Friday, June 25, 2010

ಪ್ರಜಾಪ್ರಭುತ್ವದ ಅವಸಾನ

ಮನ ಯಾಕೋ ವಿಶಣ್ಣವಾಗಿದೆ.....

ದಕ್ಷ ಅಧಿಕಾರಿಗಳು- ಅದು ನಮ್ಮ ಬ್ರಷ್ವ ವ್ಯವಸ್ಥೆಗೆ ಸಡ್ಡು ಹೊಡೆದು ಕೆಲಸ ಮಾಡುವಂಥವರು- ಅಸಹಾಯಕರಾಗಿ ನಮ್ಮ ರಾಜಕೀಯ ನಾಯಕರ ಸ್ವಹಿತಾಸಕ್ತಿಗೆ ಮತ್ತು ರಾಜಕೀಯದ ಹೊಲಸಾಟಕ್ಕೆ ರೋಸಿ ರಾಜಿನಾಮೆ ನೀಡುವಂಥಾ ಆತ್ಮಹತ್ಯೆ ಪ್ರವೃತ್ತಿಗೆ ಇಳಿಯಬೇಕಾದ ಅನಿವಾರ್ಯತೆ ಕಂಡು.

ನಿರ್ಧಾಕ್ಷಿಣ್ಯವಾಗಿ ಬ್ರಷ್ಟ ಅಧಿಕಾರಿಗಳನ್ನು, ಕಬ್ಬಿಣ ಗಣಿಗಾರಿಕೆಯಲ್ಲಿ ನಡೆಯುತ್ತಿರುವ ಆಕ್ರಮಗಳನ್ನು ಮತ್ತು, ಕಳ್ಳ ಅದಿರು ಸಾಗಾಣಿಕೆಯನ್ನು ಮೂಲ ಸಮವಾಗಿ ಶೋಧಿಸಿ ಕಿತ್ತೆಸೆಯಲು, ಎಲ್ಲ ವೈರುಧ್ಧ್ಯಗಳ ನಡುವೆಯೂ, ಬಿಡದೇ ಹೋರಾಟ ನಡೆಸಿದ ದಿಟ್ಟ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆಯವರ, ರಾಜೀನಾಮೆಯಿ೦ದಾಗಿ ಮನ ಪ್ರಕ್ಶುಬ್ದವಾಗಿದೆ.
ಇದು ನಿಜವಾಗಿಯೂ ನಮ್ಮ ಪ್ರಜಾಪ್ರಭುತ್ವದ ಅವಸಾನ.

ಇಲ್ಲಿ ಪ್ರಜೆಗಳಿ೦ದ ಆರಿಸಲ್ಪಟ್ಟ ಪ್ರಜಾಸೇವಕರೆ, ಮಧಾ೦ಧ ದೊರೆಗಳ೦ತೆ ವರ್ತಿಸಿ, ತಮ್ಮ ಹಿತಾಸಕ್ತಿಗೆ ಅಧಿಕಾರಿಗಳನ್ನು ಬ್ರಷ್ಟರನ್ನಾಗಿಸುವ ಅನಿವಾರ್ಯತೆಗೆಳೆದು ಮತ್ತು ಬ್ರಷ್ಟತೆಯನ್ನು ಮಟ್ಟಹಾಕೆಲೆತ್ನಿಸುತ್ತಿರುವ ದಕ್ಷರು ವ್ಯವಸ್ಥೆಯನ್ನು ಬಿಟ್ಟೋಡುವ೦ತಾ ಅನಿವಾರ್ಯ ಪರಿಸ್ಥಿತಿ ಉಂಟು ಮಾಡುತ್ತಿರುವದ ಕ೦ಡಾಗ ಮನ ಸಿಡಿದೇಳುತ್ತದೆ.

ಸಂತೋಷ ಹೆಗಡೆಯವರು ಸಾರಾಸಗಟ ಸುಲಭದಲ್ಲಿ ಬೆನ್ನು ಕೊಟ್ಟು ಹೋಗುವರಲ್ಲ!!

ಅವರು, ಅವರೊಡನೆ ದಕ್ಷ ಅರಣ್ಯ ಅಧಿಕಾರಿ ಯೂ.ವಿ.ಸಿಂಗ್ ರು ಮಾಡಿದ ದಿಟ್ಟ ಹೋರಾಟದಲ್ಲಿ ಎಲ್ಲ ಗಣಿಗಾರಿಕೆಯ ಆಕ್ರಮಗಳು ಹೊರಬಿದ್ದಿದ್ದವು. ಇದರಲ್ಲಿ ನಿಷ್ಪಕ್ಷಪಾತ ವರದಿ ಇತ್ತು. ಈ ವರದಿಯಲ್ಲಿನ ತಪ್ಪಿತಸ್ಥರಲ್ಲಿ- ಬರೀ ಜನರಾಗಲಿ, ಗಣಿಧಣಿಗಳಾಗಲಿ ಇರಲಿಲ್ಲ ಅದರಲ್ಲಿ ಎಲ್ಲ ಅಧಿಕಾರಿಗಳು ಮತ್ತು ಎಲ್ಲ ರಾಜಕೀಯ ಪಕ್ಷದ ವ್ಯಕ್ತಿಗಳಿದ್ದರು.

ಅದೊ೦ದು ಪರಿಪೂರ್ಣ ವರದಿಯೆ೦ದು ಸರ್ವೋಚ್ಚ ನ್ಯಾಯಾಲಯವೇ ಪ್ರಶಂಶಿಸಿತ್ತು.

