೨೨ ಕಾದಂಬರಿಗಳನ್ನ (ಭೀಮಕಾಯ, ಧರ್ಮಶ್ರೀ, ದೂರ ಸರಿದರು, ಮತದಾನ, ವಂಶವೃಕ್ಷ, ಜಲಪಾತ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೇ, ಗೃಹಭಂಗ,ನಿರಾಕರಣ, ಗ್ರಹಣ, ದಾಟು, ಅನ್ವೇಷಣೆ, ಪರ್ವ, ನೆಲೆ, ಸಾಕ್ಷಿ, ಅಂಚು, ತಂತು, ಸಾರ್ಥ, ಮಂದ್ರ, ಆವರಣ ಮತ್ತು ಕವಲು) ಬರೆದ ಭೈರಪ್ಪನವರು ಕನ್ನಡದ ಅಪರೂಪದ ಸಾಹಿತಿ. ಅವರ ಎಲ್ಲ ಕೃತಿಗಳು ವಸ್ತು ಮತ್ತು ತಂತ್ರ ವೈಶಿಷ್ಟ್ಯ ಹಾಗು ವೈವಿಧ್ಯ ಹೊಂದಿದ್ದು, ಓದುಗರನ್ನು ಅಪಾರ ಆಕರ್ಷಣೆ ಮಾಡುತ್ತವೆ. ಹೀಗಾಗಿ ಭೈರಪ್ಪನವರು ಅಪಾರ ಓದುಗರನ್ನು ಪಡೆದ ಮತ್ತು ಜನಪ್ರಿಯ ಲೇಖಕ. ಅವರ ಕಾದಂಬರಿಗಳಲ್ಲಿ ಕಥಾ ವಸ್ತುಗಳು ತೀವ್ರ ಸಂಶೋಧನೆಯ ಸತ್ಯದಲ್ಲಿ ಅವಿರ್ಭವಿಸಿರುವದು, ಸರಳ ಭಾಷೆಯಲ್ಲಿ ಹೇಳಲ್ಪಟ್ಟಿರುವದು ಮತ್ತು ಸಮಕಾಲಿನ ಜ್ವಲಂತ ವಿಷಯಗಳ ಸುತ್ತ ವಸ್ತು-ನಿಷ್ಟುರತೆಯ ಹೊಂದಿರುವದರಿಂದ ಓದುಗರಿಗೆ ಅಪ್ಯಾಯ ಮಾನವೆನಿಸುವದು. ಅವರ ಕಾದಂಬರಿಗಳು ಹತ್ತು ಹಲವಾರು ಭಾಷೆಗೆ ತರ್ಜುಮೆಯಾಗಿ ಅಲ್ಲೂ ಮನ್ನಣೆ ಪಡೆದಿವೆ. ಇದಲ್ಲದೆ ಅವರು ೪ ತತ್ವಶಾಸ್ತ್ರ ಗ್ರಂಥಗಳನ್ನು(ಸತ್ಯ ಮತ್ತು ಸೌಂದರ್ಯ, ಸಾಹಿತ್ಯ ಮತ್ತು ಪ್ರತೀಕ, ಕಥೆ ಮತ್ತು ಕಥಾವಸ್ತು ಹಾಗೂ ನಾನೇಕೆ ಬರೆಯುತ್ತೇನೆ) ಮತ್ತು ಒಂದು ಆತ್ಮ ಕಥೆಯನ್ನೂ(ಭಿತ್ತಿ) ಬರೆದಿದ್ದಾರೆ. ಅವರ ೪ ಕಾದಂಬರಿಗಳು (ವಂಶವೃಕ್ಷ, ತಬ್ಬಲೀಯು ನೀನಾದೆ ಮಗನೇ, ಮತದಾನ ಮತ್ತು ನಾಯಿ-ನೆರಳು) ಚಲನಚಿತ್ರವಾಗಿವೆ ಮತ್ತು ಎರಡು ಕಾದಂಬರಿಗಳು ಧಾರಾವಾಹಿಗಳಾಗಿ ದೂರದರ್ಶನದಲ್ಲಿ ಬಂದಿವೆ (ದಾಟು ಮತ್ತು ಗೃಹಭಂಗ).

ಭೈರಪ್ಪನವರು ಪಂಪ ಸಾಹಿತ್ಯ ಪ್ರಶಸ್ತಿ, ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಆಕಾಡೆಮಿಯ ಹಲವು ಪ್ರಶಸ್ತಿ, ಕನ್ನಡ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಮತ್ತು ಏನ್-ಟಿ-ಆರ್ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪಡೆದಿದ್ದಾರೆ. ಅವರ ಹೆಚ್ಚಿನ ಕಾದಂಬರಿಗಳು ಕನ್ನಡದಲ್ಲಿ ಅತೀ ಹೆಚ್ಚು ಮಾರಾಟವಾದ ಮತ್ತು ದಾಖಲೆ ಮರು ಮುದ್ರಣ ಕಂಡ ಪುಸ್ತಕಗಳು. ಹಿಂದಿಯಲ್ಲೂ ಅವರ ಅನುವಾದಕೃತಿಗಳು ಅವರನ್ನು ಮೇಲ್ಮಟ್ಟದ ೫ ಲೇಖಕರಲ್ಲಿ ಸೇರಿಸಿದೆ.

ಕವಲು ಕಾದಂಬರಿ : (ಸಂಕ್ಷಿಪ್ತ ಕಥಾಹಂದರ)

ಕಾದ೦ಬರಿಯಲ್ಲಿ ಎರಡು ಸಮಾನಾಂತರದಲ್ಲಿನ ಕಥೆಗಳಿವೆ.
ಕಥೆ-೧: ಜಯಕುಮಾರ ಎ೦ಬ ಯಶಸ್ವೀ ಉಧ್ಯಮಿ ವಿಧುರ ತನ್ನ ಆಫಿಸ್ನಲ್ಲಿ ಕೆಲಸ ಮಾಡುವ ಮಂಗಳೇ ಎಂಬ ಕೆಲಸಗಾರ್ತಿಯೊಡನೆ ಲೈಂಗಿಕ ಸಂಪರ್ಕಕ್ಕೆ ಬಂದು, ಅವಳು ಗರ್ಭವತಿಯಾಗಿ, ಒತ್ತಾಯದಿಂದ ಅವಳನ್ನು ಮದುವೆ ಮಾಡಿಕೊಳ್ಳುತ್ತಾನೆ.

ಮಧ್ಯಮ ಕೆಲಸವರ್ಗದಲ್ಲಿ ತುಂಬಾ ಕಷ್ಟಪಟ್ಟು ಹೆಂಡತಿ ವೈಜಯ೦ತಿಯೋಡನೇ ಜಯಕುಮಾರ ಸ್ವಂತ ಉಧ್ಯಮ ಪ್ರಾರಂಬಿಸಿ ಅವಳ ಸಹಕಾರದಿಂದ ಹಂತ-ಹಂತವಾಗಿ ಬೆಳೆದು ಅತೀ ದೊಡ್ಡ ಸಂಸ್ಥೆಯೊಂದನ್ನು ಹುಟ್ಟುಹಾಕಿ ಸಂತೃಪ್ತ ಜೀವನ ನಡೆಸುತ್ತಿರುವಾಗ ರಸ್ತೆ ಅಫಘಾತವೊಂದರಲ್ಲಿ ಹೆ೦ಡತಿಯನ್ನು ಕಳೆದು ಕೊಂಡು, ಜೊತೆಗೆ ಪುಟ್ಟ ಮಗಳಿಗೆ ತೀವ್ರ ತಲೆಗಾಯಗಳಾಗಿ, ಆ ಮಗುವಿನ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ.

ಮಂಗಳೇ ಆಧುನಿಕ ವಿಚಾರದ ಮಹಿಳೆಯಾಗಿದ್ದು ಕಾಲೇಜಿನಲ್ಲೇ ಪ್ರಭಾಕರ ಎಂಬ ಸಹಪಾಠಿಯೊಡನೆ ಪ್ರೇಮಿಸಿ ಲೈಂಗಿಕ ಸಂಪರ್ಕಕ್ಕೆ ಬಂದು ಗರ್ಬವತಿಯಾಗಿ ಮದುವೆಯಾಗದೆ ಗರ್ಭ ತೆಗೆಸಿದ್ದು, ಮುಂದೆ ಹಲವರು ಸ್ತ್ರೀ ಸಮಾನತೆ-ಇತ್ಯಾದಿ ಆಧುನಿಕ ಧೋರಣೆಗಳಿಂದ ಪ್ರಭಾವಿತಳಾಗಿ (ಇಳಾ ಮೇಡಂರ ಪ್ರಭಾವದಿಂದಾಗಿ), ಸ್ತ್ರೀ ಸ೦ಘಟನೆಗಳಲ್ಲಿ ತೊಡಗಿಸುತ್ತ ಜಯಕುಮಾರನ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರುತ್ತಾಳೆ ಹಾಗೂ ಜಯಕುಮಾರನೊಡನೆ ಲೈಗಿ೦ಕ ಬಯಕೆಗೊಳಗಾಗಿ ಅವನನ್ನು ಅನೀವಾರ್ಯವಾಗಿ ಮದುವೆ ಮಾಡಿಕೊಳ್ಳುವಲ್ಲಿ ಶ್ರಮಪಟ್ಟು ಯಶಸ್ವೀಯು ಆಗುತ್ತಾಳೆ.

ಈ ನಡುವೆ ಮಂಗಳೆಗೆ ಗಂಡು ಮಗು ಆಗುತ್ತದೆ ಹಾಗು ಅವಳು ಹಳೆಯ ಪ್ರಭಾಕರನೊಡನೆ ನಿರಂತರ ಲೈಂಗಿಕ ಸಂಪರ್ಕದಲ್ಲೂ ಇರುತ್ತಾಳೆ. ಪರಸ್ಪರರ ಒತ್ತಾಯದಲ್ಲಿ ಮದುವೆಯಾದ ಮತ್ತು ವಿರುಧ್ಧ ವಿಚಾರದ ಅವರಲ್ಲಿ ದಾಂಪತ್ಯ ಸುಸೂತ್ರವಾಗಿರದೆ ಹದಗೆಡುತ್ತದೆ. ಈ ನಡುವೆ ಜಯಕುಮಾರಗೆ ವೇಶ್ಯಯರ ಸಂಗಕ್ಕೆ ಬಿದ್ದು ಪೋಲಿಸ ರೈಡ-ನಲ್ಲಿ ಸಿಕ್ಕು, ಸೆರೆಮನೆವಾಸವಾಗಿ, ಆಡಳಿತ ಕುಸಿದು ಅವನ ಸ೦ಸ್ಥೆಯೂ ವಿಷಮ ಸ್ಥಿತಿಗೆ ತಲುಪಿ, ಅವುಗಳಿಂದ ಹೊರ ಬರಲು ಅವನು ಸ೦ಸ್ಥೆ ಮಾರಿ ಹೆಂಡತಿಗೆ ವಿಚ್ಚೇದನ ನೀಡಿ ಪರಿಹಾರಾರ್ಥವಾಗಿ ಮನೆ ಹಣ ಕೊಟ್ಟು ಕೋಟಲೆಗಳಿಂದ ಹೊರಬರುತ್ತಾನೆ.

ಈ ನಡುವೆ ಜಯಕುಮಾರನ ನಚಿಕೇತ ಎಂಬ ವಿದೇಶದಲ್ಲಿರುವ ಅಳಿಯನೊಬ್ಬ ಎರಡು ವಿಧೇಶಿ ಹೆಂಗಸರುಗಳಿಂದ ಮೋಸ ಹೋಗಿ ವಿಚ್ಚೇದನ ಪರಿಹಾರವಾಗಿ ದಂಡಿಯಾಗಿ ಹಣ ಕಟ್ಟುತ್ತಿದ್ದು, ಅದೆಲ್ಲವುಗಳಿಂದ ಹೇಗೋ ಬಿಡಿಸಿಕೊಂಡು ಭಾರತಕ್ಕೆ ಬಂದು, ಇಲ್ಲಿಯೇ ಕೆಲಸವನ್ನೂ ಸೇರಿ, ಸ್ವಲ್ಪ ಕಾಲಾನಂತರ ಮಾವನ ಮಾನಸಿಕ ಕುಂಠಿತ ಮಗಳನ್ನೂ ಮದುವೆಯಾಗಿ, ಮಗುವನ್ನ ಹೊಂದಿ, ಮಾವನ ಅಳಿದುಳಿದ ಸ್ವಲ್ಪ ಹಣದಲ್ಲಿ ಉಧ್ಯಮವೊಂದನ್ನು ಪ್ರಾರಂಭಿಸುತ್ತಾನೆ.

