Friday, June 24, 2011

ಒನ್ ಟೂ ಕಾ ಫೋರ್ !!!!!!!


ಫಣಿಭೂಷಣ ನನ್ನ ಸಹೋದ್ಯೋಗಿ ಮಿತ್ರ .....
ರಂಗಿನ ವ್ಯಕ್ತಿತ್ವ.... ಮಾತುಗಾರ... ವಾಗ್ಮಿ...ಎಂತಹವರನ್ನು ಮರಳು ಮಾಡುವ ಮೋಡಿ ಮಾತಿನ ಚತುರ..
ರಸ್ತೆಯಲ್ಲಿ ಎರಡು ವಾಹನಗಳ ಎಡವಟ್ಟು ಚಾಲಕರು, ಸಣ್ಣ ಅಪಘಾತ ಮಾಡಿ, ದೊಡ್ಡ ಜಗಳದೊಂದಿಗೆ, ಅರ್ಧಗಂಟೆಗೂ ಹೆಚ್ಚು ಕಿತ್ತಾಡುತ್ತಾ, ರಸ್ತೆಯ ಎರಡು ಕಡೆ ಅರ್ಧ ಕಿಮಿ ವರೆಗೆ ವಾಹನಗಳು ನಿಲ್ಲುವಂತೆ ತಡೆಗೆ ಕಾರಣರಾಗಿದ್ದರು..
ಆ ಇಬ್ಬರ ನಡುವೆ ಪ್ರವೇಶಿಸಿ..ಇಬ್ಬರಿಗಿಂತಾ ಜೋರಾಗಿ ಬಾಯಿ ಮಾಡಿ ಅರುಚುತ್ತಾ, ನಡು ನಡುವೆ ಪರಿಚಿತ ಎಸ್ಪಿ ಮತ್ತು ಡಿಸಿ ಗೆ ಅದ್ಯಾವದೋ ಅರ್ಥವಾಗದ ಭಾಷೆಯಲ್ಲಿ ಮಾತಾಡುತ್ತೇನೆ ಎನ್ನುತ್ತಾ ಇಬ್ಬರನ್ನು ಹೆದರಿಸಿ ಐದೇ ನಿಮಿಷದಲ್ಲೇ ರಸ್ತೆ ತೆರವು ಮಾಡಿಸಿದ್ದ. ನಾನು "ನಿನಗೆ ಡಿಸಿ ಎಸ್ಪಿ ಗೊತ್ತಾ ಅಂದೇ'" ಅದೆಲ್ಲಾ ಏನಿಲ್ಲಾ ಸಾರ ನಿಮ್ಮ ಮೊಬಿಲೆಗೆ ಕಾಲ್ ಮಾಡಿ ನೀವು ತೆಗೆದು ಕೊಳ್ಳುವ ಮೊದಲೇ ನಾನು ರಿಂಗಾಗುತ್ತಿದ್ದ ತಮ್ಮ ಜಂಗಮವಾಣಿ ಯೊಡನೆ ಎಸ್ಪಿ ಡಿಸಿ ಸಂಬಾಷಣೆ ಮಾಡಿದ್ದೆ,, ಹೇಗೂ ಗಲಾಟೆಯಲ್ಲಿ ತಮಗೆ ಜಂಗಮವಾಣಿ ಕರೆ ಕೇಳದು ಮತ್ತು ತಾವು ಎತ್ತಲಾರಿರಿ ಎಂದು ಗೊತ್ತಿತ್ತು"
ಅಂಥಾ ಕಿಲಾಡಿ.. ನಮ್ಮ ಫಣಿ ...
ಮನುಷ್ಯರ ಮನದಲ್ಲಿನ ತಾಕಲಾಟವನ್ನ ಅವರ ಮುಖ ನೋಡಿ ಕರಾರುವಾಕ್ಕಾಗಿ ಲೆಕ್ಕಾಚಾರ ಮಾಡುವ ಚತುರ ಅವನು..
ಎಂತ ಕೆಲಸವಾದರೂ ಲೀಲಾಜಾಲವಾಗಿ ಮಾಡುವ ವ್ಯಕ್ತಿ...
ನನ್ನ ತಂಡದ ಕಷ್ಟದ ಕೆಲಸ (tough task) ಅವನಿಗೆ ಮೀಸಲು...