ಆದರೇ ಆ ವರದಿಯ ಮೇಲೆ ಕ್ರಮ ಕೈಗೊಳ್ಳುವ ಪ್ರಾಮಾಣಿಕ ಪ್ರಯತ್ನಗಳು ರಾಜಕೀಯ ನಾಯಕರುಗಳಿಗೆ ಇರಲಿಲ್ಲ!

ಅದನ್ನು ತೆಗೆದು ನೋಡಲಿಲ್ಲ!

ಇಷ್ಟಕ್ಕೇ ನಿಲ್ಲಲಿಲ್ಲ ಅದು ಹಣ ಮಾಡುವ ಸಾಧನ ಆಯಿತು!

ಇನ್ನು ಅದು ತಮ್ಮ ಬುಡಕ್ಕೆ ಬಂದಾಗ ಅದಕ್ಕೆ ಕಾರಣರಾಗುವವರನ್ನೇ ಹತ್ತಿಕ್ಕುವ ಪ್ರಯತ್ನಗಳು ನಡೆದವು!

ಅದರ ಫಲವೇ ಹೆಗಡೆಯವರ ರಾಜಿನಾಮೆ!

ಇಂತಹ ಘಟಾನುಗಟಿಯೇ ರಾಜಿನಾಮೆ ನೀಡುವಂಥಾ ಪರಿಸ್ಥಿತಿ ಉಂಟಾಗಿದೆಯೆಂದರೆ ನಮ್ಮಲ್ಲಿ ಪ್ರಜಾಪ್ರಭುತ್ವವಿದೆಯೇ?

ಐದು ವರ್ಷಕ್ಕೊಮ್ಮೆ ಹಣ-ಹೆಂಡ-ಸೀರೆಗೆ ಓಟನ್ನು ನಮ್ಮ ಸ್ವಾರ್ಥಕ್ಕೆ, ಯಾವದೋ ಇನ್ನೊಬ್ಬ ಮಹಾಸ್ವಾರ್ಥಿಗೆ ಕೊಟ್ಟು ಐದು ವರ್ಷ ಬವಣೆ ಪಡುವದನ್ನು ಅನುಭವಿಸುವದಕ್ಕಾಗಿ, ನಮ್ಮ ವ್ಯವಸ್ಥೆಯನ್ನೂ ಪ್ರಜಾಪ್ರಭುತ್ವವೆನ್ನಬೇಕೆ?

ನಾವೆತ್ತ ಸಾಗುತ್ತಿದ್ದೇವೆ??

ಇದು ನಿಜವಾಗಿಯೂ ನಮ್ಮ ಪ್ರಜಾಪ್ರಭುತ್ವದ ಅವಸಾನ!!!!!

Wednesday, June 16, 2010

ಗ೦ಡಅವಲಕ್ಕಿ - "ಕೇವಲ ಗ೦ಡಸರಿಗೆ ಮಾತ್ರ!!!!" (ಹೆಣ್ಣುಮಕ್ಕಳಿಗೆ ಓದಲು ಮಾತ್ರ!!)

(ಚಿತ್ರ ಅ೦ತರ್ಜಾಲ ಕೃಪೆ)


ಹೆಣ್ಣುಮಕ್ಕಳಿಗೆ ಅಡಿಗೆ ಕಲಿಯಲು ಪುರುಸೊತ್ತಿಲ್ಲ!


"ಮಕ್ಕಳಾಗಿದ್ದಾಗ ಆಟ ಆಡಿದವು! (ಅಡುಗೆ ಮಾಡೋಕೆ ಕಲಿಯೋದು - ಇಲ್ಲಿ ಬೇಡ ಬಿಡಿ)"

" -ಓದುತ್ತಿದ್ದಾಗ ಹೊ೦ವರ್ಕ್, ಟ್ಯೂಷನ್-ಅ೦ಥಾ ಬಿಡುವಾಗಲಿಲ್ಲ."

"ಅಮೇಲೆ ಕೆಲಸಕ್ಕೆ ಸೇರಿದ್ದು ( ಓವರಟೈ೦, ತಿರುಗಾಟ ಹೀಗಾಗಿ)"

"ಹಿ೦ದೆನೆ ಮದುವೆ ನಿರ್ಧಾರ ಆಯಿತು ಹೀಗಾಗಿ ನಮ್ಮ ಮಗೂಗೆ ಅಡುಗೆ ಕಲೀಲಿಕ್ಕೆ ಆಗಲಿಲ್ಲ!"

" ಇನ್ನು ಗ೦ಡನ ಮನೆಲ್ಲಿ ಕಲಿತಾವೇ ಬಿಡಿ"

-ಅ೦ಥಾ ತಮ್ಮ ಮಕ್ಕಳ ಬಗ್ಗೆ ಕೆಲವು ಹೆಮ್ಮೆ ತಾಯ೦ದಿರು ಹೇಳಿಕೊಳ್ಳೋದನ್ನ ಸಾಗರಿಯವರು ತಮ್ಮ "ಪು೦ಗಿ" ಲೇಖನದಲ್ಲಿ ಹೇಳಿಕೊ೦ಡಿದ್ದಾರೆ.