ಕಥೆ ೨: ಇಷಾ ಮೇಡಂ ತನ್ನ ಬಹುರಾಷ್ಟ್ರೀಯ ಕ೦ಪನಿಯ ಉದ್ಯೋಗಿ ಗಂಡನೊಡನೆ ತನ್ನ ಕೆಲಸ ಬಿಟ್ಟು ಅವನೊಡನೆ ಸಂಸಾರಕ್ಕೆ ತಿರುಗಲಾಗದೇ, ಬೆಂಗಳೂರಿನ ತನ್ನ ಕೆಲಸದಲ್ಲೇ ಮುಂದುವರಿಯುತ್ತಾಳೆ. ಅಧುನಿಕ ಧೋರಣೆಯ ಮತ್ತು ಯುರೋಪಿಯನ್ನರ ಆಚಾರಕ್ಕೆ ವಿಚಾರಕ್ಕೆ ಮಾರುಹೋಗಿರುವ ಈ ಪಾತ್ರ ಸ್ವಂತ ಸುಖಕ್ಕೆ ಏನು ಮಾಡಲು ತಯಾರಾಗಿರುತ್ತಾಳೆ. ಈ ನಡುವೆ ಅವಳು ಒಬ್ಬ ಮಧ್ಯಮ ವಯಸ್ಸಿನ ರಾಜಕಾರಣಿಯಲ್ಲಿ ಲೈಂಗಿಕ ಸಂಪರ್ಕ್ಕೆ ಒಳಗಾಗಿ ಅನುರಕ್ತಳಾಗಿ ಅವನ ಫಾರಂಮನೆಯಲ್ಲಿ ಹೋಗಿರುತ್ತಾಳೆ. ಈ ವಿಷಯ ರಾಜಕಾರಣಿ ಹೆಂಡತಿಗೆ ಗೊತ್ತಾಗಿ ಅವಳು ಇವಳೊಡನೆ ರಂಪ ಮಾಡುತ್ತಾಳೆ. ಈ ನಡುವೆ ಇವಳ ಗಂಡ ವಿನಯಚಂದ್ರ ರಾಜಕಾರಣಿಯೊಡನೆ ಇವಳ ಲೈಂಗಿಕ ಚಿತ್ರಗಳನ್ನೂ ತೆಗಿಸಿರುತ್ತಾನೆ. ಈ ಚಿತ್ರಗಳನ್ನೂ ಉಪಯೋಗಿಸಿ ರಾಜಕಾರಣಿ ಇವಳನ್ನು ಫಾರ್ಮ ಮನೆಯಿಂದ ಹೊರಹಾಕಿಸುತ್ತಾನೆ. ವಿನಯಚಂದ್ರ ಅವಳಿಂದ ವಿಚ್ಛೇದನೆ ಪಡೆಯುತ್ತಾನೆ.

ವಿನಯಚಂದ್ರನ ಮಗಳು ತಾಯಿ ಇಷಾಳ ಆಶ್ರಯ ಬಿಟ್ಟು ಹಾಸ್ಟೆಲ್-ಗೆ ಸೇರಿ ತನ್ನ ಅಣ್ಣನಿಗೆ (ದೊಡ್ಡಪ್ಪನ ಮಗ) "ವಿಚ್ಚೆದಿತಳ ಮಗಳಾದ ತನಗೆ ಸೂಕ್ತ ಗಂಡೊಂದನ್ನು ಹುಡುಕುವ ಕಷ್ಟಕರದ ಕೆಲಸ ಮಾಡು" ಎಂಬ ಈಮೇಲ್-ನೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ.

ಎರಡು ಸಮಾನಾ೦ತರ ಕಥೆಗಳಿಗೆ ನಂಟೆ೦ದರೆ -ಇಷಾ ಮೇಡಂ ಮಂಗಳೇ ಮತ್ತು ಪ್ರಭಾಕರರಿಗೆ ಗುರು, ಪ್ರಭಾಕರ ರಾಜಕಾರಣಿಯ ಆಪ್ತ ಹಿಂಬಾಲಕ ಮತ್ತು ಇಷಾಳನ್ನು ಫಾರಂ ಮನೆಯಿಂದ ತೆರವು ಗೊಳಿಸುವಲ್ಲಿ ಪಾತ್ರವಹಿಸುತ್ತಾನೆ.

ಇತರ ಉಪಕಥೆಗಳು ಮತ್ತು ಪೂರಕ ಪಾತ್ರಗಳು: ಈ ನಡುವೆ ಜಯಕುಮಾರನ ಹೆಂಡತಿಯ ಕಾಲದ ಕೆಲಸದಾಳು-ನಮ್ರತೆಯಲ್ಲಿ ಕೆಲಸ ಮಾಡಿ ತಾಯಿಯಿಲ್ಲದ ಅವನ ಮತಿಕುಂಠಿತ ಮಗಳು ಪುಟ್ಟಕ್ಕಳನ್ನು ಮಗಳಂತೆ ಸಾಕಿ ಬೆಳೆಸಿ ದೊಡ್ದವಳನ್ನಾಗಿ ಮಾಡುವ ದ್ಯಾವಕ್ಕ, ಅವನ ಅತ್ತಿಗೆಯ ವರದಕ್ಷಿಣೆ ಕಿರುಕುಳದ ಸುಳ್ಳು ವಿಚಾರದಡೀ ಜೈಲಿಗೋಗಿ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿ ಯಾರಿಗೂ ಕಾಣದೆ ಇದ್ದು ಆಮೇಲೆ ಬಂದು ಜಯಕುಮಾರನನ್ನು ಸೇರುವ ಅವನ ತಾಯಿ, ಅವನ ಮುಗ್ದ ಅಣ್ಣ- ಜೋರಿನ ಅತ್ತಿಗೆ, ವರದಕ್ಷಿಣೆ ವಿಚಾರದಲ್ಲಿ ಅತ್ಮಹತ್ಯೆ ಮಾಡಿಕೊಳ್ಳುವ ಅವನ ಅಣ್ಣ -ಅತ್ತಿಗೆಯ ಮಗಳು(ತಾಯಿ ವರದಕ್ಷಿಣೆ ಕೊಡುವ ವಾಗ್ದಾನ ಮಾಡಿ ಆಮೇಲೆ ತಿರುಗಿರುತ್ತಾಳೆ), ಅವನ ಅಕ್ಕ-ಭಾವ (ನಚಿಕೇತನ ತಂದೆ ತಾಯಿ) ಮತ್ತು ಅವನ ಮಿತ್ರ ಶೇಖರ ಪಾತ್ರಗಳು ಪೂರಕವಾಗಿ ಕಾದಂಬರಿಯಲ್ಲಿ ಬರುತ್ತವೆ. ಜೊತೆಗೆ ಮಂಗಳೆಯ ತಾಯಿ, ಅಣ್ಣ-ಅತ್ತಿಗೆ, ಮಂಗಳೆಯ ತಂದೆ, ಮಂಗಲೆಯ ಗೆಳತಿಯರು, ಸಲಿಂಗಿ ಸರಾಫ್ಮೇಡಂ, ಲಾಯರುಗಳು, ಮಹಿಳಾವಾದಿ ಪಾತ್ರಗಳು ಬರುತ್ತವೆ.

ಆ ಕಡೆ ಇಷಾ-ಮತ್ತು ವಿನಯಚಂದ್ರರ ಕಥೆಗೆ ಪೂರಕವಾಗಿ, ವಿನಯಚಂದ್ರನ ಅಣ್ಣ -ಅತ್ತಿಗೆ ಮತ್ತು ಅವರ ಮಗ (ವಿನಯಚಂದ್ರನ ಮಗಳೊಡನೆ ಪ್ರೀತಿಯ ಒಡನಾಡಿ ಅಣ್ಣ), ರಾಜಕಾರಣಿ, ಅವನ ಹೆಂಡತಿ, ಹೆಣ್ಣು ಲಾಯರುಗಳು ಬರುತ್ತಾರೆ.

ಇದು ಮುಖ್ಯ ಕಥಾಹಂದರ. ಆದರೆ ಕಾದಂಬರಿಯ ಹರವನ್ನು ಅನುಭೂತಿ ಹೊಂದಬೇಕಾದರೆ ಪ್ರತಿಯೊಂದು ಸಾಲುಗಳು ಓದುಗನಿಗೆ ಅವಶ್ಯ.

ಕಥಾ ತಂತ್ರ : ಕಥೆಯ ಅಧ್ಯಾಯಗಳು ಮುಖ್ಯ ಪಾತ್ರಗಳ ಸ್ವಗತದೊಂದಿಗೆ ವಿವರವಾಗಿವೆ. ಒಮ್ಮೆ ಜಯಕುಮಾರ, ಒಮ್ಮೆ ಮಂಗಳೆ, ಒಮ್ಮೆ ಇಷಾ ಹಾಗೂ ಒಮ್ಮೆ ವಿನಯಚಂದ್ರ ಹೀಗೆ ಸರತಿಯ ಮೇಲೆ ಸ್ವಗತದಲ್ಲಿ ಕಥೆಯನ್ನು ಹೆಣೆಯುತ್ತಾರೆ. ಈ ನಡುವೆ ನಚಿಕೇತ-ರಾಜಕಾರಣಿ-ಪ್ರಭಾಕರ-ವಿನಯಕುಮಾರನಾ ತಾಯಿ ಹಲವಾರು ಸಂಧರ್ಭದಲ್ಲಿ ಮಾತಿನಲ್ಲಿ ತಮ್ಮ ಉಪಕಥೆಗಳನ್ನು ತೋಡಿಕೊಳ್ಳುತ್ತಾರೆ. ಕಾದ೦ಬರಿಯಲ್ಲಿ ಎಲ್ಲೂ ತಟಸ್ಥ ವಿವರಣೆ ಅಥವಾ ಲೇಖಕನ ನಿರೂಪಣೆಯಲ್ಲಿ ಬರಲಾರದ್ದು ಓದುಗರು ಗಮನಿಸಬೇಕಾದ ಮುಖ್ಯ ಅ೦ಶ. ಕೆಲವು ಅಧ್ಯಾಯಗಳು ಮಂಗಳೆ ಮತ್ತು ಜಯಕುಮಾರರ ಕಥೆಗಾದರೆ ಮತ್ತೆ ಕೆಲವು ಅಧ್ಯಾಯಗಳು ಇಷಾ-ವಿನಯಚಂದ್ರರ ಕಥೆಗಿದ್ದೂ ಒಂದರ ನಂತರ ಒಂದು ಬಂದಿವೆ. ಒಬ್ಬರೊಬ್ಬರ ಸ್ವಗತಗಳು ಉಪ-ಅಧ್ಯಾಯಗಳಾಗಿವೆ. ಸ್ವಗತಗಳ ಮುಖಾ೦ತರವೇ ಕಾದ೦ಬರಿಯ ಕಥೆಗಳು ಹರಿದಿವೆ, ಜೊತೆಗೆ ಕಥೆಯ ಮೇಲೆ ಆಯಾ ಪಾತ್ರಗಳ ದೃಷ್ಟಿಕೋನ ಅವರಿಂದಲೇ ಹೇಳಿಸಲ್ಪಟ್ಟಿದೆ. ಹೀಗಾಗಿ ಕಾದ೦ಬರಿಕಾರ ಕಾದ೦ಬರಿಯಲ್ಲಿ ಕಾಣುವದೇ ಇಲ್ಲ. ಪಾತ್ರಗಳೇ ಕಥೆ ಹೇಳುತ್ತವೆ ಮತ್ತು ಪರಸ್ಪರ ವಿಮರ್ಶಿಸಿಕೊಳ್ಳುತ್ತವೆ.