ಅಲ್ಲಿ ಇಲ್ಲಿ ಅವರಿಗೆ ಇವರಿಗೆ ಫಿಟ್ಟಿಂಗ್ ಇಟ್ಟು ಜಗಳ ಹಚ್ಚುತ್ತಿದ್ದರೂ ಯಾರೊಂದಿಗೆ ಮುಖ ಕೆಡಿಸಿಕೊಂಡವನಲ್ಲ ...ಇದಕ್ಕಾಗಿ ನಾರದ ಮುನಿ ಎಂಬ ಅನ್ವರ್ಥಕ ನಾಮವೂ ಇತ್ತು. ಜೊತೆಗೆ ಇವನು ಹಚ್ಚುವ ಜಗಳಗಳನ್ನು ಇವನೇ ಸುಖಾಂತ್ಯವಾಗಿ ಸಮಾಪ್ತಿ ಮಾಡುತ್ತಿದ್ದ.
ಅವನಿಗೆ ಗೊತ್ತಿರದ ವಿಧ್ಯೆಗಳೇ ಇಲ್ಲ..... ಎಲ್ಲದರ ಬಗ್ಗೆ ಗೊತ್ತು..ಎಲ್ಲದರ ಬಗ್ಗೆ ನಿರಗ್ರಳವಾಗಿ ಉಪದೇಶ ಮಾಡುತ್ತಿದ್ದ...ಎಲ್ಲ ವಿದ್ಯಗಳ ಪ್ರಾಒಗಿಕ ಪರೀಕ್ಷೆ ಮಾಡಿದ ಅನುಭವ.... ದುಡ್ಡು ಮಾಡುವ ಎಲ್ಲ ವಿಧಾನವನ್ನ ಪ್ರಯೋಗಿಸಿ ನೋಡುತ್ತಿದ್ದ....
ಈಸ್ಪೀಟು..ಜೂಜು...ಕುದುರೆ...ಲಾಟರಿ....ಹಂಪೆ ನಿಧಿ ಶೋಧಕ್ಕೆ ರಾತ್ರಿ ವಾಮಾಚಾರ...ಅಲ್ಚೆಂ (allachem)...ಎಲ್ಲ ಲೋಹಗಳನ್ನ ಬಂಗಾರವನ್ನಾಗಿಸುವ ಪ್ರಯತ್ನ...
ಸಾಧುಗಳನ್ನು ಹುಡುಕಿ ಅವರ ಬಗ್ಗೆ ಅವರ ಸಿದ್ದಿ ಬಗ್ಗೆ ತಿಳಿದುಕೊಳ್ಳುವ ಕಾತುರ...
ಹಾಗೆಂದು ಎಲ್ಲವನ್ನೂ ನಂಬುವ ಕುರಡನಲ್ಲ...
ಹಣ ಕಳೆದುಕೊಳ್ಳುವ ಮುಟ್ಟಾಳನಲ್ಲ...
ಹಾಗೆಂದು ಹಣ ಕಳೆದುಕೊಳ್ಳದವನೂ ಅಲ್ಲ...
ಇದೆ ಅವನ ವೈಶಿಷ್ಟ್ಯ ...
ಅಲ್ಪ ಸಂಬಳದ ಅವನು ಹಣ ಹೊಂದಿಸುತ್ತಿದ್ದ ಪರಿ ಅದ್ಭುತ...