ಅದಕ್ಕೆ ಪೂರಕವಾಗಿ ಹಲವರು (ನನ್ನನ್ನು ಸೇರಿ) -ಅಡುಗೆ ಎಲ್ಲರು ಕಲಿಯಬೇಕು ಹೆ೦ಗಸರಷ್ಟೇ ಅಲ್ಲ! ಗ೦ಡಸರು ಸಹಾ! ಅ೦ತಾ ತೀರ್ಮಾನ ನೀಡಿದ್ದೇವೆ- ಏಕೆ೦ದರೆ ಇ೦ದಿನ ಇಬ್ಬರೂ ದುಡಿಯುವ ಸ೦ಧರ್ಭದಲ್ಲಿ, ಹೋಟೆಲ್-ಅವಲ೦ಬಿಸಿ, ಆರೋಗ್ಯ ಕೆಡಿಸಿಕೋ ಬಾರದೆ೦ಬ ಸದುಧ್ಧೇಶದಲ್ಲಿ.

ಬರೀ ಹೇಳಿ ಬಿಟ್ಟರೆ ಆಯಿತೇ?
ಅಡುಗೆ ಕಲಿಸುವ ಕೆಲಸ ಮಾಡಬಾರದೇ?
ರುಚಿ ರುಚಿಯಾಗಿ ಸಮಯ ತೆಗೆದುಕೊ೦ಡು ಅಡುಗೆ ಮನೆಯಲ್ಲಿ ಅಡುಗೆ ಮಾಡಿ ಕೊಡಲು ನಮ್ಮ ಹಲವಾರು ಮಹಿಳಾಮಿತ್ರರು ಬ್ಲೊಗ್ ಮಾಡಿಕೊ೦ಡಿದ್ದಾರೆ. ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯದೆ ಡೈನಿ೦ಗ್ ಮೇಜಿನಲ್ಲೆ ಕುಳಿತು ಮೈಗಳ್ಳ ಗ೦ಡಸರು ಮಿತ್ರರೊಡನೆ ಮಾಡಬಹುದಾದ ಹಲವು ರೆಸಿಪಿಗಳಲ್ಲಿ ಒ೦ದನ್ನು ಇಲ್ಲಿ ಗ೦ಡಸರಿಗಾಗಿ ಪ್ರಸ್ತುತ ಪಡಿಸುತ್ತಿದ್ದೆನೆ!

ಕೇವಲ ಗ೦ಡಸರಿಗೆ ಮಾತ್ರ!!!! ಏಕೆ೦ದರೆ ಅಡುಗೆಯಲ್ಲಿ ಹೆ೦ಗಸರಿಗೆ ಮೈಗಳ್ಳತನವಿರಬಾರದೆ೦ಬ ಉದಾರತೆಯಲ್ಲಿ.!!!!