ಕಥೆಯ ಆಶಯ:
ಈ ಎರಡು ಸಮಾನಾಂತರ ಕಥೆಗಳ ಸಮ್ಮಿಲನದ "ಕವಲು" ಕಾದಂಬರಿಯಲ್ಲಿನ ಆಶಯಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು.
  • ಭಾರತೀಯ ಕೌಟುಂಬಿಕ ಮೌಲ್ಯಗಳು ಮತ್ತು ಪಾಶ್ಚ್ಯಾತ್ಯ ಕೌಟುಂಬಿಕ ಮೌಲ್ಯಗಳು ಮತ್ತು ಅವೆರಡರ ತುಲನೆ.
  • ಸ್ತ್ರೀ ಚಳುವಳಿಗಳು ಮತ್ತು ಸ್ತ್ರೀ ಪರ ಕಾನೂನುಗಳು -ಅದರ ವ್ಯಾಪ್ತಿ, ಉದ್ಧೇಶ, ಉಪಯೋಗ ಮತ್ತು ದುರುಪಯೋಗ. ಪಾಶ್ಚ್ಯಾತ್ಯ ಎರವಲು ಕಾನೂನುಗಳು ಭಾರತೀಯ ಕುಟುಂಬಕ್ಕೆ ಎಷ್ಟರಮಟ್ಟಿಗೆ ಪ್ರಸ್ತುತ -ಎಂಬುದರ ಮೀಮಾ೦ಷೆ.
  • ಮುಕ್ತ ಲೈಂಗಿಕತೆ ಅದರ ಪ್ರಸ್ತುತತೆ. ವಿಚ್ಛೇದನಾ ಕಾನೂನುಗಳಲ್ಲಿ ಗಂಡ-ಹೆಂಡತಿಯ ಸಂಭಂಧ ಮತ್ತು ಅವರ ಮಕ್ಕಳು ನೋಡುತ್ತದೆ ಹೊರತು ತಂದೆ ತಾಯಿ ಮತ್ತು ಇತರೆ ಅವಲಂಬಿತ ಕುಟುಂಬದ ಸ೦ಭ೦ಧಗಳ ಪರಿಗಣನೆಗೆ ತೆಗೆದು ಕೊಳ್ಳದ್ದು. ಅದಲ್ಲದೆ ಸ್ತ್ರೀ ಪರ ವರದಕ್ಷಿಣೆ, ವಿಚ್ಚೇದಿತ ಕಾನೂನುಗಳು ಹೇಗೆ ದುರುಪಯೋಗಪಡಲ್ಪಡುತ್ತವೆ.
  • ಪಾಶ್ಚ್ಯತೀಕಣ ಮೌಲ್ಯದ ಮೋಹದಲ್ಲಿ ಆಕರ್ಷಿತಗೊಳ್ಳುವ ಭಾರತೀಯ ಮನಗಳು ಸಮಗ್ರವಾಗಿ ತಮ್ಮನ್ನು ತಾವೂ ಅತ್ತವೂ ತೊಡಗಿಸದೆ, ಇತ್ತಲೂ ತೊಡಗಿಸದೆ ತೊಳಲಾಡುವ ಮತ್ತು ಸಂಭಂಧಗಳನ್ನು ತೊಳಲಾಡಿಸುವ ಪರಿ.
  • ಲೈಂಗಿಕ ಹಸಿವೆಗೆ ವೇಶ್ಯಾ/ವಿಟವೃತ್ತಿ ಅನಿವಾರ್ಯವೇ? ಸಲಿಂಗಕಾಮ ಸಹ್ಯವೇ?
  • ಜಾಗತೀಕರಣದ ವ್ಯವಹಾರಗಳಿಂದ, ಉಧ್ಯೋಗದಲ್ಲಿನ ಮಹದಾಶೆಗಳಿಂದ, ಹೆಚ್ಚು ಸಂಪಾದಿಸುವ ಹುಚ್ಚಿನಲ್ಲಿ, ಸಂಭಂಧಗಳು ಪೊಳ್ಳುಗೊಳ್ಳುತ್ತಿರುವ ಸ೦ಧರ್ಭ ಮತ್ತು ಮತ್ತು ಭಾರತೀಯ ಕುಟುಂಬದ ಮೌಲ್ಯಗಳು ಈ ನಿಟ್ಟಿನಲ್ಲಿ ಸಡಿಲವಾಗುತ್ತಿರುವ ಚಿತ್ರಣ.
ಕಾದ೦ಬರಿಯಲ್ಲಿನ ಬಾರತೀಯ ಕುಟುಂಬ ಮೌಲ್ಯಗಳ ಮಂಥನಗಳು:
  • ಸಂಕಲ್ಪ(commitment)ದಿಂದ ಪ್ರಾರಂಭವಾಗಿ, ಮನಗಳು ಪ್ರಾರಂಬದಲ್ಲಿ ತೊಡಗದೇ ಇದ್ದರೂ, ಕ್ರಮೇಣ ದೈಹಿಕ-ಮಾನಸಿಕ ಆಯಾಮಗಳಲ್ಲಿ, ಕುಟುಂಬದ ಇತರೇ ಹಿರೀ-ಕಿರಿ ಸಂಭಂಧಗಳ ಮಾರ್ಗದರ್ಶನ ಮತ್ತು ಪ್ರೀತಿಯಲ್ಲಿ ಒಂದಾಗಿ, ಪರಸ್ಪರರಲ್ಲಿ ಅನುರಕ್ತರಾಗಿ, ಗಟ್ಟಿಗೊಳ್ಳುವ ವೈವಾಹಿಕ ಸಂಭಂಧಗಳು. ಇದಕ್ಕೆ ಉದಾಹರಣೆ -ಮನಸ್ಸಿಲ್ಲದಿದ್ದರೂ ಮಾನಸಿಕ ಬೆಳವಣಿಗೆಯಲ್ಲಿ ಕುಂಠಿತಳಾದ ಪುಟ್ಟಕ್ಕನನ್ನು ಮದುವೆಯಾಗುವ ನಚಿಕೇತ ಕ್ರಮೇಣ ದಾಂಪತ್ಯದಲ್ಲಿ ಸಾಮರಸ್ಯ ಸಾಧಿಸಿ ಯಶಸ್ವೀಯಾಗುವದು, ಅಕ್ಕ-ಭಾವರ ಮಾರ್ಗದರ್ಶನದಲ್ಲಿ ವೈಜಯಂತಿಯನ್ನೂ ಮದುವೆಯಾಗಿ ಜಯಕುಮಾರ ದಾಂಪತ್ಯದಲ್ಲಿ ಯಶಸ್ವೀಯಾಗುವದು.
  • ಭಾರತೀಯ ನಾರಿ ತ್ಯಾಗ ಆದರ್ಶಗಳಲ್ಲಿ ಮನೆಯನ್ನು ನಡೆಸಿ, ಸಂಭಂಧಗಳನ್ನು ಗಟ್ಟಿಗೊಳಿಸುವದು - ಕುಡುಕ ಗಂಡನಿದ್ದರೂ ಅವನ್ನನ್ನು ಪ್ರೇಮದಿ೦ದ ಕಂಡು ದುಡ್ಡು ಕೊಟ್ಟು ತನ್ನ ಮುತ್ತೈದೆ ಭಾಗ್ಯ ಉಳಿದರೆ ಸಾಕೆಂದು ಪರೋಪಕಾರದಲ್ಲಿ (ಜಯಕುಮಾರ ಕುಟುಂಬಕ್ಕಾಗಿ , ಪುಟ್ಟಕ್ಕಳನ್ನು ಬೆಳೆಸುವಲ್ಲಿ) ಬದುಕನ್ನು ದೂಡುವ ದ್ಯಾವಕ್ಕ, ಸೊಸೆ ಸುಳ್ಳು ಆರೋಪ ನೀಡಿ ಜೈಲಿಗೆ ಹಾಕಿಸಿದರೂ ಸೊಸೆಯ ಮಗಳು ಆತ್ಮಹತ್ಯೆ ಮಾಡಿಕೊಂಡಾಗ ಅವಳನ್ನು ಕಾಣಲು ಹೋಗುವ- ವ್ಯೆಶ್ಯೆಯರ ಸಂಗ ಮಾಡಿ ಸಾಮಾಜಿಕವಾಗಿ ಹಾಗೂ ಔಧ್ಯೋಗಿಕವಾಗಿ ಹಾಳಾದ ಮಗನನ್ನು ಕ್ಷಮಿಸಿ ಅವನ ಬಾಳು ಹಸನು ಮಾಡಲು ಪ್ರಯತ್ನಿಸುವ ಜಯಕುಮಾರನ ತಾಯಿ, ಮನೆಕೆಲಸ ಒಪ್ಪ ಓರಣವಾಗಿ ಹಿರಿಕಿರಿಯರನ್ನು ಗೌರವಿಸುವ ವಿನಯಚಂದ್ರನ ಅತ್ತಿಗೆ, ಗಂಡನ ಕಚ್ಚೆಹರುಕತನ ಗೊತ್ತಿದ್ದರೂ ಅದನ್ನು ತಡೆಗಟ್ಟಲು ಗಂಡನೊಡನೆ ಹೋರಾಡದೆ ಅವನೊಡನೆ ಸಂಪರ್ಕದಲ್ಲಿರುವ ಹೆನ್ನುಗಲೊಡನೆ ಹೋರಾಡುವ ರಾಜಕಾರಣಿಯ ಪತ್ನಿ, ಇವುಗಳಿಗೆ ಉದಾಹರಣೆಯಾಗುವರು. ಈ ನಡುವೆ ಓದಿದ ವೈಜಯಂತಿ ಒಪ್ಪ ಓರಣವಾಗಿ ಮನೆಯನ್ನೂ ನಡೆಸಿ, ಮಗಳನ್ನೂ ಉತ್ತಮವಾಗಿ ಬೆಳಸಿ ಜೊತೆಗೆ ಆಫೀಸನಲ್ಲಿ ದುಡಿದು ಗಂಡನ ಯಶಸ್ಸಿಗೆ ಕಾರಣವಾಗಿರುತ್ತಾ ಆದರ್ಶ ಭಾರತೀಯ ಮಜಲಿನ ಪರಾಕಾಷ್ಠೆಯನ್ನೂ ಕಾದಂಬರಿಯಲ್ಲಿ ಕಾಣಬಹುದು.
  • ಲೈಗಿಂಕ ಸಂಭಂಧಗಳು ಯಶಸ್ವೀಯಾಗಲು ಮನ ಒಂದಾಗಿರಬೇಕು ಅದಕ್ಕೆ ಪರಸ್ಪರರಲ್ಲಿ ಗೌರವ ಪ್ರೀತಿ ಭಾವಗಳಿರಬೇಕು - ಮಂಗಳೆಯೊಡನೆ ಒತ್ತಾಯದಲ್ಲಿ ಮದುವೆಯಾದ ಜಯಕುಮಾರ ಅವಳೊಡನೆ ದೈಹಿಕ ಸಂಪರ್ಕದಲ್ಲಿ ವಿಫಲನಾಗುವದು, ಪುಟ್ಟಕ್ಕನಂತ ಮಾನಸಿಕ ಬೆಳವಣಿಗೆಯಾಗದ ಹೆಣ್ಣೋಡನೆ ಪ್ರೀತಿಯಿಂದ ಬೆರೆವ ನಚಿಕೇತ ಮಗುವನ್ನ ಪಡೆಯುವದು.
  • ಕುಟುಂಬದ ವ್ಯವಸ್ಥೆಯ ಎಲ್ಲ ಸಂಭಂಧಗಳ ಬೆಳವಣಿಗೆಗೆ ಆರ್ಥಿಕವಾಗಿ ಸಬಲರಿರುವವರು ನಿಲ್ಲುವದು- ಅತ್ತಿಗೆಯರ ಕಷ್ಟಕ್ಕೆ ಒದಗುವ ವಿನಯಚಂದ್ರ, ತಮ್ಮ ಜಯಕುಮಾರನ ಓದು ಮತ್ತು ಬೆಳವಣಿಗೆಗೆ ಕಾರಣಳಾಗುವ ಶೋಭಕ್ಕ ಮತ್ತು ಅವಳ ಗಂಡ, ಅಳಿಯ ನಚಿಕೇತನನ್ನು ಬೆಳೆಸುವ ಜಯಕುಮಾರ್-ವೈಜಯಂತಿ, ಮಾವನನ್ನು ಸ್ವಲ್ಪ ಕಾಲ ಸಾಕುವ ನಚಿಕೇತ, ತಾಯಿಯನ್ನು ಸಲಹುವ ಮಂಗಳೆ, ಜಯಕುಮಾರನ ಕಷ್ಟದಲ್ಲಿ ತಾನು ಕೂಡಿಟ್ಟ ಹಣ ವಿನಿಯೋಗಿಸುವ ಅವನ ತಾಯಿ ಹೀಗೆ ಹತ್ತು ಹಲವಾರು ಉದಾಹರಣೆ ನಿಲ್ಲುತ್ತವೆ.
  • ಭಾರತೀಯ ಉಡುಗೆ-ತೊಡುಗೆ-ಅಲಂಕಾರ ಮಹತ್ವ -ಕುಂಕುಮ ಬಳೆ ಸೀರೆ ಬಳಸಿದರೆ ಲಕ್ಷಣವಾಗಿದ್ದು ಮನೆ-ಮನ ಪ್ರಫುಲ್ಲವಾಗಿರುವದು ಎಂಬುದನ್ನು ವೈಜಯಂತಿ, ವಿನಚಂದ್ರನ ಅಣ್ಣನ ಹೆಂಡತಿ, ಪುಟ್ಟಕ್ಕಳ ಮುಖಾಂತರ ಹೇಳಿದೆ. ಹಾಗು ಇಲ್ಲದಿದ್ದರೆ ಸರಿಯಿರುವದಿಲ್ಲ ಎಂಬುದನ್ನು ಮಂಗಳೆ ಮತ್ತು ಇಶಾರ ಮುಖಾಂತರ ಕೆಲವು ಪಾತ್ರಗಳು ಹೇಳಿವೆ (ಮಂಗಳೆ ಪ್ರಭಾಕರನಿಗೆ ರುಚಿ ಇದ್ದರೆ ಅರುಚಿ ಹಾಗೂ ಇಷಾ ರಾಜಕಾರಣಿಗೆ ರುಚಿ ಇದ್ದರೆ ವಿನಯಚಂದ್ರಗೆ ಅರುಚಿ).
  • ಈ ನಡುವೆ ಭಾರತೀಯ ಕಂದಾಚಾರಗಳು ಎತ್ತಿ ತೋರಿಸಲ್ಫಟ್ಟಿವೆ- ಕುಟುಂಬಕ್ಕೆ ಗಂಡು ಬೇಕೆನ್ನುವ ಜಯಕುಮಾರನನ್ನು ವೈಜಯಂತಿ ಪುಟ್ಟಕ್ಕ ಏಕೆ ಆ ಸ್ಥಾನಕ್ಕೆ ಅರ್ಹಳಲ್ಲ ಎಂದು ವಾದಿಸಿ ಅವನ್ನನ್ನು ಒಪ್ಪಿಸುವದು, ಹೆಣ್ಣು ಮನೆಗೆ ಸೀಮತವಾಗಿರದೆ ವ್ಯವಹಾರಗಳಲ್ಲೂ ತೊಡಗಿಸಿಕೊಳ್ಳುವದು -ವೈಜಯಂತಿ ಉದಾಹರಣೆ ಮುಖಾಂತರ ತೋರಿಸಿ ಭಾರತೀಯ ಮನಗಳಲ್ಲಾಗಬೇಕಾಗಿರುವ ಬದಲಾವಣೆಗಳನ್ನ ಹೇಳಲಾಗಿದೆ.
  • ಲೈಂಗಿಕ ಸ್ವಾತಂತ್ರ ಮುಕ್ತತೆಯಿಂದ ಭಾರತೀಯ ಗಂಡುಗಳು ಅನುಭವಿಸಬೇಕಾದ ಪಾಡು ಗಳನ್ನ -ಇಷಾಳ ಸಂಪರ್ಕಕ್ಕೆ ಬಂದ ರಾಜಕಾರಣಿ ಪಾತ್ರ, ಮಂಗಳೆ ಸಂಪರ್ಕಕ್ಕೆ ಮತ್ತು ವೆಶ್ಯಯರ ಸಂಪರ್ಕಕ್ಕೆ ಬರುವ ಜಯಕುಮಾರಣ ಮುಖಾಂತರ ವಿವರಿಸಲ್ಪಟ್ಟಿದೆ.
  • ಲೈಂಗಿಕ ಮುಕ್ತತೆಯಿಂದ ಹೆಣ್ಣು ಭಾರತೀಯ ಮನಗಳ ನಡುವೆ ಪಡುವ ಪಾಡನ್ನು ಮಂಗಳೆ ಮತ್ತು ಇಶಾರ ಮಲಕ ಹೇಳಲ್ಪಟ್ಟಿದೆ.
  • ಹೆಂಡತಿ ಸಮಭಾಗಿಯಾಗಿ ದುಡಿದರೂ ಅವಳನ್ನುಳಿಗೆ ಸಂಸ್ಥೆಯಲ್ಲಿ ಪಾಲುದಾರಳನ್ನಾಗಿ ಮಾಡದೆ ಹೋದದ್ದಕ್ಕೆ ಆಗುವ ಪರಿಣಾಮಗಳು. (ಜಯಕುಮಾರನ ಸಂಸ್ಥೆಯನ್ನೂ ಕಟ್ಟಿ ಬೆಳಸುವದರಲ್ಲಿ ಹೆಚ್ಸಿನಪತ್ರ ವಹಿಸಿದ್ದ ವೈಜಯಂತಿಗೆ ಅದರಲ್ಲಿ ಪಾಲೇ ಇರುವದಿಲ್ಲ.
  • ಈ ನಡುವೆ ಜಯಕುಮಾರನ ಮಿತ್ರ ಶೇಖರ್ - ಒಬ್ಬರಿಗೊಬ್ಬರು ಹೇಗೆ ಸಹಾಯವಾಗುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುತ್ತಾರೆ. ಅವರು ಅವನನ್ನು ಎರಡು ಸಲ ಜೈಲಿಂದ ಬಿಡಿಸುವಲ್ಲಿ ಮತ್ತು ಉಧ್ಯಮವನ್ನ ಮರುಸ್ಥಾಪನೆ ಮಾಡಿಸುವಲ್ಲಿ ನೆರವಾಗುತ್ತಾರೆ. ಒಂದು ಕಡೆ ಅವನ್ ವೇಶ್ಯಾಸಂಗಕ್ಕೆ ಅವರು ಕಾರಣರಾಗಿರುತ್ತಾರೆ.
ಕಾದ೦ಬರಿಯಲ್ಲಿನ ಭಾರತೀಯ ಮನಗಳಲ್ಲಿ ಪಾಶ್ಚಾತ್ಯ ಕುಟುಂಬ ಮೌಲ್ಯಗಳ ಮಂಥನಗಳು:
  • ಪರಸ್ಪರ ಆಕರ್ಷಣೆಯಿಂದ "ಒಟ್ಟಿಗಿರುವದರಿಂದ (living together) ಪ್ರಾರಂಭವಾಗುವ ಸಂಭಂಧಗಳು ಭಾರತೀಯ ಮನದಲ್ಲಿ ಊರ್ಜಿತವಾಗದೆ ಇರುವದು- ನಚಿಕೇತ ಒಟ್ಟಿಗಿರುವದರಿಂದ ಪ್ರಾರಂಭಿಸಿದ ಸ೦ಭಂಧ ಊರ್ಜಿತವಾಗದೆ ಇದ್ದಾಗ ಅದನ್ನು ಪಾಶ್ಚ್ಯಾತ್ಯರಂತೆ ಸಾಮಾನ್ಯವಾಗಿ ತೆಗೆದುಕೊಳ್ಳದೆ ಕೊರಗುವದು, ಪ್ರಭಾಕರನೊಡನೆ ಲೈಗಿಂಕ ಸಂಪರ್ಕಕ್ಕೆ ಬರುವ ಪಾಶ್ಚ್ಯತ್ಯ ಮತ್ತು ಅಧುನಿಕ ಧೋರಣೆಯಲ್ಲಿ ಮುಂದುವರೆಯುವ ಮಂಗಳೆ ಗರ್ಭವತಿಯದಾಗ ಗರ್ಭವನ್ನು ತೆಗೆಸಲು ಅವಳಲ್ಲಿನ ಭಾರತೀಯ ಮನ ಅಡ್ಡ ಬರುವದು, ಗಂಡನೊಡನೆ ಹೋಗದೆ ಅವನನ್ನು ಬಿಟ್ಟಿರದೆ ತೊಳಲಾಡುವ ಇಷಾಳು, ಕಾನೂನು ಮೊರೆ ಹೊಕ್ಕು ವಿಚ್ಛೇದನೆ ತೆಗೆದುಕೊಂಡರೂ ಮನದ ಕೊರಗಲ್ಲಿ ಉಳಿವ ಮಂಗಳೆ ಹೀಗೆ ಹಲವಾರು ಸಂಧರ್ಭಗಳಲ್ಲಿ ಉದಾಹರಣೆ ದೊರೆಯುತ್ತದೆ.
  • ಸ್ತ್ರೀ ಸಮಾನತೆಯ ಹೆಸರಲ್ಲಿ ಮುಕ್ತ ಲೈಂಗಿಕತೆಗೆ ಆಕರ್ಷಿತರಾಗಿ ಅದನ್ನು ಅನುಭವಿಸಿ ಅದರ ಪರಿಣಾಮ ಮತ್ತು ಅನುಭವಗಳನ್ನೂ ಸಹಜ ಎಂದು ಪರಿಗಣಿಸದೆ ತೊಳಲಾಡುವ ಪಾತ್ರಗಳು.
ಕಾದಂಬರಿಯಲ್ಲಿನ ಕುಟುಂಬ ಕಾನೂನು ಮಂಥನ:
  • ಸಣ್ಣ ಕಾರಣಕ್ಕೆ ಅತ್ತೆ ಸೊಸೆ ಜಗಳಾಡಿ, ಸೊಸೆ ವರದಕ್ಷಿಣೆ ಕಾನೂನಡೀ ಅತ್ತೆಯನ್ನು ಜೈಲಿಗೆ ಕಳಿಸುವದು ಮತ್ತು ಆಮೇಲೆ ಆ ಕೇಸನ್ನು ಹಿಂತೆಗೆಯಲಾಗದೇ ಅವಳಿಗೆ ಶಿಕ್ಷೆ ಆಗುವದು. (ಜಯಕುಮಾರ ಅತ್ತಿಗೆ ಮತ್ತು ತಾಯಿ ನಡುವೆ)
  • ಗಂಡ -ಹೆಂಡತಿ ಜಗಳದಲ್ಲಿ ಹೆಂಡತಿಗೆ ಕೈ ಎತ್ತಿದ ಪ್ರಸಂಗದಲ್ಲಿ ಹೆಂಡತಿ ದೂರು ನೀಡಿ ಅವನ್ನನ್ನು ಮಾನಸಿಕ ಕಿರುಕುಳದ ಅಡೀ ಜೈಲಿಗಟ್ಟುವದು. (ಮಂಗಳೆ-ಜಯಕುಮಾರ)
  • ಪರಿಹಾರ ಪಡೆಯುವ ಉದ್ಹ್ಧೆಶದಲ್ಲಿ ನಚಿಕೇತನನ್ನು ಮದುವೆಯಾಗಿ ಆಮೇಲೆ ವಿಚ್ಛೇದನೆ ಪಡೆದು ವಂಚಿಸುವ ವಿದೇಶೀ ಮಹಿಳೆ (ಅವಳು ಇದನ್ನು ಉದ್ಹ್ಯೋಗವನ್ನಾಗಿಸಿರುತ್ತಾಳೆ!)
  • ವೇಶ್ಯಾವಾಟಿಕೆಯಲ್ಲಿ ತೊಡಗುವದು ಅದರಿಂದ ಕಾನೂನು ಕ್ರಮಕ್ಕೊಳಗಾಗುವದು. ಜಯಕುಮಾರನ ತಾಯಿ ತಪ್ಪಲ್ಲ ಎನ್ನುವದರ ಮುಖಾಂತರ ವಿಧುರ ಮತ್ತು ಮನೆಯಲ್ಲಿ ಸುಖ ಸಿಗದ ಗಂಡು ವೇಶ್ಯೇಯಾರಲ್ಲಿ ಲೈಂಗಿಕ ದಾಹ ತೀರಿಸಿಕೊಳ್ಳುವದು ಸಹಜ ಎಂಬತಿದೆ. ಇತಿಹಾಸದಲ್ಲೂ ಇದು ಇತ್ತು ಇನ್ನು ಸಮರ್ಥನೆಯು ಇದೆ.
  • ವಿನಯಚಂದ್ರ ಚಾಣಾಕ್ಷವಾಗಿ ಒಲ್ಲದ ಹೆಂಡತಿಯಿಂದ(ಇಷಾ) ವಿಚ್ಛೇದನೆ ಪಡೆಯಲು ಅವಳನ್ನು ದೂರ ಮಾಡುವದು, ಲೈಂಗಿಕ ಹಸಿವಿನ್ನಲ್ಲಿಡುವದು, ಅವಳು ಬೇರೆಯವನೊಡನಿರುವಾಗ ಚಿತ್ರಗಳನ್ನೂ ತೆಗೆದು ಸುಲಭದಲ್ಲಿ ವಿಚ್ಛೇದನೆ ಪಡೆಯುವ ತಂತ್ರ.
  • ಕುಟುಂಬ ಕನುನುಗಳನ್ನು ಉಪಯೋಗಿಸಿ ಅದಲಿತವರ್ಗದವರು ಹಣ ಮಾಡುವ ತಂತ್ರವನ್ನು ಒಬ್ಬ ಮಹಿಳಾಪೋಲಿಸ್ ಅಧಿಕಾರಿ ಪಾತ್ರದಲ್ಲಿ ಹೇಳಲಾಗಿದೆ.
ವೈಭವ ವಿಲಾಸೀ ಜೀವನ ಕ್ರಮ : ಇಷಾ ಮತ್ತು ವಿನಯಚಂದ್ರರ ಕಥೆಯಲ್ಲಿ ಹೆಚ್ಚು ಸಂಪಾದಿಸಿ, ವೈಬ್ಹೊವೆಪೆತ ಜೀವನ ನಡೆಸುವ ಕುಟುಂಬದಲ್ಲಿನ ಸ೦ಭಂಧಗಳ ಕುಸಿತ ಜೊತೆಗೆ ಹೆಣ್ಣು ಸ್ವತಂತ್ರ ಮನೋಭಾವದಲ್ಲಿ ವರ್ತಿಸಿದಾಗ ಆಗುವ ಪರಿಣಾಮಗಳು ವಿಶದವಾಗಿವೆ. ಮಂಗಳೆಯ ಜೀವನ ಕ್ರಮ ಸಹಾ.