"ಸರ ಒಂದು ಐದು ನೂರು ಹಣ ಬೇಕಾಗಿತ್ತು ಹತ್ತನೇ ತಾರೀಕಿಗೆ ಕೊಟ್ಟು ಬಿಡುವೆ" ಎನ್ನುತ್ತಾ ಇಲ್ಲವೆನ್ನಲಾಗದ ಒಂದು ಬುರುಡೆ ನೆವ ಹೇಳುತ್ತಿದ್ದ. ಹತ್ತನೇ ತಾರೀಕು ಸರಿಯಾಗಿ ಮೊದಲ ಭೇಟಿಯಲ್ಲಿಯೇ ನಾವು ಕೇಳುವ ಮೊದಲೇ ಧನ್ಯವಾದಗಳೋಡನೆ ಹಣ ತೆಗೆದು ಕೊಡುವ ಪ್ರಾಮಾಣಿಕ ವ್ಯಕ್ತಿತ್ವ ಅವನದು. ಸಂಬಳವಲ್ಲದ ದಿನ ಹಣ ಕೊಡುತ್ತಿರುವನಲ್ಲ ಎಂಬುದು ಆಶ್ಚರ್ಯ. ಆಮೇಲೆ ಮುರುಳಿಯೊಡನೆ ಮಾತನಾಡುವಾಗ ತಿಳಿಯಿತು ಅವನಲ್ಲಿ ೧೦೦೦ ರೂ ತೆಗೆದು ಕೊಂಡಿದ್ದನಂತೆ ೯ನೆ ತಾರೀಕಿನಂದು ಮುಂದಿನ ತಿಂಗಳು ಹದಿನೈದಕ್ಕೆ ಕೊಡುತ್ತೇನೆ ಎಂದು. ಮುಂದಿನ ತಿಂಗಳು ಹತ್ತಕ್ಕೆ ರಾಮಲಿಂಗ ನ ಹತ್ತಿರ ೨೦೦೦ ತೆಗೆದು ಕೊಂಡಿದ್ದಂತೆ ಅದರ ಮುಂದಿನ ತಿಂಗಳು ೨೫ಕ್ಕೆ ಕೊಡುತ್ತೇನೆ ಎಂದು...ಹಾಗೂ ಹದಿನೈದಕ್ಕೆ ಮುರುಳಿ ಹಣ ತೀರಿಸಿದ್ದ...

ಹೀಗೆ ತನ್ನ ಎಲ್ಲ ವಿಶ್ವಾಸಿ ಸ್ನೇಹಿತರು ಮತ್ತು ಸಹೋದ್ಯೋಗಿಗಳ ಒಬ್ಬಬ್ಬರೊಡನೆ ಒಂದು ನಿರ್ಧಿಷ್ಟ ಸಮಯ ತೆಗೆದುಕೊಂಡು ಹಣ ಪಡೆಯುವದು.., ಆ ಸಮಯ ಬಂದಾಗ ಇನ್ನೊಬ್ಬರ ಹತ್ತಿರ ಹೆಚ್ಚಿನ ಸಾಲ ಪಡೆದು ಸ್ವಲ್ಪ ಖರ್ಚಿಗೆ ಇಟ್ಟುಕೊಂಡು ಉಳಿದದ್ದನ್ನು ಸಮಯಕ್ಕೆ ಸರಿಯಾಗಿ ಹಿಂದಿನ ಸಾಲ ತೀರಿಸುವ ಚಾಣಕ್ಯ..

ಹೀಗೆ ಬೆಳೆದ ಸಾಲದ ಹಣ ಅವನ ವರ್ಷದ ಬೋನಸ್ ವೇಳೆಗೆ ಬೋನಸ ಹಣಕ್ಕೆ ಸಮನಾಗಿ ಬರುವಂತೆ ಮಾಡಿ ಆಗ ಕೊನೆಯ ಸಾಲಿಗನಿಗೆ ಬೋನಸ್ ಪೂರಾ ಕೊಟ್ಟು, ಮತ್ತೆ ಸ್ವಲ್ಪ ಹಣ ಸಾಲ ಎತ್ತುತ್ತಾ ತನ್ನ ಒನ್ ಟು ಕಾ ಫೋರ್ ಕೆಲಸ ಮುಂದುವರೆಸುತ್ತಿದ್ದ.
ಈ ನಡುವೆ ಇಸ್ಪೀಟ್ ನಲ್ಲಿ ಹಣ ಬಂದರೆ ಹಳೆಯ ಸಾಲ ತೀರಿಸುತ್ತಿದ್ದ. ಮನೆಗೆ ವಡವೆ ಮತ್ತು ವಸ್ತ್ರಕ್ಕೆ ಖರ್ಚು ಮಾಡುತ್ತಿದ್ದ. ಅವನ ಸಾಲ ಜೂಜುಗಳಿಗೆ ಮೀಸಲಾಗಿತ್ತು. ಅವಾಗಾವಾಗ ಜೂಜಿನಿಂದ ಹಣವನ್ನೂ ಮಾಡುತ್ತಿದ್ದ.