ಗ೦ಡ-ಅವಲಕ್ಕಿ
(ಹೆಸರಿನ ಮಹತ್ವ - ಮನೆಯಲ್ಲಿ ಹೆ೦ಗಸರಿರದಾಗ, ಮೈಗಳ್ಳ ಗ೦ಡಸರು ಅಡುಗೆ ಮನೆಯಲ್ಲಿ ಹೋಗಿ ಒಲೆ ಹಚ್ಚದೇ, ಮಿತ್ರರೊ೦ದಿಗೆ ಹರಟುತ್ತಾ, ಡೈನಿ೦ಗ್-ಮೇಜ ಮೇಲೆಯೆ ದೀಡಿರನೆ ತಯಾರಿಸಿ ತಿನ್ನುವ ಗ೦ಡಸರ ತಿನಿಸು ಅದಕ್ಕೆ ಇದು ಗ೦ಡ ಅವಲಕ್ಕಿ)
  • ಬೇಕಾಗುವ ಸಾಮಾನು -ಮನೆಯಲ್ಲಿ ಇದ್ದಷ್ಟು ತೆಳು ಅಥವಾ ಮಧ್ಯಮ ಗಾತ್ರದ ಅವಲಕ್ಕಿಯಲ್ಲಿ ತಮಗೆ ತಿನ್ನಲ್ಲೆಷ್ಟು ಬೇಕೋ ಅಷ್ಟು ಅವಲಕ್ಕಿ, ನಾಲ್ಕು ಸೌತೆ, ನಾಲ್ಕು ಟೊಮೆಟೊ, ನಾಲ್ಕು ಕ್ಯಾರೆಟ್, ನಾಲ್ಕು ಈರುಳ್ಳೀ, ಕೊತ್ತ೦ಬರಿ, ಹಸಿ ಶೇ೦ಗಾ(ನೆಲಗಡಲೆ), ಪುಟಾಣಿ (ಹುರಿಗಡಲೆ), ನಾಲ್ಕು ಹಸಿಮೆಣಸಿನಕಾಯಿ, ೨ ಲಿ೦ಬೆ ಹಣ್ಣು, ಹಸೀ ಶೇ೦ಗಾ ಯೆಣ್ಣೆ ಸ್ವಲ್ಪ, ಉಪ್ಪು ರುಚಿಗೆ ಬೇಕಾದಷ್ಟು, ಸ್ವಲ್ಪ ಖಾರಪುಡಿ.
  • ಮಾಡುವ ವಿಧಾನ-ಮೇಲಿನ ಎಲ್ಲಾ ವಸ್ತುಗಳನ್ನು ಅಡುಗೆ ಮನೆಯ ಸ೦ಗ್ರಹ ಕೋಣೆಯಿ೦ದ ಆಯ್ದು ತನ್ನಿ. ತರಕಾರಿಗಳು ಅಷ್ಟೇ ಇಷ್ಟೇ ಎನ್ನುತ್ತಾ ಲೆಕ್ಕ ನೋಡಿ ಸಮಯ ಹಾಳು ಮಾಡಬೇಡಿ. ಸ್ವಲ್ಪ ಹೆಚ್ಚು ಕಡಿಮೆ ಕೈಗೆ ಸಿಕ್ಕಷ್ಟು ತೆಗೆದುಕೊ೦ಡು ಅಡುಗೆ ಮನೆ ಖಾಲಿ ಮಾಡಿ. ಅವನೆಲ್ಲಾ ತೊಳೆದು (ಸ್ವಚ್ಚತೆಗೆ ಪ್ರಾಮುಖ್ಯತೆ ನೀಡುವವರಾಗಿದ್ದರೆ ಮಾತ್ರ). ಡೈನಿ೦ಗ ಮೇಜ ಮೇಲೆ ಹರಡಿ.
  • ಈಗ ಮೇಜ ಮೇಲೆ ಪ್ಲಾಸ್ಟಿಕ್ ಅಥವಾ ಪೇಪರನ್ನು ಬಿಡಿಸಿ ಹರವಿ. (ಪಾತ್ರೆಯಾದರೆ ತೊಳೆಯುವ ಕೆಲಸವಿರುತ್ತೆ ಹುಷಾರ್!)
  • ಅದರ ಮೇಲೆ ಅವಲಕ್ಕಿ ಹರುವಿ, ಆರಿಸಿ, ಮತ್ತೆ ಗುಡ್ಡೆ ಮಾಡಿ, ಮತ್ತೆ ಮೇಲಿನಿ೦ದ ತಟ್ಟಿ ಸ್ವಲ್ಪ ಸಮತಟ್ಟು ಮೇಲಮೈ ಮಾಡಿ.
  • ಅದರ ಮೇಲೆ ಸ೦ಗ್ರಹಿಸಿದ ನಿಮ್ಮ ಶೇ೦ಗಾ (ನೆಲಗಡಲೆ) ಹಾಗೂ ಪುಟಾಣಿ(ಹುರಿಗಡಲೆ) ಪೇರಿಸಿ. ( ನಿಮಗೆ ತಿನ್ನುವ ಇಷ್ಟ ಪ್ರಮಾಣದಲ್ಲಿ)
  • ಚಾಕೂವಿನ ಸಹಾಯದಲ್ಲಿ ಹಸಿಮೆಣಸು ಕೊತ್ತ೦ಬರಿ ಸಣ್ಣ ಹೆಚ್ಚಿ ಅದನ್ನು ಅದರ ಮೇಲೆ ಪೇರಿಸಿ.
  • ಸೌತೆ ಮತ್ತು ಕ್ಯಾರೆಟ್ ಕೈತುರಿ ಮಣೆಯಲ್ಲಿ ತುರಿದು ಸಮತಟ್ಟು ಪ್ರದೇಶದಲ್ಲಿ ಪೇರಿಸಿ.
  • ಚಾಕೂವಿನಿ೦ದ ಟೊಮೆಟೊ ಮತ್ತು ಈರುಳ್ಳಿ ಹೆಚ್ಚಿ ಅದನ್ನು ಮೇಲೆ ಪೇರಿಸಿ.
  • ಉಪ್ಪು ಮತ್ತು ಖಾರಪುಡಿಯನ್ನು (ಸ್ವಲ್ಪ ಬೇಕಾದಷ್ಟು ಪ್ರಮಾಣದಲ್ಲಿ) ಅವಲಕ್ಕಿ ಗುಡ್ಡೆ ಸುತ್ತ ಚಿಮುಕಿಸಿ.
  • ಈಗ ಹೆಚ್ಚಿದ ಲಿ೦ಬೆ ಹಣ್ಣಿನ ರಸವನ್ನು ಅವಲಕ್ಕಿ ಗುಡ್ಡೆಯ ಸುತ್ತ ಹಿ೦ಡಿ. ಹಾಗೇ ಹಸಿ ಎಣ್ಣೆಯನ್ನು ಸುರಿಯಿರಿ.
  • ಇನ್ನು ಒ೦ದು ಅಥವಾ ಎರಡು ಕೈಯಲ್ಲಿ ಗುಡ್ಡೆಯನ್ನೆಲ್ಲಾ ಮೇಲೆ ಕೆಳಗೆ ಮಾಡಿ ಸರಿಯಾಗಿ ಕಲಸಿ. ( ಸೌಟಿದ್ದರೆ ತೊಳೆಯಬೇಕಾಗುತ್ತೆ)
  • ಸಮಪ್ರಮಾಣದಲ್ಲಿ ಬೆರೆಸಿಯಾದ ನ೦ತರ, ಆ ಪೇಪರ ಅಥವಾ ಪ್ಲಾಸ್ಟಿಕ ಪೇಪರ ಸುತ್ತಾ, ತಿನ್ನುವವರೆಲ್ಲಾ ಸೇರಿ ತಕ್ಷಣವೇ ತಿನ್ನಲು ಪ್ರರ೦ಭಿಸಿ. ಒಣಕಲೆನಿಸಿದರೆ ನೀರು ಚಿಮುಕಿಸಿ.
ಹಾ! ಇದನ್ನು ಅಮೇಲೆ ತಿನ್ನಲಾಗದು!
ಹೆಚ್ಚು ತರಕಾರಿ ಬಳಸಿದ್ದಷ್ಟು ಉತ್ತಮ.
ಟೊಮೆಟೊ ಜವಾರಿ ಇದ್ದು ಹೆಚ್ಚು ಪ್ರಮಾಣದಲ್ಲಿ ಬಳಸಿದರೆ, ಒಣಕಲೆ೦ದು ನೀರು ಚಿಮುಕಿಸಿ, ಬೆರೆಸುವ ಅವಶ್ಯಕತೆಯಿಲ್ಲ.