ನನ್ನ ವಿಚಾರ :
  • ಕಾದಂಬರಿಯ ಆಶಯ ಪ್ರಸ್ತುತ ಕಾಲಕ್ಕೆ ಔಚಿತ್ಯ ಪೂರ್ಣವಾಗಿದ್ದು ಕಾದಂಬರಿ ಈ ಹರವಿನಲ್ಲಿ ಸಾಕಷ್ಟು ಪರಿಶ್ರಮ ಹೊಂದಿದೆ. ಆದರೆ ಎಲ್ಲ ಸ್ವತಂತ್ರ ಮನೋಭಾವ ಹೊಂದಿದ ಸ್ತ್ರೀ ಪಾತ್ರಗಳು ನಕಾರಾತ್ಮಕವಾಗಿ ಆಡಿಸಲ್ಪಟ್ಟಿವೆ. ಈ ಕಾರಣಕ್ಕಾಗಿ ಸ್ತ್ರೀ ವಿರೋದ್ಧಿ ದೋರಣೆಯ ಕಾದಂಬರಿ ಎನ್ನುವ ಅಪಾಯ ತಪ್ಪಿಸಿಕೊಳ್ಳಲಾಗಿಲ್ಲ. ವೈಜಯಂತಿಯ ಪಾತ್ರ ಮಾತ್ರ ಅಪವಾದ. ಆದರೆ ಆ ಪಾತ್ರ ಕೇವಲ ಬೇರೆಯವರ ಸ್ವಗತದಲ್ಲಿ ಬರುವ ಪಾತ್ರವಾಗಿದ್ದರಿಂದ ಓದುಗರಿಗೆ ಅದರ ಕಡೆ ಗಮನ ಹರಿಯುವದಿಲ್ಲ.
  • ಒಟ್ಟಿನಲ್ಲಿ- ಸಂಕಲ್ಪವಿಲ್ಲದ ಆಕರ್ಷಣಾ ಪ್ರೇಮಗಳು ಹೆಚ್ಚು ಗಟ್ಟಿಯಾಗಲಾರವು, ಪ್ರೀತಿಯಲ್ಲಿ ಅಧಿಕಾರ ಚಲಾಯಿಸಿದರೆ ಅದು ಅಧಿಕಾರವಾಗಲಾರದು, ಅಧಿಕಾರಯುತವಾಗಿ ಪ್ರೀತಿ ಪಡೆಯಲೆತ್ನಿಸಿದರೆ ಅದು ಸಂಪೂರ್ಣ ವೇಧ್ಯವಾಗದು, ಮನಗಳು ತೊಡಗದೇ ಲೈಂಗಿಕ ಕ್ರಿಯೆಗಳು ಸಂತೃಪ್ತಿಯಲ್ಲಿ ಮುಗಿಯವು, ತ್ಯಾಗವಿಲ್ಲದೆ ಪ್ರೀತಿ ಅರಳದು, ಕುಟುಂಬವೆಂದರೆ ಬರಿ ಗಂಡ ಹೆಂಡತಿ ಮತ್ತು ಅವರ ಪ್ರಾಪ್ತರಲ್ಲದ ಮಕ್ಕಳು ಎಂಬ ಸೀಮಿತ ಅರ್ಥದ ಕಾನೂನಿನ ಔಚಿತ್ಯವಲ್ಲ, ಕುಟುಂಬ ಎಂದರೆ ಎಲ್ಲ ಸಂಭಂಧಗಳು ಸೇರಬೇಕು ಎಂಬ ನೀತಿಗಳು ಕಾದಂಬರಿಯಲ್ಲಿ ಸಿಗುತ್ತೆ.
  • ಎರಡು ಕಥೆಗಳು ಸೇರಿ ಹರವು ದೊಡ್ಡದಾಗಿ ಮತ್ತು ಹೇಳಬೇಕಾದ ಅ೦ಶಗಳು ಹೆಚ್ಚಾಗಿ ಯಾವದೂ ಪ್ರಭಾವಕಾರಿಯಾಗಿ ಹೇಳಲಾಗದೆ ಹೋಗಿದೆ. ಕೇವಲ ಒಂದು ಕಥೆ ತೆಗೆದುಕೊಂಡು ಯಾವದೇ ಒಂದು ವಿಚಾರದ ಸುತ್ತ ಮಂಥನ ನಡೆದಿದ್ದರೆ ಚೆನ್ನಾಗಿರುತ್ತಿತ್ತು ಎನಿಸಿತು.
  • ಪ್ರಭಾಕರ ಮತ್ತು ರಾಜಕಾರಣಿ-ಯಂಥ ಪಾತ್ರಗಳು ಭಾರತೀಯ ಮೌಲ್ಯಗಳ ದುರುಪಯೋಗದಲ್ಲಿ ಹೆಣ್ಣನ್ನು ಉಪಯೋಗಿಸುವದಕ್ಕೆ ನಿಂತಿರುವಾಗ, ಬೇಕಾದ ಖಂಡನೆ ಕಾದಂಬರಿಯಲ್ಲಿ ಕಾಣಲಿಲ್ಲ.
  • ಜಯಕುಮಾರನು ಆಧುನಿಕ ಹೆಸರಲ್ಲಿ ತನ್ನ ವಿಧುರ ಜೀವನದಲ್ಲಿ ಮಜಾ ಪಡೆಯಲು ನೋಡುವದರಿಂದ ಮಂಗಳೆ ಮಾಡಿದ್ದು ಒಮ್ಮೆ ಸರಿಯೇನ್ನಿಸಬಹುದು.
  • ಸಂಕಲ್ಪದಲ್ಲಿ ಅರಳಿದ ಸಂಬಂಧಗಳಲ್ಲಿ ಪ್ರೀತಿ ತಾನೇ ಸುರಿದು ಅವು ಗಟ್ಟಿಯಾಗುತ್ತವೆ.
  • ಪುರುಷರ ತಪ್ಪುಗಳು ಸ್ವಾಭಾವಿಕ ( ವಿವಾಹೇತರ ಸಂಭಂಧಗಳು) ಎನ್ನುವಷ್ಟು ದಾರ್ಷ್ಟ್ಯವಾಗಿ ಮಹಿಳೆಯ ಸಂಭಂಧಗಳು ಸ್ವಾಭಾವಿಕ ಎನ್ನದ ಧೋರಣೆ ಮೆಚ್ಚುಗೆಯಾಗಲಿಲ್ಲ. ತಪ್ಪೆಂದರೆ ಇಬ್ಬರದೂ ತಪ್ಪೇ, ಅಲ್ಲವೆಂದರೆ ಇಬ್ಬರದೂ ತಪ್ಪಿಲ್ಲ.
  • ಪಾಶ್ಯಾತ್ಯ ಅನುಕರಣೆ ಮಾಡಿದರೂ ನಮ್ಮ ಭಾರತೀಯ ಮನಗಳು ಸಂಪೂರ್ಣ ಪರಿವರ್ತಿತವಾಗದು. ಈ ನಿಟ್ಟಿನಲ್ಲಿ ನಮ್ಮ ಸ೦ಸ್ಕ್ರತಿಗೆ ತಕ್ಕ ಹಾಗಿದ್ದು, ಪಾಶ್ಚಾತ್ಯ ಜ್ಞಾನವನ್ನು ಪಡೆದು ಉಧ್ಯೋಗ ಮತ್ತು ಆರ್ಥಿಕ ಕ್ಷೇತ್ರದಲ್ಲಿ ನಾವು ಪ್ರಗತಿ ಸಾಧಿಸಬಹುದು-ವೈಜಯಂತಿ ತರಹ.
  • ಜೀವನದ ಮಟ್ಟದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಸ್ತರಗಳು ನಮ್ಮ ಮನೋಧರ್ಮವನ್ನು ಸಂಪೂರ್ಣ ಬದಲಾರಗಿಸಲಾರದ ಮಟ್ಟದಲ್ಲಿ ಆಳವಿರುವದರಿಂದ ಅದರಲ್ಲಿ ಪಾಶ್ಯಾತ್ಯ ಧೋರಣೆ ಅಳವಡಿಕೆ ಕಷ್ಟ. ಆದರೆ ಅದನ್ನು ನಾವು ವಿಧ್ಯೆ ಉಧ್ಯೋಗ ದಲ್ಲಿ ರೂಡಿಸಿಕೊಳ್ಳಬಹುದು.
  • ಕಾದಂಬರಿ ಹಸರು ಹೇಳುವ ಹಾಗೆ ನಮ್ಮ ಭಾರತೀಯ ಮನಗಳು ಇತ್ತ ಭಾರತೀಯ ಮೌಲ್ಯಗಳನ್ನು ಸಂಪೂರ್ಣ ಬಿಡದೇ, ಅತ್ತ ಪಾಶ್ಚ್ಯಾತ್ಯ ಮೌಲ್ಯಗಳನ್ನು ಸಂಪೂರ್ಣ ಅಪ್ಪಿಕೊಳ್ಳದೇ ತೊಳಲಾಡುತ್ತಾ"ಕವಲು" ದಾರಿಯಲ್ಲಿವೆ. ಯಾವಕಡೆ ಹೋಗಬೇಕು ಯಾವಕಡೆ ಇರಬೇಕು ಎಂಬುದರ ವಿಚಕ್ಷಣೆ ಬೇಕು. ಈ ನಿಟ್ಟಿನಲ್ಲಿ ಕವಲು ಓದುಗರ ಮನದಲ್ಲಿ ಸಾಕಷ್ಟು ತರಂಗಗಗಳನ್ನೆಬ್ಬಿಸುವದು.
  • ಆದರೆ ಎರಡು ಕಥೆಗಳನ್ನು- ಅದೊಂದು ಸ್ವಲ್ಪ ಇದೊಂದು ಸ್ವಲ್ಪ ಹೇಳುತ್ತಾ ಹೋಗುವದರಿಂದ ಓದುಗರಿಗೆ ಓದಿನ ಓಟ ಕಷ್ಟವೆನಿಸುತ್ತದೆ. ಜೊತೆಗೆ ಹಲವಾರು ವಿಷಯಗಳು-ಮೌಲ್ಯ, ಸಂಭಂಧಗಳು, ಕಾನೂನು, ಲೈಂಗಿಕತೆ, ಸ್ತ್ರೀ ಸಮಾನತೆ, ಆಧುನಿಕತೆ-ಸನಾತನತೆ, ಹೀಗೆ ಹಲವಾರು ವಿಷಯಗಳ ಸುತ್ತ ಹರಿಯುವದರಿಂದ ಓದುಗರಿಗೆ ಸ್ವಲ್ಪ ಕವಲಿನ ದಾರಿಯೇ ಎನಿಸುವದು.
  • ಎಲ್ಲ ಆಧುನಿಕ ಧೋರಣೆ ಮತ್ತು ಸ್ತ್ರೀ ಸಂಘಟನೆಗಳ ಮಹಿಳೆಯರು (ಕಾದಂಬರಿಯಲ್ಲಿ ಬರುವ) ನಕಾರಾತ್ಮಕ ಧೋರಣೆ ಇರುವದರಿಂದ ಜನ ಕಾದ೦ಬರಿ ಸ್ತ್ರೀ ಧೋರಣಾವಾದಿಗಳ ವಿರೋಧಿಯೆಂಬ ನಿಲುವಿಗೆ ಬರಬಹುದು.
ಒಟ್ಟಿನಲ್ಲಿ ಕಾದಂಬರಿ ಸಮಕಾಲೀನ ಪರಿಸ್ಥಿತಿಯಲ್ಲಿನ ಭಾರತೀಯ ಮನಗಳ ತಮ್ಮ ಪರಂಪರಾಗತ ಮೌಲ್ಯ ಮತ್ತು ಆಧುನಿಕ ಮೌಲ್ಯಗಳ ಮನ್ವಂತರದ ಕವಲಿನಲ್ಲಿ ನಿಂತು ದ್ವಂದ ಎದುರಿಸುವಲ್ಲಿನ ಕ್ಷಣಗಳನ್ನು, ಒಂದನ್ನೂ ಪೂರ್ತಿ ಬಿಡದ, ಒಂದನ್ನೂ ಪೂರ್ತಿ ಅಪ್ಪಿಕೊಳ್ಳದ ಸಂಧರ್ಭಗಳಲ್ಲಿ ಸಂಭಂಧಗಳು ಹಾಗೂ ಕುಟುಂಬ ವ್ಯವಸ್ಥೆ ಸಡಿಲಳವಾಗುತ್ತಿರುವ ಚಿತ್ರಣವನ್ನ ಮೂಡಿಸುವ ಪ್ರಯತ್ನವಾಗಿದೆ.
ಎರಡು ಕಥೆ ಮತ್ತು ಹಲವಾರು ವಿಷಯಗಳ ಸುತ್ತಲಿನ ಚಿಂತನ ಏಕ ಕಾದಂಬರಿಯಲ್ಲಿ ಮೂಡಿ ಯಾವದೇ ಒಂದು ವಿಷಯ ಸದೃಡ ಹರಳುಗಟ್ಟಲು ಆಗಿಲ್ಲ ಹಾಗೂ ಮಂಥನ ಓದುಗರನ್ನು ಕೆಣಕುವ ಮಟ್ಟಕ್ಕೆ ಹೋಗಿಲ್ಲ. ಈ ನಡುವೆ ಓದುಗರು ಕಾದಂಬರಿ ಅಭಿವ್ಯಕ್ತಿ ಗಳನ್ನು ಭೈರಪ್ಪನವರದ್ದಾಗಿಸಿ ಆ ವಿಷಯಗಳಿನ ತಮ್ಮ ಅಭಿಪ್ರಾಯ ಮೂಸೆಯಲ್ಲಿ ಅವರ ಪರ-ವಿರೋಧಿ ನಿಲುವಿಗೆ ನಿಲ್ಲುವದಾಗಲಿ ಅಥವಾ ಅವರ ಹಿಂದಿನ ಕಾದ೦ಬರಿಗಳಿಗೆ ಹೋಲಿಸಿ ಇದು ಉತ್ತಮ ಅಥವಾ ಕಳಪೆ ಎನ್ನುವ ವಿಮರ್ಶೆಗೆ ನಿಂತು ಕಾದಂಬರಿಯಲ್ಲಿನ ಆಶಯಗಳು ಸರಿಯಾದ ಮಂಥನವಿಲ್ಲದೆ ಸೊರಗುವ ಸಾಧ್ಯತೆ ಇಲ್ಲದೆ ಇಲ್ಲ!