ಅವನಿಗೆ ಹಣ ಕೊಡುವವರಿಗೆ ಅವನ ಪಿಳ್ಳೆ ನೆವಗಳು ಗೊತ್ತಿದ್ದವು ಮತ್ತು ತಮ್ಮ ಹಣ ಜೂಜು ಮೋಜಿಗೆ ಹೋಗುತ್ತದೆ ಎಂದು ಗೊತ್ತಿರುತ್ತಿತ್ತು. ಆದರು ಅವರು ಹಣ ಕೊಡಲು ನಿರಾಕರಿಸುತ್ತಿರಲಿಲ್ಲ. ಏಕೆಂದರೆ ಹೇಳಿದ ಸಮಯಕ್ಕೆ ತಪ್ಪದೆ ಎಲ್ಲಿದ್ದರೂ ಹಹೆಗಾದರು ಮಾಡಿ ಹಣ ತಂದು ಸಾಲ ತೀರಿಸುತ್ತಿದ್ದ. ಅದು ಗೊತ್ತಿದ್ದ ಎಲ್ಲರು ಅವನಿಗೆ ಹಣ ಕೊಡುತ್ತಿದ್ದರು -ಪಿಳ್ಳೆ ನೆವಗಳನ್ನು ನಮ್ಬಿದವರಂತೆ ನಟಿಸಿ ಜೊತೆಗೆ ಮೊಸಳೆ ಅನುಕಂಪ ತೋರಿಸಿ.
ಕೆಲವೊಮ್ಮೆ ಹೇಳಿದ ಸಮಯಕ್ಕೆ ಇನ್ನೊಂದು ಮೂಲದಿಂದ ಹಣ ತೀರಿಸಲು ಸಿಗದೇ ಇದ್ದಾರೆ ಹೆಚ್ಚಿನ ಬಡ್ಡಿಯ ಸಾಲ ಮಾಡಿ ಅಥವಾ ಅಡವಿಟ್ಟು ಹಣ ತೀರಿಸುತ್ತಿದ್ದ...

ಅವನಿಗೆ ಇದೆಲ್ಲಾ ಮಾಮೂಲು...
ಬದುಕನ್ನು ಅವನೆಂದು ಗಂಬೀರವಾಗಿ ಪರಿಗಣಿಸಲಿಲ್ಲ ... ಹಾಗೆ ಸಾವನ್ನು....
ಎಲ್ಲಾ ಜೂಜು -ಮೊಜುಗಳನ್ನು ಮಜವಾಗಿ ಅನುಭವಿಸಿದ...
ಕೊಟ್ಟ ಮಾತಿಗೆ ತಪ್ಪಲಿಲ್ಲ...
ದುಖ ನೋವನ್ನು ಎಂದು ತೋರಿಸಲಿಲ್ಲ....
ತನ್ನ ರಂಗಿನ ವ್ಯಕ್ತಿತ್ವದಿಂದ ಎಲ್ಲರನ್ನು ರಂಜಿಸಿದ...
ಸಾಧಿಸುವ ಕಿಚ್ಚು ತೋರಿಸಿದ...
ಸಾವು ಅವನ ಕೊನೆಯ ಒಂದೆರಡು ವರ್ಷಗಳಲ್ಲಿ ಅವನ ಆರೋಗ್ಯವನ್ನೂ ಕಿತ್ತು ತಿಂದರೂ, ಎಲುವಿನ ಗೂಡನ್ನಾಗಿಸಿದರೂ, ಅವನು ದ್ರುತಿಗೆಡಲಿಲ್ಲ, ನಗುತ್ತಲೇ ಎಲ್ಲವನ್ನೂ ಎದುರಿಸಿದ ತನ್ನ ರಂಕಲುಗಳನ್ನೆಲ್ಲಾ ಬಿಡದೆ ಮಜವಾಗಿ ಕಳೆದ..ಗುಣವಾಗದ ಖಾಯಿಲೆಗೆ ತನ್ನನ್ನು ತಾನೇ ನಗುತ್ತಾ ಬಲಿ ಕೊಟ್ಟ..