ಇದು ನಾವೂ ವಿಧ್ಯಾರ್ಥಿ ಜೀವನದಲ್ಲಿ ಹಾಸ್ಟೆಲ್ಲಿನಲ್ಲಿ ಮೆಸ್ಸ್ ಬ೦ದಾದಾಗ ಸುಮಾರು ೧೦-೧೫ ವಿಧ್ಯಾರ್ಥಿಗಳು ಸೇರಿ ರೂಮಿನಲ್ಲಿಯೇ ೩ಕೆಜಿ - ಅವಲಕ್ಕಿ, ೨ಕೆಜಿ ಸೌತೆ, ೨ಕೆಜಿ ಟೊಮೆಟೊ, ೧ಕೆಜಿ ಕ್ಯಾರೆಟ್, ೧/೨ ಕೆಜಿ ಈರುಳ್ಳಿ, ೧೦-೧೫ ಹಸಿಮೆಣಸಿನಕಾಯಿ, ಕಾಲುಕೆಜಿ ನೆಲಗಡಲೆ, ಕಾಲುಕೆಜಿ ಹುರಿಗಡಲೆ, ಒ೦ದು ಕಟ್ಟು ಕೊತ್ತ೦ಬರಿ, ೫-೬ ಲಿ೦ಬೆಹಣ್ಣು, ೫೦ಗ್ರಾ೦ ಖಾರಪುಡಿ, ೫೦ಗ್ರಾ೦ ಉಪ್ಪು, ೧೦೦ಗ್ರಾ೦ ಎಣ್ಣೆ ಬೆರೆಸಿ, ಗ೦ಡ ಅವಲಕ್ಕಿ ತಯಾರಿಸಿ ಊಟಕ್ಕೆ ಪರ್ಯಾಯವಾಗಿ ತಿನ್ನುತ್ತಿದ್ದೆವು.

ವಿಶೇಷ ಸೂಚನೆ : ಏಕಾದಸಿ ಮಾಡುವವರೂ ಈರುಳ್ಳಿ ಬೆರೆಸದೆ, ನೀರು ಚಿಮುಕಿಸದೇ ತಿನ್ನಬೇಕು. ಒಣಕಲೆನಿಸಿದರೆ ನೀರಿಗೆ ಒ೦ದೆರಡು ಹನಿ ಹಾಲು ಬೆರೆಸಿ ಚಿಮುಕಿಸಬಹುದು!

ತು೦ಬಾ ರುಚಿದಾಯಕ ತಿ೦ಡಿ ಆದರೇ ಕಲಸಿದ ತಕ್ಷಣ ತಿನ್ನಬೇಕು.

Wednesday, June 9, 2010

ಕನಸ ಕನ್ಯೆ




ಸಾಗರಾಳದಿ ಕಪ್ಪೆಚಿಪ್ಪಿನಲಿ
ಮುತ್ತಾದ ಸ್ವಾತಿಹನಿ ನೀನು

ಅದರಿ೦ದ ಮೋಹಿತನಾದ ಈಜು
ಬಾರದ ಸೋಜಿಗವು ನಾನು

ನಾ ಹೆಕ್ಕಲಿಲ್ಲ ಆಳಕ್ಕೆ ಇಳಿದು
ನೀ ಉಕ್ಕಲಿಲ್ಲ ಮೇಲಕ್ಕೆ ಎಳೆದು

ಮುತ್ತು ಹೆಕ್ಕದ, ಈಜು ಬಾರದವರ
ಕಣ್ಣೀರಲಿ ಸಮುದ್ರ ಉಪ್ಪೇ?

ಕಡಲಲ್ಲಿ ಮುತ್ತು ಕಳೆದು
ದಡಕ್ಕೆಸೆದ "ನೀ" ಚಿಪ್ಪೇ?

Saturday, June 5, 2010

ಇ೦ದು ವಿಶ್ವ ಪರಿಸರದ ದಿನಾಚರಣೆ.




ಇ೦ದು ವಿಶ್ವ ಪರಿಸರದ ದಿನಾಚರಣೆ.
ಈ ಸ೦ಧರ್ಭದಲ್ಲಿ ಇದರ ವಿಶಿಷ್ಠತೆಯನ್ನು ನಾನು ಇಲ್ಲಿ ಪರಿಚಯಪಡಿಸಲು ಬಯಸುತ್ತೆನೆ.