(ಚಿತ್ರಗಳ ಕೃಪೆ : ಕನ್ನಡಿ ಅಂಗಡಿ ಅಂತರ್ಜಾಲ ತಾಣ ಮತ್ತು ಭೈರಪ್ಪನವರ ಅಂತರ್ಜಾಲ.
ಭೈರಪ್ಪನವರ ಬಗೆಗಿನ ಮಾಹಿತಿ ಕೃಪೆ : ವಿಕಿಪೀಡಿಯಾ ಅಂತರ್ಜಾಲ ತಾಣ)

35 comments:

V.R.BHAT said...

ನನಗೆ ಹಗಲಿಡೀ ನೆಟ್ ನಲ್ಲಿ ಈಜಾಡಲಿಕ್ಕೆ ಸಮಯವಿರುವುದಿಲ್ಲ, ನಾನು ಸ್ವಲ್ಪ ಹೊತ್ತು ಮಾತ್ರ ನಿಶಾಚರಿ, ಬರೆಯುವುದೂ ರಾತ್ರಿಯಲ್ಲೇ ಜಾಸ್ತಿ. ಇಂದು ನಿಮ್ಮ ಲೇಖನ ಕಂಡು ಓಡಿ ಬಂದೆ, ಸ್ನೇಹಿತರಾದ ಡಾ| ಆರ್. ಗಣೇಶ್ ಹೇಳಿದಂತೆ ಲೇಖಕರ ಅಭಿವ್ಯಕ್ತಿ ಸ್ವಾತಂತ್ರ್ಯ ಅವರಿಗಿದೆ, ಅವರು ಯಾವುದೇ ಪಕ್ಷಪಾತಿಗಳಾಗಿ ಬದುಕುವುದಿಲ್ಲ, ಭೈರಪ್ಪನವರು ಸಹಜವಾಗಿ ಇಂದಿನ ಸಮಾಜದ ಮುಖಗಳನ್ನು ಎತ್ತಿ ತೋರಿಸಿದ್ದಾರೆ, ಇವತ್ತು ಕಾದಂಬರಿಕಾರನಿಗೆ ಕಾದಂಬರಿಯಲ್ಲಿ ಒಂದಲ್ಲ-ಎರಡಲ್ಲ ಹಲವು ಕಥೆಗಳನ್ನು ಸೇರಿಸಬೇಕಾಗಿದೆ-ವಸ್ತು ಸ್ಥಿತಿಯೂ ಹಾಗೆ ಇದೆ ಮತ್ತು ಬಹುಮಾಧ್ಯಮಗಳ ಮಧ್ಯೆ ಕಾದಂಬರಿಯನ್ನು ಓದುಗರು ಲಕ್ಸ್ಯಿಸಬೇಕಲ್ಲ ! ಕೆಲವು ಬ್ಲಾಗುಗಳಲ್ಲಿ--ಪತ್ರಿಕೆಗಳಲ್ಲಿ ತಿಂಗಳಿನಿಂದ ಇದೇ ಸಮಾರಾಧನೆ, ಆದರೆ ಅಷ್ಟೆಲ್ಲಾ ತಲೆಕೆಡಿಸಿಕೊಳ್ಳುವ ಯಾವ ತಪ್ಪು ನಡೆದಿದೆ ಎಂಬುದು ನನಗರ್ಥವಾಗದ ಸತ್ಯ! ನಿಮ್ಮ ಲೇಖನ ತುಂಬಾ ಹಿಡಿಸಿತು, ನಿಮ್ಮ ಅನಿಸಿಕೆ ಕೂಡ ಸುಮಾರಾಗಿ ನನ್ನ ಅನಿಸಿಕೆಗೆ ತಾಳೆಯಾಗುತ್ತದೆ, ಒಳ್ಳೆಯ ಲೇಖನ, ಧನ್ಯವಾದಗಳು

balasubramanya said...