ನಾರದ ಮುನಿ ಎಲ್ಲರ ಮನದಲ್ಲಿ ಇನ್ನು ಹಸಿರಾಗೇ ಇದ್ದಾನೆ...
ಅವನ ಕಥೆಗಳು, ರಂಕಲುಗಳು, ತೆವಲುಗಳು...ಕೆಲಸದಲ್ಲಿನ ಅವನ ಚಾಣಕ್ಯ ತಂತ್ರಗಳು... ರಸವತ್ತಾದ ಕಥೆಗಳಾಗಿ ಮಿತ್ರರಿಂದ ಇನ್ನು ಹರಡುತ್ತಲೇ ಇವೆ.
ಡಬ್ಲಿಂಗ್ ದೊರೆ ಎಂಬ ಹೆಸರು ಇತ್ತು ಅವನಿಗೆ..
ಹಾಗೆಂದು ಯಾರಿಗೂ ಮೋಸ ಮಾಡಿದವನಲ್ಲ. ತೊಂದರೆ ಕೊಟ್ಟವನಲ್ಲ.. ಎಲ್ಲರನ್ನು ನಗಿಸುತ್ತಾ ಅವರ ಕೆಲಸದಲ್ಲಿ ಕೈಗೂಡಿಸಿ ನಡೆದವ.

Monday, June 6, 2011

"ತಲೆ" ಹರಟೆ

ಉದಯಿಸುತ್ತಿರುವ ಚಂದ್ರ
ಪೂರ್ಣ ಚಂದ್ರ
"ಪೂರ್ಣಚಂದ್ರ" (ಪೂರ್ತಿ), "ಅರ್ಧಚಂದ್ರ"( ಅರ್ಧ), "ಮುಳುಗುತಿರುವ ಚಂದ್ರ"(ಹಿಂದಿನಿಂದ), ಉದಯಿಸುತಿರುವ ಚಂದ್ರ"(ಮುಂದಿನಿಂದ) -ಎಂದು ಚಂದ್ರನಿಗೆ ಹೋಲಿಸಿ ; "ಪೂರ್ಣ ಪ್ರತಿಫಲನ ", " ಆರೇ ಪ್ರತಿಫಲನ", "ಕನ್ನಡಿ" ಎಂದು ಬೆಳಕು ಸ್ಪಂದಿಸುವ ಗುಣಧರ್ಮಕ್ಕೆ ಹೋಲಿಸಿ, "ಜಾರುಬಂಡೆ", "ನೀರು ನಿಲ್ಲದ ತಲೆ", "ತಲೆ ತೊಯ್ದರು ಶೀತವಾಗದವರು", "ಎಣ್ಣೆ -ಶಾಂಪು ಉಳಿತಾಯದ ತಲೆ", "ಕ್ಷೌರದ ಖರ್ಚಿಲ್ಲದವರು", "ತಲೆ ಬಾಚುವ ತೊಂದರೆ ಇಲ್ಲದವರು"" ಹಾಗೆ..... ಹೀಗೆ..... ಎಂದು ತಲೆ ಇದ್ದವರಿಗೆ ಮತ್ತು ಅದರಲ್ಲಿ ಕೂದಲು ಕಳೆದುಕೊಳ್ಳುತ್ತಿರುವವರಿಗೆ ಜನ ಕರೆದು ಗೇಲಿ ಮಾಡುತ್ತಾ ಮೋಜು ನೋಡುತ್ತಾರೆ... ನೋಡಲಿ ಬಿಡಿ ... ಅದಕ್ಕೇನು.... ಅವರಿಗೆ ಸ್ವಲ್ಪ ಸಂತೋಷವಾದರೆ ಸಾಕು ಧನ್ಯರು ನಾವು ಎಂದು ಸುಮ್ಮನಾಗಬಹುದು...

ಆದರೆ ವಿಷಯ ಅದಲ್ಲ...