೧೯೭೨ ಜೂನ್ ೫ ರಿ೦ದ ೧೬ ರ ವರೆಗೆ ಸ್ವೀಡನ್ ನ ಸ್ಟಾಕ್-ಹೋ೦ ನಲ್ಲಿ ನಡೆದ ವಿಶ್ವಸ೦ಸ್ಥೆಯ (UN) ಮಾನವ ಪರಿಸರದ (Human Environment) ಮೇಲಿನ ಸಭೆಯ ಪರಿಣಾಮವಾಗಿ ವಿಶ್ವಸ೦ಸ್ಥೆಯ ಪರಿಸರ ಕಾರ್ಯಕ್ರಮ (ಯುನೆಪ್-ಯು.ಎನ್.ಈ.ಪಿ.) (United Nations Environment Programmes-UNEP) - ಸಹ ಅ೦ಗ ಸ೦ಸ್ಥೆಯನ್ನು ಹುಟ್ಟು ಹಾಕಿ, ವಿಶ್ವದಾದ್ಯ೦ತ ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು, ಅದರ ಮೂಲಕ ಹಮ್ಮಿಕೊಳ್ಳುವ ನಿರ್ಧಾರ ಮಾಡಲಾಯಿತು. ಈ ವಿಶ್ವಸ೦ಸ್ಥೆಯ ಅ೦ಗಸ೦ಸ್ಥೆ ಪ್ರತಿವರ್ಷ ಜೂನ್ ೫ರ೦ದು, ವಿಶ್ವ ಪರಿಸರ ದಿನಾಚರಣೆಯನ್ನಾಗಿ, ವಿಶ್ವದಾದ್ಯ೦ತ ಆಚರಣೆಗೆ ತರಲು ನಿರ್ಧರಿಸಿತು. ಅದರ೦ತೆ ೧೯೭೩ ರಿ೦ದ ಈ ವಿಶ್ವ ಪರಿಸರ-ದಿನಾಚರಣೆ ಜಾರಿಗೆ ಬ೦ತು.
ಈ ದಿನಾಚರಣೆಯ ಉದ್ಧೇಶ ಜನರಲ್ಲಿ ಪರಿಸರ ಕಾಳಜಿಯನ್ನು೦ಟು ಮಾಡುವದು ಮತ್ತು ಪರಿಸರ ರಕ್ಷಣೆ ಅವಶ್ಯಕತೆಯ ಪ್ರಚಾರ ಹಮ್ಮಿಕೊಳ್ಳುವದು.
ಪ್ರತಿವರ್ಷ ಒ೦ದೊ೦ದು ದೇಶದಲ್ಲಿ, ಒ೦ದು ಪರಿಸರದ ವಿಷಯವನ್ನು, ಮೂಲವಾಗಿಸಿ ಆಚರಣೆಯನ್ನು ಹಮ್ಮಿಕೊಳ್ಳುತ್ತದೆ. ಮತ್ತು ಈ ವಿಷಯವನ್ನು ಪ್ರಪ೦ಚದಾದ್ಯ೦ತ ಪ್ರಚಾರಪಡಿಸಿ ಜನಜಾಗೃತಿ ಮೂಡಿಸಲಾಗುತ್ತದೆ.
ಈ ದಿನಾಚರಣೆ -ವೃಕ್ಷಗಳನ್ನು ನೆಡುವ ಮೂಲಕ, ಜಲ -ಮತ್ತು ವಾಯು ಮಾಲಿನ್ಯ ತಡೆವ ಕಾರ್ಯಕ್ರಮಗಳಿ೦ದ, ಇನ್ನು ಹಲವು ಪರಿಸರ ಆ೦ಧೋಲನಗಳಿ೦ದ ಆಚರಿಸುತ್ತಾ, ಆ ವರುಷದ ಆಚರಣೆಯ ಮುಖ್ಯ ವಿಷಯದ ಸುತ್ತಾ ಜನರಲ್ಲಿ ಜಾಗೃತಿಯು೦ಟು ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಈ ಹಿ೦ದಿನ ವಿಶ್ವ ಪರಿಸರದ ದಿನಾಚರಣೆಯ ವಿಷಯಗಳು ಮತ್ತು ಆಯೋಜಿಸಿದ ದೇಶಗಳ ಪಟ್ಟಿ ಕೆಳಗಿನ೦ತಿದೆ.
Year Theme Host city
1974 Only one Earth
1975 Human Settlements
1976 Water: Vital Resource for Life
1977 Ozone Layer Environmental Concern; Lands Loss and Soil Degradation
1978 Development Without Destruction
1979 Only One Future for Our Children - Development Without Destruction
1980 A New Challenge for the New Decade: Development Without Destruction
1981 Ground Water; Toxic Chemicals in Human Food Chains
1982 Ten Years After Stockholm (Renewal of Environmental Concerns)
1983 Managing and Disposing Hazardous Waste: Acid Rain and Energy
1984 Desertification
1985 Youth: Population and the Environment
1986 A Tree for Peace
1987 Environment and Shelter: More Than A Roof Nairobi, Kenya
1988 When People Put the Environment First, Development Will Last Bangkok, Thailand
1989 Global Warming; Global Warning Brussels, Belgium
1990 Children and the Environment Mexico City, Mexico
1991 Climate Change. Need for Global Partnership Stockolm, Sweden
1992 Only One Earth, Care and Share Rio de Janeiro, Brazil
1993 Poverty and the Environment - Breaking the Vicious Circle Beijing, People's Republic of China
1994 One Earth One Family London, United Kingdom
1995 We the Peoples: United for the Global Environment Pretoria, South Africa
1996 Our Earth, Our Habitat, Our Home Istanbul, Turkey
1997 For Life on Earth Seoul, Republic of Korea
1998 For Life on Earth - Save Our Seas Moscow, Russian Federation
1999 Our Earth - Our Future - Just Save It! Tokyo, Japan
2000 The Environment Millennium - Time to Act Adelaide, Australia
2001 Connect with the World Wide Web of Life Torino, Italy and Havana, Cuba
2002 Give Earth a Chance Shenzhen, People's Republic of China
2003 Water – Two Billion People are Dying for It! Beirut, Lebanon
2004 Wanted! Seas and Oceans – Dead or Alive? Barcelona, Spain
2005 Green Cities – Plan for the Planet! San Francisco, U.S.
2006 Deserts and Desertification - Don't Desert Drylands! Algiers, Algeria
2007 Melting Ice – a Hot Topic? Tromsø, Norway
2008 Kick The Habit - Towards A Low Carbon Economy Wellington, New Zealand
2009 Your Planet Needs You - UNite to Combat Climate Change Mexico City, Mexico
2010 Many Species. One Planet. One Future Kigali, Rwanda
ಈ ಪರಿಸರದ ದಿನಾಚರಣೆಯನ್ನು ನಮ್ಮ ಸ೦ಸ್ಥೆಯ ಗಣಿಗಳಲ್ಲಿ ಅದ್ದೂರಿಯಿ೦ದ ಶಾಲಾಮಕ್ಕಳನ್ನು ಕರೆತ೦ದು ಮರ-ಗಿಡಗಳನ್ನು ನೆಡಿಸಿ, ಅವರಿ೦ದ ಹಲವು ಚಿತ್ರ, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿ, ಆಯಾ ವರ್ಷದ ವಿಷಯದ ಬಗ್ಗೆ ಗೋಷ್ಟಿ ಆಯೋಜಿಸುವ ಮೂಲಕ ಆಚರಿಸಲಾಗುವದು. ಈ ಆಚರಣೆಯ ಸ೦ಪ್ರದಾಯ ನಮ್ಮ ಗಣಿಗಳಲ್ಲಿ ಕಳೆದ ೧೫ ವರ್ಷಗಳಿ೦ದಲೂ ಇದ್ದೂ ಈಗಾಗಲೇ ೨೦ ಲಕ್ಷ ಮರಗಳನ್ನು ನಮ್ಮ ಎಲ್ಲಾ ಗಣಿಗುತ್ತಿಗೆ ಸ್ಥಳದಲ್ಲಿ ನೆಡಲಾಗಿದೆ.


ಈ ವರ್ಷದ ವಿಷಯ- "ಹಲವಾರು ಜೀವವೈವಿಧ್ಯ, ಒ೦ದೇ ಗ್ರಹ, ಒ೦ದೇ ಭವಿಷ್ಯ"

ಇದರ ಉದ್ಧೇಶವಿಷ್ಟೇ ಮಾನವ ತಳಿ -ಮಿಲಿಯನಲ್ಲಿ ಒ೦ದು. ಅ೦ದರೇ ಭೂಮಿಯನ್ನು ಅವಲ೦ಬಿಸಿರುವ ಕೊಟ್ಯ್ಯ೦ತರ ಪ್ರಾಣಿಗಳಲ್ಲಿ ನೀನು ಕೇವಲ ಒ೦ದು. ಆದರಿ೦ದ ನಿನ್ನ ಚಟುವಟಿಕೆಗಳಿ೦ದ ಇತರ ಜೀವವೈವಿಧ್ಯಗಳಿಗೆ ತೊ೦ದರೆಯಾಗದಿರಲಿ ಎ೦ಬ ಎಚ್ಚರಿಕೆ , ಮಾನವನಿಗೆ. ನಾವಿರುವ ಭೂಮಿಯೊ೦ದೇ! ನಮಗಿರುವ ಭವಿಷ್ಯತ್ತು ಒ೦ದೇ ಆಗಿರಲಿ. ಅಳಿವ೦ಚಿನಲ್ಲಿರುವ ಲೆಕ್ಕಕ್ಕೆ ಸಿಕ್ಕ ಸುಮಾರು ೧೭೩೦೦ ಜೀವಿಗಳನ್ನು ನಾವು ಉಳಿಸುವಲ್ಲಿ ಮಹತ್ತರ ಪಾತ್ರವಹಿಸಬೇಕಾಗಿದೆ.
ವಿಜ್ಞಾನಿಗಳ ಲೆಕ್ಕಕ್ಕೆ ಇದುವರೆಗೆ ಸಿಕ್ಕ ಜೀವರಾಶಿಗಳು ೨ ಮಿಲಿಯನ್ ಮಾತ್ರ. ಒ೦ದು ಅ೦ದಾಜಿನ ಪ್ರಕಾರ ೫-೧೦ ಮಿಲಿಯನ್ ಜೀವರಾಶಿಗಳಿವೆಯ೦ತೆ.
ಮಾನವನ ಚಟುವಟಿಕೆಗಳು ಮತ್ತು ಮಾಲಿನ್ಯಗಳು ಏಷ್ಟೋ ಜೀವರಾಶಿಗಳ ಅಳಿವಿಗೆ ಕಾರಣವಾಗಿದೆ ಮತ್ತು ಆಗುತ್ತಿದೆ. ಆದ್ದರಿ೦ದ ಜೀವ ವೈವಿಧ್ಯ ಉಳಿಸುವಲ್ಲಿ ಮಾನವನಿಗೆ ಎಚ್ಚರಿಕೆ ಕರೆಗ೦ಟೆ ನೀಡಲು ಈ ವರ್ಷದ ವಿಶ್ವ ಪರಿಸರ ದಿನಾಚರಣೆಗೆ ಆಯ್ದ ವಿಷಯ " ಹಲವಾರು ಜೀವ ವೈವಿಧ್ಯ, ಒ೦ದೇ ಗ್ರಹ, ಒ೦ದೇ ಭವಿಷ್ಯ".
ಇದನ್ನು ಮನಗ೦ಡು ನಾವು ಪರಿಸರವನ್ನು ಊಳಿಸುವಲ್ಲಿ ನಮ್ಮ ಕಾರ್ಯ ಮಾಡೋಣ.
  • ಗಿಡ ಮರಗಳನ್ನು ನಮ್ಮ ಮನೆ ಸುತ್ತ ಬೆಳೆಸೋಣ
  • ಕಸಕಡ್ಡಿ ತ್ಯಾಜ್ಯಗಳನ್ನು ಎಲ್ಲೆ೦ದರಲ್ಲಿ ಹಾಕೋದ ಬಿಡೋಣ
  • ಶಬ್ದ ಮಾಲಿನ್ಯ ಕಡಿಮೆ ಮಾಡೋಣ
  • ಜಲಮಾಲಿನ್ಯ ತಡೆಯೋಣ (ನದಿ, ಭಾವಿ, ಕೆರೆ,ಕೊಳ್ಳಗಳನ್ನು ಉಳಿಸಿ ಮಾಲಿನ್ಯದಿ೦ದ ತಡೆಗಟ್ಟೋಣ)
  • ಬೇಟೆಯ೦ಥ ಮೋಜಿಗಳನ್ನು ತಡೆಗಟ್ಟೋಣ
  • ಅರಣ್ಯಗಳನ್ನು ಉಳಿಸೋಣ
  • ವಾಯುಮಾಲಿನ್ಯ ತಡೆಗಟ್ಟೋಣ (ತೈಲ/ಕಲ್ಲಿದ್ದಲು ಇ೦ಧನಗಳನ್ನು ಕಡಿಮೆ ಮಾಡಿ ಪವನಶಕ್ತಿ, ಜಲವಿಧ್ಯುತ್, ಸೌರ ಶಕ್ತಿಯನ್ನು ಆಧರಿಸೋಣ)
  • ಇನ್ನು ಏನೇನು ಸಾಧ್ಯವೋ ಅದನ್ನು ಮಾಡೋಣ
ಇದು ಈ ದಿನದ೦ದು ನಮ್ಮ ಪ್ರತಿಜ್ಞೆಯಾಗಲಿ.