ಸೀತಾರಾಂ ಸರ್ ಒಂದು ಉತ್ತಮವಾದ ಲೇಖನ.ನಿಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹರಿಯ ಬಿಟ್ಟಿದ್ದೀರಿ , ಒಬ್ಬ ನಿಜದ ಓದುಗನ ಮನದಲ್ಲಿ ಮೂಡುವ ಅನಿಸಿಕೆಗಳು ಸ್ಪಷ್ಟವಾಗಿ ಮೂಡಿದೆ. ನಿಮಗೆ ಥ್ಯಾಂಕ್ಸ್.

shivu.k said...

ಸೀತಾರಾಂ ಸರ್,

ಪುಸ್ತಕವನ್ನು ಇನ್ನೂ ಓದಿಲ್ಲ. ನೀವು ಓದಿ ಅದರ ಬಗ್ಗೆ ಒಂದು ಉತ್ತಮ ಬರಹವನ್ನೇ ಬರೆದಿದ್ದೀರಿ...ನಾನು ಓದಬೇಕೆನಿಸುತ್ತದೆ. ನಮ್ಮ ಕಾರ್ಯಕ್ರಮವಾದ ಮೇಲೆ ಖಂಡಿತ ಓದುತ್ತೇನೆ..ಧನ್ಯವಾದಗಳು.

ಮನಮುಕ್ತಾ said...

ನಾನು ಕಾದ೦ಬರಿಯನ್ನು ಓದಿಲ್ಲ..ಆದರೂ ಕಾದ೦ಬರಿಯ ಬಗೆಗಿನ ವಿಮರ್ಶೆ ಅನಿಸಿಕೆಗಳು ಚೆನ್ನಾಗಿ ಓದಿಸಿಕೊ೦ಡು ಹೋಯಿತು.ಕಾದ೦ಬರಿಯ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

prabhamani nagaraja said...

'ಕವಲು' ಇದನ್ನು ವಿವಿಧ ಕೋನಗಳಿ೦ದ ವೀಕ್ಷಿಸಿ ಪರಿಚಯವನ್ನು ಮಾಡಿದ್ದೀರಿ. ಧನ್ಯವಾದಗಳು

sunaath said...

ಸೀತಾರಾಮರೆ,
ಕಾದಂಬರಿಯಲ್ಲಿಯ ಕತೆಯನ್ನು, ತಿರುಳನ್ನು, ಶೈಲಿಯನ್ನು ಬಿಡಿಸಿ ಬಿಡಿಸಿ ಹೇಳಿ, ಕೊನೆಗೆ ನಿಮ್ಮ ವಿಮರ್ಶೆಯನ್ನು ಬರೆದಿದ್ದೀರಿ. ಈ ವಿಧಾನ ನನಗೆ ಮೆಚ್ಚುಗೆಯಾಯಿತು.

ತೇಜಸ್ವಿನಿ ಹೆಗಡೆ said...

ಸೀತಾರಾಮ್ ಅವರೆ,

ಕವಲು ಸೋತಿರುವಿದೇ ಅದರೊಳಗಿನ ತೀರಾ ಎನ್ನಿಸುವ ನಕಾರಾತ್ಮಕ ಧೋರಣೆಯಿಂದಲೇ! ಜಯಕುಮಾರನ ಪತ್ನಿಯ ಕುರಿತು ಆ ಪಾತ್ರದ ಕುರಿತು ನೀವು ವಿಮರ್ಶಿಸಿದ ರೀತಿ ಇಷ್ಟವಾಯಿತು. ಕೇವಲ ಮೇಲಿನಿಂದ.. ಅವರಿವರ ನೆನಪುಗಳ ಮೂಲಕ, ಸ್ವಗತದ ಮೂಲಕವಷ್ಟೇ ಪ್ರಶಂಸಿಸಿ, ಮತ್ತೆಲ್ಲಾ ಸ್ತ್ರೀಯರನ್ನು ತೀರಾ ತುಚ್ಛವಾಗಿ ಬಿಂಬಿಸಿದ್ದಾರೆ ಭೈರಪ್ಪನವರು. ಅಂತಹ ಸ್ತ್ರೀಯರು ಇದ್ದಿರಬಹುದು.... ಇದ್ದಾರೆ ಕೂಡ. ಆದರೆ ಕೇವಲ ಒಂದು ಮುಖ ಕಾಣಿಸಿ... ಲೇಖಕನಿಗೆ ನಿರ್ಬಂಧವಿರಕೂಡದೆಂಬ ಸೋಗಿನ ನೆಲೆಯಲ್ಲಿ ಪುರುಷ ಸಮಾಜದ ಮೆಚ್ಚುಗೆಗೆ ಮಾತ್ರ ಪಾತ್ರವಾಗುವಂತೆ ಬರೆದಿದ್ದಾರೆ. ಅವರು ಬರೆದದ್ದೆಲ್ಲಾ ಸರಿ ಅಲ್ಲ ಎನ್ನುತ್ತಿಲ್ಲಾ.... ಆದರೆ ಅವರು ನಿರೂಪಿಸಿದ ರೀತಿ ಸರಿ ಎನಿಸಲಿಲ್ಲವಷ್ಟೇ. ಹಾಗಾಗಿಯೇ ಕವಲು ಸೊರಗಿದೆ!

Snow White said...

kadambariyannu naanu innu odilla sir..nimma lekhana tumba chennagide.

Manasa said...

tumbaa thanks sir, nanage illi sikkodilla aa kadambari... india hogo frndsgella heLataane iratini yaaru tandu kottilla... nivu kand kavalu naanu odidantaayitu.

ಸೀತಾರಾಮ. ಕೆ. / SITARAM.K said...

ಧನ್ಯವಾದಗಳು ವಿ.ಆರ್.ಭಟ್ಟರೇ -ಸುಂದರ ಅನಿಸಿಕೆಗೆ ಹಾಗೂ ತಮ್ಮ ಮುಕ್ತ ಅಭಿಪ್ರಾಯಕ್ಕೆ.ಲೇಖಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ, ಆದರೆ ಸಾರ್ವಜನಿಕರ ಮನ-ಮಾನಸಗಳಲ್ಲಿ ಹೆಗ್ಗಳಿಕೆಯನ್ನು ಇಟ್ಟುಕೊಂಡಿರುವ ಲೇಖಕರಿಂದ ನಕಾರಾತ್ಮಕವಾಗಿ ಹೆಣ್ಣನ್ನು ಚಿತ್ರಿಸಿದ್ದು- ಅವರ ಅಭಿವ್ಯಕ್ತಿ ಸ್ವಾತಂತ್ರಕ್ಕೆ ತಕ್ಕುದಾಗಿದ್ದರೂ, ಓದುಗರಿಗುಂಟಾಗುವ ಭ್ರಮಾನಿರಸನದಿಂದ ಇಂಥಾ ವಿಮರ್ಶೆಗೆ ಒಳಗಾಗುವದು ಬಹುಶಃ ಬೈರಪ್ಪನವರು ಸಧ್ಯ ಅನುಭವಿಸುತ್ತಿರುವ ಸಂಗತಿ. ಓದುಗರದೂ ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲವೇ?
ಕಥೆ ಎರಡಾಗಿರದೇ, ಒಂದಿದ್ದು ಇನ್ನು ಹೆಚ್ಚು ಘಟನೆಗಳ ಮುಖಾಂತರ ಹೇಳುವದನ್ನು ಪ್ರಭಾವಕಾರಿಯಾಗಿ ಹೇಳಬಹುದಿತ್ತೇನೋ ಎನ್ನುವದು ನನ್ನ ತೀರಾ ವೈಯುಕ್ತಿಕ ಅನಿಸಿಕೆ ಇಲ್ಲದೆ ಹೋದರೆ, ಇನ್ನಷ್ಟು ಪುಟಗಳು ಹೆಚ್ಚಾಗಿದ್ದರೂ ಸರಿ ಇರುತ್ತಿತ್ತೇನೋ?
ಅದೇನೇ ಇರಲಿ ಕವಲು ಒಂದು ಚಿಂತನೆಗೆ ಹಚುವ ಆಶಯದ ಕಾದಂಬರಿ.

ಸೀತಾರಾಮ. ಕೆ. / SITARAM.K said...

ನಮ್ಮೊಳಗೊಬ್ಬರಾದ ಬಾಲುರವರೇ ತಮ್ಮ ಅನಿಸಿಕೆಗೆ ವಂದನೆಗಳು.
ಕಾದಂಬರಿಯಲ್ಲಿ ಒಬ್ಬ ಪೇದೆ ಹೇಳುತ್ತಾನೆ "ಓದಿದ ಗಂಡು ಹೆಂಗಸಾಗುತ್ತಾನೆ ಮತ್ತು ಓದಿದ ಹೆಂಗಸು ಗಂಡಾಗುತ್ತಾಳೆ" ಎಂದು. ಇಲ್ಲಿ ಗಂಡಸು ಜೋರಿರಬೇಕು ಮತ್ತು ಹೆಣ್ಣು ಮೃದು ಕೊಮಲೆಯಾಗಿರಬೇಕು ಮತ್ತು ವಿಧ್ಯೆಯಿಂದ ಇಬ್ಬರು ತಮ್ಮ ಪ್ರಕೃತಿಗೆ ತದ್ವಿರೋಧವಾಗುತ್ತಾರೆ ಎಂಬಂತೆ ಅರ್ಥವಾಗುತ್ತದೆ. ಈ ಮೂಸೆಯಲ್ಲಿ ಓದುವದು ತಪ್ಪೇ? ಹೆಣ್ಣು ಸದಾ ಕೊಮಲೆಯ ಇರಬೇಕೆ? ಗಂಡು ಸದಾ ಜೋರು -ಕಾಠಿಣ್ಯದವನಾಗಿರಬೇಕೆ? ಎಂಬುದು ಪ್ರಶ್ನೆ??

ನನ್ನ ಅನಿಸಿಕೆಯಲ್ಲಿ ಕೋಮಲತೆ ಮತ್ತು ಜೋರು ಯಾವದೇ ಲಿಂಗ ಪ್ರವರ್ಗಕ್ಕೆ ಶಿರ್ಷಿಕೆಯಾಗದೆ ಪ್ರತಿಯೊಬ್ಬರಲ್ಲೂ ಕೋಮಲತೆ ಮತ್ತು ಕಾಠಿಣ್ಯತೆ ಇರಬೇಕು ಹೆಣ್ಣಿರಲಿ ಅಥವಾ ಗಂಡಿರಲಿ. ಪ್ರೀತಿ-ಪ್ರೇಮ ನ್ಯಾಯಗಳಿಗೆ ಕೋಮಲತೆ ಉತ್ತರವಾಗಲಿ. ಅನ್ಯಾಯ ಆಕ್ರಮ ಅನೀತಿಗಳಿಗೆ ಕಾಠಿಣ್ಯ ಉತ್ತರವಾಗಲಿ ಅಲ್ಲವೇ!

ಸೀತಾರಾಮ. ಕೆ. / SITARAM.K said...

ಶಿವುರವರೆ ಪುಸ್ತಕ ಅವಶ್ಯ ಓದಿ. ತಮ್ಮ ಪ್ರತಿಕ್ರಿಯೆಗೆ ವಂದನೆಗಳು.
ಕಾದ೦ಬರಿಯಲ್ಲಿ ಮಂಗಳೆ ಸ್ವಗತದಲ್ಲಿ ಸ್ತ್ರೀ ಎಲ್ಲಿಯವರೆಗೆ ಸ್ವಾವಲಂಬಿಯಾಗಬೇಕೆಂದು ಯೋಚಿಸುವ ಪರಿಯೊಂದನ್ನು ಲೇಖಕರು ಈ ರೀತಿ ಚಿತ್ರಿಸುತ್ತಾರೆ "ಮಗುವೊಂದ ಪಡೆಯುವ ನನ್ನ ಆಶೆಗೆ ಗಂದಿಲ್ಲದೆ ಸಾಧ್ಯವಿಲ್ಲವೇ? ಗಂಡೇಕೆ ಬೇಕು ? ಗಂಡಿಲ್ಲದೆ ಮಗು ಪಡೆದರೆ ಅದು ನಿಜವಾಗಿಯೂ ಸ್ತ್ರೀ ಸ್ವಾವಲ೦ಬನ! ಅದಕ್ಕಾಗಿ ವೀರ್ಯ ಬ್ಯಾಂಕುಗಳು ಇವೆಯಂತೆ, ಆದರೂ ವೀರ್ಯಕ್ಕಾಗಿ ಗಂಡು ಬೇಕಲ್ಲವೇ ವೀರ್ಯವು ಗಂಡಿನಿಂದ ಬರುವದರಿಂದ ಛೆ ಅದು ಅವಲಂಬನೆಯೇ!" ಇದು ಪರಾಕಾಷ್ಠೆ ಮತ್ತು ಉತ್ಪ್ರೇಕ್ಷೆಯ ಹೇಳಿಕೆ ಇರಬಹುದು. ಯಾವ ಹೆಣ್ಣು ಈ ಮಟ್ಟದಲ್ಲಿ ಸ್ವಾವಲಂಬನೆ ಯೋಚಿಸಿರಲಾರರು. ಇದೊಂದು ತೀಕ್ಷ್ಣ ಹೇಳಿಕೆ.