ಎಣ್ಣೆ -ಶಾಂಪೂ ಖರ್ಚಿಲ್ಲ ಅಂತಾರಲ್ಲ ಆಗ ಬೇಜಾರಾಗುತ್ತೆ...ಯಾಕೆಂದರೆ ಎಣ್ಣೆ -ಶಾಂಪು ಸ್ವಲ್ಪ ಅಲ್ಲಿ ಇಲ್ಲಿ ಉಳಿದ ಕೂದಲಿನ ಬಳಕೆಗೆ ಬೇಕು ... ಪೂರ್ತಿ ಉಳಿತಾಯವಿಲ್ಲ.. ಜೊತೆಗೆ ಪ್ರತಿ ಸಲ ಮುಖ ತೊಳೆಯುವಾಗ ಎಲ್ಲರಿಗಿಂತಾ ಹೆಚ್ಚು ಸೋಪು ಉಪಯೋಗವಾಗುತ್ತೆ ಯಾಕೆಂದರೆ ಮುಖದ ಪಾತ್ರ ಹೆಚ್ಚಾಗಿರುತ್ತೆ... ಹೆಚ್ಚಾದ ಮುಖದ ಪಾತ್ರ -ಕಡಿಮೆಯಾದ ತಲೆ ಪಾತ್ರಕ್ಕೆ ನೇರವಾಗಿ ಸಮಪಾತದಲ್ಲಿರುವದರಿಂದ ತಲೆಯ ಶಾಂಪೂ ಮತ್ತು ಎಣ್ಣೆ ಉಳಿತಾಯಗಳು ವಿಲೋಮ ಅನುಪಾತದಲ್ಲಿ ಹೆಚ್ಚಾದ ಮುಖಪಾತ್ರಕ್ಕೆ ಬೇಕಾಗುವ ಹೆಚ್ಚಿನ ಸೋಪು ಮತ್ತು ಮುಖ ಪ್ರಸಾಧನಗಳ ಖರ್ಚಿಗೆ ಸಮಾನವಾಗಿರುವದರಿಂದ - ಒಟ್ಟು ಉಳಿತಾಯ ಸೊನ್ನೆ. ಗಣಿತ ಅರ್ಥವಾಗದವರು ರೀತಿ ವಿಮರ್ಶೆ ಮಾಡಿದಾಗ ಬೇಜಾರಾಗುತ್ತೆ... ಅಲ್ಲವಾ......ಜೊತೆಗೆ ಉಳಿದ ಕೂದಲುಗಳನ್ನು ಅಳಿಯದಂತೆ ಉಳಿಸಲು ಬಳಸುವ ಪ್ರಸಾಧನ -ಎಣ್ಣೆಗಳು ಅವುಗಳ ಖರ್ಚು-ವೆಚ್ಚ ಸಮಯ ಸ್ವಲ್ಪವೇ!!!
ಇನ್ನು
ಕ್ಷೌರದ ಖರ್ಚಿನ ವಿಷಯಕ್ಕೆ ಬರುವ ಅಲ್ಲಿ ಇಲ್ಲಿ ಉಳಿದ ಕೂದಲ೦ತೂ ಬೆಳೆಯುತ್ತಲೇ ಇರುವದರಿಂದ ಕ್ಷೌರ ಮಾಡಿಸದೆ ಇರಲಾಗದು... ಅಕ್ಕಪಕ್ಕದಲ್ಲಿ ಒತ್ತೊತ್ತಾಗಿ ಇರುದುದರಿಂದ ಚೆನ್ನಾಗಿ ಮೇಯ್ದು ಉಳಿದ ಕೆಲವೇ ಕೂದಲುಗಳು ಬೆಳೆಯುವದು ....ತೀವ್ರವೇ! ಹೀಗಾಗಿ ಕ್ಷೌರ ಕರ್ಮ ಪದೇ ಪದೇ ಬೇಗ ನಡೆಯಲೇ ಬೇಕು! ಕ್ಷೌರಕ್ಕೆ ಹೋದರೆ ಅರೆ-ಮತ್ತು ಪೂರ್ಣ ತಲೆಕೂದಲಿಗೆ ಬೇರೆ ಬೇರೆ ದರ ಇರದೇ ಇರುವದರಿಂದ ಪೂರ್ತಿ ಹಣ ತೆತ್ತಲೇ ಬೇಕು ! ರಿಯಾಯತಿ ಇಲ್ಲವೇ ಇಲ್ಲ! ಪೂರ್ಣ ತಲೆಗೆ ಒಂದು ಗಂಟೆ ತಗಲುವ ಕೆಲಸಕ್ಕೆ ತೆಗೆದುಕೊಳ್ಳುವ ಕ್ಷೌರಿಕ ೧೦-೧೫ ನಿಮಿಷದಲ್ಲಿ ಮುಗಿಯುವ ಅರೆ ತಲೆಯ ಕ್ಷೌರಕ್ಕೆ ಅಷ್ಟೆ ಹಣ ತೆಗೆದುಕೊಳ್ಳುತ್ತಾನೆ. ಎಲ್ಲ ತಲೆಗಳು ಅರೆತಲೇ-ಗಳಾಗಲಿ ಎಂದು ಬೇಡುತ್ತಾನೆ- ಕೆಲಸ ಉಳಿಯುವದರಿಂದ ಮತ್ತು ಅಷ್ಟೆ ಆದಾಯವಿರುವದರಿಂದ...ಅದಕ್ಕೆ ತಲೆ ಕೂದಲಿರುವವರೇ .. ಹುಷಾರಾಗಿರಿ... ಕ್ಷೌರಿಕರ ಬೇಡಿಕೆ ಹಾರೈಕೆಗೆ ದೇವರು ತಥಾಸ್ತು ಎಂದಾನು!! ಹದಿನೈದು ನಿಮಿಷದ ಕ್ಷೌರಕ್ಕೆ ಒಂದು ಗಂಟೆ ಕ್ಷೌರದ ದುಡ್ಡು ಕೊಟ್ಟು ಬಂದರೆ ಉರಿಯುತ್ತೆ ಅಲ್ಲವಾ... ನಿಟ್ಟಿನಲ್ಲಿ ಸರಕಾರ ಬೆಲೆ ನಿಯಂತ್ರಣ ಮತ್ತು ನೀತಿ ಸಂಹಿತೆ ಜಾರಿ ಮಾಡಬೇಕಲ್ಲವೇ??ಇನ್ನು ಅಳಿದುಳಿದ ಹಲವು ಕೂದಲುಗಳು ನೆರೆತರೆ ಅವುಗಳ ಬಣ್ಣ ಮಾಡುವದು ದೊಡ್ಡ ಗೋಳು..... ಎರಾಬಿರ್ರಿ ಹಚ್ಚಿದರೆ ಬಣ್ಣ ತಲೆಗೆ ಹತ್ತುತ್ತೆ ಮತ್ತು ಕಪ್ಪಾಗಿ ಅಸಹ್ಯವಾಗಿ ಬಿಡುತ್ತೆ .. ಅದಕ್ಕೆ ನಿದಾನವಾಗಿ ಒಂದೊದು ಕೂದಲನ್ನು ಹಿಡಿದು ಬಣ್ಣ ಬಳಿಯಬೇಕು. ಇಲ್ಲಿ ವ್ಯರ್ಥವಾಗುವ ಸಮಯದಲ್ಲಿ ಪೂರ್ಣ ಕೂದಲಿರುವ ನಾಲ್ಕು ನೆರೆತ ತಲೆಗಳ ಬಣ್ಣ ಮಾಡಬಹುದು...ನ್ನು ತಲೆ ತೊಯ್ದರೆ ಶೀತವಾಗದು ಎಂಬ ಪಟ್ಟವು ಬಕ್ಕ ತಲೆಯವರ ಮೇಲಿದೆ ಅದನ್ನು ನೋಡೋಣ!
"
ಕೂದಲಿರದ ತಲೆಗಳೇ....ತೊಯ್ದಾಗ..ನೀರು ನಿಲ್ಲದ ಜಾಗ... ನಿಮ್ಮದು...
ಅದಕೆಂದೇ
ನಿಮಗೆ ಶೀತ ಬಾಧಿಸದು..."
ಇದು
ನಿಜವಾದರೂ.. ಬಿಸಿಲು ನಿಮ್ಮ ಬಾಧಿಸುವದು...ಚಳಿಯು ಕೂಡಾ ಬಾಧಿಸುವದು...
ಹೀಗಾಗಿ
ಮಳೆಯಲ್ಲಿ ತೊಯ್ದಾಗ ಬರಬೇಕಾದ ಶೀತ ಚಳಿಗಾಲದಲ್ಲಿ ಬರುವದರಿಂದ .. ಆರೋಪವು ಕೂಡದು ಅಲ್ಲವೇ!!!