ಹಸಿರೇ ಉಸಿರು!!


Link for more details on world environment day :
http://www.unep.org/wed/2010/english/theme.asp

Friday, June 4, 2010

ಮನ ಮೆಚ್ಚಿದ ಗೀತೆ "ವಾಮನ ಕುಲ್ಕರ್ಣಿ " ರಚಿತ "ತೆರೆಗಳು" ಕವನ ಸ೦ಕಲನದ ಗಜ಼ಲ್. "ಹಚ್ಚದಿರು ದೀಪ"

The Glow of Hope
Painting by S. L. Haldankar. Sri Jayachamarajendra Art Gallery, Mysore
(internet collection)

more info. on :- http://en.wikipedia.org/wiki/Glow_of_Hope

"ಹಚ್ಚದಿರು ದೀಪ"-ವಾಮನ ಕುಲ್ಕರ್ಣಿ

ಇರಲಿ ಬಿಡು ಕತ್ತಲೆ, ಹಚ್ಚದಿರು ದೀಪ
ಬೆಳಕಿನಲ್ಲಿ ಗುರುತಾಗದು ನಮ್ಮ ನಿಜಸ್ವರೂಪ

ನನ್ನ ನಿನ್ನ ಮುಖದ ಹಿ೦ದೆ, ಕಾಣದ೦ತಾ ಘೋರ ಕಡಲು
ಅಪ್ಪಳಿಸುವ ತೆರೆಗಳಿ೦ದ, ಕೊರೆಯುತಿದೆ ಒಡಲು

ಕಾಣದಿರಲಿ ಶ೦ಕೆ ನಖ, ಇರಿಯದಿರಲಿ ಗೊ೦ದಲ
ಆಡದಿರು ನೂರು ಮಾತು, ಸಾಕು ಮೌನ ಹ೦ಬಲ

ಹೊರಗೆ ಕ೦ಡ ಬೆಳಕಿನಲ್ಲಿ, ಬೆಳೆದ ನಮ್ಮಸ೦ಗ
ಚೂರಾದರೂ ಅರಿಯೋಣ ಇ೦ದು ಅ೦ತರ೦ಗ

ಇರುಳು ಬೆರಳು ಹಿಡಿದು ನೊ೦ದ ಕರುಳ ಬೇಗೆ ತಣಿಯಲಿ
ಮೊಸರಿನಲ್ಲಿ ಉಪ್ಪಿನ೦ತೆ ಬೆರೆತು ನೋವು ಕರಗಲಿ

ಎದೆಯ ಗೂಡಿನಲ್ಲಿ ಅಡಗಿ, ಕಾಣದ೦ಥಾ ಜ್ಯೋತಿ
ಅದರ ಬೆಳಕೆ ಸಾಕು ಬಿಡು, ಹಬ್ಬಿ ಬಿಡಲಿ ಪ್ರೀತಿ

ಇರಲಿಬಿಡು ಕತ್ತಲೇ, ಏಕೆ ಅದರ ಹೆದರಿಕೆ?
ಒಲುಮೆ ದೀಪ ಎದೆಯೊಳಿಟ್ಟು ಹುಟ್ಟುಹಾಕು ನೌಕೆ

ಶ್ರೀ.ಚೆನ್ನವೀರ ಕಣಿವಿಯವರಿ೦ದ ಧಾರವಾಡ ಆಕಾಶವಾಣಿ "ಭಾವಸ೦ಗಮ'ಕ್ಕೆ ಆಯ್ಕೆಗೊ೦ಡ ವಾಮನ ಕುಲಕರ್ಣಿಯವರ , ಶ್ರೀ.ಅಚ್ಯುತರಾವ್-ರ ಸ೦ಗೀತ ನಿರ್ದೇಶನದಲ್ಲಿ ಶ್ರೀ.ಶ್ರೀಪಾದ ಹೆಗಡೆಯವರ ಮಧುರ ಕ೦ಠದಲ್ಲಿ ೨೦೦೮ ರಲ್ಲಿ ಬಾನುಲಿ ಪ್ರಸಾರಗೊ೦ಡ ಗೀತೆ.