ಆದರೂ ಸೃಷ್ಟಿ ಕಾರ್ಯಕ್ಕೆ ಪ್ರಕೃತಿ-ಪುರುಷರ ಸಮಾಗಮ ಅವಶ್ಯ. ಅದು ಪರಸ್ಪರ ಅರ್ಪಣಾಭಾವದಲ್ಲಿ, ಒಬ್ಬರನ್ನೊಬ್ಬರು ಸಂತೃಪ್ತಿಸುವ ಪೈಪೋಟಿಯಲ್ಲಿ ನಡೆಯಬೇಕೇ ಹೊರತು ಅಲ್ಲಿ ವೈಯುಕ್ತಿಕ ಸ್ವಾರ್ಥತೆ ಅಥವಾ ಅಹಂ-ಗೆ ಅವಕಾಶವಿದ್ದಲ್ಲಿ ಆ ಕ್ರಿಯೆ ಅಪೂರ್ಣವಲ್ಲವೇ! ಅದಕ್ಕೆಂದೇ ಸಮರಸವೇ ಜೀವನ ಎನ್ನುವದಲ್ಲವೇ!

ಸೀತಾರಾಮ. ಕೆ. / SITARAM.K said...

ಮನಮುಕ್ತಾರವರೇ ತಮ್ಮ ಪ್ರತಿಕ್ರಿಯೆಗೆ ವಂದನೆಗಳು. ಕಾದಂಬರಿ ಓದಿ- ಭೈರಪ್ಪನವರನ್ನು ಮತ್ತು ಅವರ ಹಿಂದಿನ ಕಾದಂಬರಿಗಳನ್ನ ಮರೆತು ಓದಿ, ಇಲ್ಲದಿದ್ದಲ್ಲಿ ಭ್ರಮಾನಿರಸನವಾಗಬಹುದು.

ಸೀತಾರಾಮ. ಕೆ. / SITARAM.K said...

ಪ್ರಭಾಮಣಿಯವರೇ ತಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ವಂದನೆಗಳು. ಕಾದಂಬರಿ ಹಲವಾರು ಕವಲಿನಲ್ಲಿ ಅನಾವರಣ ಗೊಳ್ಳುವದರಿಂದ ಅದರ ಬಗ್ಗೆ ಬರೆಯಲು ಕವಲುಗಳನ್ನು ಎದುರಿಸಬೇಕಾಯಿತು!

ಪ್ರಭಾಕರ ಮತ್ತು ಮಂತ್ರಿಯ ಪಾತ್ರಗಳು ಸಾಮಾನ್ಯವಾಗಿ ಚಿತ್ರಿತವಾಗಿದ್ದು, ಅವು ಸಮಾಜದ ನಿಜವಾದ ಅಪಾಯಗಳು ಎಂದು ಗುರುತಿಸುತ್ತಾ ಅವುಗಳ ಖಂಡನೆ ತೀಕ್ಷ್ನವಾಗಬೇಕಿತ್ತು ಎಂಬುದು ನನ್ನ ವೈಯುಕ್ತಿಕ ವಿಚಾರ.

ಸೀತಾರಾಮ. ಕೆ. / SITARAM.K said...

ಸುನಾಥರೇ ನಿಜ ಹೇಳಬೇಕೆಂದರೆ ತಮ್ಮಿಂದ ಪ್ರೆರೆಪಿತನಾಗಿ ನಾನು ಈ ರೀತಿ ಅಭಿಪ್ರಾಯ ಬರೆದೆ. ಇದು ತಮ್ಮ ಶೈಲಿ ಮತ್ತು ನನಗೆ ಇದರಲ್ಲಿ ತಾವು ಗುರುಗಳು.
ತಮ್ಮ ಅಭಿಪ್ರಾಯಕ್ಕೆ ವಂದನೆಗಳು.

ಸೀತಾರಾಮ. ಕೆ. / SITARAM.K said...

ತೇಜಸ್ವಿನಿಯವರೇ,
ತಮ್ಮ ಅಭಿಪ್ರಾಯ ನನ್ನದು ಸಹಾ. ಉತ್ತಮವಾಗಿ ಕವಲಿನ ಬಗ್ಗೆ ಹೇಳಿದ್ದಿರಾ.. ಧನ್ಯವಾದಗಳು.
ಮಂಗಳೆ, ಮಾಲಾ ಕೆರೂರು, ಇಷಾ, ಸರಾಫಾ ಮೇಡಂ, ಮಹಿಳಾ ಜುನಿಯರ್ ವಕೀಲೆ -ಅಂಥಾ ಪಾತ್ರಗಳು ನಮ್ಮ ಸಮಾಜದಲ್ಲಿ ಅಲ್ಲಲ್ಲಿ ಇದ್ದರೂ ಒಂದೇ ಕಾದಂಬರಿಯಲ್ಲಿನ ಒಂದೇ ಕಥೆಯಲ್ಲಿ ಅವರೆಲ್ಲಾ ಒಂದೇ ಕಡೇ ಸೇರಿದ್ದು ನನಗೆ ಯಾಕೋ ಪಥ್ಯವಾಗಲಿಲ್ಲ. ನಮ್ಮ ಸಮಾಜ ಅಷ್ಟೊಂದು ಎಕ್ಕುಟ್ಟಿ ಹೋಗಿಯೂ ಇಲ್ಲ!

ಜೊತೆಗೆ ಪುರುಶರೆಲ್ಲಾ ಮಾಡಿದ್ದು ತಪ್ಪಲ್ಲ ಎನ್ನುವ ಕಾದ೦ಬರಿ ಧೋರಣೆಯು ನನಗೆ ಇಷ್ಟವಾಗಲಿಲ್ಲ. ಜಯಕುಮಾರ ಮಂಗಳೆ ಮತ್ತು ವೆಶ್ಯರ ಸಂಪರ್ಕಕ್ಕೆ ಬರುವದು, ವಿನಯ ಚಂದ್ರ ಚಾಣಾಕ್ಷತೆ ತೋರಿ ಇಷಾಳನ್ನು ಬಿಡುವದು, ವಿಷಯಲಂಪಟತನ ತೋರುವ ಪ್ರಭಾಕರ್ ಮತ್ತು ಮಂತ್ರಿ ಸಾಮಾನ್ಯರಂತೆ ಖಂಡನೆಯಿಲ್ಲದೆ ಕಾದಂಬರಿಯಲ್ಲಿ ಬಂದು ಹೋಗದವು ಮುಂತಾದವು ಪುರುಷಪ್ರಧಾನ ಮತ್ತು ಅವನ ಶೋಷಣೆಗೆ ಸಂಭಂಧವು ಆಗಿದೆ. ಹೀಗಾಗಿ ತಮ್ಮ ಅಭಿಪ್ರಾಯ ಸರಿಯೇ!

ಸೀತಾರಾಮ. ಕೆ. / SITARAM.K said...

ಹಿಮಶ್ವೇತೆಯವರೇ ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು. ಕಾದಂಬರಿ ಓದಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಿ.

ಕಾದಂಬರಿಯಲ್ಲಿ ಒಂದು ಮಗುವಿದ್ದರೂ ಮತ್ತೊಂದು ಮಗು ಬೇಕು ಎನ್ನುವ ಆಧುನಿಕ ಧೋರಣೆಯ ಮಂಗಳೆ ಪ್ರಭಾಕರನನ್ನೊಪ್ಪಿಸಿದರೂ, ಜಯಕುಮಾರನೊಡನೆ ಸಂಪರ್ಕವಿಲ್ಲದುದರಿಂದ ಹೊಂದಲು ಹಿಂದೇಟು ಹಾಕುವದು ಅವಳಲ್ಲಿನ ಭಾರತೀಯ ಮನ ಪೂರ್ಣವಾಗಿ ಆಧುನಿಕದೆಡೆಗೆ ತಿರುಗದಿದ್ದುದ್ದಕ್ಕೆ ಸಾಕ್ಷಿಯಾಗಿ ಅವಳಲ್ಲಿನ ಕಾವಲನ್ನು ತೋರಿಸುತ್ತದೆ.
ಧಾರ್ಮಿಕ ಮತ್ತು ಸಾಮಾಜಿಕ ಸನಾತನತೆ ನಮ್ಮ ಮೈಯಲ್ಲಿ ರೂಡಿಗತವಾಗಿದ್ದರಿಂದ ಯಾವದೇ ವೈಚಾರಿಕತೆ ಅಥವಾ ಮತಾ೦ತರತೆ ನಮ್ಮನ್ನು ಬುಡಸಮೇತ ಬದಲಾಯಿಸಲಿಕ್ಕಾಗುವದಿಲ್ಲ.
ಎಷ್ಟೋ ಜನ ಮತಾಂತರ ಹೊಂದಿದ ಮುಸ್ಲಿಂ ಮತ್ತು ಕ್ರೈಸ್ತ ಕುಟುಂಬಗಳು ತಮ್ಮ ಪೂರ್ವ-ಧರ್ಮದ ದೇವರುಗಳಿಗೆ ನಡೆದುಕೊಳ್ಳುವದನ್ನು ನಾನು ನೋಡಿದ್ದೇನೆ. ಅದು ಸಹಜವು ಎಂಬಂತಿದೆ.
ವಿಜ್ಞಾನ ಓದಿಕೊಂಡ ನಾವು ಎಲ್ಲ ನೀರು H2O ಎಂದು ಗೊತ್ತಿದ್ದರೂ ಗಂಗಾಜಲವನ್ನು ಗಂಗೆ ಎಂದು ಕಣ್ಣಿಗೊತ್ತಿ ಭಕ್ತಿಯಿಂದ ಸ್ವೀಕರಿಸುವದಿಲ್ಲವೇ.

ಸೀತಾರಾಮ. ಕೆ. / SITARAM.K said...

ಮಾನಸರವರೆ,
ಪ್ರತಿಕ್ರಿಯೆಗೆ ಧನ್ಯವಾದಗಳು. ಬಿಡುವಾದಾಗ ಓದಿ. ತುಂಬಾ ಚರ್ಚಿತವಾಗುತ್ತಿರು ಕಾದಂಬರಿ. ಆಶಯ ದೊಡ್ಡದು. ಆದರೆ ಚಿತ್ರಣ ಕವಲಾಗಿದೆ.

PARAANJAPE K.N. said...

ನನಗೆ ಎಲ್ಲಕ್ಕಿ೦ತ ಹೆಚ್ಚು ಇಷ್ಟವಾಗಿದ್ದು ನಿಮ್ಮ ವಿಮರ್ಶೆ ಮ೦ಡಿಸುವ ವಿಧಾನ. ಮೊದಲಿಗೆ ಕಾದ೦ಬರಿಕಾರರ ಪರಿಚಯ, ಆ ಮೇಲೆ ಕಾದ೦ಬರಿಯ ಒಳಹೂರಣದ ಸ್ಥೂಲ ವಿವರ, ಪಾತ್ರಗಳ ಮಾಹಿತಿ, ಕಥೆಯ ಸಾರ, ಕಥಾವಸ್ತುವಿನ ಮುಂದುವರಿಕೆ, ಆಮೇಲೆ ಪ್ರಸ್ತುತ ಸಾಮಾಜಿಕ ಸಮಸ್ಯೆಗಳ ನೆಲೆಯಲ್ಲಿ ಕಾದ೦ಬರಿಯ ಪ್ರಸ್ತುತತೆ, ಮತ್ತೆ ನಿಮ್ಮ ವಿಮರ್ಶಾತ್ಮಕ ಅಭಿಪ್ರಾಯ. ನೀವು ಬಹಳ ಪರಿಶ್ರಮದಿ೦ದ ಈ ಕಾದ೦ಬರಿಯನ್ನು ವಿಮರ್ಶೆ ಮಾಡಿದ್ದೀರಿ ಮತ್ತು ನಿಮ್ಮ ವಿಮರ್ಶೆ ಖ೦ಡಿತ ವಾಗಿ ಬೇರೆಯವರಿಗಿ೦ತ ಭಿನ್ನ ಎ೦ಬುದನ್ನು ನಾನು ಬಿಚ್ಚು ಮನಸಿನಿ೦ದ ಹೇಳಬಲ್ಲೆ. ತು೦ಬ ವ್ಯವಸ್ಥಿತ ವಿಮರ್ಶಾ ವಿಧಾನ. ತು೦ಬಾ ಇಷ್ಟವಾಯಿತು.

ಸಾಗರಿ.. said...

ಸೀತಾರಾಮ್ ಸರ್,
ಬಹಳ ಚೆನ್ನಾಗಿ ವಿಮರ್ಶೆ ಮಾಡಿದ್ದೀರಿ. ನಾನಿನ್ನೂ ಕಾದಂಬರಿಯನ್ನು ಓದಿಲ್ಲ. ಆದರೂ ಓದಿದವರು ಈ ಕಾದಂಬರಿಯ ಬಗ್ಗೆ ಚೆನ್ನಾಗಿಲ್ಲ ಅಂತ ಹೇಳಿದ್ದನ್ನಷ್ಟೇ ಕೇಳಿದ್ದೇನೆ. ಎಳೆ ಎಳೆಯಾಗಿ ಕವಲನ್ನು ವಿಮರ್ಶೆಯಂಗಳದಲ್ಲಿ ಹರಡಿದ್ದು ತುಂಬಾ ಹಿಡಿಸಿತು. ಸದ್ಯದಲ್ಲೇ ಪುಸ್ತಕವನ್ನ್ನು ಓದುವ ಹಂಬಲವಿದೆ.