ಇನ್ನು
ಬಿಸಿಲಿನ ಬಾಧೆಗೆ ಸುಟ್ಟು ಕಪ್ಪಾಗುವ ತಲೆಯ ಕಷ್ಟ ಇನ್ನು ಹೆಚ್ಚಿನದು ಅಲ್ಲವೇ???
ಇದಕ್ಕಾಗಿ
ಟೋಪಿ ಖರೀದಿಸಿ ಉಪಯೋಗಿಸುವದು ತ್ರಾಸಲ್ಲವೇ..
ಆದ್ದರಿಂದಾ
ಕೂದಲಿರದ ತಲೆಗಳ ಆಡಿಕೊಳ್ಳಬೇಡಿ..
ಅವುಗಳ
ಚಿತ್ರಗಳ ತೆಗೆದು ಬ್ಲಾಗಲ್ಲಿ ಹಾಕಿ .. ಸಂತಸಪಡುವ ಮನಗಳಾಗಬೇಡಿ...
ಇನ್ನು
ತಲೆಯಲ್ಲಿ ಕೂದಲಿರದವರ ಸಂಬ್ರಮವೆಂದರೆ....
  • Bald is sign of intelligence..
  • balds are romantic....
ಎಂಬ ಗಾದೆಗಳನ್ನು ಕೇಳಿದಾಗ... ( ಗಾದೆಗಳು ಇವೆಯೋ ಇಲ್ಲವೋ ಅಥವಾ ಇದನ್ನು ಹುಟ್ಟು ಹಾಕಿದವರ ಬಗ್ಗೆ ಹೆಚ್ಚಿನ ಮಾಹಿತಿ ನಮ್ಮಲ್ಲಿಲ್ಲ -ಬೇಕಾದವರು ಗಾದೆಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿರುವ ಮತ್ತು ಮಾಡುತ್ತಿರುವ ಶಶಿ ಜೋಯಿಶ್ ಮೇಡಂ ರನ್ನು ಸಂಪರ್ಕಿಸಲು ಕೋರಿದೆ)
ಇದನ್ನು
ಹೇಳೋಕ್ಕೆ ಕಾರಣವು ಇದೆ...
  • ವಿಷಯಗಳುತಲೆ ಒಳಗೆ ಹೋಗೋದಕ್ಕೂ ಮತ್ತು ಬರೋದಕ್ಕೂ ಕೂದಲಿನಿಂದ ಅಡೆತಡೆಗಳಿಲ್ಲ !!!!
  • ಎರಡನೆಯದನ್ನು ನೀವೇ ಯೋಚಿಸಿ.... ಕಮೆಂಟಿನಲ್ಲಿ ಬರಲಿ... ಸರಿಯಾಗಿ ಹೇಳಿದವರಿಗೆ ಬಹುಮಾನ... ಉತ್ತರ ಒಂದು ತಿಂಗಳ ನಂತರ ಹಾಕುವೆ...
ನನ್ನ ಇನ್ನೊಂದು ಸಮಸ್ಯೆ ಅಥವಾ ಉತ್ತರ ಸಿಗದ ಪ್ರಶ್ನೆ " ಬಕ್ಕ ತಲೆ ಕೇವಲ ಗಂಡಸರಿಗೆ ಯಾಕೆ ? ಹೆಂಗಸರಿಗೆ ಏಕೆ ಬಕ್ಕ ತಲೆ ಸಾಮಾನ್ಯವಾಗಿ ಇರುವದಿಲ್ಲ?"
ಬಹುಶ:
ಇದು ನನ್ನ ಮುಂದಿನ ಬರಹದ ವಿಷಯವೋ ? ಏನೋ?
ಆ ಹರಟೆ ಮೊದಲು ನನ್ನ ತಲೆಯಲ್ಲಾಗಬೇಕು!!!!

Please view my post in other blog (Deep From The Earth) for World Environment Day theme of 2011 i.e. FOREST : NATURE IS AT YOUR SERVICE & this year India is hosting the event.

Link : http://sitara123gmail.blogspot.com/2011/06/world-environment-day-2011-5th-may.html