Subrahmanya said...

ಬಹಳ ವಿಸ್ತೃತವಾಗಿ ವಿಶ್ಲೇಶಣೆ ಮಾಡಿದ್ದೀರಿ ಗುರುಗಳೆ. ಎಳೆ-ಎಳೆಯಾಗಿ ತೆರೆದಿಟ್ಟು ವಿವರಿಸಿದ ಪರಿ ಬಹಳ ಇಷ್ಟವಾಯ್ತು.

Shashi jois said...

ಸೀತಾರಾಂ ಸರ್ ಕಾದಂಬರಿ ಓದಿಲ್ಲ .ಆದರೆ ನಿಮ್ಮ ಲೇಖನ ಓದಿ ಸಾರಾಂಶ ತಿಳಿಯಿತು.ಒಳ್ಳೆಯ ಲೇಖನ

ಸಾಗರದಾಚೆಯ ಇಂಚರ said...

ಸರ್
''ಕವಲು'' ಸಿಕ್ಕರೆ ಓದಬೇಕು ಅಂತ ತುಂಬಾ ದಿನದಿಂದ ಇದ್ದೆ,

ನಿಮ್ಮ ಬ್ಲಾಗ್ ಚಿಕ್ಕ ಪರಿಚಯ ನೀಡಿತು

ಇನ್ನೂ ಓದಬೇಕು ಅನ್ನೋ ಆಸೆ ಬರ್ತಾ ಇದೆ

ಶಿವರಾಮ ಭಟ್ said...

ಸರ್, "ಒಂದೇ ಕಾದಂಬರಿಯಲ್ಲಿ ಸಮಕಾಲೀನ ಸಮಾಜದ ಎಲ್ಲ ಸಮಸ್ಯೆಗಳನ್ನು ಮಂಥನ ಮಾಡಿದ ಕವಲಿನ" ವಿಮರ್ಶೆ ಅತ್ಯುತ್ತಮವಾಗಿದೆ.
ನಿಮ್ಮ ಅಭಿಪ್ರಾಯಗಳೂ ಕೂಡ ಸರಿ ಅನ್ನಿಸಿದವು. ಕಾದಂಬರಿ ಒಟ್ಟಾರೆಯಾಗಿ ಸರ್ವಸಮ್ಮತವಾದ ಧನಾತ್ಮಕ ಸಂದೇಶವನ್ನು ಪರಿಣಾಮಕಾರಿಯಾಗಿ ಕೊಡುವಲ್ಲಿ ವಿಫಲವಾಗಿದೆಯೇ?
ನಾನಿನ್ನೂ ಓದಿಲ್ಲ. ಓದಿ ಮತ್ತೆ ಪ್ರತಿಕ್ರಿಯಿಸುತ್ತೇನೆ!

ದಿನಕರ ಮೊಗೇರ said...

sir,
' kavalu' bagge kelidde... oduva avakaasha sikkiralilla.... nimma vimarshe odi khushiyaaytu.. yaakendare.... nimma vimarshe modale tilisi adanna oduvavara mele herilla.... ellara bagge heLi.. nantara nimma anisike tiLisiddeeri...

dhanyavaada sir... ishtu vivaravaagi baredaddakke...

Sum said...

Ee pustakavannu nanu innoo odilla, adare idannu odiruva pati haagu taayiyavarinda katheyannu tilididdene.
Nimma vimarshe saakashtu detailed agide. Bhyrappanavara bagegina maahiti upayuktavagide.

Adare nanagiruva gondale endare, 'stri samanate' embudara vastustithi namma samaajadalli ishtu hadagettideye?

ಸೀತಾರಾಮ. ಕೆ. / SITARAM.K said...

-ಮೆಚ್ಚಿದ್ದಕ್ಕೆ ಧನ್ಯವಾದಗಳು ಪರಾಂಜಪೆಯವರೆ. ಈ ಶೈಲಿ ಸುನಾಥರದು ನಾನು ಅದನ್ನು ಅನುಕರಿಸಿದ್ದೇನೆ ಅಷ್ಟೆ. ಕಾದ೦ಬರಿಯಲ್ಲಿ ಪಾಶ್ಚ್ಯಾತ್ಯರ ವಿಚ್ಛೇದನಾ ಪದ್ಧತಿ ಮತ್ತು ಅದರ ದುರುಪಯೋಗದ ಬಗ್ಗೆ ಬರುತ್ತೆ. ಆದರೆ ನಮ್ಮ ದೇಶದಲ್ಲಿ ಆ ತರಾ ಇವೆಯಾ? ಕಟಕಟೆಯಲ್ಲಿ ವಿಚಾರಣೆಗಳು ಮುಕ್ತಾಯವಾಗುವವಾ? ರುಚಿಕಾಳ ಮೇಲಿನ ಲೈಂಗಿಕ ಹಗರಣದಂತಾ ಹತ್ತು ಹಲವು ಉದಾಹರಣೆಗಳಿವೆ.

ಸೀತಾರಾಮ. ಕೆ. / SITARAM.K said...

ಸಾಗರಿಯವರೇ ಪ್ರತಿಕ್ರಿಯೆಗೆ ಮತ್ತು ಮೆಚ್ಚುಗೆಗೆ ಧನ್ಯವಾದಗಳು.
ಕಾದ೦ಬರಿಯನ್ನು ಓದಿ.
-ಕಾದಂಬರಿಯಲ್ಲಿ ಬರುವ ಲೈಂಗಿಕ ವಿಚಾರಗಳು ಅತೀ ಆಗಿದೆ ಎಂದು ಅನಿಸುತ್ತದೆ ಜೊತೆಗೆ ಸ್ವಲ್ಪ ಮುಜುಗುರವೆನಿಸಿದರೂ ಕಥಾ ಆಶಯಕ್ಕೆ ಓದಬೇಕು. ಸ್ತ್ರೀ ಸಮಾನತೆಯ ಮಸ್ಯೆಯನ್ನ ಇನ್ನೊಂದು ತೀರದಲ್ಲಿ ನೋಡುವ ಒಂದು ಪ್ರಯತ್ನ ಭೈರಪ್ಪನವರದು. ಭಾರತೀಯ ಹಳ್ಳಿ ಹಳ್ಳಿಗಳಲ್ಲೂ ಇನ್ನು ಸ್ತ್ರೀ ಶೋಷಣೆ ನಡೆದೇ ಇದೆ.
ಭೈರಪ್ಪನವರು ಎಲ್ಲೋ ಪಟ್ಟಣಗಳಲ್ಲಿ ನಡೆಯುತ್ತಿರುವ ಸ್ತ್ರೀ ಸಮಾನತೆಯ ಕಾನೂನುಗಳ ದುರ್ಭಳಕೆಯಿಂದ ಪುರುಷರ ಶೋಷಣೆ ನಡೆಯುವದನ್ನು ಸ್ವಲ್ಪ ವೈಭವಿಕರಿಸಿ ಹೇಳಿದ್ದಾರೆ.

ಸೀತಾರಾಮ. ಕೆ. / SITARAM.K said...

ಸುಬ್ರಮಣ್ಯರೇ, ತಮ್ಮ ಅಭಿಪ್ರಾಯಕ್ಕೆ ವಂದನೆಗಳು.
ಮಹಿಳೆಯರು ಪ್ರಭುದ್ಧರಾದರೆ ಕಾಠಿನ್ಯವಾಗಿರುತ್ತಾರೆ ಮತ್ತು ಪುರುಷರನ್ನು ವಿರೋಧಿಸುತ್ತಾರೆ ಎಂಬ ಕಾದಂಬರಿಯಲ್ಲಿನ ತರ್ಕ ಯಾಕೋ ಮೆಚ್ಚುಗೆ ಆಗಲಿಲ್ಲ.

ಸೀತಾರಾಮ. ಕೆ. / SITARAM.K said...

ಶಶಿ ಜೋಯಿಷರೆ, ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಕಾದಂಬರಿ ಓದಿ.
ಮಹಿಳೆ ನಮ್ಮ ದೇಶದಲ್ಲಿ ಇನ್ನೂ ಅಸುರಕ್ಷಿತಳು. ಎಲ್ಲೋ ಕೆಲವು ಮಹಿಳೆಯರು ಮಹಿಳಾ ಕಾನೂನನ್ನು ದುರ್ಭಳಕೆ ಮಾಡಿದಾಕ್ಷಣ ಕಾನೂನು ಅಪ್ರಸ್ತುತವಲ್ಲ. ಕಾನೂನು ಇದ್ದರೂ ಎಸ್ತ್ತು ಜನ ಶೋಷಿತ ಸ್ತ್ರೀಯರು ಅದರ ಉಪಯೋಗ ಪಡೆಯಲು ನ್ಯಾಯಾಲಯದ ಮೆಟ್ಟಲೇರುವರು? ಅದು ತಮ್ಮವರು ಎಂದುಕೊಂಡವರ ಮೇಲೆ? ಹಾಗೇ ಹೋದವರಿಗೆ ಎಷ್ಟು ಜನಕ್ಕೆ ನ್ಯಾಯ ಲಭ್ಯವಾಗಿದೆ?

ಸೀತಾರಾಮ. ಕೆ. / SITARAM.K said...

ಶಿವರಾಮ ಭಟ್ಟರೇ, ಪ್ರತಿಕ್ರಿಯೆಗೆ ಧನ್ಯವಾದಗಳು. ಕಾದಂಬರಿ ಸಮಾಜದಲ್ಲಿನ ಸ್ತ್ರೀ ಸಮಾನತೆಯ ಧೋರಣೆಯ ಕೆಲವು ಮಹಿಳೆಯರ ನಕಾರಾತ್ಮಕ ನಿಲುವುಗಳು ಕಾದಂಬರಿಯಲ್ಲಿ ವೈಭವೀಕರಣಗೊಂಡಿದೆ.ಈ ನಿಟ್ಟಿನಲ್ಲಿ ಪ್ರಭುದ್ಧ ಮಹಿಳಾವಾದಿಗಳತ್ತ ಜನ ಅನುಮಾನದಿಂದ ನೋಡಬಹುದೇನೋ? ಆದರೆ ಕಾದಂಬರಿ ಆಶಯ ದೊಡ್ಡದು. ಆ ನಿಟ್ಟಿನಲ್ಲಿ ಓದಿ ಪಾತ್ರಗಳನ್ನ ಕಾದಂಬರಿಗೆ ಸೀಮಿತ ಮಾಡಿದಾಗ ಕಾದಂಬರಿ ಹರವು ತಿಳಿಯುತ್ತದೆ.

ಸೀತಾರಾಮ. ಕೆ. / SITARAM.K said...

ದಿನಕರರವರೇ,ಪ್ರತಿಕ್ರಿಯೆಗೆ ಧನ್ಯವಾದಗಳು. ಬೇಗ ಕಾದಂಬರಿ ಓದಿ. ನಿಮ್ಮ ಅಭಿಪ್ರಾಯಕ್ಕೆ ಕಾಯುತ್ತೇನೆ.

ಸೀತಾರಾಮ. ಕೆ. / SITARAM.K said...

ಗುರುಮೂರ್ತಿಯವರೇ, ಪ್ರತಿಕ್ರಿಯೆಗೆ ಧನ್ಯವಾದಗಳು. ಕಾದಂಬರಿ ಓದಿ. ಯೂರೋಪಿನಲ್ಲಿರುವ ತಾವು ಹೆಚ್ಚಿನ ವಿಮರ್ಶೆ ನೀಡಬಲ್ಲಿರಿ. ಕಾದಂಬರಿಯಲ್ಲಿನ ಪಾತ್ರ ನಚಿಕೇತ ಯುರೋಪಿನಲ್ಲಿದ್ದು ಸ್ತ್ರೀಯರ ನಡುವೆ ವಿಚ್ಛೇದನಾ ಕಾನೂನುಗಳ ನಡುವೆ ಶೋಷಿತನಾಗುತ್ತಾನೆ. ಈ ನಿಟ್ಟಿನಲ್ಲಿ ಅಲ್ಲಿನ ಸಮಾಜ ಕಂಡ ನಿಮ್ಮ ಅಭಿಪ್ರಾಯ ಅವಶ್ಯವಾಗಿದೆ.

ಸೀತಾರಾಮ. ಕೆ. / SITARAM.K said...

ಸುಮಾರವರೇ ಆಪ್ತತೆಯಿಂದ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಸ್ತ್ರೀ ಸಮಾನತೆಯ ವಸ್ತುಸ್ಥಿತಿ ಅಷ್ಟು ಹದಗೆಟ್ಟಿಲ್ಲ. ಆದರೆ ಪಟ್ಟಣಗಳಲ್ಲಿ ಹದಗೆಟ್ಟಿದೆ. ಆದರೆ ನಮ್ಮದು ಹಳ್ಳಿಗಳ ದೇಶವಾದುದರಿಂದ ಹೆಚ್ಚಿನ ಸ್ತ್ರೀಯರು ಶೋಷಿತರೆ! ಭೈರಪ್ಪನವರ ಕಾದಂಬರಿ ಪಟ್ಟಣಗಳಲ್ಲಿ ಕೆಲವಡೆ ಹದಗೆಟ್ಟಿರುವ ಸ್ತ್ರೀ ಸಮಾನತೆಯ ಅರ್ಥವ್ಯಪ್ತಿಯ ಸುತ್ತ ಇದೆ.
ಬಾಕಿ ಎಂದಂತೆ ಸ್ತ್ರೀ ಸಮಾನತೆ ಭಾರತಕ್ಕೆ ಪ್ರಸ್ತುತವೆ!

ಮನಸಿನಮನೆಯವನು said...

ಕಣ್ಣಿಗೆ ಕಟ್ಟುವಂತೆ ಹೇಳಿದ್ದೀರಿ..
ಧನ್ಯವಾದಗಳು..